Friday, December 31, 2021

* ಬಿದ್ದಿರುವೆನು ಇಲ್ಲಿ *

ಎಲ್ಲರಿಗೂ ಬೆಲ್ಲವಾಗುವುದು 
ಇಲ್ಲಿ ನನಗಾಗಲ್ಲ.ಆದವರೂ 
ಈ ಜಗದಲ್ಲಿ ಸುಖವಾಗಿ ಉಳಿದಿಲ್ಲ 
ಇದ್ದರೆ ಹೇಳಿ... ಅದು ಕಲ್ಲಾಗಿರಬೇಕು 
ಇಲ್ಲಾ ಮಣ್ಣಾಗಿರಬೇಕು 
ಇಲ್ಲಾಂದರ ಎಲ್ಲರ ಕೊಡಲಿಯ 
ಏಟು ತಿಂದ ಬಡಪಾಯಿ 
ಗಿಡವೆ ಆಗಿರಬೇಕು !
ಎಲ್ಲರಿಗೂ ಬೇಕಾಗಲೂ ಹೋದವರ 
ಪಟ್ಟಿ ದೊಡ್ಡದೆ ಇದೆ.. 
ಅದು ಒಂದೆ, ಎರಡೆ......
ನಡು ರಾತ್ರಿ ನಡೆದ ಬುದ್ಧನಿಗೆ 
ವಿಷ ನೀಡಿದರು.
ದೇವರ ಸಾಮ್ರಾಜ್ಯದಲ್ಲಿದ್ದ 
ಯೇಸುವನ್ನು ಕಳ್ಳರ ಮಧ್ಯ 
ಶಿಲುಬೆಗೆ ತಂದರು.
ಅರಬೆತ್ತಲೆ ಫಕೀರ ನಮ್ಮ ಗಾಂಧೀಜಿಗೆ 
ಆಗಿದ್ದಾದರೂ ಏನು ..?
ಆಹಾ ...ಎಂಥಾ ಪುಕ್ಕಲು
ಪರಮೇಶಿ ಇವಾ, ಅಂದಿರ ಬೇಕಲ್ಲಾ..!  
ಅಂದರೆ ಅನ್ನಿರಿ ನನ್ನ ದೇನು 
ತಕರಾರು ಇಲ್ಲ 
ನಾನು ಪುಕ್ಕಲನೆ...
ಬೆಲ್ಲ ವಾಗಲೂ ಬಿಡಲೊಲ್ಲರು 
ಮಡದಿ,ಪಡೆದ ಮಕ್ಕಳು ಹಡೆದ ಜನಕರು... 
ಅವರನ್ನು ಬಿಟ್ಟರೆ.. ! ಬಿಡಬಹುದೆ ಜಗವೆಲ್ಲ ? 
ಕಲ್ಲು ಹೊಡೆವರು ತಾನೆಲ್ಲಿದ್ದರೂ  
ತಿಳಿಯದವರಿಗೆ ಕಲ್ಲಾಗಿ 
ತಿಳಿದವರಿಗೆ ಬೆಲ್ಲವಾಗಿ 
ತಿದ್ದಿಕೊಳ್ಳುತ್ತಾ ಬಿದ್ದಿರುವೇನು 
ಬುದ್ಧ ಬಸವ ,ಗಾಂಧಿ ಯೇಸುವಿನ 
ಶುದ್ಧ ಪಥದಲ್ಲಿ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...