Monday, October 3, 2022

ನುಡಿನಮನ



*ಚಾಲುಕ್ಯರ ಕಲಾ ಕಾಂತಿ
ಈ ಶೀಲಾಕಾಂತ *

ಚಾಲುಕ್ಯರ ಕಲೆಗಳ ಭಾವಕೆ
ಜೀವ ತುಂಬಲು ಸಿಂದಗಿಯಿಂದ
ಬದಾಮಿಗೆ ಬಂದ ॥

ಭಾಷೆಯ ಬೋಧನೆ ವೇಷದಿ
ಆಶೆಯ ತುಂಬಿದ ಶಿಷ್ಯರಲಿ
ವಿಶ್ವಕರ್ಮನ ಕೃಪೆಯಿಂದ॥

ಶಿಲೆಗಳಲರಳಿದ  ಕಲೆಗಳಗೆ 
ಅಕ್ಷರ ಮಾಲೆಯ ಬರೆದ ಈ ಕಂದ 
ಸರಸ್ವತಿಯ ಕೃಪೆಯಿಂದ ॥

ದೇಶ ವಿದೇಶಗಳ ಪ್ರವಾಸಿಗರ 
ಮನತನಣಿದ ಆಂಗ್ಲ ಭಾಷೆಯ 
ಗುರು ಚಾಲುಕ್ಯ ಪ್ರೀತಿಯಿಂದ॥

ಇತಿಹಾಸದ ಗತ ಅರಳಿಸಿ 
ಭೂತಕೂ ಚಾತಿಯ ನೀಡಲು 
ಕತೆಯಾದನು ಕಲೆಯಿಂದ॥

ಗುಡ್ಡದ ಪಡೆಗಳನಡ್ಡೆಯ ಮಾಡಿ 
ಅಡಿ ಅಡಿ ಕಲೆಗಳ ಅಮೃತ 
ಹೊರತೆಗೆದಾ ಗುರು ಗುರಿಯಿಂದ॥

ಗಾಂಧಿ ಜಯಂತಿಯ ದಿನವೇ 
ನಂದಿತು ವಾತಾಪಿಯ ಗತ 
ಸಾಹಿತ್ಯದ  ಕತೆಯೊಂದು॥

ಮಹಾತ್ಮಾನ ದಾರಿಯಲ್ಲಿ 
ಮತ್ಸರ ಮೀರಿದ ಕಲೆಗಾರನ ಕಲೆ ಮಾಯವಾಯಿತಿಂದು॥


       ಬಸನಗೌಡ ಗೌಡರ ಉಪನ್ಯಾಸಕರ ಗುಳೇದಗುಡ್ಡ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...