Tuesday, September 29, 2020

* ದಾರಿ ಕಾಣದು *

ದಾರಿ ತೋರಿದರು ಮನುಜಗೆ ಪ್ರಾಣಿ 

ಪಕ್ಷಿಗಳಾದರೇನು ಸರಿ ಸಹ ಜೀವನ 

ಮರೆತು ಪಾಲಿಸದೆ ಮಾಡಿದರು ಹರಣ

ಜೀವಸಂಕುಲ ದಾರಿ ತಪ್ಪಿತು ಈ ದಿನ//


ಕಾಡಿನ ಕಾವಲು ಮುರಿದ ಕದಿಮರು

ನಾಗರಿಕತೆ ಬೆಳವಣಿಗೆಯ ಹಾಡಿದರು

ಕವಲು ದಾರಿಯಲ್ಲಿ ಅರಿಯದವರು,

ಕಾಲ ಬಂದಾಗ ಉತ್ತರಿಸವರಾರು//


ಕತೆ ಹೇಳಲು ನೈತಿಕತೆಯ ಬಳಸಿ

ಜೊತೆ ನಡೆದು ಹೇಳಿದ್ದು ಬರಿ ಹುಸಿ 

ಪ್ರಕೃತಿಯ ಹಿತ ಬಯಸಿದಂತೆ ನಟಿಸಿ

ವಿಕೃತಿ ಮೆರೆದರು ಸಮಯ ಸಾಧಿಸಿ//


ಬನದ ಮುಖವೆಲ್ಲ ಕೆಂಪಾದವೊ  

ನಾಡಿನ ಬದುಕೆಲ್ಲ ಕೊಂಪೆಯಾದವು

ದುರಾಶೆಯ ಜೀವನ ನಿರಾಶೆಯಾದರು

ಬರಲಿಲ್ಲ ಬುದ್ಧಿ ಬವಣೆ ಬಂದರು. //


   🖋️.ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...