Thursday, August 27, 2020

* ಧರಣಿ *

 

ಯಾರು ತೇಲಿ ಬಿಟ್ಟರೀ ರಮ್ಯ ಧರಣಿ

ತಾರೆಗಳ ಹಿಂಡೆ ಇದರ ಕಡೆ ಗುಮಾನಿ

ಭಾಸ್ಕರನಾಗಮನ ಕಾದವರೀಗ ಕಾಣೆ   

ಸಸ್ಯರಾಶಿಯಾಯಿತು ಶಿವನ ಶಯನ//


ಅರಳಿಯ ಹಿಂಜಿ ಹಾಕಿದ ಅರಳುವ 

ಸುರಳಿ ಚಿತ್ತಾರ ಮೋಡದ ರಂಗೋಲಿ /

ಚುಮು ಚುಮು ಚಳಿಯ ಮಂದ ಗಾಳಿ
ಇಬ್ಬನಿ ನರ್ತನ ಆರ್ದ್ರ ದರ್ಪಣ ದೂಳಿ//

ಶಿವ ಜಿಪುಣ ನೀಡಿದ ಎರಡೆ  ನಯನ
ಸೊಬಗು ಸವಿಯಲು ನಡೆದಿದೆ ಕದನ
ಜೊಂಜಾಟದ ಬದುಕಾಗಬೇಕು ನಿಧನ
ಆಸ್ವಾದಿಸುವ ಗುರುವಿಗೆ ನನ್ನ ನಮನ//

ಶಶಿಧರನುದಯವ ತಿಳಿಯದ ಗಹನ
ರೂಪ ಬದಲಿಸಿ ಬರುವನು ದಿನ ದಿನ
ತಂಪನು ನೀಡಿದ ಕದಡಿದ ತಮವನು
ಇವನಿಗೂ ಕಾದಿದೆ ಮೋಸದ ಗ್ರಹಣ//

                 ಬಸನಗೌಡ ಗೌಡರ

   

Wednesday, August 19, 2020

* ಅಪ್ಪನ ಅಂತಹಕರಣ *

ಅಪ್ಪನ ಅಂತಹಕರಣ ಅಮೃತದಾರೆ 

ಅನುದಿನವು ಅಭಯ ಮಸ್ತಕದ ಮೇಲೆ//

ತಾನು ನೆನೆದರೂ ತನಯನ ಮೇಲೆ 

ತನುವೆಲ್ಲ ಹನಿಯಾಗಿ ಹೂವು ಮಳೆ//


ಅರೆಬಟ್ಟೆ ತಾನುಟ್ಟು ಗರಿತೀಡದ ಬಟ್ಟೆ

ಟೈ ಕಟ್ಟಿ ಕಳುಹಿಸುವನು ತಾ ಬೆನ್ನುತಟ್ಟಿ/

ಗುರುವಿನಲ್ಲಿ ತಾ ದೇವರು ಕಾಣುವನು

ಅಳು ನುಂಗಿ ನಗುತ ಬೀಳ್ಕೊಡುವನು//


ಭೂತಾಯಿಮಗ, ಬೆವರಿನ್ನೆ ಬಸಿದು 

ಕೆಸರಲ್ಲಿ ಹಸಿರು ಉಸಿರಾಗಿಸಿದವನು/

ಬಾನೆತ್ತರದ ಭರವಸೆ ಮಗನಲ್ಲಿಟ್ಟು

ಅಳು ನುಂಗಿ ನಗು ತೇಲಿಬಿಟ್ಟವನು//


ಮುಗ್ಧ ಮಗುವಿನ ಮುಖದಲ್ಲಿ ಸಗ್ಗ 

ಹಿಗ್ಗುತಾ ಮರೆಯುವನು ಜಗದ ಕಗ್ಗ/

ಜಗದ ಹೊಗಳಿಕೆ, ತೆಗಳಿಕೆಗೆ ಬಗ್ಗದೆ

ತಾನಿರುವ ದಾರಿಯಲಿ ಲೋಕಕ್ಕೊಗ್ಗಿದ


              ಬಸನಗೌಡ ಗೌಡರ

.

