Thursday, November 4, 2021

* ಹಣತೆ ಉರಿಯಲಿ *

* ಹಣತೆ ಉರಿಯಲಿ *

ತಲೆಯ ಭಾರ ಇಳಿಯಲು 
ಎದೆಯ ಭಾರ ಅರಳಲು 
ಹೃದಯ ಗೀತೆ ಹಾಡುವೆ /ಪ/

ಮನದ ಮೈಲಿಗೆ ತೊಳೆಯಲು 
ಮಬ್ಬುಗತ್ತಲು ಹರಿಯಲು 
ಹಬ್ಬದ ಹಣತೆಯು 
ಉರಿಯಲಿ //

ಕಬ್ಬು, ಕದಳಿಯ ದಿಬ್ಬಣ
ಹಬ್ಬದ ಕಳೆ ಹರಡಲು 
ಮಾನವತೆ ಗೀತೆಯು
ಮೆರೆಯಲಿ //

ಮನೆ,ಮನ ಮನಗಳಲ್ಲಿ  
ಮಂದಿರ ಮಸೀದಿ ಅರಿಯಲು
ಪ್ರೀತಿಯ ದೀಪವು 
ಉರಿಯಲಿ //

ಸ್ನೇಹವೆಂಬ ಬತ್ತಿಯ 
ಹೊಸೆದು ತಿದ್ದಿ ತೀಡಿ 
ಹೊಸ ಹಣತೆಯು 
ಬೆಳಗಲಿ  //

ಮನದ ಭಾರ ವಿಳಿಯಲು 
ಹಣದ ಮೋಹ ತುಳಿಯಲು
ಗುಣವು ... ಹೂವು
ಮಾಲೆಯಾಗಲಿ// 

ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...