Tuesday, December 25, 2018

ಪೀಠಿಕೆ

ಪ್ರೀಯ ವಿದ್ಯಾರ್ಥಿಗಳೆ ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ವಿದ್ಯಾರ್ಥಿ ಮಾರ್ಗದರ್ಶಿ ಅಂಕಣಕ್ಕೆ ಸ್ವಾಗತ ಕಲಾ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಕೋನದಲ್ಲಿ ಭಾರತದ ಇತಿಹಾಸವನ್ನು ಕರ್ನಾಟಕದ ವಿಶೇಷ ಉಲ್ಲೇಖದೊಂದಿಗೆ ಸಂಕ್ಷಿಪ್ತವಾಗಿ ಈ ಅಂಕಣದಲ್ಲಿ, ಭಾರತದ ಪೀಠಿಕೆ ಮತ್ತು ಭೌಗೋಳಿಕ ಪ್ರಭಾವ, ಶಿಲಾಯುಗ ಮತ್ತು ಲೋಹ ಯುಗ, ಸಿಂಧೂ ನಾಗರಿಕತೆ, ವೈದಿಕ ಸಂಸಂಸ್ಕೃತಿ, ಹೊಸ ಧರ್ಮಗಳು ಮತ್ತು ಮೌರ್ಯರ ಕುರಿತು ವಿವರಿಸಲಾಗಿದೆ.

1) ಭಾರತದ ಪೀಠಿಕೆ

ವಿಷ್ಣು ಪುರಾಣದ ಪ್ರಕಾರ ಸಮುದ್ರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕಿರುವ ನಾಡು ಭಾರತ.ಈ ದೇಶಕ್ಕೆ ಭರತವರ್ಷ, ಭರತಖಂಡ, ಭಾರತ, ಜಂಬೂದ್ವೀಪ ಮತ್ತು ಇಂಡೋಸ್ ಎಂಬ ಗ್ರೀಕ್‍ಪದದಿಂದ ಬಂದ ಇಂಡಿಯಾ ಎಂಬ ವಿವಿಧ ಹೆಸರುಗಳಿವೆ. ಭಾರತವು ಹಿಮಾಲಯ ಪರ್ವತ ಉತ್ತರದ ಬಯಲು ಮತ್ತು ಮರುಭೂಮಿಯಿಂದ ಕೂಡಿದೆ. ಖೈಬರ ಮತ್ತು ಬೋಲಾನ ಕಣಿವೆಗಳು ಭಾರತವನ್ನು ಪಶ್ಚಿಮದೊಂದಿಗೆ ಸಂಪರ್ಕಿಸುತ್ತವೆ.

ಭಾರತದಲ್ಲಿ ಹಿಂದೂ, ಜೈನ, ಬೌದ್ದ, ಸಿಖ್ಖ್, ಮುಸ್ಲಿಂ, ಧರ್ಮಗಳಿವೆ. ಸಾಂಚಿ ಅಜಂತ್ ಪಟ್ಟದಕಲ್, ಕೋನಾರ್ಕ, ಖಜರಾಹೊ ತಾಣಗಳು ವಿಶ್ವ ಪರಂಪರೆ ಪಟ್ಟಿಗೆ ಸೇರಿವೆ. ಅದರಂತೆ ನಳಂದಾ ತಕ್ಷಶಿಲಾ ಉಜೈನಿ ಪ್ರಯಾಗ, ವಿಕ್ರಮಶಿಲಾ ಕಾಶಿ ಪ್ರಮುಖ ವಿಶ್ವ ವಿದ್ಯಾಲಯಗಳಾಗಿವೆ

ಶ್ರೀ ವಿಜಯ ಬರೆದ ಕವಿರಾಜಮಾರ್ಗದಲ್ಲಿ ಪ್ರಾಚೀನ ಕರ್ನಾಟಕದ ಮೇರೆಯನ್ನು ಕಾವೇರಿಯಿಂದ ಗೋದಾವರಿವರೆಗೆ ಉಲ್ಲೇಖಿಸಿದೆ. ಕರ್ನಾಟಕವನ್ನು ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ ಹೊಯ್ಸಳ ರಾಜಮನೆತನಗಳು ಆಳಿವೆ

ಕರ್ನಾಟಕವು ಕಡಲ ತೀರ, ಪಶ್ಚಿಮ ಘಟ್ಟ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಬಯಲು ಎಂಬ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ.

ಇತಿಹಾಸಕಾರರು ಲಭ್ಯ ಮೂಲಾಧಾರಗಳ ಸಹಾಯದಿಂದ ಗತವನ್ನು ಪುನ
ರಚಿಸುವ ಪ್ರಯತ್ನ ಮಾಡುವದರಿಂದ ಮೂಲಾಧಾರಗಳಿಲ್ಲದೆ ಇತಿಹಾಸವಿಲ್ಲ. ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವನ್ನು ಇತಿಹಾಸ ಪೂರ್ವ ಕಾಲವೆಂದು ಮತ್ತು ಮೂಲಾಧಾರಗಳು ಲಭ್ಯವಿರುವ ಕಾಲವನ್ನು ಇತಿಹಾಸ ಕಾಲವೆಂದು ಕರೆಯಲಾಗುತ್ತದೆ.

ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳೆ ಪ್ರಾಕ್ತನ ಮೂಲಾಧಾರಗಳು. ನಾಣ್ಯಗಳ ಅಧ್ಯಯನವು ನಾಣ್ಯಶಾಸ್ತ್ರವಾಗಿದೆ. ಇವು ಕಾಲ, ರಾಜ ವಂಶ ಧರ್ಮ, ಲಿಪಿ, ಭಾಷೆಗಳನ್ನು ತಿಳಿಸುತ್ತವೆ. ಶಾಸನಗಳು ಇತಿಹಾಸ ರಚನೆಯಲ್ಲಿ ನಂಬಲರ್ಹ ನೇರ ಆಧಾರಗಳಾಗಿವೆ ಅವು ಸಮಕಾಲೀನವಾಗಿದ್ದು ಘಟನೆಗಳಿಗೆ ನೇರ ಸಂಬಂಧ ಹೊಂದಿವೆ.

ದೇಶಿ ಮತ್ತು ವಿದೇಶಿ ಸಾಹಿತ್ಯಗಳು ಸಾಹಿತ್ಯಾಧಾರದ ಎರಡು ಪ್ರ್ರಕಾರಗಳಾಗಿದ್ದು ಅಶ್ವಘೋಷನ ಬುದ್ದ ಚರಿತೆ ಮತು ಪ್ಲೀನಿಯ ನ್ಯಾಚುರಲ್ ಹಿಸ್ಟ್ರಿಯಾ ಪ್ರಮುಖವಾಗಿವೆ.

ಭಾರತ ಇತಿಹಾಸದ ಮೇಲೆ ಭೂಗೋಳದ ಪ್ರಭಾವ.

ಭಾರತವು ಹಿಮಾಲಯ ಪರ್ವತ,ಉತ್ತರದ ಬಯಲು ಮತ್ತು ಮರುಭೂಮಿ,ಕರಾವಳಿ ತೀರಪ್ರದೆಶಗಳು, ಪರ್ವತ(ವಿಂದ್ಯ, ಅರಾವಳಿ, ಸಹ್ಯಾದ್ರಿ)ಗಳಿಂದ ಕೂಡಿದೆ.

ಹಿಮಾಲಯ ಪರ್ವತಗಳು ಭಾರತವನ್ನು ಇನ್ನುಳಿದ ಭಾಗಗಳಿಂದ ಪ್ರತ್ಯೇಕಿಸಿವೆ. ಮತ್ತು ನೈಸರ್ಗಿಕ ತಡೆಗೋಡೆ ನಿರ್ಮಿಸಿ ಆಕ್ರಮಣಕಾರರಿಂದ, ಶೀತ ಮಾರುತಗಳಿಂದ ರಕ್ಷಿಸಿವೆ. ಇವು ಸದಾ ಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿವೆ. ಈ ನದಿಗಳು ಫಲವತ್ತಾದ ಬಯಲು ನಿರ್ಮಿಸಿವೆ. ಈ ಬಯಲುಗಳು ನಾಗರಿಕತೆ ಮತ್ತು ಸಾಮ್ರಾಜ್ಯದ ತೊಟ್ಟಿಲುಗಳಾಗಿವೆ.

ಖೈಬರ್ ಮತ್ತು ಬೋಲಾನ್ ಕಣಿವೆಗಳು ಭಾರತೀಯರಿಗೆ ಪಾಶ್ಚಿಮಾತ್ಯರೊಂದಿಗೆ ಸಂಬಂಧಬೆಳೆಸಲು ಮತ್ತು ಭಾರತವನ್ನು ಪಾಶ್ಚಿಮಾತ್ಯರ ನಿರಂತರ ದಾಳಿಗಳಿಗೊಡ್ಡಿದವು.

ಮರುಭೂಮಿಗಳು ದಕ್ಷಿಣದ ಪ್ರಸ್ಥಭೂಮಿಯ ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿಗಳು, ಯುದ್ದ ಪ್ರೀಯರನ್ನಾಗಿ ಮಾಡಿದವು.

ಉಪಖಂಡದಲ್ಲಿರುವ ಭೌಗೋಳಿಕ ಭಿನ್ನತೆ ವಿವಿಧ ವಲಯಗಳ ದ್ರಾವಿಡ, ಅಲ್ಫಾಯಿನ್,ಮಂಗೋಲಾಯಿಡ್ ಮುಂತಾದ ಕುಲಗಳು,ವಿವಿಧÀ ಜನಾಂಗಗಳು ಅಸ್ತಿತ್ವದಲ್ಲಿರುವದರಿಂದ ವಿವಿಧ ಭಾಷೆ ಮತ್ತು ಸಂಸ್ಕøತಿಗಳ ಬೆಳವಣಿಗೆಗೆ ಕಾರಣವಾಯಿತು.

ಉತ್ತರ ಮತ್ತು ದಕ್ಷಿಣದ ನದಿ ಬಯಲುಗಳು ಅತೀ ಪುರಾತನ ಕಾಲದಿಂದ ಕೃಷಿ ಪ್ರಧಾನ ದೇಶವನ್ನಾಗಿ ಮಾಡಿವೆ. ಇಲ್ಲಿ ಅನೇಕ ವಿಧಧ ಖನಿಜಗಳು, ಬಂಡೆಗಳು ವಿಫಲವಾಗಿ ಲಭ್ಯವಿವೆ. ಅವುಗಳಿಂದ ಅರಮನೆ, ದುರ್ಗಗಳು, ಕೋಟೆ ಮುಂತಾದ ವಾಸ್ತುಶಿಲ್ಪಗಳ ಬೆಳವಣಿಗೆಗೆ ಕಾರಣವಾಗಿವೆ.

ದಕ್ಷಿಣಕ್ಕಿರುವ ಸಮುದ್ರಗಳು ಒಂದು ಕಾಲದಲ್ಲಿ ತಡೆಬೇಲಿಗಳಾಗಿದ್ದವು ನಂತರದಲ್ಲಿ ಅವು ಜಗತ್ತಿನ ಇತರ ಭಾಗಗಳೊಂದಿಗೆ ಸಂಪರ್ಕ ಬೆಳೆಸುವ ಸಾಧನಗಳಾದವು.

ವಿಫುಲ ಮಳೆ ಮತ್ತು ಅನುಕೂಲಕರ ಹವಾಮಾನವು ಸಂಪತ್ಭರಿತ ಮತ್ತು ವೈವಿಧ್ಯಪೂರ್ಣ ಸಸ್ಯ ಹಾಗೂ ಪ್ರಾಣಿ ವರ್ಗದ ಬೆಳವಣಿಗೆಗೆ ಕಾರಣವಾಗಿದೆ.


2) ಶಿಲಾಯುಗ ಮತ್ತು ಲೋಹಗಳ ಯುಗ :

ಹಳೆಯ ಶಿಲಾಯುಗವು ಪ್ಯಾಲಿಯೋ (ಹಳೆಯ) ಮತ್ತು ಲಿಥಿಕ್ (ಶಿಲೆ) ಎಂಬ ಗ್ರೀಕ ಪದದಿಂದ ಬಂದಿದ್ದು ಈ ಕಾಲದ ಮಾನವ ಕ್ವಾರ್ಟಝೈಟ್ ಕಲ್ಲನ್ನು ಬಳಸುತ್ತಿದ್ದನು ಈ ಕಾಲದ ಪ್ರಮಖ ತಾಣಗಳು ಸೋಹನ್, ನರ್ಮದಾ, ತುಂಗಭದ್ರ ಘಟಪ್ರಭ ಕಣಿವೆಗಳು, ಭೂಪಾಲ, ತಿರನೆಲ್‍ವೇಲಿ, ಲಿಂಗಸಗೂರ. ಹಾಗೂ ಮಧ್ಯ ಶಿಲಾಯುಗದ ಪ್ರಮುಖ ತಾಣಗಳೆಂದರೆ ಅಜ್ಮೀರ, ಸಬರಮತಿ ಅಹಮದನಗರ, ಸಂಗನಕಲ್ಲು ಮತ್ತು ಬ್ರಹ್ಮಗಿರಿ.

ಹೊಸ ಶಿಲಾಯುಗವು ನಿಯೋ ಮತ್ತು ಲಿಥಿಕ್ ಎಂಬ ಪದಗಳಿಂದ ಬಂದಿದೆ ಈ ಕಾಲದ ಪ್ರಮುಖ ತಾಣಗಳೆಂದರೆ ಮಸ್ಕಿ, ದೋ-ಅಬ್, ತಿರುನೆಲ್ವೇಲಿ, ಕರ್ನೂಲ, ಕಾಥೇವಾರ ಮತ್ತು ಸಿಂದ್ ಅದರಂತೆ ಉತ್ತರ ಭಾರತದಲ್ಲಿ ಮಾನವನು ತಾಮ್ರವನ್ನು ದಕ್ಷಿಣ ಭಾರತದಲ್ಲಿ ಕಬ್ಬಿಣ ಲೋಹವನ್ನು ಮೊಟ್ಟಮೊದಲು ಬಳಸಿದನು.

                         


 3)ಸಿಂಧೂ ನಾಗರಿಕತೆ

1861 ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪ್ರಾರಂಭವಾಯಿತು. 1921 ರಲ್ಲಿ ಡಾ|| ಆರ್. ಬಿ ದಯಾರಾಮ್ ಸಹಾನಿಯವರು ಹರಪ್ಪಾ ನಿವೇಶನ ಕಂಡು ಹಿಡಿದರು. 1922 ರಲ್ಲಿ ಡಾ|| ಆರ್. ಬಿ. ಬ್ಯಾನರ್ಜಿ ಸಿಂಧ್ ಪ್ರಾಂತದ ಲಾಢಖಾನ್ ಜಿಲ್ಲೆಯಲ್ಲಿ ಉತ್ಖನನ ಮಾಡಿ ಮೆಹೆಂಜೋದಾರೋ ಕಂಡು ಹಿಡಿದರು. ಮೆಹೆಂಜೋದಾರೋ ಎಂದರೆ ಸಿಂಧಿ ಭಾಷೆಯಲ್ಲಿ ಮಡಿದವರ ದಿಬ್ಬವಾಗಿದೆ, ಸ್ನಾನದ ಕೊಳ ಮೆಹೆಂಜೋದಾರೋವಿನ ಅಧ್ಬುತ ಲಕ್ಷಣವಾಗಿದೆ. ಹಾಗೆಯೇ ಲೋಥಲ್‍ನಲ್ಲಿ ಹಡಗು ಕಟ್ಟೆ ಪತ್ತೆಯಾಗಿದೆ.



ಸಿಂಧೂ ನಗರ ಯೋಜನೆ – ಇದು ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ. ಇಲ್ಲಿನ ಜನ ಉಚ್ಛ ಅಭಿವೃದ್ಧಿ ಹೊಂದಿದ ಜೀವನ ನಡೆಸುತ್ತಿದ್ದ ಯೋಜನಾ ಬದ್ಧ ನಗರ ನಿರ್ಮಾಣ, ಬೀದಿಗಳು ಒಳಚರಂಡಿ ವ್ಯವಸ್ಥೆ, ಸ್ನಾನದ ಕೊಳ ಉಗ್ರಾಣ ಕಟ್ಟಡಗಳ ವಿಶೇಷತೆಯನ್ನು ಹೊಂದಿದ್ದು ಕಾಣುತ್ತೇವೆ.

ಬೀದಿಗಳು ನೇರವಾಗಿದ್ದು ಒಂದನ್ನೊಂದು ಲಂಬವಾಗಿ ವಿಭಜಿಸಿವೆ. ಅವು 13-34 ಅಡಿ ಅಗಲವಾಗಿ ರಚನೆಗೊಂಡಿದ್ದು ನಿರ್ದಿಷ್ಟ ಅಂತರದಲ್ಲಿ ದೀಪದ ಕಂಬ, ರಸ್ತೆ ಬದಿಗೆ ಕಸದ ತೊಟ್ಟಿಗಳು ಇದ್ದವು.

ಒಳಚರಂಡಿ ವ್ಯವಸ್ಥೆಯು ಅಸಾಧಾರಣವಾಗಿದ್ದು, ಇಟ್ಟಿಗೆಯಿಂದ ರಚನೆಗೊಂಡು ತನ್ನದೇ ಆದ ಒಳಚರಂಡಿ, ಇಂಗುಗುಂಡಿ, ಮುಚ್ಚಿದ ಭಾಗಗಳಾಗಿ ಸಾರ್ವಜನಿಕ ಚರಂಡಿಗೆ ಸಂಪರ್ಕ ಹೊಂದಿತ್ತು. ಅಲ್ಲಲ್ಲಿ ಸ್ವಚ್ಛಗೊಳಿಸುವ ವ್ಯವಸ್ಥೆ ರೂಪಿಸಲಾಗಿತ್ತು.

ಸ್ನಾನದ ಕೊಳ - ಸ್ನಾನದ ಕೊಳ ಮೆಹೆಂಜೊದಾರೋವಿನ ಅದ್ಭುತ ಲಕ್ಷಣಗಳಲ್ಲಿ ಒಂದು ಚೌಕಾಕಾರದ ಪ್ರಾಂಗಣ ಮಧ್ಯಭಾಗದಲ್ಲಿ ಈಜುಕೊಳ. ನಾಲ್ಕು ಮೊಗಸಾಲೆ, ಬಿಸಿ ನೀರಿನ ವ್ಯವಸ್ಥೆಯ ಕೋಣೆಗಳು ಇದ್ದು ಅಲ್ಲಿಗೆ ಪಕ್ಕದ ಭಾವಿಯಿಂದ ನೀರಿನ ಪೂರೈಕೆಯಾಗುತ್ತಿತ್ತು.

ಉಗ್ರಾಣಗಳನ್ನು ಧಾನ್ಯಗಳನ್ನು ಸುರಕ್ಷಿತವಾಗಿಡಲು ಬಳಸುತ್ತಿದ್ದು ಇಟ್ಟಿಗೆಗಳಿಂದ ಇವುಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಹರಪ್ಪ ಕಾಲಿಬಂಗನ್‍ಗಳಲ್ಲಿ ಉಗ್ರಾಣಗಳು ಕಂಡುಬಂದಿವೆ.

ಕಟ್ಟಡಗಳು – ಮನೆಗಳು ರಸ್ತೆ ಬದಿಗಳಲ್ಲಿ ಕಂಡುಬಂದಿವೆ. 2-3 ಕೋಣೆ ಮಹಡಿ ಒಳಾಂಗಣ, ಅಡಿಗೆ ಕೋಣೆ ನಿರ್ಮಾಣಗೊಂಡಿದ್ದು ನೀರು ಪೂರೈಕೆಗೆ ಪ್ರತಿ ಮನೆಯಲ್ಲೂ ಭಾವಿಗಳನ್ನು ನಿರ್ಮಾಣ ಮಾಡಲಾಗಿತ್ತು.



ಸಿಂಧೂ ಸಮಾಜದಲ್ಲಿ ವೃತ್ತಿ ಆಧಾರಿತ  4 ವರ್ಗಗಳಿದ್ದವು ಅವು ಪಂಡಿತ ವರ್ಗ ಯೋಧರು, ವ್ಯಾಪಾರಿಗಳು ಶ್ರಮಿಕ ವರ್ಗ.

ಸಿಂಧೂ ಜನರ ಪ್ರಮುಖ ಕಸುಬು ಕೃಷಿಯಾಗಿತ್ತು ಮತ್ತು ಅವರಿಗೆ ತೂಕ ಅಳತೆಗಳ ಮಾಹಿತಿ ಇತ್ತು.

ಸಿಂಧೂ ಜನರು ದಂತ, ಚಿನ್ನ, ಮುತ್ತು, ಮರದ ದಿಮ್ಮೆಗಳನ್ನು ರಫ್ತು ಮಾಡುತ್ತಿದ್ದರು. ಅಲ್ಲದೆ ಅಮೂಲ್ಯ ಹರಳುಗಳು ತಾಮ್ರ ತವರ ಆಮದು ಮಾಡಿಕೊಳ್ಳುತ್ತಿದ್ದರು.

ಮುದ್ರೆಗಳು ಜೇಡಿನ ಮಣ್ಣಿನ ಪ್ರತಿಮೆಗಳು ಸಿಂಧೂ ಜನರ ಧಾರ್ಮಿಕ ಸ್ಥಿತಿ ವಿವರಿಸುತ್ತವೆ. “ಮಾತೃ ದೇವತೆ”  ಪ್ರಧಾನ ದೇವತೆಯಾಗಿತ್ತು.

ಸಿಂಧೂ ನಾಗರೀಕತೆ ಅವನತಿಗೆ ಹಲವಾರು ಕಾರಣಗಳನ್ನು ಇತಿಹಾಸಕಾರರು ನೀಡಿದ್ದಾರೆ. ನದಿಗಳು ತಮ್ಮ ಹರಿವಿನ ಪಥವನ್ನು ಬದಲಾಯಿಸಿದ್ದರಿಂದ ನಗರಗಳು ಹಾಳಾಗಿದ್ದರಬಹುದು. ಅಥವಾ ಸಾಂಕ್ರಾಮಿಕ ರೋಗಗಳ ಹರಡುವಿಕೆಯು ಜನ ಸಂಖ್ಯೆಯನ್ನು ತೊಡೆದುಹಾಕಿರಬಹುದು. ಇಲ್ಲವೇ ಸತತ ಪ್ರವಾಹ ಮಣ್ಣಿನ ಸವೆತ ಜನಜೀವನ ವಿನಾಶಕ್ಕೆ ಕಾರಣವಾಗಿರಬಹುದೆಂದು ತರ್ಕಿಸಲಾಗಿದೆ.