Tuesday, August 18, 2020

* ಬದುಕಲು ಬಿಡಿ *

ಚಂದ್ರನ ಬೆಳದಿಂಗಳು ತಂಪು ಸೂಸಿ 

ಇಂದ್ರನ ಸಭಾಂಗಣ ವೈಭವ ಮೀರಿಸಿ
ಹೊಂಬೆಳಕು ಸೂಸುವ,ಯಾರಿ ಅರಸಿ
ನಸುನಾಚಿ ನೀರಾಗಿ ನಿಂತಳುಸಿರಾಕಿ//

ಮಹಲು ಉರುಳಾಗಿ ನತ್ತು ಬಾರವಾಗಿ
ನೈದಿಲೆಯಂತೆ ಚಾಚಿಹಳು ಕೆಸರಿನಾಚೆ
ಈಚೆ ಬಂದರೆ ಕಷ್ಟ, ಆಚೆ ಬರಿ ಕೊಳಚೆ
ಸ್ವಾತಂತ್ರ್ಯ ಬಯಸಿ ಬಂದಿಹಳೀಚೆ  //

ಕಿತ್ತು ತಿನ್ನುವ ಹತ್ತು ಕಣ್ಣುಹೊರಗೆ
ನಮ್ಮ ಸಂಸ್ಕೃತಿಯ ಪಾಠ ಒಳಗೆ/
ಕತ್ತು ಬಗ್ಗಿದರೆ ಸಂಪ್ರದಾಯ ಕುಲಾವಿ
ತಲೆಯತ್ತಿ ನಡೆದೆ ಹೆಮ್ಮಾರಿ ಪದವಿ//

ಬೆಳೆದವಳು, ಕಾದು ಗೆಳೆಯನಿಗೆ
ಬೆಳಕಾಗುವಳು ಸೇರುವ ಮನೆಗೆ
ಬದುಕಲು ಬಿಡಿ ಬಂದಂತೆ ಮನ
ಬೆಂದು ಮಾಡುವಳು ನಂದನವನ//

        ಬಸನಗೌಡ ಗೌಡರ

Saturday, August 15, 2020

* ತರುಣ *

ಪ್ರೀತಿ ಜ್ವರ ತರಣರಲ್ಲೇರುವುದು ಸಹಜ
ಯುವ ಬೆವರಿನಲ್ಲೆ ನಿಂತಿದೆ ಸಮಾಜ/

ಚಾಕರಿ ಬದುಕಿಗೂ ಕ್ಯೂಗಳ ಸಾಲು

ಬಿಕಾರಿಯಾಗದೆ ಸ್ವೀಕರಿಸು ಸವಾಲು//

ಜಗಕೆ ಪಾಠ ಹೇಳಿದ ದೇಶ ನಮ್ಮದು
ಭವ್ಯ ಇತಿಹಾಸ ಪರಂಪರೆ ತವರಿದು /
ಬಿಸಿರಕ್ತದುಸಿರಿಲ್ಲದೆ ಜಡ ಕರಗದು
ಯುವ ಪಡೆ ನಡೆಯದೆ ತಲುಪದು //

ಯುವಕಂಗಳಲ್ಲಿ ಬೆಟ್ಟದಷ್ಚು ಆಸೆ
ದಡ ಸೇರಲು ಬೇಕು ಗಟ್ಟಿ ಸಾಹಸ
ಭಟ್ಟಿ ಇಳಿಸದೆ ಪರಶುದ್ಧತೆ ಬರಿ ಕನಸು
ಬಯಲಿಗೆ ಬಿದ್ದು ಗೆದ್ದರದು ನನಸು//

ತರುಣರ ಕಿರಣ ಬೀಳದೆ ಇಲ್ಲ ಬೆಳಕು
ಗುರಾಣಿ ಹಿಡಿದು ಮುನ್ನುಗ್ಗಬೇಕು /
ದೇಶ ಕಟ್ಟಲು ನಾಳೆ ಎನ್ನುವುದು ಸಾಕು
ಹಗಲುಗಾಣಲು ಭಾಸ್ಕರ ಬರಬೇಕು//

