Wednesday, March 31, 2021

* ಸ್ವರ್ಗದ ಪರಿಧಿಯೊಳಗೆ *

ನೋವು ನಲಿವುಗಳ ಅಲೆಯಲ್ಲಿ ಸೇರಿ
ಗೆಲವು ತರುವ ಬಲದ ಕೀಲಿಯನೂರಿ/
ಧಣಿವರಿತು ದಡಸೇರುವ ದೋಣಿ ಏರಿ
ಸಾಗೋಣ ಸಂಕಟದ ಬದುಕು ಮೀರಿ//

ವಲವಿನ ಬಲೆಯೋಳಗೆ  ಕರ ಸೇರಿಸಿ
ಕಲಹ ಕೇಂದ್ರ ಕತ್ತರಿಸಿ ಸಾಣಿಸಿ ಸಾರಿಸಿ/
ಬರಹ ಬಣವೆಯಲಿ ಬೆಯಿಸಿ ಬೆಂದಿಸಿ 
ಬಾಳಸ್ವೀಕರಿಸೋಣ ಹುಳುಕು ಕತ್ತರಿಸಿ//  
 
ವರ್ಣವನೆ ಕರ್ಣದಲ್ಲಿಟ್ಟು ಕರ್ಮದಲ್ಲಿ 
ತಾರತಮ್ಯ ವದು ಅಕ್ಷಮ್ಯ ಜಗದಲ್ಲಿ/
ಧರ್ಮದ ಮೂಲವರಿತರೆ ತಳದಲ್ಲಿ
ಧರಣಿಯೆ ನಾಕವದು ವಿಶ್ವದಲ್ಲಿ// 

ಅಜ್ಞಾನ ತೊಲಗಿಸಲು ಬ್ರಾಹ್ಮಣ್ಯ
ಅಸುರಕ್ಷೆತೆ ಅಳಿಸಿ ಸುರಕ್ಷತಗೆ ಕ್ಷತ್ರಿಯ/
ಅಭಾವ ಕಳೆಯಲು ಅಭಯ ತಾ ವೈಶ್ಯ
ಆಲಸ್ಯ  ಕೊಲ್ಲುವ ಕಲಿಯೆ  ಶೂದ್ರ//

ಆರು ನಾನಾದರೇನು ಮೀರದು ಗಳಿಗೆ
ಗೌರವದ ಪಾಲಲ್ಲಿ ತಪ್ಪಿದರೆ ಕೆಳಗೆ/ 
ಸಾಲು ಮಾಡಿಹರು ಸರಿದಾರಿಯೊಳಗೆ
ಸೇರಿ ನಡೆದಾಗ ಸ್ವರ್ಗ ಪರಿಧಿಯೊಳಗೆ//

                      ಬಸನಗೌಡ ಗೌಡರ 

 

Saturday, March 27, 2021

* ಹೋಳಿಯ ಸಂಭ್ರಮ *

ಹೊಂಗೆಯ ಹೊವಿನ ರಂಗಿನ ಚಿತ್ತಾರ
ಭೃಂಗದ ಜೇಂಕಾರ ಎನ್ನಂಗಳದಲ್ಲಿ 
ಮೊಡಲರಮನೆಯ ನೇಸರ ಮುತ್ತಿಕ್ಕಲು,               
ಬಂಗಾರ ಕಿರಣ ಹೊಂಬೆಳಕಿನ ಚರಣ
ಮುತ್ತಿನ ಮಳೆಯು ನಯನ ಮನೋಹರ //
 
ಕತ್ತಲೆಯೊಳಗೆ ಮನೆ ಮಾಳಿಗೆ ಸುತ್ತಿ 
ಕಳ್ಳ ತನದಲ್ಲಿ ಕಟ್ಟಿಗೆ ತುಂಡು ಗಳನೆತ್ತಿ
ಕೆಕೆ ಹಾಕಿದ ಪಡ್ಡೆಗಳಿಗೆ ಯುದ್ಧ ಸಂಭ್ರಮ !  
ಸಾಧನೆಯ ಶಿಖರದ ಬೂದಿಯಲಿ ಹೂರಳಾಡಿ             
ಹಲಗಿಯ ಹೊಡೆದರು ಗೆಳೆಯರು ಕೂಡಿ //