4) ವೈದಿಕ ಸಂಸ್ಕøತಿ

ವಿಭಿನ್ನ ಸಂಸ್ಕøತಿಯನ್ನು ಹೊಂದಿದ ಆರ್ಯರು ಭಾರತದ ಉಪಖಂಡಕ್ಕೆ ಸಾ.ಶ.ಪೂ. 2000 ರಲ್ಲಿ ಆಗಮಿಸಿದರು. ಆರ್ಯ ಎಂದರೆ ಕುಲೀನ, ಒಡೆಯ ಅಥವಾ ಕೃಷಿ ಅವಲಂಬಿತ ಎಂದರ್ಥ. ವೈದಿಕ ಸಂಸ್ಕøತಿಯನ್ನು ಅರಿಯಲು ವೇದಗಳು ಮೂಲಾಧಾರಗಳಾಗಿದ್ದು, ವೇದ ಎಂಬ ಶಬ್ದವನ್ನು ಸಂಸ್ಕøತದ ‘ವಿದ್’ ನಿಂದ ಪಡೆಯಲಾಗಿದೆ. ವಿದ್ ಎಂದರೆ ಜ್ಞಾನ ಎಂದರ್ಥ. ಆರ್ಯರು ಋಗ್ವೇದ ಯಜುರ್ವೇದ, ಸಾಮವೇದ, ಅಥವರ್ಣವೇದ ಎಂಬ 4 ವೇದಗಳನ್ನು ರಚಿಸಿದ್ದು ಇದರಲ್ಲಿ ಋಗ್ವೇದವು ಪ್ರಥಮ ವೇದವಾಗಿದೆ.

ಆರ್ಯರು ಬುಡಕಟ್ಟುಗಳ ರಾಜಕೀಯ ವ್ಯವಸ್ಥೆ ಹೊಂದಿದ್ದು ಇದರಲ್ಲಿ ರಾಜನ್ ಮುಖ್ಯಸ್ಥನಾಗಿದ್ದ. ರಾಜನಿಗೆ ಸಭಾ ಮತ್ತು ಸಮಿತಿಗಳು ಸಹಾಯ ಮಾಡುತ್ತಿದ್ದವು. ಆರ್ಯ ಸಮಾಜದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಇತ್ತು. ಇದರ ಮುಖ್ಯಸ್ಥನನ್ನು ಕುಲಪತಿ/ಗೃಹಪತಿ ಎಂದು ಕರೆಯಲಾಗುತ್ತಿತ್ತು. ಮಹಿಳೆಯರಿಗೆ ಈ ಅವಧಿಯಲ್ಲಿ ಉನ್ನತ ಸ್ಥಾನವನ್ನು ನೀಡಲಾಗುತ್ತಿತ್ತು. ವಿಶ್ವವರ, ಘೋಷಾ, ಅಪಾಲ, ಗಾರ್ಗಿ, ಮೈತ್ರೇಯಿ ಮಹಿಳಾ ವಿದ್ವಾಂಸರಾಗಿದ್ದರು. ಸಮಾಜದಲ್ಲಿ ಬ್ರಾಹ್ಮಣ ಕ್ಷತ್ರೀಯ, ವೈಶ್ಯ, ಹಾಗೂ ಶೂಧ್ರರೆÉಂಬ ವರ್ಗಗಗಳು ಅಸ್ಥಿತ್ವದಲ್ಲಿದ್ದವು. ವ್ಯಕ್ತಿ ಜೀವನವನ್ನು ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ 4 ಆಶ್ರಮಗಳಲ್ಲಿ ವಿಂಗಡಿಸಲಾಗಿತ್ತು. ಜೂಜಾಡುವುದು ರಥ ಓಡಿಸುವ ಸ್ಪರ್ದೆ, ಕುದುರೆ ಓಡಿಸುವ ಸ್ಫರ್ದೆ ಸಂಗೀತ ನೃತ್ಯ ಮನೆರಂಜನೆಗಳಾಗಿದ್ದವು.

ಆರ್ಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದು  ಪ್ರಮುಖ ಕಸುಬು ಕೃಷಿಯಾಗಿತ್ತು. ತಮ್ಮ ಉಳಿಮೆ ಭೂಮಿಯನ್ನು ಕ್ಷೇತ್ರ ಎಂದು ಕರೆಯುತ್ತಿದ್ದರು. ಜಾನುವಾರುಗಳನ್ನು ಸಂಪತ್ತು ಎಂದು ಪರಿಗಣಿಸಲಾಗಿತ್ತು. ಈ ಅವಧಿಯನ್ನು ಮಗುವನ್ನು ಶಾಲೆಗೆ ಕಳುಹಿಸಲು ಉಪನಯನ ಸಮಾರಂಭವನ್ನು ಏರ್ಪಡಿಸುತ್ತಿದ್ದರು.

5) ಹೊಸಧರ್ಮಗಳ ಉದಯ –

ಭಾರತೀಯ ಸಮಾಜದಲ್ಲಿನ ಸಾಮಾಜಿಕ ಹಾಗೂ ಧಾರ್ಮಿಕ ಶೋಷಣೆಯ ವಿರುದ್ಧವಾಗಿ ಸಾ.ಶ.ಪೂ. 6 ನೇ ಶತಮಾನದಲ್ಲಿ ಜೈನ ಮತ್ತು ಭೌದ್ಧ ಎಂಬ ಹೊಸ ಧರ್ಮಗಳು ಉದಯಿಸದವು.

ಜೈನ ಧರ್ಮ ವೃಷಭನಾಥ ಸ್ಥಾಪಿಸಿದ್ದು ಈ ಧರ್ಮದಲ್ಲಿ 24 ತೀರ್ಥಂಕರರಿದ್ದಾರೆ. 23 ನೇ ತೀರ್ಥಂಕರ ಪಾಶ್ರ್ವನಾಥ ಹಾಗೂ 24 ನೇ ತೀರ್ಥಂಕರ ಮಹಾವೀರರಾಗಿದ್ದಾರೆ. ಇವನ ಮೂಲ ಹೆಸರು ವರ್ಧಮಾನ ಈತನು ಕುಂದ ಗ್ರಾಮದಲ್ಲಿ ಸಾ.ಶ.ಪೂ. 599 ರಲ್ಲಿ ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಷಲಾದೇವಿ ದಂಪತಿಗಳ ಪುತ್ರನಾಗಿ ಜನಿಸಿದನು. ಇವನು ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಬಿಹಾರದ ಜೃಂಬಕಾ ಗ್ರಾಮದಲ್ಲಿ ಜ್ಞಾನೋದಯವನ್ನು ಪಡೆದನು. ಈತನು ಸಮ್ಯಕ್ ಜ್ಞಾನ ಸಮ್ಯಕ್ ನಂಬಿಕೆ ಸಮ್ಯಕ್ ನಡತೆ ಎಂಬ ತ್ರಿರತ್ನಗಳನ್ನು ಬೋಧಿಸಿದ. ಮಹಾವೀರನ ಮರಣದ ನಂತರ ಎರಡು ಜೈನ ಸಭೆಗಳನ್ನು ಪಾಟಲೀಪುತ್ರ ಮತ್ತು ವಲ್ಲಬಿಯಲ್ಲಿ ನಡೆಸಲಾಯಿತು. ಜೈನ ಧರ್ಮದ ಅನುಯಾಯಿಗಳಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಜೈನ ಧರ್ಮ ಶ್ವೇತಾಂಬರ ಮತ್ತು ದಿಗಂಬರ ಎಂದು ಇಬ್ಬಾಗವಾಯಿತು. ಮಹಾವೀರನು ತನ್ನ 72 ನೇ ವಯಸ್ಸಿನಲ್ಲಿ ಬಿಹಾರದ ರಾಜಗೃಹದ ಸಮೀಪ ಪಾವಾ ಎಂಬಲ್ಲಿ ಸಾ.ಶ.ಪೂ. 527 ರಲ್ಲಿ ನಿರ್ವಾಣ ಹೊಂದಿದನು.

ಬೌದ್ಧ ಧರ್ಮವನ್ನು ಗೌತಮ ಬುದ್ದನು ಸ್ಥಾಪಿಸಿದನು. ಈತನು ಸಾ.ಶ.ಪೂ. 563 ರಲ್ಲಿ ರಾಜ ಶುದ್ಧೋದನ ಮತ್ತು ತಾಯಿ ಮಾಯಾದೇವಿ ದಂಪತಿಗಳ ಪುತ್ರನಾಗಿ ಲುಂಬಿನಿಯಲ್ಲಿ ಜನಿಸಿದನು. ಈತನ ಮೊದಲ ಹೆಸರು ಸಿದ್ಧಾರ್ಥನಾಗಿದ್ದು, ನಂತರ ಬುದ್ದನಾದ. ಬುದ್ದನೆಂದರೆ ಜ್ಞಾನ ಪಡೆದವನು ಇವನು ತನ್ನ 35 ನೇ ವಯಸ್ಸಿನಲ್ಲಿ ಗಯಾದ ಆಲದ ಮರದ ಕೆಳಗೆ ಜ್ಞಾನೋದಯವನ್ನು ಪಡೆದನು ಮತ್ತು ತನ್ನ ಮೊದಲ ಪ್ರವಚಣವನ್ನು ಸಾರನಾಥದ ಜಿಂಕೆ ವನದಲ್ಲಿ ನೀಡಿದನು.

ಬುದ್ದನು 4 ಆರ್ಯಸತ್ಯಗಳನ್ನು ಬೋಧಿಸಿದ ಅವುಗಳೆಂದರೆ –

1. ಪ್ರಾಪಂಚಿಕ ಜೀವನ ದುಖಃಮಯವಾಗಿದೆ.  2.ಆಸೆಯೇ ದುಖ್ಖಕ್ಕೆ ಮೂಲ

3. ಆಸೆಯ ನಿಗ್ರಹದಿಂದ ಪುನರ್ ಜನ್ಮದಿಂದ ಮುಕ್ತಿ.   4.ಆಸೆಯ ಕೊಣೆಗಾನಿಸಲು ಆಷ್ಟಾಂಗ ಮಾರ್ಗದ ಅನುಸರಣೆ.

ಬುದ್ದನ ಬೋಧನೆಗಳನ್ನು ವಿನಯ ಪಿಟಕ, ಸುತ್ತ ಪಿಟಕ ಅಭಿದಮ್ಮ ಪಿಟಕ ಎಂಬ 3 ಪಿಟಕಗಳಲ್ಲಿ ಸಂಗ್ರಹಿಸಲಾಗಿದೆ. ಬುದ್ದನು ತನ್ನ 80 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ಪರಿನಿರ್ವಾಣ ಹೊಂದಿದನು. ಈತನ ಮರಣದ ನಂತರ ಬೌಧ್ಧ ಭಿಕ್ಷುಗಳ ಭಿನ್ನಾಭಿಪ್ರಾಯದಿಂದಾಗಿ ಬೌಧ್ಧ ಧರ್ಮ ಹೀನಾಯಾನ ಮತ್ತು ಮಹಾಯಾನ ಎಂದು ಇಬ್ಭಾಗವಾಯಿತು. ಈ ಧರ್ಮವು ಭಾರತದಾದ್ಯಂತ ಪಸರಿಸಿತÀಲ್ಲದೇ ಭಾರತದ ಮಹಾನ್ ಸಾಮ್ರಾಟರಾದ ಅಶೋಕ, ಕಾನಿಷ್ಕ ಮತ್ತು ಹರ್ಷವರ್ಧನನಿಂದ ರಾಜಾಶ್ರಯವನ್ನು ಪಡೆಯಿತು.

