ಶ್ರೇಷ್ಠ ಪ್ರೀತಿಯನ್ನು ನೀಡುವ ಜೀವ
ಶಿವನ ಕರೆಗೆ ಭುವನ ತೊರೆದು
ಜೀವನದ ಕೊನೆ ಗುರಿತಲುಪಿದಳಮ್ಮ॥
ಎಲ್ಲರ ಮನೆಯ ದೋಸೆಯೂ ತೂತೆ
ಕಲ್ಲಿನ ದೇವರಿಗೆ ಬೆಲ್ಲ ಸಕ್ಕರೆ ನೈವೇದ್ಯ
ಬಲ್ಲೆವೇನಿವಳ ಬದುಕಿದ ಎಲ್ಲ ಕಷ್ಟಗಳಾ
ಸೊಲ್ಲೆತ್ತದೆ ಸುತ್ತಿ ಮಾಯವಾದಳಮ್ಮ॥
ಕತ್ತು ಬಗ್ಗಿಸಿ ಕತ್ತೆಯಂತೆ ದುಡಿದು
ನಿತ್ಯ ಕೊರೆಯಿಸಿಕೊಂಡಳು ಗರಗಸ
ಸಕ್ಕರೆ ಸವರಿದ ಕಹಿಗುಳುಗಿ ನುಂಗಿ
ಮಿಕ್ಕಿ ನಡೆವ ಛಲವೆ ನಿನ್ನ ಆಭರಣವಮ್ಮ ॥
ಸ್ವಾತಂತ್ರ್ಯ ವೆಂಬುದು ಅಂಬರದ ತಾರೆ
ಗಟ್ಟಿಯಾಗಿ ನಿಂತರು ಸಿಗಲಿಲ್ಲ ಚೂರು
ಹುಟ್ಟಿದ ಮನೆ,ಕೊಟ್ಟ ಮನೆ ಎರಡೂ ಒಂದೇ
ಬೆಟ್ಟ ಅಗೆದು ಇಲಿಯನ್ನು ಹಿಡಿದಳಮ್ಮ॥
ತವರಿಗೆ ಹಂಬಲಿಸಿ ತನು ಮೀಸಲಾಗಿಸಿ
ತಾಯಿ ಸತ್ತ ಮೇಲೆ ತಾ ದೂರವಾದಳಮ್ಮ
ತಾ ಬೇಡ ತವರಿಗೆ, ಸಹಿ ಪಡೆದ ಮೇಲೆ
ತಮ್ಮಂದಿರ ನೆನೆದು ದೂರಾದಳಮ್ಮ॥
ಮನೆ ಕಟ್ಟಿದ ಮಕ್ಕಳು ಮನಕೊಟ್ಟರೇನು
ಹಣವಿಟ್ಟು ಫಲವೇನು ಗುಣವರಳಲಿಲ್ಲ
ದನಿವರಿಯದ ದುಡಿಮೆ ಕೈಕೊಟ್ಟರೂ
ಕೊನೆಯವರೆಗೂ ಮನತುಂಬಿ ಹರಿಸಿದಳಮ್ಮ॥
🥰😌
ReplyDelete🥰😌🙏
ReplyDelete