ಸಲುಗೆಯ ಬಾಳಿನ ನಲುಮೆ ಹೋಳಿಯಾಡಿ.
ಸಂಹರಿಸಿದ ಬೆಂಕಿಯಲ್ಲಿ ಹುರಗಡಲಿ ಮಾಡಿ 
ಬಾಯಿ ಕೈಗೆ ಹೊಡೆದಾಟ ಲಬೋ.. ಲಬೋ ..
ಹೋಳಿಯ ಸಂಭ್ರಮ ಗಲ್ಲಿಗಲ್ಲಿಗಳಲ್ಲಿ.
ಹುಡುಗರ ಕೈಯಲ್ಲಿ ಬಣ್ಣದ ಚೊಂಬು// 

ಬಣ್ಣ ಬಳಿಯಲು ಬರುವರು ಓಡೋಡಿ  
ಅಜ್ಜಿಯ ಬಾಯಿಯಲ್ಲಾಗುವರು ಬಿಡಾಡಿ.
ಹೂತಿಟ್ಟ ಭಾವಗಳ ಹೊರಹಾಕಿ, ಕಾಡಿ
ಹರುಷದ ಹೊನಲಿನಲ್ಲಿ ತೇಲಾಡಿ ಓಲಾಡಿ             ತಿರುಗುವರಿವರು ಬಲೆ ಕಿಲಾಡಿ //

ಬೆಂಕಿಯ ಎತ್ತಲು ಹೆಂಗಳೆಯರ ಹೋರಾಟ  
ಹೊತ್ತಿಸಿದ ಬೆಂಕಿಯಲ್ಲಿ ಹೋಳಿಗೆ ಊಟ                        ಉಂಡು ತೇಗಿದ ಮನೆಮಂದಿ ಹಾರಾಟ
ಮತ್ತೆ ಸೇರಿತು ಜನ ಸಾಲು ಓನಿಯಲ್ಲಿ 
ಚಟ್ಟದ ಮೇಲೊಂದು ಕಂಡೆ ದಿಟ್ಟ ಹೆಣ //

ಅಟ್ಟಕ್ಕೇರಿಸಿದರು ತುಟಿ ಬಿಡದ ಗಟ್ಟಿ ಮನ
ಗಟ್ಟಿ ಗಿತ್ತಿಯರು ಹಾಡಿ ಹೊಗಳಿದ ಗುಣಗಾನ
ಗರ ಬಡಿದು ಊರೆಲ್ಲ ತೇಲಿತು ನಗೆಗಡಲಲ್ಲಿ.
ಅಳುವಲ್ಲಿ ನಗುತರುವ ಹೋಳಿ ಸಂಭ್ರಮ 
ಇದಕುಂಟೆ ಸರಿಸಮ ಇಳೆಯಲ್ಲಿ //

       ಬಸನಗೌಡ ಗೌಡರ.