            ಬಸನಗೌಡ  ಗೌಡರ

Friday, August 14, 2020

* ಮೌನ ರಾಗ *

* ಮೌನ ರಾಗ *

ನನ್ನ ನಿನ್ನ ನಡುವೆ ಎನಿತು ಅಂತರ

ದೇಹವೆರಡು ಉಸಿರೊಂದು ಸದಾ ಹಸಿರು

ಅರಿತು ನಡೆದಾಗ ಬಾಳು ಸುಂದರ /

 

ಹೃದಯ ಬಾರ ತಾಳದೆ, ಅರಳು ನೀ

ಅಳುವ ನುಂಗಿ, ನಗುವುದೆಮ್ಮ ಜೀವನ

ಉಸಿರು ಹಸಿರಾಗಿ ಬದುಕದು ಪಾವನ/

 

ನೂರು ಕಾಲ ಜೀಕೊಣ ಸಿಹಿಬಾಳು 

ಬದುಕು ಬರಡಲ್ಲ ಬಂಗಾರದ ಹವಳ

ಉಸಿರಿಲ್ಲದೆಯೂ ಹೆಸರು ನೂರ್ಕಾಲು

 

ಸಿರಿಸಿಂಚನ ಕಣ್ಣಂಚಿಗೆ ಸಂಚಲನ

ಮಿಂಚಂತೆ ಬೆಳಕು ಬಯಲು ಕಿರಣ

ಸದಾಚಾರ ಸದ್ವಿಚಾರ ಚರಾಚರ/

 

ಮನದ ಯುಗಳ ಗೀತೆ ಹಾಡಿ ಕುಣಿದು

ಮರೆತು ಕ್ಲೇಷ, ಪಾಲಿಸಿದಾಗ ಮೌನರಾಗ

ತಿಳಿದು ಬದುಕಿದಾಗ ಬಾಳೆ ಬಂಗಾರ/

 

                 ಬಸನಗೌಡ ಗೌಡರ 



            


Thursday, August 13, 2020

* ಜಗದ ನಿಯಮ *

ಜಗದ ನಿಯಮ ಮೀರಲಾಗದು
ನಮ್ಮದೇನೂ ಅಲ್ಲಿ ನಡೆಯದು/
ನಿನ್ನ ಕರುಣೆ ಇಲ್ಲದೇನು ತಿಳಿಯದು
ಹುಲ್ಲು ಕಡ್ಡಿ ಇಲ್ಲಿ ಅಲುಗಾಡದು //

ಹೆಣ್ಣು ಗಂಡು  ಲೋಕದೆರಡು ಕಣ್ಣು
ಸುಂದರವಾಗಲು ಹೊರಬೇಕು ಮಣ್ಣು
ಹೊಂದಿಕೊಂಡಿರಲು ಜೀವನ ಪಾವನ
ನಡೆಯಬೇಕು ಅಲ್ಲಿ ಸೃಷ್ಟಿ ವಿಕಸನ//

ಮದುವೆಯೆಂಬ ಮೂರಕ್ಷರ ಜಾತ್ರೆ
ಮಸಣದವರೆಗೆ ನಡೆಯುವ ಯಾತ್ರೆ/
ಮಹಾದೇವನವರೆಗೆ ತಲುಪುವ ಸೂತ್ರ
ಕರಿಮಣಿ ಕಟ್ಟಿ ಬೆಳಗಬೇಕು ಮಿತ್ರ//

ಸಪ್ತಪದಿ ತುಳಿದು ಸತ್ಯದಿಂದ ನುಡಿದು
ಸಾಗಬೇಕು ಸಂಸಾರ ಸಾಗರ ಹಿಡಿದು/  
ಸಹಜ ಏರಬೇಕು ಸವಾಲು ಪಡೆದು
ಸೋತು ಗೆಲ್ಲಬೇಕು ಸಾವು ತಡೆದು//

