Sunday, May 30, 2021

* ಬೇಕು ನಿಸರ್ಗದ ನರ *

ಕರವಲ್ಲವಿದು ಸೃಷ್ಟಿಯ ವರ 
ಬೆರುಳು ಬಂಧನದಿ ಅರಳಿದೆ ವನ/
ಸೆರಗೊಡ್ಡಿ ಬೇಡುವೆ ಸ್ಮಶಾನ ಶಿವನ
ಮರದ ರೂಪದಲ್ಲಿ ತೋರು ವದನ //

ಅಂದು ಪಶುಪತಿ ಸಿಂಧೂ ಕೊಳ್ಳದ
ಇಂದು ಹರ, ಹೆಸರಿಗೇನು ಇಲ್ಲ ಬರ/
ತಂದು ನಮಿಸಿ ಬೇಡುವೆವು ವರ
ತುಂಬಿ ಹರಡಲಿ ಶ್ರೀಗಂಧದ ಪ್ರವರ//

ಹಸಿದು ಮುಕ್ಕುವ ಕಾಡು ಹೆಬ್ಬುಲಿಯ  
ಹೊಸಿಕಿ ಹಾಕುವ ಭಯವ ಕಳೆದು /
ಹರಣಿ ತಾ ಸ್ವಚ್ಛಂದವಾಗಿ ಬೆಳೆದು 
ಹೊಸ ಸಂದೇಶ ಹಾಡಿದೆ ಜಗದಲಿ//

ಪಶು ಪಕ್ಷಿಗಳಿಗೆ ಸ್ವಚ್ಛಂದ ಕನಸು
ಯಶ ಕಂಡು ಹಾರುವವು ನಭ ಏರಿ
ಪಾಶವಿ ಕೃತ್ಯ ಎಸಗುವರಿಲ್ಲ ಈ ಬಾರಿ  
ನಿಸರ್ಗದ ನರನ ಸೃಷ್ಟಿಸು ಮುರಾರಿ //


                ಬಸನಗೌಡ ಗೌಡರ

                  ಗುಳೇದಗುಡ್ಡ 


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...