6) ಮೌರ್ಯ ಸಾಮ್ರಾಜ್ಯ –

ಮೌರ್ಯ ಸಾಮ್ರಾಜ್ಯ ಚಂದ್ರಗುಪ್ತ ಮೌರ್ಯನಿಂದ ಸ್ಥಾಪಿತವಾಯಿತು. ಪಾಟಲೀಪುತ್ರ ಇವರ ರಾಜಧಾನಿ.  ಇವರ ಲಾಂಛನ ಧರ್ಮಚಕ್ರ. ಇವರ ಇತಿಹಾಸವನ್ನು ತಿಳಿಯಲು ಅರ್ಥಶಾಸ್ತ್ರ, ಇಂಡಿಕಾ ಮುದ್ರಾರಾಕ್ಷಸ, ಅಶೋಕನ ಶಾಸನಗಳು, ಸ್ಮಾರಕಗಳು, ದೀಪವಂಶಿ ಮತ್ತು ಮಹಾವಂಶಿ ಪ್ರಮುಖ ಆಧಾರಗಳು. ಕೌಟಿಲ್ಯ ಮೌರ್ಯ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಚಂದ್ರಗುಪ್ತನಿಗೆ ನೆರವಾದನು. ಧನನಂದನು ಚಂದ್ರಗುಪ್ತನಿಂದ ಸೋಲಿಸಲ್ಪಟ್ಟ ದೊರೆ. ಸೆಲ್ಯುಕಸ್ ಮೇಗಾಸ್ತನೀಸನನ್ನು ಚಂದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯಾಗಿ ಕಳುಹಿಸಿದನು. ಈತ ಚಂದ್ರಗುಪ್ತನಿಂದ ಸೋಲಿಸಲ್ಪಟ್ಟಿದ್ದ. ಚಂದ್ರಗುಪ್ತ ಜೈನ ಧರ್ಮ ಅನುಸರಿಸಿದ ಮೊದಲ ಮೌರ್ಯ ಅರಸು. ಈತ ತನ್ನ ಕೊನೆಯ ದಿನಗಳನ್ನು ಶ್ರವಣ ಬೆಳಗೊಳದಲ್ಲಿ ಕಳೆದ. ಮೌರ್ಯ ಸಂತತಿಯ ಶ್ರೇಷ್ಟ ದೊರೆ ಅಶೋಕ, ಈತನ ಶಾಸನಗಳು ಮಸ್ಕಿ, ಗವಿಮಠ, ಬ್ರಹ್ಮಗಿರಿ, ನಿಟ್ಟೂರು, ಸನ್ನತ ಗಳಲ್ಲಿ ಕಂಡು ಬರುತ್ತಿದ್ದು 13 ನೇ ಬಂಡೆಗಲ್ಲು ಶಾಸನ ಅಶೋಕನ ಕಳಿಂಗ ಯುದ್ದದ ವಿವರಣೆ ನೀಡಿದೆ. ಈತನ ಮಸ್ಕಿ ಶಾಸನ ಅಶೋಕನನ್ನು “ದೇವನಾಂಪ್ರೀಯ ಪ್ರೀಯದರ್ಶಿ ರಾಜ” ಎಂದು ಉಲ್ಲೇಖಿಸಿದೆ. 3 ನೇ ಭೌಧ್ಧ ಮಹಾಸಮ್ಮೇಳನ ಪಾಟಲೀಪುತ್ರದಲ್ಲಿ ನಡೆಯಿತು. ಅಶೋಕನಿಂದ ಸಾಂಚಿ ಸ್ತೂಪ ನಿರ್ಮಾಣವಾಯಿತು. ಸಾರನಾಥ ಸ್ಥಂಬದ ಶಿರೋಭಾಗದ ಧರ್ಮ ಚಕ್ರವು ಭಾರತದ ರಾಷ್ಟ್ರಲಾಂಛನವಾಗಿದೆ.

ಮೌರ್ಯರ ಅವಧಿಯಲ್ಲಿ ಧರ್ಮಸ್ಥೆಯ, ಕಂಟಕಶೋಧನ ಎಂಬ 2 ಬಗೆಯ ನ್ಯಾಯಾಲಯಗಳಿದ್ದವು. ಅಶೋಕನು ಧರ್ಮಮಹಮಾತ್ರರನ್ನು ನೇಮಿಸಿದನು. ಅವರ ಕರ್ತವ್ಯ ಧರ್ಮ ಪ್ರಚಾರ ಮಾಡುವುದಾಗಿತ್ತು.

ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಹಾಗೆ ಸಿಮುಖ ಶಾತವಾಹನ ಸಂತತಿಯ ಸ್ಥಾಪಕ. ಪ್ರತಿಷ್ಠಾನ/ಫೈಠನ್ ಶಾತವಾಹನರ ರಾಜಧಾನಿಯಾಗಿತ್ತು. ಹಾಲ, ಗೌತಮೀಪುತ್ರ ಶಾತಕರ್ಣಿ ವಸಿಷ್ಠಪುತ್ರ ಪುಳಮಾಯಿ, ಯಜ್ಞಶ್ರೀ ಪ್ರಮುಖ ಅರಸರು. ಹಾಲನಿಂದ ಗಾಥಾಸಪ್ತಸತಿ ಗೃಂಥ ರಚನೆಯಾಯಿತು. ಹಾಗೆಯೇ ಗೌತಮೀ ಬಾಲಶ್ರೀಯಿಂದ ನಾಶಿಕ್ ಗುಹಾ ಶಾಸನ ರಚಿಸಲ್ಪಟ್ಟಿತು. ಅಮರವಾತಿ, ಕಾರ್ಲೆ, ನಾಸಿಕ್, ಕನ್ಹೇರಿಗಳು ಶಾತವಾಹನರ ಪ್ರಮುಖ ವಾಸ್ತುಶಿಲ್ಪದ ಕೇಂದ್ರಗಳು.

Monday, December 24, 2018

7.1. ಆಧುನಿಕ ಭಾರತ : ಭಾರತಕ್ಕೆ ಯುರೋಪಿಯನ್ನರ ಆಗಮನ.


7.1. ಆಧುನಿಕ ಭಾರತ : ಭಾರತಕ್ಕೆ ಯುರೋಪಿಯನ್ನರ ಆಗಮನ.

ಪೋರ್ಚಗೀಸರು; 1498 ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯುವದರ ಮೂಲಕ ಯೂರೋಪಿನ್ನರ ವ್ಯಾಪಾರ  ಪುನರ್‍ಸ್ಥಾಪಿಸಲ್ಪಟ್ಟತು. ಭಾರತದಲ್ಲಿ ಮೊದಲ ಪೋರ್ಚಗೀಸರ ಗೌವರ್ನರ್ ಫ್ರಾನ್ಸಿಸ್-ಡಿ-ಅಲ್ಮಿಡಾ. ಆಲ್ಫೆನ್ಸೊ-ಡಿ-ಅಲ್ಬುಕರ್ಕ ಬಿಜಾಪೂರದ ಆದಿಲ್ ಷಾಹಿಗಳಿಂದ ಗೋವಾವನ್ನು ಗೆದ್ದುಕೊಂಡನು.


ಯುರೋಪಿಯನ್ನರು ರಾಜಧಾನಿ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆ ವ್ಯಾಪಾರಿ ಕೇಂದ್ರಗಳು  ಭಾರತದಲ್ಲಿ ನೆಲೆ ನಿಲ್ಲಲಾರದ್ದಕ್ಕೆ ಕಾರಣಗಳು



1) ಪೋರ್ಚಗೀಸರು  ಗೋವಾ   1498   ಆಗಮನ ದೀವ, ದಮನ, ಸಾಲ್ಸಟ್, ಬೇಸಿನ್ 
                                     1) ಧಾರ್ಮಿಕ ಮತಾಂಧ ನೀತಿ    2) ವಿಜಯ ನಗರದ ಅವನತಿ

2) ಡಚ್ಚರು              ಪುಲಿಕಾಟ    1602 ಮಚಲಿಪಟ್ಟಣ, ಬಲಿಪಟ್ಟಣ, ನಾಗಪಟ್ಟಣ, ಕೊಚ್ಚಿನ್,                                 1) ಆಗ್ನೇಯ ಏಷಿಯಾ ದ್ವೀಪಗಳ ಕಡೆ ಗಮನ ನೀಡಿದ್ದು 

3)  ಫ್ರೆಂಚರು               ಪಾಂಡಿಚೇರ   1664 ಸೂರತ್, ಚಂದ್ರನಾಗೂರು, ಮಾಹೆ, ಕಾರೈಕಲ್
                            1)   ಡೂಪ್ಲೆ  ನಂತರದ ಅಧಿಕಾರಿಗಳ ಅಸಮರ್ಥತೆ

4)  ಇಂಗ್ಲೀಷರು    ಕಲ್ಕತ್ತಾ  1600 ಸೂರತ್,  ಅಹ್ಮದಾಬಾದ್, ಆಗ್ರಾ, ಮದ್ರಾಸ ,ಬ್ರೋಚ್,                       ಭಾರತದಲ್ಲಿ ಅಧಿಪತ್ಯೆ ಸ್ಥಾಪನೆ ಮಾಡಿದರು