Wednesday, March 24, 2021

* ಮೌನದರಮನೆ *

ಉಂಡದ್ದು ಅರಗಿಸಿ ಬೊಜ್ಜು ಕರಗಿಸಿ 
ಬೊಂಬೆಯಂತಾಗಲು ಬಯಸಿ 
ನಡೆದೆ ನಡೆದೆ ಕೈಬೀಸಿ, ಕಾಲು ಕಂಬ 
ಹೊಟ್ಟೆ ತಲೆದಿಂಬು.ಸುಸ್ತಾದ ಎನ್ನ 
ನೋಡಿ ಮುಸಿ ಮುಸಿ ನಕ್ಕಿತು 
ನೆಟ್ಟ ನಗರಸಭೆ ದೀಪದ ಕಂಭ ..!  
ಯಾಕೆಂದರೆ ನಾ ತಿರುಗುತ್ತಿದ್ದೆ 
ಹೊಸ ಲೆಔಟ ತುಂಬಾ
ನನಗಿಲ್ಲದ ಸುಸ್ತು ನಿನಗೆ 
ಯಾಕೊ ಹುಂಭ...? ಹೇಳಿತಾ ಕಂಬ..
ನೆತ್ತಿಯಲ್ಲಿ ಬಿತ್ತುವೆ ಬೆಳಕು 
ಜಗದ ತುಂಬಾ .....
ಆದರೂ ನನಗಿಲ್ಲ ಜಂಭ 
ಬಳಕುವ ಮೈಯಲ್ಲಿ ಥಳಕಿಲ್ಲ 
ಬಳುಕಿಲ್ಲ ದಾರಿ ತೋರಿದೆನೆಂಬ 
ದರಿದ್ರ ಹಮ್ಮು ಬಿಮ್ಮಿಲ್ಲ .
ನಿನಗ್ಯಾಕೆ ನೆತ್ತಿಗೇರಿದೆ ಪಿತ್ತ ಗೊತ್ತಾ ? 
ಇದರಲ್ಲಿರುವ ಮೂರು ಪ್ಲಾಟು
ನಾನೆ ಗಳಿಸಿದೆನೆನ್ನುವ ಘಾಟು ..! 
ಯಾರೊ ಮನೆ ಕಟ್ಟಲು ಮಾಡಿದರು 
ಈ ಭೂಮಿಯ ಸಮತಟ್ಟು ,.. 
ಇನ್ನಾರೋ ಮಾಡಿದ ರಸ್ತೆ 
ಇನ್ನಾರೋ ನೆಟ್ಟ ಗಿಡ ಮರ 
ನಳಿ ನಳಿಸುವ ಬೃಂದಾವನ .....
ನನ್ನದೆನ್ನುವದು ಇಲ್ಲಿ ಏನಿಲ್ಲ 
ಅದರ ಗೊಡವೆಯೊ ನನಗಿಲ್ಲ ...
ನನಗಿಲ್ಲದ ಸುಸ್ತು ನಿನಗ್ಯಾಕೆ ಗೊತ್ತಾ ?
ನೀನೇ ಗಳಿಸಿದ ಮೂರು ಅದರ ಮುಂದೆ 
ಆರು ಸೊನ್ನೆಯಿಂದ ಗಳಿಸಿದ ಅರವತ್ತು 
ನಲವತ್ತರ ಮಣ್ಣಿನ ಒಡೆತನದ ಹಮ್ಮು .
ನೀನೆ ಬಿತ್ತಿದ ಬೀಜಗಳು ಹೆಮ್ಮರವಾಗಿ 
ಬೇರು ಬಿಡಲು ಕಿತ್ತಾಡಿ 
ಎರಚಾಡುವವು ರಾಡಿ. 
ಮೆತ್ತಿದ ರಭಸಕ್ಕೆ ಸುತ್ತ ತಿರುಗುವೆ 
ಸುಸ್ತಾಗಿ...ಮುಚ್ಚಿಟ್ಟ ಸತ್ಯದ 
ಹುಚ್ಚು ಭೂತದ ಘಾತ .
ನಿತ್ಯ ಚುಚ್ಚಿದ ಮುಚ್ಚಿದ ಕತ್ತಿ 
ಯಾರಿಗೂ ಕಾಣದೆ ಸಾರಿ ಹೇಳುವ 
ಸವತಿಯರ ಬಿರುಗಾಳಿಗೆ ಅಲುಗಾಡಿ 
ಛಲ ಬಿಡದೆ ತಿನುಕಾಡಿ 
ಕಾಣುತಿರುವೆ ಮೈಮನದ ಸುಸ್ತು 
ನೀ ಮರೆತಂತಿದೆ ಮೂರು 
ಆರಡಿಯ ಮೌನದರಮನೆ. 

      ಬಸನಗೌಡ ಗೌಡರ 





Sunday, March 14, 2021

ಮಹಾಮಳೆ

ಮಹಾಮಳೆ  ಮರಳಿ ಬಂತಲ್ಲೊ
ಮಹಾರಾಯ ಮೂರೇ ತಿಂಗಳು
ಮುರಾಬಟ್ಟಿ ಮಾಡೇ ಬಿಟ್ಟಿತಲ್ಲೊ
ಮಹಾನವಮಿ ದಸರಾ ಹುಸಿನಗಿ
ಮಹಾ ನಾಟಕ  ಮುಗಿದೆ ಇಲ್ಲಾ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಮಹಾ ಮಳೆ ಮತ್ತೆ ಬಂತಲ್ಲೊ
ಹರಿದಾ ಒಡ್ದು  ಹಾಕೆ ಇಲ್ಲಾ
ಬಿದ್ದ ಮನೆ ಎದ್ದೆ ಇಲ್ಲ
ಮುರಿದ  ಮನಸು ಕೂಡೆ ಇಲ್ಲಾ
ಮಹಾ ಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಹರಗಿ ಹಸನ ಮಾಡೇನಂತ
ಕೂರಿಗೀ ಕುಂಟಿ ತಯಾರಿ ಯಾತಲ್ಲ
ಬದಕು ಕಟ್ಟುವ ಗುಂಗಿನಾಗ 
ಮುದಕರಂಗ ತಲೆ ಅಲಗಾಡತು
ಮಹಾಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಸಾಲಗಾರರಿಗೆ  ಗೆಲವೆ ಇಲ್ಲ
ಸಾವುಕಾರನಿಗೆ ಸೋಲೆ ಇಲ್ಲ
ಸವಲತ್ತುಗಳಿ ಬಡತನವಿಲ್ಲ
ತಂದು ಹಾಕುವವನಿಗೆ ನಿದ್ದೆ ಇಲ್ಲಾ
ಮಹಾಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//








