Wednesday, October 27, 2021
* ನಾಡಗೀತೆಗಳ ಹಾಡೋಣ ಇಂದು *
Saturday, October 23, 2021
*ಕಟ್ಟಿ ಹಾಕಿದರೋ ರಂಗ ನನ್ನ ...*
Wednesday, October 20, 2021
ಬೆಳದಿಂಗಳ ಕಾವ್ಯ ಗೋಷ್ಠಿ
*ಯಾವುದು ಸತ್ಯ, ಅದಲ್ಲ ಸತ್ಯ *
ವಾಲ್ಮೀಕಿ ಮಹರ್ಷಿ
Friday, October 15, 2021
ಡಾಕ್ಟರ್/ಎ ಪಿ ಜೆ ಅಬ್ದುಲ್ ಕಲಾಮ್
Wednesday, October 13, 2021
ನಾಡ ಹಬ್ಬ
Sunday, October 10, 2021
ಬಾಗಿದ ಸ್ವಾಗತ
ನವರಾತ್ರಿ
Monday, October 4, 2021
* ಬದಲಾದ ಕಾಲಕ್ಕೆ ತಕ್ಕಂತೆ ಸಂಸ್ಕಾರ *
ನಾಗರಿಕತೆ ಮತ್ತು ಸಂಸ್ಕೃತಿಯನ್ನು ಕೆಲವರು ತಪ್ಪಾಗಿ ಪರಿಭಾವಿಸಿದ್ದನ್ನು ನಾನು ನೋಡಿದ್ದೇನೆ ಆದರೆ ಇವೆರಡು ಶಬ್ದಗಳು ಬೇರೆ ಬೇರೆ ಯಾಗಿವೆ .ಸಂಸ್ಕೃತಿ ಎಂದರೆ ನಾವು ಏನಾಗಿದ್ದೇವೆ ಎನ್ನುವುದನ್ನು ತಿಳಿಸಿದರೆ ನಾಗರಿಕತೆ ನಾವು ಏನನ್ನು ಹೊಂದಿದ್ದೇವೆ ಎನ್ನುವುದನ್ನು ತಿಳಿಸುತ್ತದೆ ಅಂದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಮ್ಮ ಆಚಾರ ,ವಿಚಾರ ತತ್ವಜ್ಞಾನ,ಧರ್ಮ ಇವೆಲ್ಲವೂ ಸಂಸ್ಕೃತಿಯಲ್ಲಿ ಬಂದರೆ ನಮ್ಮ ಬದುಕನ್ನು ಸರಳಗೊಳಿಸುವ ಸಲುವಾಗಿ ನಾವು ಹೊಂದಿರುವ ಭೌತಿಕ ವಸ್ತುಗಳೆಲ್ಲವು ನಾಗರಿಕತೆ ಪರಿವ್ಯಾಪ್ತಿಯಲ್ಲಿ ಬರುತ್ತವೆ.ಈಗ ನಾನು ಹೇಳಲು ಹೊರಟಿರುವ ಉದ್ದೇಶ ಇವೆರಡರ ವ್ಯತ್ಯಾಸಗಳನ್ನಲ್ಲ ಬದಲಾಗಿ ನಾಗರಿಕತೆ ಬರಾಟೆಯಲ್ಲ ಸಂಸ್ಕೃತಿಗೆ ಕಡಿಮೆ ಮಹತ್ವ ಕೊಡುತ್ತಿದ್ದೇವೆ ಎಂದು ಅನಿಸುವುದಿಲ್ಲವೆ ? ನಮಗೆ ಕಾರು ಉಂಟು, ಬಂಗಲೆ ಉಂಟು ಕ್ಷಣಾರ್ಧದಲ್ಲಿ ಅಮೆರಿಕದಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಮಾತನಾಡಿಸುವ ಮೊಬೈಲ್ ನಮ್ಮ ಹತ್ತಿರ ಉಂಟು, ಆದರೆ ಹತ್ತಿರ ಇರುವ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಪ್ರೀತಿಸುವ ವ್ಯವಧಾನ ನಮ್ಮಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಮಾನವ ಸಂಬಂಧಗಳು ಟಿ ವಿ ಮತ್ತು ಮೊಬೈಲ್ ದಾಸ್ಯತನದಲ್ಲಿ ನುಚ್ಚು ನೂರಾಗುತ್ತಿರುವಂತೆ ಭಾಸವಾಗುತ್ತಿದೆ !ಅದು ಹೇಗೆ ? ಮೊಬೈಲ್ ನಲ್ಲಿ ತಾಸು ಹರಟುವ ಜನ ಭೌತಿಕವಾಗಿ ಹತ್ತು ನಿಮಿಷ ಅವರಿಗಾಗಿ ಸಮಯ ಕೊಡದಷ್ಟ ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದೆವೆ .ಅದಕ್ಕೆ ನಮ್ಮ ದಾವಂತದ ಬದುಕು ಕಾರಣವಾಗಿರಬಹುದು.ಪೇಸ್ ಬುಕ್ ,ವಾಟ್ಸ್ ಅಪ್ ನಲ್ಲಿ ಸಾವಿರಾರು ಬಾರಿ ಶುಭಾಶಯಗಳ ಕೋರುವ ನಾವು ಮುಖಾ ಮುಖಿ ಯಾದಾಗ ಮುಖದ ತುಂಬಾ ನಗು ತುಂಬಿ ಎಷ್ಟು ಸಾರಿ ಹಾರೈಸಿದ್ದೇವೆ ಹೇಳಿ ? ಇದರ ಅರ್ಥ ಎಲ್ಲರೂ ಹೀಗೆ ಇರುತ್ತಾರೆ ಎಂದಲ್ಲ ಬದಲಾಗಿ ಸಂಸ್ಕಾರ ತುಂಬಿದ ಸಮಾಗಮ ಕಡಿಮೆಯಾಗುತ್ತಿರುವುದು ಒಂದು ಕ್ಷಣ ನಮ್ಮನ್ನು ಚಿಂತೆಗೆ ದೂಡಿದೆ ಎಂದರೆ ತಪ್ಪಾಗಲಾರದು. ನಾವು ಮೊಬೈಲ್ ದೂರಿದರೆ ಏನು ಫಲ ,ಅದರ ಬಳಕೆಯ ಬಗ್ಗೆ ಒಂದಷ್ಟು ಜಾಗೃತಿ ವಹಿಸಿದರೆ ಸಾಕು .ಹಾಗಾದರೆ ಜಾಗೃತಿ ಮೂಡಿಸುವ ಕೆಲಸವಾದರೂ ಹೇಗೆ ? ಇದನ್ನು ಮಾಡುವವರು ಯಾರು ಇತ್ಯಾದಿ ಪ್ರಶ್ನೆ ತಲೆಯಲ್ಲಿ ಓಡಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ .ಇದು ತುಂಬಾ ಕಠಿಣವಾದ ಕೆಲಸ .ಹಾಗಾದರೆ,ಈ ಕೆಲಸ ಮಾಡುವವರು ಯಾರು? ಉತ್ತರ ಸುಲಭವಾಗಿದೆ ! ಆದರೆ ಕಾರ್ಯ ತುಂಬಾ ಕಠಿಣವಾಗಿದೆ ಒಂದು ಮನೆ, ಇನ್ನೊಂದು ಶಾಲೆ.