 7.2 ಭಾರತದಲ್ಲಿ ಬ್ರಿಟಿಷ ಸಾಮ್ರಾಜ್ಯ ಸ್ಥಾಪನೆ:
  ಇಂಗ್ಲಿóಷ ಮತ್ತು ಫ್ರೆಂಚರ ನಡುವೆ ಮೂರು ಕರ್ನಾಟಿಕ್ ಯುದ್ದಗಳು ನಡೆದವು 1ನೇ ಕರ್ನಾಟಿಕ ಯದ್ದ ಎಕ್ಸ-ಲಾ-ಛಾಪೆಲ್ 2ನೇ & 3ನೇ ಕರ್ನಾಟಿಕ್ ಯುದ್ದಗಳು ಕ್ರಮವಾಗಿ ಪಾಂಡಿಚೇರಿ ಮತ್ತು ಪ್ಯಾರೀಸ್ ಒಪ್ಪಂದಗಳೊಂದಿಗೆ ಮುಕ್ತಾಯಗೊಂಡವು.  ಬಂಗಾಲದಲ್ಲಿ 1757 ರಲ್ಲಿ ಪ್ಲಾಸಿ ಕಾಳಗ ಸಿರಾಜ-ಉದ್-ದೌಲ ಮತ್ತು ರಾಬರ್ಟ ಕ್ಲೈವರ ನಡುವೆ ನಡೆಯಿತು ಈ ಕದನವು ಬಂಗಾಳದಲ್ಲಿ ಬ್ರಿಟಿಷರ ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿತು, 1764 ರಲ್ಲಿ ನಡೆದ ಬಕ್ಸಾರ ಕಾಳಗ ಬಂಗಾಳದ ಮೇಲೆ ಇಂಗ್ಲಿಷರ ಪ್ರಾಬಲ್ಯವನ್ನು ಸ್ಥಿರಗೊಳಿತು. 
ಹೈದರಾಲಿ ಮತ್ತು ಬ್ರಿಟಿಷರ ನಡುವೆ 1ನೇ ಆಂಗ್ಲೋ-ಮ್ಯಸೂರ ಯುದ್ದ ನಡೆದು ಮದ್ರಾಸ ಒಪ್ಪಂದದೊಂದಿಗೆ 2ನೇ ಆಂಗ್ಲೋ-ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ  3ನೇ ಆಂಗ್ಲೋ-ಮೈಸೂರು ಯುದ್ಧ ಮ್ಯಸೂರು ಹುಲಿ ಎಂದು ಕರೆಯಿಸಿಕೊಂಡಿರುವ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದು ಇದರಲ್ಲಿ ಟಿಪ್ಪು ಸೋತಾಗ  ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಯುದ್ದ ಮುಕ್ತಾಯವಾಯಿತು. ಈ ಒಪ್ಪಂದದ ಕರಾರುಗಳೆಂದರೆ ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟು ಕೊಡಬೇಕಾಯಿತಲ್ಲದೆ ಯುದ್ಧ ಪರಿಹಾರಕ್ಕಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು. ಯುದ್ಧ ಪರಿಹಾರವನ್ನು ಪಾವತಿಸುವವರೆಗೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿ ಇಡಬೇಕಾಯಿತು.
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸಿ.್ಲ ಈ ಪದ್ಧತಿಗೆ ಒಳಗಾದ ಮೊದಲ ರಾಜನೆಂದರೆ ಹೈದರಾಬಾದಿನ ನಿಜಾಮ.. ಈ ಪದ್ದತಿಗೆ ಒಳಗಾದ ಇನ್ನುಳಿದ ಭಾರತೀಯ ರಾಜ್ಯಗಳೆಂದರೆ ತಿರುವಾಂಕೂರು, ಔದ್, ಬರೋಡಾ, ಜೈಪುರ. ಟಿಪ್ಪವಿನ ಮೇಲೆ ಇದನ್ನು ಹೇರಲು ಪ್ರಯತ್ನಿಸಿದಾಗ 4ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ ಡಾಲ ಹೌಸಿ. ಈ ನೀತಿ ಅನುಸರಿಸಿ ವಸಪಡಿಸಿಕೊಂಡ ರಾಜ್ಯಗಳೆಂದರೆ ಸತಾರ, ನಾಗಪುರ, ಉದಯಪುರ, ಝಾನ್ಸಿ,
1857 ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ರಾಜಕೀಯ, ಆಡಳಿತಾತಾತ್ಮಕ, ಆರ್ಥಿಕ ಕಾರಣಗಳಲ್ಲದೆ ಸೈನ್ಯದಲ್ಲಿಯ ಅತೃಪ್ತಿಯ ಫಲವಾಗಿ ಬ್ರಿಟಿಷರು ಹೊಸದಾಗಿ ಜಾರಿಗೆ ತಂದ ಎನ್ ಫೀಲ್ಡ ಬಂದೂಕುಗಳನ್ನು ಸೈನಿಕರು ಬಳಸಲು ನಿರಾಕರಿದಾಗ ದಂಗೆ ಸ್ಫೋಟಗೊಂಡಿತು. 34ನೇ ಪದಾತಿ ದಳದ ಮಂಗಳಪಾಂಡೆ ಬ್ರಿಟಿಷ ಸಾರ್ಜಂಟನನ್ನು ಕೊಂದು ಹಾಕಿದ. ಬ್ರಿಟಷರು ಪದಾತಿ ದಳವನ್ನು ವಜಾ ಮಾಡಿದರು. ಹೀಗೆ ಲಕ್ನೋದಲ್ಲಿ ಹಜರತ್ ಬೇಗಂ, ಕಾನ್ಪುರದಲ್ಲಿ ನಾನಾಸಾಹೇಬ, ಝಾನ್ಸಿಯಲ್ಲಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಬ್ರಿಟಿಷರು ಅವರನ್ನೆಲ್ಲ ಸದೆಬಡಿದರು. ಈ ದಂಗೆಯು ವಿಫಲತೆ  ಹೊಂದಲು ಕಾರಣಗಳೆಂದರೆ 1) ದಂಗೆಯು ರಾಷ್ಟ್ರೀಯ ಲಕ್ಷಣ ಹೊಂದಿರದೆ ಮಧ್ಯಭಾರತಕ್ಕೆ ಮಾತ್ರ ಸೀಮಿತವಾಗಿತ್ತು. 2) ದಂಗೆಕೋರರಲ್ಲಿ ಸಮಾನ ಉದ್ದೇಶÀಗಳಿರಲಿಲ.್ಲ
7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ ಆಡಳಿತದ ಪ್ರಭಾವ.
 ಬ್ರಿಟಿಷರಿಗೆ ಭೂಕಂದಾಯ ಸರ್ಕಾರದ ಮೂಲ ಆದಾಯವಾಗಿತ್ತು. ಹೀಗಾಗಿ ಹಳೆಯ ಕಂದಾಯ ಪದ್ಧತಿಗಳ ಜೊತೆಗೆ ಹೊಸ ರೀತಿಯ ಕಂದಾಯ ಪದ್ಧತಿಗಳನ್ನು ಜಾರಿಗೆ ತಂದರು. 1793 ರಲ್ಲಿ ಲಾರ್ಡ್ ಕಾರ್ನವಾಲಿಸ್ ಬಂಗಾಲದಲ್ಲಿ  ಶಾಶ್ವತ ಕಂದಾಯ ಪದ್ದತಿಯನ್ನು ಜಾರಿಗೆ ತಂದನು. ಬಾಂಬೆ & ಮದ್ರಾಸ ಪ್ರಾಂತ್ಯಗಳಲ್ಲಿ ಈಸ್ಟ ಇಂಡಿಯಾ ಕಂಪನಿಯು ಕೃಷಿಕರೊಂದಿಗೆ ನೇರವಾಗಿ ಕಂದಾಯ ಕೊಡುವ ಒಪ್ಪಂದ ಮಾಡಿಕೊಂಡಿತು. ಇದುವೆ ರೈತವಾರಿ ದ್ಧತಿ. ಭಾರತದ ವಾಯವ್ಯ ಭಾಗದಲ್ಲಿ ಈಸ್ಟ ಇಂಡಿಯಾ ಕಂಪನಿಯು ಮಹಲ್‍ನೊಂದಿಗೆ ಕಂದಾಯ ನೀಡುವ ಒಪ್ಪಂದ ಮಾಡಿಕೊಂಡಿತು. ಮಹಲ್ ಎಂದರೆ ಒಂದು ಕಂದಾಯ ಘಟಕವಾಗಿದು,  ಇದು ಒಂದು ಹಳ್ಳಿ ಅಥವಾ ಅನೇಕ ಹಳ್ಳಿಗಳಿಂದ ಕೂಡಿತ್ತು.
 ಭಾರತದ ಸಂಪತ್ತು ಮತ್ತು ಸಂಪನ್ಮೂಲಗಳು ಯಾವುದೆ ಆರ್ಥಿಕ & ವಸ್ತು ರೂಪದ ಸಮಾನ ಆದಾಯ ಅಥವಾ ಲಾಭವಿಲ್ಲದೆ ಇಂಗ್ಲೆಂಡಿಗೆ ಹರಿದು ಹೋದದ್ದನ್ನು ಸಂಪತ್ತಿನ ಸೋರಿಕೆ ಎಂದು ಕರೆಯಲಾಗಿದೆ. ಈ ಸಿದ್ದಾಂತ ಪ್ರತಿಪಾದನೆ ಮಾಡಿದವರು ದಾದಾಬಾಯಿ ನವರೋಜಿ.
 1835 ರಲ್ಲಿ ಲಾರ್ಡ್ ಮೆಕಾಲೆ ಇಂಗ್ಲಿಷ ಶಿಕ್ಷಣದ ಬೆಂಬಲಿಗರ ಅಭಿಪ್ರಾಯ ಬೆಂಬಲಿಸಿ ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ ಹಾಗೂ ಇಂಗ್ಲಿಷ ಶಿಕ್ಷಣದ ಮಾದ್ಯಮವಾಗಿರಬೇಕೆಂದು ಪ್ರತಿಪಾದಿಸಿದ. “ರಕ್ತ ಮತ್ತು ಬಣ್ಣದಲ್ಲಿ ಭಾರತೀಯ ಆದರೆ ಅಭಿರುಚಿ, ಹವ್ಯಾಸ  ಬುದ್ಧಿಮತ್ತೆಯಲ್ಲಿ ಇಂಗ್ಲಿಷರÀಂತಹ ವರ್ಗ ಸಷ್ಟಿಸಲು ಅವನು ಉದ್ದೇಶಿಸಿದ್ದ. 1854 ರಲಿ ಚಾರ್ಲ್ಸ ವುಡ್ ಶಿಕ್ಷಣದ ಅಭಿವೃದ್ಧಿಯನ್ನು ಕುರಿತು ತನ್ನ ವರಿದಿಯನ್ನು ಸಿದ್ದಪಡಿಸಿದ. ಇದನ್ನು “ಇಂಗ್ಲಿಷ ಶಿಕ್ಷಣದ ಮಹಾಸನ್ನದು” ಎಂದು ಕರೆಯಲಾಗಿದೆ.
7.4 ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳುವಳಿ.
ಸುಧಾರಕರು ತಂದೆ&ತಾಯಿ ಸಮಾಜ ಸ್ಥಾಪನೆ ಕಾಲ &ಸ್ಥಳ ವಿಶೇಷತೆ
1) ರಾಜಾ ರಾಮ ಮೋಹನರಾಯ ರಮಾಕಾಂತರಾಯತಾರಿಣಿದೇವಿ
                                                ಬ್ರಹ್ಮ ಸಮಾಜ
1828 1772          ರಾಧಾನಗರ “ಭಾರತೀಯ ಪುನರುಜ್ಜೀವನದ ಧ್ರುವತಾರೆ”
                 1829 ರ ಸತಿ ನಿóಷೇದ ಪ್ರಯತ್ನ

2) ಸ್ವಾಮಿ ದಯಾನಂದ ಸರಸ್ವತಿ ಕೃಷ್ಣಾಜಿ ಯಶೋಧಬಾಯಿ
                                        ಆರ್ಯ ಸಮಾಜ
 1875 1824 ತಂಕರಾ ಶುದ್ದಿ ಚಳುವಳಿ, ವೇದಗಳಿಗೆ ಹಿಂತಿರುಗಿ,
                                             ಕೃತಿ “ಸತ್ಯಾರ್ಥ ಪ್ರಕಾಶ”
3) ಸ್ವಾಮಿ ವಿವೇಕಾನಂದ ವಿಶ್ವನಾತ ದತ್ತಭುವನೇಶ್ವರಿದೇವಿ
                                    ರಾಮಕೃಷ್ಣ ಮಠ
1897 1863  ಕಲ್ಕತ್ತಾ 1893 ವಿಶ್ವಧರ್ಮ ಸಮ್ಮೇಳನ. ವೇದಾಂತ ಸಮಾಜ ಸ್ಥಾಪನೆ,ಪತ್ರಿಕೆÉ                                             “ಪ್ರಭುದ್ದ ಭಾರತ” “ಉದ್ಭೋದನ” 
4)        ಬ್ಲಾವತ್‍ಸ್ಕಿ& ಕರ್ನಲ್ ಆಲ್ಕಾಟ್ -
1875                      ಥಿಯೋಸಪಿಕಲ್ ಸೊಸ್ಯಟಿ  -
ಆನಿಬೆಜಂಟ ಬನಾರಸನಲ್ಲಿ ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪಿಸಿದರು.