ಜಾತಿಯಭ್ರಮೆ ಅಳಿಸಿ ನೀತಿ ಬೆಳಸಿ
ಪ್ರೀತಿ ಪ್ರೇಮದ ಮಹಲು ನಿರ್ಮಿಸಿ/
ಚಾತಿಯಿಂದ ಕಟ್ಟಬೇಕು ನಂದನವನ
ಹೂವಾಗಿ ಅರಳಬೇಕು ನಮ್ಮತನ //

                 ✒ ಬಸನಗೌಡ ಗೌಡರ


Wednesday, August 12, 2020

* ದರ್ಪಣ*

ವಲವಿನ ಸ್ನೇಹ ಜಡವಾಗಿ ತಪ್ಪಿದೆ ದಾರಿ  

ಬಲವು ಜಾರುತಿದೆ ಕಾಲ ಕೈಮೀರಿ 

ವಿಕ್ರಮಸಾಧಿಸುವ ಪರಿ ಹೇಳು ನಾರಿ

ಸಕ್ರಮ ದಾರಿಯಲಿ ಕಾಣುತಿವೆ  ಕಮರಿ//


ಕಣ್ಣೀರು ಕರಗಿ ಹೊಳೆಯಾಗಿ ಹರಿದು

ಕಡಲು ತಡಿಗೆ ಗಡಿಬಿಡಿಯಿಂದ ಸರಿದು

ನೇಸರನ ರಶ್ಮಿಗೆ ಹೆದರಿ ನಭಕೆ ಜಿಗಿದು 

ಕರಿಮೋಡ ನಿನ್ನೊಡಲ ಸೇರಬರುತಿದೆ//


ಇಬ್ಬನಿ ದರ್ಪಣದ ಬಿಂಬ ಬೆಂಬತ್ತಿ

ಮುಸುಕಿದ ಮಬ್ಬಿನಲ್ಲಿನೋಡಿದೆ ಕತ್ತೆತ್ತಿ

ಮನಶಾಂತಿಗೆ ತಿರುಗಿದೆ ಮಾಯೆ ಸುತ್ತಿ 

ನೀನಡಗಿದ ಸುಡಗಾಡದಲಿ ನಾ ಸತ್ತೆ//


ನೆನಪಿನ ಡೋಣಿಯ ನಲ್ಮೆಯ ಕನಸು 

ವೇದನಯ ಕರಗಿಸಿ ಹೂವುನು ಹಾಸಿ

ಕೋಗಿಲೆ ಕೂಗು ಜೋಗುಳ ಹಾಡಿಸಿ//

ನವಿಲಿನ ನರ್ತನ ತಂತು ಮಂದಹಾಸ


                 ✒ ಬಸನಗೌಡ ಗೌಡರ


Monday, August 10, 2020

* ಬೆಳಕು *

ತೊಲಗಿ ಅಜ್ಞಾನ, ಬೆಳಗಲು ಸುಜ್ಞಾನ

ಬೆಳಕು ಪಸರಿಸಿಲು ಬೇಕು ಜ್ಞಾನ ದೀಪ/ಪ/


ಅಂದಕಾರದ ನಡುವೆ ಪಂದ್ಯಗಳು

ಚಂದದ ಮಾತಿನಿಂದಾದ ಬಲೆಗಳು

ಸಂದುಗಳು ಇವೆ ಸಭಲರಿಗೆ ನಿನಗಲ್ಲ

ಜ್ಣಾನದ ಬಲವಲಗು ನಿನಾಗು ಸಬಲ


ಹುಟ್ಟುತಾ ಬೆಳಗಿಹರು ನಿನ್ನ ಮನೆಯ

ತಟ್ಟಿ ಕೆಟ್ಟಿತು ಜಗದ ಸ್ವಾರ್ಥ ನಿಯಮ

ಗಟ್ಟಿ ಮಾಡಿಕೊಳ್ಳಬೇಕು ನೀ ಹೃದಯ

ಪಟ್ಟಿ ಮಾಡಲು ದಾರಿ ಬಹು ದೂರ//


ಕಲ್ಲು ಮುಳ್ಳಿನ ಹಾದಿ ಕ್ರಮಿಸಬೇಕು

ಗೆಲ್ಲಬೇಕು ನಿತ್ಯ ಜ್ಞಾನದೀಪ ಬೆಳಗಿಸಿ.