ಸಂಸ್ಕಾರ ಸಂಸ್ಕೃತಿ ಕಲಿಸುವವರು ಇವರೆ ಅಲ್ಲವೆ, ಇದು ಕಾನೂನಿಂದ ಮಾಡುವ ಕೆಲಸವಲ್ಲ ಅದು ಅಷ್ಟು ಸುಲಭವೂ ಅಲ್ಲ ಕಾನೂನಿಂದ ಮಾಡುವುದಾಗಿದ್ದರೆ ಬಹುಶಃ ಇವತ್ತು ಯಾವುದೇ ಅಪರಾಧಗಳು ಸಮಾಜದಲ್ಲಿ ನಡೆಯುತ್ತಿರಲಿಲ್ಲ. ಅಂದರೆ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ತುಂಬಾ ಇದೆ ಎಂದು ಅರ್ಥವಾಯ್ತು ಅಲ್ಲವಾ..! ಸರಿ ಇನ್ನು ಸಂಸ್ಕಾರ, ಸದಾಚಾರ ಕಲಿಸುವ ವಿಚಾರಕ್ಕೆ ಬರುತ್ತೇನೆ ಅಲ್ಲ ಅಲ್ಲ.... ಕಲಿಯುವ ವಿಚಾರಕ್ಕೆ ಬರುತ್ತೇನೆ ಅಂದರೆ ಮನೆ, ಶಿಕ್ಷಣ ಸಂಸ್ಥೆಗಳಲ್ಲಿ ಯಾರು ಮಹತ್ವದ ಪಾತ್ರ ವಹಿಸುತ್ತರೆ ? ಮನೆಯಲ್ಲಿ ತಂದೆ ತಾಯಿ, ಶಾಲೆಯಲ್ಲಿ ಬಂದರೆ ಶಿಕ್ಷಕರು, ಇವರು ಬಳೆಸುವ ಸಂಸ್ಕಾರ ಮಗುವನ್ನು ಸರಿಯಾದ ದಾರಿಗೆ ತರಬಹುದೇನೋ ...ನಿನ್ನೆ ನಾನೊಂದು ಮೊಬೈಲ್ ನಲ್ಲಿ ವಿಡಿಯೋ ನೋಡಿದೆ ಅದೇನಂದರೆ ತಂದೆ ಮಲಗಿ ಮೊಬೈಲ್ ನೋಡುತ್ತಿರುವುದು ಮಗು ಅದನ್ನು ನೋಡಲು ಬರುವ, ಮತ್ತೆ ಮಗುವಿಗೆ ಕಾಣಿಸದಂತೆ ಮುಂದೆ ಸರಿಯವ, ಅದನ್ನು ನೋಡಲು ಆ ಮಗು ಮತ್ತೆ ಬರುವುದು! ಇದು ನೋಡಲು ಹಾಸ್ಯಮಯ ಎನಿಸಿದರೂ ಅದು ಮೊಬೈಲ್ ಬಳಕೆಯ ವಿಡಂಬನೆ ಅನಿಸದೆ ಇರದು. ಹಿಂದಿನ ಕಾಲದಲ್ಲಿ ಪೂಜೆ ಪುನಸ್ಕಾರಗಳಿದ್ದವು ಅದನ್ನು ತಂದೆ ತಾಯಿ ಮಾಡುತ್ತಿದ್ದರು ಮಕ್ಕಳಿಂದ ಮಾಡಿಸುತ್ತಿದ್ದರು(ಈಗ ಇಲ್ಲ ಎನ್ನಲಾರೆ ಅದು ಯಾವ ಹಂತದಲ್ಲಿ ಇದೆ ತಮಗೆ ಬಿಡುತ್ತೇನೆ) ಪೂಜೆಗಳಿಂದ ದೇವರು ವರ ಕೊಡುತ್ತಾನೆ.. ಇಲ್ಲವೆ ? ಅದು ಬೇರೆ ಮಾತು, ಆದರೆ ಪೂಜೆಯಿಂದ ಮಗುವಿನಲ್ಲಿ ಏಕಾಗ್ರತೆ ಬೆಳವಣಿಗೆ ಯಾಗುವದಂತು ಸತ್ಯ. ಆ ಮೂಲಕ ಅತಿಯಾಗಿ ಭೌತಿಕ ಸಾಧನಗಳ ದಾಸನಾಗದಂತೆ ಮಾಡಬಹುದೇನೊ (ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ) ಪ್ರಯತ್ನ ಮಾತ್ರ ಇದ್ದರೆ ಒಳ್ಳೆಯದು ಅದಕ್ಕೆ ಪೂರಕವಾಗಿ ನಾವು ಪುಸ್ತಕದ ದಾಸರಾದರೆ ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಅದಕ್ಕೆ ನಾನು ಹೇಳಿದ್ದು ನಾನು ಕಲಿಸುವುದಿಲ್ಲ ಬದಲಾಗಿ ಕಲಿಯುವಂತೆ ಇರುವುದು ಎಂದು.ಇನ್ನು ಶಿಕ್ಷಣ ಸಂಸ್ಥೆಗಳ,ಅಲ್ಲಿರುವ ಗುರುಗಳ ಮೊಬೈಲ್ ಅವಲಂಬನೆಯೂ ಕೂಡಾ ಅಷ್ಟೇ ಜವಾಬ್ದಾರಿಯಿಂದ ಕೂಡಿದ್ದರೆ ಫಲಿತಾಂಶ ಚನ್ನಾಗಿ ಬರಲು ಸಾಧ್ಯ (ಪರೀಕ್ಷೆ ಪರಿಣಾಮ ಒಂದೆ ಅಲ್ಲ) ಯಾವ ಮೊಬೈಲ್, ಪ್ರೊಜೆಕ್ಟರ್, ಉಪಕರಣಗಳು ಶಿಕ್ಷಕನ ಸ್ಥಾನಕ್ಕೆ ಏರಲಾರವು ಅವು ಪೂರಕ ಸಾಧನಗಳೇ ಹೊರತು ಅವುಗಳೆ ಸರ್ವಸ್ವವಲ್ಲ ಎನ್ನುವುದು ನನ್ನ ಭಾವನೆ (ಸಂಪೂರ್ಣ ಅವುಗಳಿಗೆ ಅವಲಂಬನೆ ಆಗಬೇಕೆಂದು ನಾನು ಹೇಳಲಾರೆ).ಹಿತಮಿತ ಬಳಕೆಯ ಸಂಸ್ಕಾರ ನಮ್ಮ ಮಕ್ಕಳಲ್ಲಿ ಬೆಳಸಲು ಇನ್ನಾದರೂ ನಾವು ಅಳವಡಿಸಿ ಕೊಳ್ಳಬೇಕು ಎನ್ನುವುದು ನನ್ನ ಲೇಖನದ ಉದ್ದೇಶ ನಿಮ್ಮ ಸಮಯ ಕದ್ದದ್ದಕ್ಕೆ ಕ್ಷಮೆಯಿರಲಿ ಶುಭರಾತ್ರಿ.
Saturday, October 2, 2021
*ತತ್ವ ಬಲದ ಮಹಾತ್ಮ *
ಸಿದ್ಧೌಷದ ಸೇವಿಸದೆ ಸೊರಗಿದರು,
ಕೊರಗಿದರು ಸಾವಿರ ಸಾವಿರ ತಲೆಮಾರು../
ಆಸೆ, ದ್ವೇಷ, ಅಸೂಯೆ, ಹಿಂಸೆಖಯಂಬ. ರೋಗದಿಂದ....../
ಅರಿತು ಔಷದ ಅರುಹಿದ
ಗಾಂಧಿಯೆಂಬ ಅಮರ ವೈದ್ಯ./ಜ
ಗುಲಾಮಗಿರಿಯ ಸಲಾಮು ಸಾವಿರದ ಸಾವಿರ ಕನಸುಗಳು ಸಮಾಧಾನಕ್ಕೆ
ಕಳಚಿ ಸಂಕೋಲೆ ಹರಿಯಲು
ಹೆಣೆದ ಬಲೆ ಸತ್ಯಾಗ್ರಹವೆಂಬ
ಸತ್ಯದ ಮಹಾ ಅಸ್ತ್ರ ../ಗಿರಡ್ಡಿ
ತತ್ವ ಬಲದ ಮಹಾತ್ಮ
ದೇಶಕ್ಕಾದ ಹುತಾತ್ಮ
ಸ್ವಾತಂತ್ರ್ಯ ಪಡೆದ ಭಾರತೀಯ
ಈಗ ಧನ್ಯಾತ್ಮ //
ಗಲ್ಲಿ ಗಲ್ಲಿ ಗಳಲ್ಲಿ ಮಾಡಿದೆವು
ಮೂರ್ತಿಗಳ ಪಾರುಪತ್ಯ
ತತ್ವಗಳೆಮಗೆ ಅಪತ್ಯ !