Saturday, March 13, 2021

* ಎಳೆಯೋಣ ಬನ್ನಿ *

ಕನ್ನಡದ ದೇವಿ ಮುನ್ನಡೆಯುತಿಹಳು 
ಅನ್ಯರ ನುಡಿಯ ಭಿನ್ನತೆಯ ಮರೆತು
ಗಲ್ಲಿ ಗಲ್ಲಿಗಳಲ್ಲಿ ಕನ್ನಡದ ಕದರಿನ
ತೇರು ಎಳೆಯೊಣ ಬನ್ನಿ  //

ಕನ್ನಡದ ಕುವರರು ಸನ್ನಡತೆಯವರು
ಭಿನ್ನ ರಾಗದ ಕುನ್ನಿಗಳ ತಡೆದು 
ಸೊನ್ನಿಗೇಡಿಗಳ ತೊರೆದು, ಒಂದಾಗಿ
ತೇರು ಎಳೆಯೋಣ ಬನ್ನಿ//

ಉತ್ತರದ ಹುತ್ತಕ್ಕೆ ಹೆದರದವರು 
ಜೊತೆಯಾಗಿ ನಡೆವವರ ಪಡೆದು  
ಹತಭಾಗ್ಯರ ಹುರಿದು ಭಾರತಾಂಭೆಗೆ  
ಜೈಕಾರ ಹಾಕೋಣ ಬನ್ನಿ//

ಕನ್ನಡದ ನುಡಿ ಕನ್ನಡಿಯ ಗಂಟಲ್ಲ
ಚೆನ್ನುಡಿಯ ಕಲಿತು ಭಿನ್ನತೆಯ ಮರೆತು 
ಸಣ್ಣತನ ತುಳಿದು ಅನ್ನದ ಭಾಷೆಗೆ
ಬಿನ್ನಹ ಮಾಡೋಣ ಬನ್ನಿ //

ಅನ್ನಕ್ಕೆ ಬಂದವರು ಅರಸೊತ್ತಿಗೆ ತಂದಾರು
ಅರಿಯದ  ಮರುಳರಿಗೆ ಬರೆಯ ಎಳೆದು
ಅವನತಿಯ ಸೊಲ್ಲು ಕಳೆದು  ಸನ್ಮತಿಗೆ
ಜೈಕಾರ ಹಾಕೋಣ ಬನ್ನಿ//

ಕೆಲವಡಿ ಬಯಲಿನಲ್ಲಿ ಶ್ರೀರಂಗನ 
ಮಹಲಿನಲ್ಲಿ  ರಂಗು ರಂಗಿನ 
ಚಿತ್ತಾರ ಎಳೆದು ಸತ್ಯದ ತೇರಿಗೆ
ನಮಿಸೋಣ ಬನ್ನಿ  //


* ಮೂರ್ತಿಯಾಗುವ ಮುನ್ನ *

ಏರುವುದು ಹಾರುವುದು, ಒಮ್ಮೊಮ್ಮೆ  
ಜಾರುವುದು, ತಾರುಣ್ಯದಾ ಗುಣ /
ಒಮ್ಮೊಮ್ಮೆ ಪುಟಿದೇಳುವುದು ಅರಿ, 
ವಶಕ್ಕಾಗಿ ಸಿಡಿದೇಳುವ ಆಕ್ರಮಣ  //

ತಡೆಯದಿರುವುದೆ ಬಿಸಿರಕ್ತದ ಗುಣ
ಬಿಸಿಯು ಕೆಸರಾಗಿ ಹೊಸ ಗಾಳಿ ಬೀಸಿ /
ಗೂಡಿಸುವುದು ಏರಿದ ಸ್ವಾಭಿಮಾನ, 
ಕಳೆಯುವುದು ಕೊನೆಗೆ ಬಿಗುಮಾನ//
 
