Tuesday, May 5, 2020

* ಕರ್ಮ ಯೋಗಿ *

ತುತ್ತಿನ ಚೀಲ ತುಂಬಲು
ನಿತ್ಯ ದುಡಿಯುವವರು ನಾವು
ಸತ್ಯವೇ ನಮ್ಮ ದೇವರು
ಕಾಯಕವೇ ನಮ್ಮ ಧರ್ಮ//ಪ//

ಕೆಸರಾದ ಕೈಗೆ ಮೊಸರು ನೀಡದೇ,
ಹುಸಿ ಭರವಸೆ ನೀಡಿದವರು ನೀವು.
ಹದಮಾಡಿ  ನೆಲವು ಬರಡಾಗದೆ, 
ಹಸಿರಾಗಲು ಉಸಿರಾದವರು ನಾವು//

ನಮ್ಮ ದೆನ್ನುವುದು ಇಲ್ಲಿ ಏನಿಲ್ಲ,
ಕರ್ಮ ಹೆಗಲಿಗೆರಿಸದವರು ನಾವು.
ಪಾಲನೆಯೊಂದರಿತ ಕಾರ್ಮಿಕರು
ಧನಿಯ ಮರ್ಜಿ ನಂಬಿದವರು ನಾವು

ಬೆವರಿನ ಬೆಲೆ ಕೇಳುವವರು ನಾವೆಲ್ಲ,
ಸಂಗ್ರಹಿಸಿ ಮೊಸರು ಮೆಲ್ಲುವ ನೀವು.
ಸಮನಾದ ಬದುಕ ನಮಗೆಕಿಲ್ಲ
ಸತ್ಯ ನಿಯಮ ತಿಳಿಯದವರು ನಾವು

ಕಾರ್ಲಮಾರ್ಕ್ಸ, ಎಂಜಲೊ ಕಹಳೆ,
ಊದಿದ ದ್ವನಿ ಕೇಳದ ಕಿವುಡು ನಾವು.
ಗಣಿ, ಕ್ವಾರಿ, ಗಾರೆಯೇ ಪರೀಕ್ಷೆಯನೆಲೆ
ಉತ್ತರಕ್ಕೆ ಮಾರ್ಕ್ಷ ಬೇಡುವೆವು ನಾವು

                 ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...