ತಾತಾ ನಿಮ್ಮ ಜಯಂತಿಯಂದು
ನಮಗೆ ಆದರ್ಶ ಪಟ್ಟಿ ನೀಡದವರೆ
ಈಗ ನಾಪತ್ಯೆ ..!
Friday, October 1, 2021
* ನಾನಾಗುವೆ ತೃಪ್ತ *
ಒಂದು ಭ್ರಮೆ ...!
ಕಲಿಯಲು ಇವರಿಗಿಲ್ಲ
ಅರ್ಹತೆ ಎನ್ನುವುದು ಒಂದು ಅಕ್ಷಮ್ಯ..!
ಕಲಿಸುವುದು ಏನಿದೆ ?
ಪುಸ್ತಕದ ಅಕ್ಷರ, ಅಂಕಿಗಳ ಮಾಲೆ ?
ನಾ ಮೊದಲು ನೋಡಿದೆ
ಅಷ್ಟರಲ್ಲಿ ಕಲಿಸಿದೆ ಎನ್ನುವ ಪಿತ್ತ
ನೆತ್ತಿಗೇರಿದರೆ.... ಅವನೊಬ್ಬ ಹುತಾತ್ಮ !
ಕಲಿಸಿದ ನಾನೊಬ್ಬ ಪ್ರೇತಾತ್ಮ!
ಪ್ರೀತಿ ಇಲ್ಲದ ಪಾತ್ರ ಯಾರು ಮಾಡಿದರೇನು ?
ಭಕ್ತಿಯಿಲ್ಲದ ತೀರ್ಥ ಯಾತ್ರೆ
ಶಕ್ತಿ ಯಿಲ್ಲದ ಸೈನಿಕನ ದಂಡ ಯಾತ್ರೆ
ಆಗ ನಾನೊಬ್ಬ ಕೆಂಭೂತ !
ಕೈಯಲ್ಲಿ ಕೋಲು
ಮುಖವೆಲ್ಲ ಜೋಲು
ನಿದ್ದೆಕಣ್ಣಿನಲ್ಲಿ ಗುಣಗುಣಿಸಿದರೆ
ನಿನ್ನ ಪಾಲಿಗೆ ನಾನೊಬ್ಬ ಹದ್ದು
ಇದಕ್ಕೆ ಯಾರಲ್ಲಿ ಇಲ್ಲ ಮದ್ದು.
ನನ್ನ ನೋಡಿಯೇ ನೀನು
ಕಲಿಯಬೇಕು ಬದುಕಿನ ಲೆಕ್ಕ
ಆಗ ನಾನೊಬ್ಬ ಗುರು ಪಕ್ಕಾ
ಅಳಿಸಲಾಗದ ಕಪ್ಪು
ಯಾರೆ ಬಳಸಿದರೂ ಅದು ತಪ್ಪು
ಅಪ್ಪಿ, ಒಪ್ಪಿಕೊಂಡು ಮಾರ್ಗದರ್ಶನ,
ಮಾಡಿದಾಗ ನಾನಾಗುವೆ ತೃಪ್ತ //
ಬಸನಗೌಡ ಗೌಡರ
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...