ಬೆಟ್ಟದ ಬುಡದಲ್ಲಿ ಹರಡಿದ ಕಲ್ಲು
ತಟ್ಟಿದ ಪೆಟ್ಟಿಗೆ ಕೆಟ್ಟೆನೆಂದರೆ ಸಲ್ಲ /
ಮೆಟ್ಟಿಲುಗಳಾಗುವುದು ಪಾಮರನಿಗೆ , 
ಜಟ್ಟಿಗೆ ಗುಂಡಾಗು ಏರುವೆ ಹೆಗಲಿಗೆ//

ಇಳಿಯುತ್ತಾ ಹೋದಾಗ ತಳಪಾಯ 
ತಿಳಿಯುತ್ತ ಸಾಗುವುದು ಉಪಾಯ/
ಅವಮಾನ  ತಿಳಿದಾಗ ಬಹುಮಾನ 
ಅರಿತರೆ ಸಿಗುವುದು ಶಾಲು ಸನ್ಮಾನ//

ಮೂರ್ತಿಗೆ ಮುನ್ನ ಮಡಿ ಮಂತ್ರಗಳಿಲ್ಲ 
ಮೈಲಿಗೆ ತಾಪತ್ರಯವಿಲ್ಲ ಬರಿ ಸ್ವಾತಂತ್ರ /
ಮಹತ್ಸಾದನೆ ಗೈದಾಗ  ಎಲ್ಲಾ ಅತಂತ್ರ 
ಗರ್ಭಗುಡಿಗಟ್ಟಿ ಹೇಳುವರು ಮಂತ್ರ  //

Tuesday, March 9, 2021

* ಸತ್ಯ _ಸುಳ್ಳಿನ ನಡವೆ *

ಸಾಧನೆಯ ಶಿಖರ ಏರುವೆನು ನಾನು  
ಇಂದಲ್ಲ ನಾಳೆ ತಾಳ್ಮೆಯಿಂದಲಿ ಬಾಳಿ./
ಗೊಂದಲದ ಮಾತು ಸವಿಯಾಗಿ ಹೇಳಿ
ಬೆಂಬಲ ಪಡೆದಿರುವೆ ನೀನು ಕೇಳಿ // 

ನಾನುಟ್ಟು ಬಟ್ಟೆಯಲ್ಲಿ, ಕಪ್ಪಿಟ್ಟು ಬಂದೆ.
ಕೊಗಿಲೆಯ ಮರಿಗೆ ರಾಗವ ಹೇಳಿದೆ /
ನೀನೆ ನಡೆದಾಗ ಬಿದ್ದಾವ ಹಳ್ಳ ಕೊಳ್ಳ
ಉಳ್ಳವಂತಾ ತಿರುಗ್ಯಾರ ಹಿಂದ ಮುಂದ//

ನಾ ಓಡಿದಾಗ ನಕರಾ ಮಾಡಿದೆಯಲ್ಲ. 
ನಂಬಿದ ಜನ ಕಂಬಿ ಕಿತ್ತಾರೊ ಎಲ್ಲಾ/ 
ಸೊಂಬೇರಿಗಳಿಗೆ ತಿಳಿದೀತು ಹೆಂಗ 
ಸಾಲಾಗಿ ನಿಂತು ಜೈಕಾರ ಹಾಕುತಾರಲ್ಲ//

ಸುಖಮಾರ ನಿನಗ ಮೆತ್ಯಾರ ಪೌಡರ
ಗೊತ್ತಿಲ್ಲವೆಂದು ತಿಳಿದಿರುವೆ ಏನು ? /
ಅತ್ತಾರ ಬಳದೀದಿ,ಬಿತ್ತಿದಿ ತವಡು
ವಾಸನಿಗೆ ಸುತ್ತೆಲ್ಲ ತುಂಬ್ಯಾರ ಮಂದಿ//

ಗತ್ತಿಲೆ ನಡೆದೀದಿ ಸರಿದಾರಿ ಮರೆತೀದಿ 
ಕತ್ತಲೆ ಕರ್ಮಕೆ ಕಂಬಳಿ ಹೊದಿಸೀದಿ /
ಗೌರವದ ಬಾಗಿಲಿಗೆ ,ಬಂದು ನಿಂತೀದಿ
ಸತ್ಯ ತುಳಿದಿರುವೆನೆಂದು ತಿಳಿದೀದಿ //

