Monday, May 10, 2021

* ರಾಷ್ಟ್ರ ಪಥ *

ಕನಸೊಂದು ಕಂಡೆ ಕನ್ನಡದ ಕಂದ 
ಕವಿ ಶೈಲದ ಕುಸುಮ ನಾನಿಂದು
ಕಾವೇರಿಯಿಂದ ಗೋದಾವರಿವರೆಗೆ  
ಶ್ರೀವಿಜಯನ ಮಾತು ಮೀರಿದೆ
ಹಾಯಾಗಿ //

ವಿಂದ್ಯ ಸಾತ್ಪುಡಿ ಪರ್ವತವ ಏರಿ
ಬಯಲು ಬೆಳವಲ ನಾಗರಿಕತೆ ಹೀರಿ 
ಮರಿದುಂಬಿಯಾಗಿ ಹಿಮಪುಷ್ಪವೇರಿ
ಮನದುಂಬಿ ಹಾಡಿದೆ ಕೊಗಿಲೆಯ 
ಮರಿಯಾಗಿ//

ಸಹ್ಯಾದ್ರಿ ಮಲೆಗಳ ಚಂದನವನ
ವೈಚಾರಿಕ ಕವಿಗಳ ಕವನದ ಚರಣ 
ಪಂಪ, ಪೂನ್ನ, ಕುವೆಂಪು ಪಾದದ
ಕಂಪು ಸೂಸುವ ಮೈಸೂರು 
ಮಲ್ಲಿಗೆಯಾಗಿ//

ವಂಗನಾಡಿನ ಗಂಗೆಯ ತಟದ 
ಸುಂದರಬನದ ಬಿಳಲುಗಳ ವನ
ಅಂದದ ಹುಲಿಗಳ ಘರ್ಜನೆ ಮನ
ವಂದೆ ಮಾತರಂ ಹಾಡುವೆ
ದ್ವನಿಯಾಗಿ //

ಪಡುವಣ ನಾಡಿನ ಕಾಡಿನ ಕೇಸರಿ
ಪವಡಿಸಿದ ಗಿರ್ ಗತ್ತಿನ ಘರ್ಜನೆ  
ಸಬರಮತಿ ಸಂತನ ಶಾಂತಿ ಮಂತ್ರ 
ಸತ್ಯ ಅಹಿಂಸೆ ಸನ್ಮಾರ್ಗ ಬೆಳೆಯ 
ಫಲವಾಗಿ // 

             ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...