5)   ಸರ್ ಸೈಯದ್ ಅಹಮದಖಾನ -
                           ಅಲಿಘಡ ಚಳುವಳಿ
1817  ದೆಹಲಿ ಮೊಹಮ್ಮಡನ್-ಆಂಗ್ಲೋ-ಓರಿಯಂಟಲ್ ಶಾಲೆ ಸ್ಥಾಪನೆ

7.5 ಮೈಸೂರ-ಒಂದು ಮಾದರಿ ರಾಜ್ಯ 
1831 ರಿಂದ 1881 ರವರೆಗೆ ಕಮಿಷನರ್ ಆಡಳಿತ ಮೈಸೂರಿನಲ್ಲಿತ್ತು. ಪ್ರಸಿದ್ದ ಕಮಿಷನರಗಳೆಂದರೆ ಮಾರ್ಕ ಕಬ್ಬನ್ ಮತ್ತು ಲೆವಿಸ್ ಬೆಂಥಾಮ್ ಬೌರಿಂಗ್. ಮಾರ್ಕ್ ಕಬ್ಬನ್‍ರು ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿ ವರ್ಗಾಯಿಸಿದರು 1859 ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟ್ ನಡುವೆ ರೈಲು ಮಾರ್ಗ ಹಾಕಿಸಿzರುÀ. ಇದು ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವಾಗಿದೆ 
ಲೆವಿಸ್ ಬೆಂಥಾಮ್ ಬೌರಿಂಗ್‍ರ ಅವಧಿಯಲ್ಲಿ ಮೈಸೂರು ಆಡಳಿತದ ಸಮಗ್ರ ಆಡಳಿತವನ್ನು ಪುನರ್ ಸಂಘಟಿಸಿದನು. ನ್ಯಾಯಾಂಗ &ಪೋಲೀಸ್ ಇಲಾಖೆಗಳನ್ನು ವ್ಯವಸ್ಥಿತಿವಾಗಿ ಸಂಘಟಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು.
ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಮೈಸೂರಿನ ಪ್ರಮುಖ ದಿವಾನರುಗಳು. ಸರ್ ಎಂ ವಿಶ್ವೇಶ್ವರಯ್ಯ ‘ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ’. ಇವರು 1861 ಸಪ್ಟಂಬರ್ 15 ರಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ, ವೆಂಕಟಲಕ್ಷ್ಮಮ್ಮರ ಮಗನಾಗಿ ಜನಿಸಿದರು. “ಕೈಗಾರೀಕರಣ ಇಲ್ಲವೆ ನಾಶ” ಎಂಬ ಘೋಷಣೆ ನೀಡಿ ಭದ್ರಾವತಿಯಲ್ಲಿ ಕಬ್ಬಿಣ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣಿ ಕೈಗಾರಿಕೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ ಸ್ಥಾಪಿಸಿದರು. ಅಲ್ಲದೆ ಕೃಷ್ಣರಾಜಸಾಗರ ಆಣೆಕಟ್ಟು ಇವರ ಮಹಾನ್ ಸಾಧನೆಯಾಗಿದೆ. ಇವರ ಸಾಧನೆ ಗುರುತಿಸಿ ಭಾರತ ಸರ್ಕಾರ 1955 ರಲ್ಲಿ ಭಾsÀರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿರು ಇವರೆ. ಇವರಿಂದ ಎ ವ್ಹಿಜನ್ ಆಪ್ ಪ್ರಾಸ್ಪರಸ್ ಮೈಸೂರು, Raಪಿಡ್ ಡೆವಲೆಪ್‍ಮೆಂಟ್ ಆಫ್ ಇಂಡಸ್ಟ್ರೀಸ್ ಇನ್ ಇಂಡಿಯಾ ಕೃತಿಗಳು ರಚಿಸಲ್ಪಟ್ಟವು. ಮಿರ್ಜಾ ಇಸ್ಮಾಯಿಲ್ ಇನ್ನೊರ್ವ ಪ್ರಮುಖ ದಿವಾನರು. ಇವರ ಅವಧಿಯಲ್ಲಿ ಬೆಂಗಳೂರಿನಲ್ಲಿ ಗಾಜಿನ ಕಾರ್ಖಾನೆ, ಪಿಂಗಾಣಿ ಪಾತ್ರೆ ಕಾರ್ಖಾನೆ, ಭದ್ರಾವತಿಯಲ್ಲಿ ಉಕ್ಕು ಹಾಗೂ ಕಾಗದ ಕಾರ್ಖಾನೆಗಳನ್ನು ಸ್ಥಾಪನೆಯಾದವು.





7.6 ಭಾರತದ ರಾಷ್ಟ್ರೀಯ ಚಳುವಳಿ .
ಭಾರತದ ರಾಷ್ಟ್ರೀಯ ಕಾಂಗ್ರೆಸ್ 1885 ರಲ್ಲಿ ಸ್ಥಾಪನೆಯಾಯಿತು. ಇದರ ಮೊದಲ ಅಧಿವೇಶನ ಬೊಂಬಾಯಿಯಲ್ಲಿ ನಡೆಯಿತು. ಪ್ರಖ್ಯಾತ ಕಲ್ಕತ್ತಾದ ಬ್ಯಾರಿಸ್ಟರ್ ಉಮೇಶಚಂದ್ರ ಬ್ಯಾನರ್ಜಿ ಇದರ ಅಧ್ಯಕ್ಷತೆ ವಹಿಸಿದ್ದರು. ಇದರ ಮುಖ್ಯ ಉದ್ದೇಶಗಳೆಂದರೆ ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವದು ಮತ್ತು ಬಲಪಡಿಸುವದು. ಭಾರತೀಯ ಜನಸಮೂಹಕ್ಕೆ ರಾಜಕೀಯ ಶಿಕ್ಷಣವನ್ನು ನೀಡುವದು  ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವದು.
1905 ರಲ್ಲಿ ಲಾಡ್ ಕರ್ಜನ್ ಹಿಂದೂ ಮುಸ್ಲಿಂರ ಐಕ್ಯತೆ ಒಡೆಯಲು ಬಂಗಾಳದ ವಿಭಜನೆ ಮಾಡಿದ. 
ಸಾತಂತ್ರ್ಯ ಹೋರಾಟದಲ್ಲಿ ಗೋಪಾಲ ಕೃಷ್ಣ ಗೋಖÀಲೆ, ದಾದಾಬಾಯಿ ನವರೋಜಿ, ಆನಂದಚಾರ್ಲು, ಸುರೇಂದ್ರನಾಥ ಬ್ಯಾನರ್ಜಿ ಇವರು ಮಂದಗಾಮಿ ನಾಯಕರಾದರೆ, ಲಾಲ, ಬಾಲ, ಪಾಲ ಪ್ರಮುಖ ತೀವೃಗಾಮಿಗಳಾಗಿದ್ದಾರೆ.
ಗಾಂಧೀಜಿಯವರು ಸತ್ಯ ಅಹಿಂಸೆ ಆದರ್ಶಗಳನ್ನು ಅನುಸರಿಸಿದರು. ಬಹುಬೇಗ ಮೂರು ಹೋರಾಟಗಳಲ್ಲಿ ತೊಡಗಿದರು. ಅವುಗಳೆಂದರೆ ಚಂಪಾರನ್ ಸತ್ಯಾಗ್ರಹ. ಇದರ ಮೂಲಕ ತೀನಕಾತಿಯಾ ಪದ್ದತಿ ಕೈಬಿಡುವಂತೆ ಮಾಡಿದರು.ಅಹವiದಾಬಾದ ಗಿರಣಿ ಮುಷ್ಕರದ ಮೂಲಕ ಕಾರ್ಮಿಕರ ವೇತನ ಹೆಚ್ಚಿಸುವಂತೆ ಮಾಡಿದರು, ಖೇಡ ಸತ್ಯಾಗ್ರದ ಮೂಲಕ ಶಕ್ಯರಿದ್ದವರು ಮಾತ್ರ ಕಂದಾಯ ನೀಡುವಂತಾಯಿತು.
ಜಲಿಯನ್ ವಾಲಾಬಾಗ ದುರಂತ 1919 ರಲ್ಲಿ ನಡೆಯಿತು. ಜನರಲ್ ಡಯರ ಪ್ರತಿಭಟನಾನಿರತರ ಮೇಲೆ ಗುಂಡಿನ ಮಳೆಗರೆದ. 
ಖಿಲಾಪತ್ ಚಳುವಳಿ ಮುಖಂಡರಾದ ಮೌಲಾನಾ ಅಜಾದ & ಹಕೀಂ ಅಜ್ಮಲ್ ಖಾನ ಬ್ರಿಟಿಷರ ವಿರುದ್ದ ಚಳುವಳಿಗೆ ಕರೆ ನೀಡಿದರು. ಐ ಎನ್ ಸಿ ಇದಕ್ಕೆ ಬೆಂಬಲ ನೀಡಿದ್ದರಿಂದ ಹಿಂದೂ ಮುಸ್ಲಿಂರ ನಡುವೆ ಗಾಢ ಸ್ನೇಹ ಬೆಳೆಯಿತು.
1920 ರಲ್ಲಿ ಗಾಂಧಿಜೀಯವರು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು. 1922 ರ ಚೌರಿ-ಚೌರಾ ಘಟನೆಯ ಹಿಂಸೆಯಿಂದ ನೊಂದು ಚಳುವಳಿಯನ್ನು ಹಿಂಪಡೆದರು. ಇದರಿಂದ ಅಸಂತುಷ್ಟರಾದ ಸಿ ಆರ್ ದಾಸ, ಮೊತಿಲಾಲ ನೆಹರು ಸೇರಿ ಸ್ವರಾಜ್ಯ ಪಕ್ಷ ಕಟ್ಟಿದರು.
1927 ರಲ್ಲಿ ಭಾರತೀಯರನ್ನು ಸಂತೈಸಲು ಬ್ರಿಟಿಷರು ಸೈಮನ್ ಆಯೋಗ ರಚಿಸಿದರು. ಇದರಲ್ಲಿ ಭಾರತೀಯ ಸದಸ್ಯರಿಲ್ಲದ ಕಾರಣ ಭಾರತೀಯರು ಸೈಮನ್ ಹಿಂದಿರುಗು  ಎಂಬ ಘೋಷಣೆ ಕೊಗಿದರು. ಇದಕ್ಕೆ ಬ್ರಿಟಿಷರು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಪ್ಪಿಗೆಯಾಗುವಂತೆ ಪ್ರಸ್ತಾವನೆ ಸಲ್ಲಿಸುವಂತೆ ಸವಾಲು ಹಾಕಿದರು. 1928 ರಲ್ಲಿ ನೆಹರು ವರದಿ ಸÀಲ್ಲಿಕೆಯಾದಾಗ ಬ್ರಿಟಿಷರು ಇದನ್ನು ನಿರ್ಲಕ್ಷಿಸಿದರು. 1929 ರ ಲಾಹೋರ ಕಾಂಗ್ರೆಸ್ ಆಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಗುರಿ ಎಂದು ಘೋಷಿಸಿಸಲಾಯಿತು. 
ಗಾಂಧೀಜಿಯವರು 12 ಮಾರ್ಚ 1930 ರಂದು 78 ಜನರೊಂದಿಗೆ ಸಬರಮತಿ ಆಶ್ರಮದಿಂದ ದಂಡಿ ಯಾತ್ರೆ ಆರಂಬಿಸಿ ದಂಡಿಯನ್ನು 240 ಮೈಲು ಕ್ರಮಿಸಿ ಹಿಡಿ ಉಪ್ಪು ತಯಾರಿಸಿ ಉಪ್ಪಿನ ಕಾನೂನು ಮುರಿದರು. ನಂತರ ಮೂರು ದುಂಡು ಮೇಜಿನ ಸಮ್ಮೇಳನ ನಡೆದವು. 2ನೇ ಸಮ್ಮೇಳನದಲ್ಲಿ ಮಾತ್ರ ಕಾಂಗ್ರೆಸ್ ಪ್ರತಿನಿಧಿಯಾಗಿ ಗಾಂಧೀಜಿಯವರು ಭಾಗವಹಿಸಿದ್ದರು. 1932 ರಲ್ಲಿ ಮಹಾತ್ಮಾಗಾಂಧಿ & ಅಂಬೇಡ್ಕರ ಪೂನಾ ಒಪ್ಪಂದಕ್ಕೆ ಸಹಿ ಹಾಕಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಥಮ ಅಧಿವೇಶನ 1920 ರಲ್ಲಿ ಧಾರವಾಡದಲ್ಲಿ ನಡೆಯಿತು. ಗಂಗಾದರ ರಾವ್ ದೇಶಪಾಂಡೆ ಈ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಇವರು ಕರ್ನಾಟಕದ ಕೇಸÀರಿ ಎಂದು ಪ್ರಸಿದ್ದರಾಗಿದ್ದರು.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅÀಧಿವೇಶನದ ಅಧ್ಯಕ್ಷತೆಯನ್ನ ಗಾಂಧಿಜೀಯವರು ವಹಿಸಿದ್ದರು. ಇದು ಗಾಂಧಿಜೀಯವರು ಭಾಗವಹಿಸಿದ ಏಕೈಕ ಕಾಂಗ್ರೆಸ್ ಅದಿವೇಶನವಾಗಿದೆ. 
ನೇತಾಜಿ ಎಂದು ಪ್ರಸಿದ್ದರಾದ ಸುಭಾಷಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು.ಜಪಾನಿನ ಸಹಾಯದೊಂದಿಗೆ ಅಂಡಮಾನ & ನಿಕೋಬಾರ ದ್ವೀಪಗಳನ್ನು ವಶಪಡಿಸಿಕೊಂಡು 1943 ರಲ್ಲಿ ತ್ರಿವರ್ಣ ದ್ವಜ ಹಾರಿಸಿದರು. ನಂತರ ಬೋಸರು ವಿಮಾನ ಅಪಘಾತದಲ್ಲಿ ನಿಧನರಾದರು. ಬ್ರಿಟಷರು ಐ ಎನ್ ಎ ಸ್ಯನಿಕರನ್ನು ಸೆರೆ ಹಿಡಿದು ದೇಶ ದ್ರೋಹದ ಆರೋಪ ಹೊರೆಸಿ ವಿಚಾರಣೆಗೆ ಒಳಪಡಿಸಿದರು. ಐ.ಎನ್.ಎ ಟ್ರಯಲ್ ಎಂದು ಪ್ರಸಿದ್ದವಾದ ಪ್ರಥಮ ವಿಚಾರಣೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಿತು.    