ಸವೆಯದ ದಾರಿ ತುಳಿದಿರುವೆ ನಾನು
ಶಿಖರದ ತುದಿಗೆ ಸಾಗುವುದು ಹ್ಯಾಂಗ /
ಇಂದಲ್ಲ ನಾಳೆ ಬಂದೆ ಬರತೀನಿ
ನಿನ್ನ ಪೌಡರ ಸೇಂಟ ಹಾರಿದಾಗ //
      
                  ಬಸನಗೌಡ ಗೌಡರ 

Monday, March 8, 2021

* ಮಹಿಳಾ ಸ್ಮರಣೆ *

ನಾನು ನಾನೆಂದರೆ ನಾನಲ್ಲ 

ನನ್ನದೆನ್ನುವುದು ಇಲ್ಲಿಲ್ಲ ನನಗಾಗಿ 

ನೀನಿರಬೇಕೆನ್ನವುದು ಸ್ವಾರ್ಥದ ಫಲ

ನಿಸ್ವಾರ್ಥ, ಜಗ ಕಲಿತದ್ದೆ 

ಸ್ತ್ರೀ ಕುಲದಿಂದ


ತಾನು ಹುಟ್ಟಿದ ಮನೆಯಲ್ಲ

ಕೊಟ್ಟ ಮನೆ ಕರುಳಿನ ಸೇವೆಗಾಗಿ 

ಕಹಿಯನೆ ಸಿಹಿಯಾಗಿಸಿದ ಫಲ

ತ್ಯಾಗಕೆ  ಹೆಸರು ಬಂದುದೆ 

ಸ್ತ್ರೀ ಕುಲದಿಂದ


ನಿದ್ದೆಯ ಕಳೆದದ್ದು ತಿಳಿಯಲಿಲ್ಲ 

ಎದ್ದವರ ಸೇವೆಯದು ಪರರಿಗಾಗಿ

ಶುದ್ದಿಗೆ ಸತತ ಸಂಘರ್ಷವೆ ಫಲ

ಸಹಣೆಗೆ ಹೆಸರು ಬಂದುದೆ 

ಸ್ತ್ರೀ ಕುಲದಿಂದ 

 

ಹಳಸಿದನ್ನವನುಂಡು ಹೇಳಲಿಲ್ಲ 

ಹೊಸತನ ಕಲಿಸಿದಳು ಮನೆಗಾಗಿ 

ಹರಿದ ವಸನವೂ ಸಹನೆಯೆ ಫಲ 

ಮಧುರ ಜೇನು ಸಂಗ್ರಹವೆ 

ಸ್ತ್ರೀಕುಲದಿಂದ


ಯಾರು ನಿನಗೆ ಸಮಬಲವಿಲ್ಲ

ಹಣವೆಂದವ ಹೆಣವಾಗಿ ಬಂದ.

ಮನುಕುಲವರಳುವದು ನಿನ್ನ ಫಲ 

ಮನೆ ದೀಪ ಬೆಳಗುವುದೆ 

ಸ್ತ್ರೀಕುಲದಿಂದ


          ಬಸನಗೌಡ ಗೌಡರ

Saturday, March 6, 2021

* ಕಾರು ಕಾರಬಾರು *

ಕಾರು ಕನಸು ಕಂಡವರು ನೂರು
ಕಾರ್ಯವೆ ನಮ್ಮ ಮನೆಯ ದೇವರು.
ಕರ್ತವ್ಯ ಕರೆಗಾಗಿ ಕಾಯ್ದವರೇನಿವರು
ಕಾಲಿಗೂ ಮೊದಲೆ ಶತ್ರುಗಳಿವರು.

ಹಿತವಾಗಿ ಬಳಸಿ ನಿಸರ್ಗದ ಗೆಳೆತನ 
ಬಯಸಿದರೆ ನನ್ನದೂ ಒಂದು  ಸಲಾಮು, 
ಹಚ್ಚಬೇಕು ಯಾರು ಮಲಾಮು ?
ಕಾರು ಇದ್ದವರಿಗೆ ಬಾಗುವುದು 
ಎಲ್ಲರ ಜಾಯಮಾನ, 
ಕಾಲು ಬಳಸಿದವನಿಗೇಕಿಲ್ಲ ಸನ್ಮಾನ !! 

