Thursday, November 18, 2021

* ಮನಸ್ಸು ಕದ್ದ ಕಳ್ಳಿ*


ನಾ ನಡೆವ ದಾರಿಯಲ್ಲಿ
ನೀ ಮುಳ್ಳಿನ ಹಾಸಿಗೆಯ ತಳ್ಳಿ
ಮರೆತು ಹೋದೆಯಾ ಮಳ್ಳಿ
ನೀ ಎನ್ನ ಮನಸ್ಸು ಕದ್ದ ಕಳ್ಳಿ//

ನೀ ಹೋದ ದಾರಿಯಲ್ಲಿ
ನಾ ಹಾಸಿದೆ ಹೊಸ ಹಡದಿ
ಕನಸಿತ್ತು ನೀನಾಗ ಬೇಕು ಮಡದಿ
ಇಂದು ಬರಿ ಕಲ್ಲು ಮುಳ್ಳಿನ ಹಾದಿ//

ಚಂದನದ ಗೊಂಬೆ ಮೈಬಣ್ಣ ಲಿಂಬೆ 
ಮಾತಿಗೆ ಮಾತು ಬೆಳೆದಾಗ ಸೋತೆ
ಮೌನದಲ್ಲಿ ಹೃದಯ ಕದ್ದು ನೀ ಗೆದ್ದೆ
ಮರೆಯಾಗಿ ಮನದಲೇತಕೆ ಖ್ಯಾತೆ//

ಕಣ್ಣು ಮುಂದೆ ಬರಿ ಕಲ್ಲು ಗುಡ್ಡಗಳೆ
ಬಣ್ಣಗಳು ನೂರಾರು ಹಚ್ಚಿಕೊಳ್ಳಲುಂಟೆ
ಸಣ್ಣ ತೊರೆಗಳು ಚಲಿಸಿವೆ ಹಾವಾಗಿ
ಹೂವುಗಳು ಚುಚ್ಚುತ್ತಿವೆ ಮುಳ್ಳಾಗಿ// .

ಕನಸು ಕಾಣಲು ಕಲಿಸಿ 
ಕತ್ತಲೆಯಲ್ಲಿ ಬೆಳಕು ಹರಿಸಿ
ಮನಸು ಮುರಿದು ಹೋದೆ ಹೇಸಿ 
ಮಾಗಿದ ಮೇಲೆ ಹೇಗೆ ಇರಲಿ ಸಹಿಸಿ//

2 comments:

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...