1885 ರಿಂದ 1920 ರ ವರೆಗಿನ ರಾಷ್ಟ್ರೀಯ oಚಳುವಳಿಯನ್ನು ವಿಶದಪಡಿಸಿರಿ

1885 ರಿಂದ 1920 ರ ವರೆಗಿನ ರಾಷ್ಟ್ರೀಯ ಚಳುವಳಿಯನ್ನು ವಿಶದಪಡಿಸಿರಿ

         ಭಾರತದ ರಾಷ್ಟ್ರೀಯ ಚಳುವಳಿ ಯಾವಾಗ ಪ್ರಾರಂಭವಾಯಿತೆಂದು ಹೇಳುವದು ಚರ್ಚಾಸ್ಪದ ವಿಷಯವಾದರೂ ಭಾರತದ ರಾಷ್ಟ್ರೀಯ ಕಾಂಗ್ರಸ್ ನ ಸ್ಥಾಪನೆಯೊಂದಿಗೆ ಖಚಿತವಾಗಿ ಪ್ರಾರಂಭವಾಯಿತೆಂದು ಹೇಳಬಹುದು.

        ಅಲನ್ ಆಕ್ಟೇವಿಯನ್ನು ಹ್ಯೂಮ್ 1À885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಲು ಪ್ರೇರೇಪಿಸಿದ. ಇದರ ಮೊದಲ ಅಧಿವೇಶನ ಬೊಂಬಾಯಿಯಲ್ಲಿ ನಡೆಯಿತು. ಮೊದಲ ಅಧ್ಯಕ್ಷರು ಉಮೇಶ ಚಂದ್ರ ಬ್ಯಾನರ್ಜಿ, ಇದರಲ್ಲಿ ಭಾರತದ ವಿವಿಧ ಭಾಗಗಳಿಂದ 72 ಪ್ರತಿನಿಧಿಗಳು ಭಾಗವಹಿಸಿದ್ದರು ಇದರ ಮುಖ್ಯ ಉದ್ದೇಶಗಳೆಂದರೆ ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವದು,ಧರ್ಮ ಜಾತಿ,ಪ್ರಾಂತ್ಯ ಮತ್ತಿತರ ಪೂರ್ವಾಗ್ರಹ ಹೋಗಲಾಡಿಸುವದು,ಭಾರತೀಯ ಜನಸಮೂಹಕ್ಕೆ ರಾಜಕೀಯ ಶಿಕ್ಷಣ ನೀಡುವದು ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವದು ಮುಂತಾದವು.

        1885 ರಿಂದ 1905 ರ ಅವದಿಯನ್ನು ಮಂದಗಾಮಿಗಳ ಅವದಿ ಎಂದು ಕರೆಯುತ್ತಾರೆ ಈ ಅವದಿಯ ಪ್ರಮುಖರೆಂದರೆ ದಾದಾ ಬಾಯಿ ನವರೋಜಿ, ಗೋಪಾಲಕ್ರಷ್ಣ ಘೋಖಲೆ, ಸುರೇಂದ್ರ ನಾಥ ಬ್ಯಾನರ್ಜಿ, ಫಿರೋಜಷಾ ಮೆಹತಾ ಮುಂತಾದವರು ಇವರು ಬ್ರಿಟಿಷರ ಆಡಳಿತದಲ್ಲಿ ನಿಷ್ಠೆ ವ್ಯಕ್ತಪಡಿಸಿದರು ಮತ್ತು ಪ್ರಾರ್ಥನೆ ,ಬಿನ್ನಹಗಳ ಮೂಲಕ ಬ್ರಟಿಷ ಸರಕಾರದ ಮೇಲೆ ಒತ್ತಡ ತರುವ ಉದ್ದೇಶ  ಹೊಂದಿದ್ದರು.ದಾದಾಬಾಯಿ ನವರೋಜಿ 1866 ರಲ್ಲಿ ಈಸ್ಟ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು ಇದು ಭಾರತಿಯರಿಗೆ ಅನಕೂಲವಾಗುವ ಕಾನೂನು ಜಾರಿಗೆ ತರುವಂತೆ ಪ್ರಯತ್ನಿಸತು. ಆದರೆ ಬ್ರಿಟಿಷರು ಕಾಂಗ್ರೆಸ್‍ನ್ನು ರಾಜದ್ರೋಹದ ಕಾರ್ಖಾನೆ ಎಂದು ಕರೆದರು. ಈ ಹಂತದಲ್ಲಿ ತೀವ್ರತರ ಬದಲಾವಣೆ ಸಾದ್ಯವಾಗದಿದ್ದರು ಬ್ರಿಟಷರ ಶೋಷಣಾತ್ಮಕ ವಸಾಹತುಷಾಹಿ ಅಡಳಿತ ಮತ್ತು ನೀತಿಯನ್ನು ಹೊರಗೆಳಿದರು.

   1905 ರಿಂದ 1920 ರ ಅವದಿಯನ್ನು ತೀವ್ರಗಾಮಿಗಳ ಯುಗ ಎಂದು ಕರೆಯಲಾಗಿದೆ. ಇವರು ಹೋರಾಟ ಪ್ರವತ್ತಿಯುಳ್ಳುವರಾಗಿದ್ದರು ಈ ಅವದಿಯ ಪ್ರಮಖರೆಂದರೆ ಬಾಲಗಂಗಾಧರ ತಿಲಕ,ಲಾಲಾ ಲಜಪತರಾಯ ಮತ್ತು ಬಿಪಿನ ಚಂದ್ರಪಾಲ.

ತೀವ್ರ ಗಾಮಿಗಳ ಉದಯಕ್ಕೆ ಕಾರಣವೆಂದರೆ.

1) ಮಂದಗಾಮಿಗಳು ತಮ್ಮ ಸಂವಿಧಾನಾತ್ಮಕ ಕ್ರಮಗಳಿಂದ ಯಾವುದೆ ಫಲಿತಾಂಶ ಸಾಧಿಸುವಲ್ಲಿ ವಿಫಲರಾದರು.

2) 1896-1901 ರ ವರೆಗೆ ಬಂದ ಕ್ಷಾಮ ನಿರ್ವಹನೆಯಲ್ಲಿ ಉದಾಸೀನತೆ ತೋರಿಸಿ ಸಾವಿರಾರು ಭಾರತಿಯರ ಮರಣಕ್ಕೆ ಕಾರಣರಾದರು.

3) ಭಾರತದ ರಾಷ್ಟ್ರೀಯವಾದಿಗಳ ಪ್ರಯತ್ನ  ಭಾರತೀಯರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನ ಮೂಡಿಸಿದವು

4) ಅಂತರಾಷ್ಟ್ರೀಯ ಪ್ರಭಾವ: ಇಟಲಿ, ಜರ್ಮನಿ ಎಕೀಕರಣ ಹಾಗೂ ಸ್ವಾತಂತ್ರ್ಯ,ರಷ್ಯ ಸೊಲು,ಟರ್ಕಿ,ಪರ್ಷಿಯಾಗಳ ರಾಷ್ಟ್ರೀಯ ಚಳುವಳಿಗಳು

 ಈ ಅವದಿಯ ಪ್ರಮುಖ ಘಟನೆಗಳೆಂದರೆ

1) ಬಂಗಾಳದ ವಿಭಜನೆ 1905- ಹಿಂದೂ ಮುಸ್ಲಿಮರಲ್ಲಿ ಒಡಕನ್ನುಂಟು ಮಾಡವ ಉದ್ದೇಶವನ್ನು ಹೊಂದಿದ್ದರು ಇದರಿಂದ ವಿಭಜನಾ ಚಳುವಳಿ ಪ್ರಾರಂಭವಾದವು.ವಿದೇಶಿ ಬಹಿಷ್ಕಾರ ಮತ್ತು ಸ್ವದೇಶಿ ಚಳುವಳಿ ಪ್ರಾರಂಭವಾದವು.

2) ಸೂರತ್ ಒಡಕು 1907- ಸುರತ್ ಅದಿವೇಶನದಲ್ಲಿ ಮಂದಗಾಮಿಗಳು ರಾಸ್ ಬಿಹಾರಿ ಘೋಸ್ ರನ್ನು ,ತೀವ್ರ ಗಾಮಿಗಳು ಲಾಲ ಲಜಪತರಾಯರನ್ನು ಅಧ್ಯಕ್ಷರನ್ನಾಗಿ ಮಾಡಲು ಬಯಸಿದರು. ಎರಡು ಗುಂಪು ಹೊಂದಾಣಿಕೆಯಾಗಲಿಲ್ಲಿ ಇದು ಕಾಂಗ್ರಸ್ ನಲ್ಲಿ ಒಡಕನ್ನುಂಟು ಮಾಡಿತು.ತೀವ್ರಗಾಮಿಗಳನ್ನು ಸೆದೆ ಬಡೆಯಲು ಬ್ರಿಟಿಷರು ಅನೇಕ ಕ್ರಮ ಕೈಕೊಂಡರು.