ಇಂದು ನಾನೋದಿದೆ ಸೈಕಲ್ ಏರಿ 
ಕಛೇರಿಗೆ ನಡೆದ ಡಿಸಿಪಿ..
ಕಂಡವರು ಏನೆಂದರೊ ತಿಳಿದಿಲ್ಲ 
ಪ್ರಚಾರಕ್ಕಾಗಿ ಎಂದರೆ ಏನು ಮಡುವುದು ? 

ಅನ್ನಲಿ ಬಿಡಿ ಅವರವರ  ಭಾವಕ್ಕೆ 
ಅವರ ತೆರನಾಗಿರುವನ ಶಿವಯೋಗಿ. 
ಕಾರು ಕಾಣದ ಕಮಂಗಿಯೆಂದು 
ದೂರಬಹುದೇನೂ ಹಲವರು .

ದೂರಲಿ ಬಿಡಿ ನಮಗೇನು ಕಿವಿಗಳೇ 
ಕಿವುಡಾಗಿವೆ ಕರ್ಮದ ಪೆಟ್ಟು ತಿಂದು. 
ಕಿತ್ತು ತಿನ್ನುವ ಕಿರುಬಗಳಿಗಿಂತ ಕರ್ತವ್ಯ 
ಕನಸು ಕಂಡವರೆ ನನ್ನ ದೇವರು. 

ಕಕ್ಕ ಹೋಗಲು ಕಾರು ಬಳಸಿದರೆ
ಕಾಲಾದರೂ ಏಕೆ ಉಳಿದಾವು ?
ಕತ್ತಲೆ ಕಳೆದಾಗ ಇವರೆಲ್ಲ 
ಆಗುವರು ಬೆತ್ತಲು.

          🖋️ಬಸನಗೌಡ ಗೌಡರ

* ಚಿಗುರಿನ ಚಿತ್ತಾರ*

ಮುಂಗಾರು ಮಳೆಯ ತಂಗಾಳಿ 
ಸೂಸಿ, ಸಂಗಾತಿ ಬಯಸಿ ಹೊಂಗನಸ ಕಂಡೆ, 
ಬಂಗಾರ ಬದುಕು ಬೆಂಡಾಗಿದೆ 
ಬಾಳೆಲ್ಲ ಬಯಲಾಗಿದೆ ಇಂದು //

ಹಸಿರು ಶಾಲನ್ನು ಹೊದ್ದು ಉಸಿರು 
ಬಿಟ್ಟಾಗ ಹಸಿವೆಯೆ ಆರಿತ್ತು ಅಂದು
ಚಳಿಗಾಲ ಕಳೆದು ಮಳೆಗಾಲವಿಲ್ಲ
ಸುಳಿಗಾಳಿಗುರುಳಿದೆ ನೆರಳಿಂದು//

ಕೆಸರುಂಡ ದಿನಗಳಲಿ, ಮೊಸರಂತೆ 
ಕಸುವು ಕಂಡೆ, ಹೊಸದೊಂದು ಸಂತೆ
ಮೈಯಲ್ಲ ಬೋಳು, ಬರಿ ಬಿಸಿಗಾಳಿ
ಹೊಸ ಗಾಳಿಗೆ ಹಂಬಲಿಸುವೆ ಇಂದು//

ಮತ್ತೆ ಮನ ಮಿಡಿಯುವ ತೋರಣ, 
ಮರಿ ಕೋಗಿಲೆಗಳ ಮಾಮರದ ಗಾನ
ಝೇಂಕರಿಸಿದೆ ಹೊಸ ದುಂಬಿಗಳ ವನ
ವಸಂತ ಚಿಗುರಿನ ಚಿತ್ತಾರವಿಂದು //

                ಬಸನಗೌಡ ಗೌಡರ 


Tuesday, March 2, 2021

* ಸತ್ಯದ ದಾರವಾಗಬೇಕು *

ಕತ್ತರಿಸಿದ ತುಂಡ ಒತ್ತಿ ಹಿಡಿಯಲು 
ದಾರ ಸುತ್ತಿ ಸುತ್ತಿ ತಾನು ಬರಬೇಕು 
ಗತ್ತಿನಲ್ಲಿ ನಡಯದೆ ಬಾಗಿ ಬಳಕಿ  
ಸೂಜಿಯಲಿ ಮುಳಿಗೇಳಬೇಕು 
ಗೆಳೆಯ  //

