Monday, May 10, 2021

* ಸಾಕು ಧಾವಂತ *

ಮಾತು ಕರಗಿ ಮೌನವೇರುವ ಕಾಲ
ದಿನ ಬೆಳಗಾದರೆ ಕಠೋರ ಕರ್ಕಶ 
ಬೀಭತ್ಸ ಮರಣ ಮೃದಂಗಳ ಅಲೆ
ಬಂದು ಬೀಸಿದೆ ಕಾಣದ ಜೀವ ಜ್ವಾಲೆ//

ಕಿವಿ ತಮಟೆ ಸೀಳುವ ಶುದ್ದಿಗಳು
ಒಗಟಾಗಿ ಕಾಡುವವು ಮನ ದಿನವೆಲ್ಲ 
ಜಾಗಟಿ ಹೊಡೆದರು ಅದೆ ಮೊಂಡತನ
ಹೇಳಿದ್ದೆ ಹೇಳಿದ್ದು ಕೇಳಾಗಿದೆ ಸಿನಿಕತನ//

ಕಾಲನ ಕೈಗಳ ಬೇರುಗಳರಿಯದ ಜನ
ಕಾಣುವ ಸತ್ಯವ ಬೆನ್ನು ಹತ್ತವರು ದಿನ
ಕಾಣದ ಸತ್ಯ ವೂ ಉಂಟು,ಲೆಕ್ಕವಿದೆ
ಕರ್ತಾರನ ಸಂಬಳ ತಪ್ಪದೆ ಬರುವುದು//

ಹಗಲಿರಳು ಮನುಕುಲದ ವೇದನೆಗೆ 
ಹೆಗಲು ಕೊಡುವ ಸಂವೇದನಾಶೀಲರ
ಹೃದಯಗಳಿಗೆ ಇಲ್ಲ ನಮ್ಮಲ್ಲಿ ಕೊರತೆ  
ಹಣಕ್ಕೆ ಹೇಸಿಗೆ ತುಳಿದವರದೇಕೆ ಚಿಂತೆ//

ತಾಳಿದ ಬಾಳು ತೆವಳಿ ತಲುಪುವುದು
ತಡಮಾಡದೆ ಓಡಿ ತಲುಪುವದೆಲ್ಲೆಗೆ?
ಕಳೆದದ್ದು ಸಾಕು ದಿನನಿತ್ಯ ಧಾವಂತ 
ಈಗಲಾದರೂ ಇರಲಿ ಮನ ಶಾಂತ//

           ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...