ಕಂದಕ ಕಮರಿಗಳ ಸಹವಾಸ ಸಾಕು 

ಗಂಟು ಬಿಡಿಸಿ ಸರಳಗೊಳಿಸಬೇಕು//


ಬತ್ತಿಯಾಗಿ ಉರಿದರು ಶರಣರು

ಎಣ್ಣೆಯಾಗಿ ಹಿಂಗಿದರು ಹಿರಿಯರು

ದೊಣ್ಣೆಯಾಗಿ ಮೆರೆದರು ಕದಿಮರು

ಸೌದೆಯಂತೆ ಉರಿದು ಬೆಳಕಾಗಿಹರು/


ದಾರಿ ತೋರುವುರು ನಿಜ ಗುರುಗಳು

ಮೋರಿ ತೋಡುವುರು ಜಡ ಅರಿಗಳು

ಸೈರಣೆ ತುಂಬುವರು ನಿಜ ಸ್ನೇಹಿತರು

ಸನ್ಮಾರ್ಗದಲ್ಲಿವೆ ಬದುಕಿನ ಪಾಠಗಳು/


            ✒ ಬಸನಗೌಡ ಗೌಡರ

* ಆವಾಸ *

ಭಾವ ಜೀವಿ ನಾನು, ಬಾಳೆ ಗೊಣೆ

ಬಾಗಿದಂತೆ ಬಾಗಿಸುವೆ ಎನ್ನ ಹಣೆ.

ಬಿಗುಮಾನ ಬಿಟ್ಟು ಬಂದಿರುವೆ ಕನೆ 

ಬಯಸಬೇಡ ನನ್ನ ಪ್ರಿತಿಗೆ ಕೊನೆ /


ನಿನ್ನ ಕುಡಿ ನೋಟಕ್ಕೆ ಜಾರಿ, ಕರಳು

ಕತ್ತರಿಸಿ ಸುನಕ ನಾ ಸುತ್ತಿದೆ ಹಗಲಿರುಳು.