ನೊಂದವರ ನೆಲದ ನೆರಳಾಗಿ
ಬೆಂದವರ ಬಾಳಿನ ಬೆಳಕಾಗಿ
ಕೊಂದವರ ನೆಲದ ಕಂಬಳಿಯಾಗಿ
ಬಂಧುವಿನ ಹಂದರಾಗಬೇಕು 
ಗೆಳೆಯ //

ಹಸಿದ ಹೆಬ್ಬುಲಿಯೆದುರು ಹಸುವಾಗಿ 
ಹುಸಿಯನಾಡದೆ ಗೋವು ತಾ ಮರಳಿ  
ಹೊಸ ಬದುಕು ಪಡೆದ ಮಾತೆಯಾಗಿ
ಬೆರಗುಗೊಳ್ಳವಂತೆ ಬದುಕಬೇಕು
ಗೆಳಯ //

ಚಿತ್ತಾರದ ಚಿತ್ತಚಂಚಲೆಯರ ದಂಡು 
ಸುತ್ತಿ ಸುತ್ತಿ ತಿರುಗುತಿದೆ ಇವತ್ತು 
ಗೊತ್ತಿಲ್ಲದೆ ಮತ್ತೇರುತಿದೆ ಬೇಸತ್ತು 
ಸತ್ಯದ ದಾರ ಜೋಡಿಸುಬೇಕು 
ಗೆಳೆಯ //  


        ಬಸನಗೌಡ ಗೌಡರ 


Monday, March 1, 2021

"ಕಣ್ಣು ಮುಚ್ಚಿದ ಸತ್ಯ "

ಎತ್ತ ನೋಡಿದತ್ತತ್ತ ಮರಿ 
ಸೂರ್ಯರೆ ಮನೆ ಹಿಂದೆ ಮುಂದೆ 
ಮರಗಳೆ ಮಾಯ, 
ಗೆರೆ ಬೇರುಗಳೆ ಕುರುಹುಗಳು, 
ಮಾನವ ಹಿರಿಮೆ  ಗರಿಮೆಗಳೆ 
ನಮ್ಮ ಸ್ಮಾರಕಗಳು .
ಅಭಿವೃದ್ಧಿಯ  ಪಿತ್ತ ಮೈವೆತ್ತಿ 
ರೈತನ ಭೂಮಿಯ ಕತ್ತು 
ಕೊಯ್ದದ್ದೆ ಸಾಧನೆ 
ಸುತ್ತಿದ ಶಹರಗಳು ಗ್ರಹಗಳಂತೆ 
ಗ್ರಾಮಗಳ ಆಕ್ರಮಣ.
ಟಾರು ಸಿಮೆಂಟ ರಸ್ತೆಗಳು
ಕುಡಿಯ ಬಿಡಲೊಲ್ಲರು ಬಾಯಿ ಒತ್ತಿ
ಒಡಲು ಸೇರದ ನೀರು ....
ನದಿಯೆ ಬುಡಮೇಲು. 
ಪ್ರವಾಹ ಪ್ರಲಾಪ,
ಸಂದಿ ಗೊಂದಿಗಳಲ್ಲಿ 
ವಿಚಾರ ಸಂಕೀರ್ಣ.
ಉದ್ದುದ್ದು ಭಾಷಣ ಮಾಡಿದವರೆ 
ಪಂಡಿತರು....! ಚಪ್ಪಾಳೆ ಸದ್ದಿನಲ್ಲಿ ಕೇಳುವರಾರು ?
ಕೃಷಿಕನೆಂದವನ ಆಕ್ರಂದಣ, 
ಕೈಮೀರಿದ ಕಲಿಗಳಿಗದು 
ಇದ್ದೆ ಇದೆ, ಯೋಚನೆ ಯೋಜನೆ 
ಆಯೋಗಗಳ ಸರಮಾಲೆ.
ಎತ್ತಿ ಹೇಳಿದವನೆ ಭೃತ್ಯ
ಗತ್ತಿನಿಂದ ಮಾಡಿಸುವರು ನೃತ್ಯ 
ಸುತ್ತ ಗಿರಕಿ ಹೊಡೆಯುತಿದೆ
ಕಣ್ಣು ಮುಚ್ಚಿದ  ಸತ್ಯ. 

 ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...