Saturday, May 29, 2021

* ತಲೆ ತಲಾಂತರ *

ತಲೆಮಾರು ಬೆಳೆದು ಬಂತು, ನಿಂತು 
ನೆಲದ ಹಿಡಿಮಣ್ಣಿನ ಚಂದದ ಬೇರಿಂದ 
ತಲೆಯಲ್ಲಿ ಚಿಗುರಲಿಲ್ಲ ಅಪ್ಪ ಅಜ್ಜನಿಗೆ
ಕುಲವೆ ಧರಿಯಲ್ಲಿ ಸಕಲವೂ ಎಂದು//

ಮಗನ ತಲೆಯಲ್ಲಿ ಆಸೆಯ ಚಿಗುರೆಲೆ
ಬಾಗಿನಡೆವ ಭಾವನೆ ಮಾಡಿದ ಕೊಲೆ
ಸಾಗಿನೆಡೆದ ಕಾಣಲಿಲ್ಲ ಸಾಗರದ ಅಲೆ
ಸುತ್ತವರಿದಾಗ ಕಡಲಿವನಿಗೆ ಜ್ವಾಲೆ//

ಶರಧಿಯ ಸರಿಸುವ ಹರಸಾಹಸ
ಕೊರಕಲು ಕಂಡಾಗ ತಲೆಯ ಬಿರುಕು
ಗೊರಕೆ ಹೊಡೆದವರಿಗೆ ಈಗ ಮರುಕ
ಬೇರು ಭದ್ರಪಡಿಸ ನಿಂತ ತಲೆ ತಿರುಕ//

ಕಾಲ ಕಳೆಯುವ ಮುನ್ನ ಸಾಲಿಗೇರಲಿ
ಶೂಲವದು ಸಕಲವು ತನಗಾಗೆಂದಲಿ
ಬಾಲಕಳದು ಬೆಳದು ಬೆಳಕಾಗು ಜಗದಿ
ಛಲವಿರಲಿ ಕಟ್ಟುವೆ ಕಾಡಿನ ನಾಡನು//

ಬಸನಗೌಡ ಗೌಡರ 


    


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...