ಬಿತ್ತರಿಸಿತು ಜಗವು ಪ್ರೇಮಪಾರಿವಾಳ

ಬೀದಿಗೆ ಬರದಂತೆ ಮಾಡೆನ್ನ ಜೀವಾಳ/


ಹೃದಯ ಮಂದಿರದಿ ಹಾಕಿಸಿದೆ ಹಂದರ

ಇಲಿಹೆಗ್ಗನಗಳ ಆವಾಸವಾಗಿದೆ ಇಂದು

ಬೆಕ್ಕಾಗಿ ಕಚ್ಚಿ ತಿನ್ನಬಾರದೆ ನೀ ಬಂದು

ಹಾಕು ನೀ ರಂಗಿನ ರಂಗೋಲಿ ತಂದು/


ಹುಚ್ಚು ಹಚ್ಚಿದೆ ನಿಚ್ಚಳವಾಗದ ರೋಗ 

ಅಲೆಯಾಗಿ ಅಪ್ಪಳಿಸಿದೆ ಭಾವತರಂಗ

ಕಡಲಿಗೂ ಕೊನೆಯಿದೆ ಭಾನಂಗಳಕೆಲ್ಲಿ

ಬಯಕೆಯ ಮೀರಿಸಿದ ಭುವನವೆಲ್ಲಿ / 

                         ✒ ಬಸನಗೌಡ ಗೌಡರ


Friday, August 7, 2020

* ಶ್ರಾವಣ *

ಶ್ರಾವಣ ಬಂತು ನಾಡಿಗೆ ಹಾಡಿಗೆ

ನಾವಿಳಿದ ಬಯಲು ಬದುಕಿನ ಗೂಡಿಗೆ

ಬನವೆಲ್ಲ ಹಸಿರಾಗಿ ಚಲುವೆಲ್ಲ ಚಲ್ಲಾಡಿ 

ಚೇತನದ ಚಿಲುಮೆ ಚೆಲ್ಲಿತಲ್ಲಿ //


ಸಿಹಿ ಚಕ್ಕುಲಿ  ಕಹಿಯ ಬಾಳು ಮುಕ್ಕಿ 

ಸಂತಸದ ಭಾವ ಉಕ್ಕಿ ಹರಿಯಿತಲ್ಲಿ/ 

ಶಿವನಾಮ ತೊಟ್ಟಿಕ್ಕಿ ಶಿಲೆ ಮಲೆಗಳರಳಿ

ಕನಸು ಗರಿಗೆದರಿ ಕುಣಿಯಿತಲ್ಲಿ //


ಉಷೆಯಲ್ಲಿ ಕುಣಿದು ಮನತಣಿದು

ಮರಗಿಡದಲಿ ಮನ್ಮಥ ಮೈಮರೆತು/

ಉನ್ಮಾದ ಉಕ್ಕಿ ಸುಮವಾಗಿ ಅರಳಿ 

ಜೋಗುಳ ಹಾಡಿದಳು ಮಲ್ಲಿ ಅಲ್ಲಿ //


ಜಿಟಿ ಜಿಟಿ ಮಳೆಗೆ ಗಟ್ಟಿಕಲ್ಲೆ ಕರಗಿ

ತೋಟದ ಮಾಲಿಗೂ ಶಟರರೋಗ/ 

ಗಿಳಿ ಗೊರವಂಕ ಉಲಿದು ನೀನಾದ

ಗಂಧರ್ವ ಲೋಕ ಸೃಷ್ಟಿಯಾಯಿತಲ್ಲಿ//


ಶ್ರಾವಣ ಶೃಂಗಾರ ಬದುಕೆಲ್ಲ ಬಂಗಾರ 

ಗುಡಿ ಗುಂಡಾರದಲ್ಲರಳಿತು ಭಂಡಾರ/

ಶಿವನ ಪಾದಕೆ ಹೂಮಳೆ ಅರ್ಪಣ

ಗಂಟೆಭಜನೆ ಮನದ ಮಾರ್ಜನವಲ್ಲಿ//


       ಬಸನಗೌಡ ಗೌಡರ 


Monday, August 3, 2020

* ಸಾರ್ಥಕತೆ *

ಹಾಡು ಹಳೆಯದಾದರೇನು
ಭಾವ ನವನವೀನ /
ಬೆಳಕು ಯಾವುದಾದರೇನು 
ಹೊಳಪು ನವನವೀನ // ಪ//

ನಿನ್ನ ರಾಗತಾಳಕೆ ಕುಣಿದು ನಲಿದು 
ಒಲಿದು ಸೇರುವ ತನನ/
ಬವಣೆ ಮೀರಿ ಗಿರಿಗಳ ಮೇಲೆ 
ಗಿಳಿಕೋಗಿಲೆಗಳಿಂಚರ //1//

ದ್ವನಿಯು ಯಾರದಾದರೇನು 
ಇಂಚರ ಮಧುರ ಮಧುರ /
ಸಾಗುತಿಹುದು ಹಾಡಿನ ಪಲ್ಲವಿ 
ಹೃದಯ ಗೀತೆಗಳ ಗಾಯನ//2//

ಸಾಗರದಾಳದ ಅಲೆಯ ಮೇಲೆ 
ತೇಲಿ ಬಂತು ಮುತ್ತಿನ ಮೌನ
ಸವಿಯಾದ ಮಾತಿನ ಅಶ್ವ ಶಕ್ತಿ 
ಸೇರಿತಲ್ಲಿ ಶಿವನ ಸಾರ್ಥಕ ಭಕ್ತಿ //3//

ಬಿರಿದ ಭಾವಕೆ ತಂಪನೆರೆಯಲು
ಇಂಪಾದ ನಿನಾದ ಸಂಪದ/
ಬಾರ ಹೊರದೆ ಬಾಗಿತಲ್ಲಿ ಮೋಡದ
ಹನಿ ಮಳೆ ಮುತ್ತಿನ ಕಂಪನ// 4//

          ಬಸನಗೌಡ ಗೌಡರ 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...