Monday, December 27, 2021

ವ್ಯವಸ್ಥೆಯ ನಗ್ನ ಸತ್ಯ

ವ್ಯವಸ್ಥೆಯ ಸಮಸ್ಯೆಯ 
ಬೇರನರಿಯದೆ ಬರಿ 
ದೂರಿ ಆಗದು ಪ್ರಯೋಜನ/ 
ಕಾರ್ಯಗತವಾಗದ 
ಯೋಜನೆಯೊ ಒಂದೆ 
ಅದು ಕತ್ತೆಯ ಮಾರ್ಜನ/
ಬರಿ ಹುತ್ತದ ನೆತ್ತಿಯ 
ಬಡಿದರೆ ಮೈ ನೋವು 
ಅನುದಿನ /
ಪತ್ಯೆಯಾಗಲಿ ನಿಜ ಕಾರಣ/
ಇದ್ದಾಗ ಬರದ ಜನ
ಸತ್ತ ಮೇಲೆ ಹೇಳುವರು 
ಅವರ ಪುಣ್ಯದ ಪುರಾಣ/ 
ಕೈತುಂಬಾ ಇದ್ದಾಗ ಹಣ 
ಮೆರೆಸುವರು ಬೀದಿ 
ಬೀದಿಗಳಲ್ಲಿ ಸನ್ಮಾನ 
ಬೀಗಿದರೆ ಮರಣ/
ಮರೆತರೆ ಆಗಲಾರೆ ಶರಣ/
ಉಚ್ಚ ನೀಚರೆಂಬುದು
ಸಚ್ಚಾರಿತ್ರ್ಯ ಹೊಂದಿರುವೆವು 
ಎನ್ನುವವರು ಪುರಾಣ /
ಬಚ್ಚಲ ನೀರಿಗೆ ಬಳದಿದೆ
ಪಚ್ಚೆಯ ತೋರಣ/
ಹುಚ್ಚರಂತೆ  ಹಣೆಬರಹ//

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...