Saturday, October 19, 2024

ಈ ಮುನಿ ಭಾವ ಯಾನಿ

ಹೆಂಡತಿಯ ಹಿಡಿತ ತಪ್ಪಿದವನಲ್ಲ
ಜಡೆ ಬಿಟ್ಟು ಕೊಡೆ ಹಿಡಿದವನಲ್ಲ
ತೊಡೆ ತಟ್ಟಿ ತಿರುಗಿ ನಡೆದವನಲ್ಲ 
ಕಂಡುಂಡುಟ್ಟವನು ಜಗದ ಧನಿ,ದ್ವನಿ ॥

ಯಾನದಲ್ಲಿ ಮಾನ ಉಳಿಸಿಕೊಂಡವನು
ಹಣವಿದ್ದು ಗುಣವುಳಿಸಿಕೊಂಡವನು
ಧ್ವನಿ ಇದ್ದು ಮೌನಿ, ಮಾನ್ಯವಾದವನು
ಕನಿ ಕೇಳದೆ ಮನಕೇಳುವನು ಈ ಮುನಿ ॥

ಭಾವಗಳಿಗೆ ಜೀವ ತುಂಬುವವನು
ಕಾಯ ಕಮಂಡಲ, ಕರ್ಮ ರುದ್ರಾಕ್ಷಿ
ಧರ್ಮ ವೊಂದೆ ಉದರದ ಭಕ್ಷ ಭೋಜ್ಯ
ಬದುಕಿನ ಮರ್ಮ ತಿಳಿದವನು ಈ ಮುನಿ ॥

ಬಣ್ಣ ಬದಲಿಸದೆ ಉಣ್ಣುವವನು
ಕಣ್ಣೊಳಗಿದ್ದು ಹೃದಯದಿಂದೇಳುವನು
ತನ್ನವರು ಭಿನ್ನರೆಲ್ಲರೂ ಇವನಿಗೊಂದೆ
ಬೆಣ್ಣೆಯಂತೆ ಕರಗುವನು ಈ ಭಾವಯಾನಿ ॥







No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...