3) ಕ್ರಾಂತಿಕಾರಿ ಚಟುವಟಿಕೆಗಳು: ಬ್ರಿಟಿಷರ ದಮನಕಾರಿ ಚಟುವಟಿಕೆಗಳು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಯಿತು.ಗುಪ್ತ ಸಂಘಗಳು ತಲೆ ಎತ್ತದವು ಇವರು ಆಡಳಿತದಲ್ಲಿ ಕೊಲಾಹಾಲ ಉಂಟುಮಾಡಿದರೂ ಬ್ರಿಟಿಷರು ಅವರನ್ನು ಹತೋಟಿಗೆ ತಂದರು

4)ಕೋಮುವಾದದ ಬೆಳವಣಿಗೆ:ನವಾಬ ಅಗಾಖಾನ್ ಹಾಗು ನವಾಬ ಮೊಹ್ಸನ್ ಉಲ್ ಮುಲ್ಕ 1906 ರಲ್ಲಿ ಮುಸ್ಲಿಮ್ ಲೀಗ ಸ್ಥಾಪಿಸಿದರು ಮತ್ತು ಮಸ್ಲಿಮರಿಗೆ ಪ್ರತ್ಯೇಕ ಮತದಾನ ಕೇಳಿದರು 1909 ರಲ್ಲಿ ಪಂಜಾಬ ಹಿಂದೂ ಸಭಾ ಸ್ಥಾಪನೆ. ಇವೆರಡು ಕಾಂಗ್ರೆಸ್ ವಿರೋಧಿಗಳಾಗಿದ್ದರು

5)ಮಾರ್ಲೆ-ಮಿಂಟೊ ಸುಧಾರಣೆಗಳು 1909-ಈ ಕಾಯಿದೆ ಕೇಂದ್ರ ಹಾಗೂ ಪ್ರಾಂತೀಯ ಶಾಸಕಾಂಗ ವಿಸ್ತರಿಸಲು ಸೂಚಿಸಿತು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ ಕಲ್ಪಿಸಿತು.

6)ಹೋಮ್ ರೂಲ್ ಚಳುವಳಿ 1916-ಬಾಲ ಗಂಗಾಧರ ತಿಲಕ ಮತ್ತು ಅನಿಬೆಸೆಂಟ ಇದನ್ನು ಪ್ರಾರಂಭಿಸಿದರು.ಕರಪತ್ರ ಧಾರ್ಮಿಕ ಸಮಾರಂಭಗಳ ಮೂಲಕ ಸಂದೆಶ ಸಾರಿದರು. ತಿಲಕರು “ಸ್ವರಾಜ್ಯ ನನ್ನಜನ್ಮಸಿದ್ದ ಹಕ್ಕು ಅದನ್ನುಪಡೆದೇ ತೀರುತ್ತೇನೆ” ಎಂದು ಘೋಷಿಸಿದರು

7) ಮಾಂಟಿಂಗೋ ಜೆಮ್ಸ ಪಡ್ ಸುಧಾರನೆಗಳು: ಈ ಸುಧಾರಣೆಗಳು ದ್ವಿಸದನ ಶಾಸನಸಭೆ ಜಾರಿಗೊಳಿಸಿತು ಕೆಳಮನೆಯಲ್ಲಿ 144 ರಲ್ಲಿ 40 ಚುನಾಯಿತ 40 ನೇಮಿತ ಮೇಲ್ಮನೆಯಲ್ಲಿ 60ರಲ್ಲಿ 34 ಚುನಾಯಿತ 26 ನೇಮಿತ.

  ಹೀಗೆ 1885 ರಿಂದ 19020 ರ ವರೆಗೆ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು ಬ್ರಿಟಿಷರ ಮೇಲೆ ತಮ್ಮದೆ ಆದ ರೀತಿಯಲ್ಲಿ ಒತ್ತಡ ಹಾಕಿ ಭಾರತದಲ್ಲಿ ಕೆಲವು ಸಾಂವಿಧಾನಾತ್ಮಕ ಸುಧಾರಣೆ ತರುವಲ್ಲಿ ಸ್ವಲ್ಪ ಮಟ್ಟಿಗೆ ಯಶ ಕಂಡರು.



ವೇದನೆ

ತವರಿಗೆ ಬಾ ಅಂದೆ ತಾವರೆ
ಎಸಳೆಂದೇ  ತಾನಿಲ್ಲವೆಂದ
ತನುವೆಲ್ಲಿಂದ ತಡ ಮಾಡಬೇಡ
ತಾಳಿ ಸುಡಬೇಡ

ನಿನ್ನ ಮಾತು  ಮಲ್ಲಿಗೆ
ಮನಸು ಬಿಚ್ಚಿ ಮಾತಾಡಿ
ಮರೆಯಾಗಿ ನೀ ನಿಂತೆ
ಮನೆಯಲ್ಲ ಭೂತ ಸಂತೆ


ನೀನಿಟ್ಟ  ತಿಲಕ ನೀನುಟ್ಟ ಸೀರೆ
ಸಾಲುಗಟ್ಟೆ ಕಾಡತಾವು
ನೆನಪಿನ ಕದನ ನಾ ಸೋತೆ
ವೇದನೆ ಬಾರ ಸುಡತಾವು

ನನಗಿಲ್ಲ ನೂರು ದಾರಿ
ನಿನೊಂದೆ ರಹದಾರಿ
ಕಲ್ಲು ಮುಳ್ಳಿಲ್ಲ ಹೂವೆ
ಅದರ ತುಂಬೆಲ್ಲ

ನನ್ನ ಹೃದಯದ ಗೂಡು
ನೀನಿಲ್ಲದ  ಬರಿ ಸುಡುಗಾಡು
ನಿನ್ನನ್ನಲ್ಲದೆ ಇನ್ನಾರನ್ನ ಕಾಣೆ
ದೇವರಾಣೆ ನೀನೇ ಜಾಣೆ 

ನಿನ್ನ ನಾಸಿಕದ ಮೇಲೆ
ನರ್ತಿಸುವ ಕನ್ನಡಕ ನೋಡಿ
ನಾ ನಡುಗಲಿಲ್ಲವೇನು
ಮುತ್ತಿಟ್ಟು ಸಂತೈಸಲಿಲ್ಲವೇನು



          ಬಸನಗೌಡ ಗೌಡರ

Saturday, December 22, 2018

ಕಾಲಾನುಕ್ರಮಣಿಕೆ ಭಾರತ 1885 ರಿಂದ



1885 - ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ (ಎ.ಓ.ಹ್ಯೂಮ್)
* 1885-1905 - ಮಂದಗಾಮಿಗಳ ಕಾಲ
* 1905-1919 - ತೀವ್ರಗಾಮಿಗಳ ಕಾಲ
* 1905 - ಬಂಗಾಲದ ವಿಭಜನೆ
* 1905 - ಅಕ್ಟೋಬರ್ 16 - ರಾಷ್ಟ್ರೀಯ ಶೋಕ ದಿನಾಚರಣೆ 

* 1906 - ಢಾಕಾದಲ್ಲಿ ಸರ್ ಆಗಾಖಾನ್ & ಢಾಕಾದ ನವಾಬ ಸಲಿಮುಲ್ಲಾರಿಂದ ಮುಸ್ಲಿಂ ಲೀಗ್ ಸ್ಥಾಪನೆ .
* 1907 - ಸೂರತ್ ಒಡಕು
* 1909 - ಮಿಂಟೋಮಾರ್ಲೆ ಸುಧಾರಣೆಗಳು  - ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ      
* 1911 - ಬಂಗಾಳ ವಿಭಜನೆ ರದ್ದು
* 1915 - ಗಾಂಧೀಜಿ ದ.ಆಫ್ರಿಕಾದಿಂದ ಭಾರತಕ್ಕೆ
* 1916 - ಅಹಮದಾಬಾದ್ ಬಳಿ ಸಬರಮತಿ ಆಶ್ರಮ ಸ್ಥಾಪನೆ
* 1916 - ಲೋಕಮಾನ್ಯ ತಿಲಕರು & ಆ್ಯನಿ ಬೆಸೆಂಟರಿಂದ ಹೋಂ ರೂಲ್ ಚಳವಳಿ
* 1917 - ಬಿಹಾರದ ಚಂಪಾರಣ್ ಹೋರಾಟ (ನಾಯಕನಾಗಿ ಡಾ. ಬಾಬು ರಾಜೇಂದ್ರ ಪ್ರಸಾದ್)
* 1918 - ಗುಜರಾತಿನ ಖೇಡಾ ರೈತರ ಹೋರಾಟ (ನಾಯಕನಾಗಿ ಸರ್ದಾರ್ ವಲ್ಲಭಾಯಿ ಪಟೇಲ್)
* 1919 ರಿಂದ 1947 - ಗಾಂಧಿ ಯುಗ
* 1919 - ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ
* 1919 ಏಪ್ರೀಲ್ 13 - ಜಲಿಯನ್ ವಾಲಾಬಾಗ್ ಹತ್ಯಾಕಾಂಡ
* 1919 ಫೆಬ್ರುವರಿ - ರೌಲಟ್ ಕಾಯಿದೆ
 * 1919 - ಖಿಲಾಫತ್ ಚಳವಳಿ - ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ

 

* 1920 - 1922 - ಅಸಹಕಾರ ಚಳವಳಿ
* 1922 - ಚೌರಿಚೌರ ದುರಂತ
* 1924 -1929 – ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು
* 1927 - ಸಂವಿಧಾನ ರಚನೆಗಾಗಿ ಮೋತಿಲಾಲ್ ನೆಹರು ಸಮಿತಿ/ವರದಿ
* 1928 - ಭಾರತಕ್ಕೆ ಸೈಮನ್ ನಿಯೋಗ ಭೇಟಿ
* 1929 - ಪೂರ್ಣ ಸ್ವರಾಜ್ಯದ ಘೋಷಣೆ
* 1930 ಜನವರಿ 26 - ಸಂಪೂರ್ಣ ಸ್ವರಾಜ್ಯದ ದಿನಾಚರಣೆ
* 1930 ಮಾರ್ಚ್ 12 - ನಾಗರಿಕರ ಕಾಯ್ದೆ ಭಂಗ ಚಳವಳಿ/ದಂಡಿ ಉಪ್ಪಿನ ಸತ್ಯಾಗ್ರಹ
* 1930 - 1932 - ಲಂಡನ್ನಿನ ದುಂಡು ಮೇಜಿನ 3 ಸಮ್ಮೇಳನಗಳು 
* 1932 - ಪೂನಾ ಒಪ್ಪಂದ
*1932 - ರಾಮ್ಸೆ ಮ್ಯಾಕ್ಡೊನಾಲ್ಡ್ ರಿಂದ - ಮತೀಯ ತೀರ್ಪು / ಕಮ್ಯೂನಲ್ ಎವಾರ್ಡ್ ಘೋಷಣೆ.
* 1939 – ಸುಭಾಷ್ ಚಂದ್ರ ಬೋಸ್ ರಿಂದ `ಫಾರ್ವರ್ಡ್ ಬ್ಲಾಕ್' ಪಕ್ಷದ ಸ್ಥಾಪನೆ.
* 1939 - 1945 - ಎರಡನೇ ಮಹಾಯುದ್ಧ 
* 1942 ಮಾರ್ಚ್ 8 - ಭಾರತ ಬಿಟ್ಟು ತೊಲಗಿ ಚಳವಳಿ
* 1947 ಜೂನ್ 3 - ಲಾರ್ಡ್ ಮೌಂಟ್ ಬ್ಯಾಟನ್ ನಿಂದ ಅಧಿಕಾರ ಹಸ್ತಾಂತರದ ಘೋಷಣೆ
* 1990 - ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ

ತೀವ್ರವಾದಿಗಳ ಉದಯಕ್ಕೆ ಕಾರಣಗಳು

1) ಮಂದಗಾಮಿಗಳ ಸಂವಿಧಾನಾತ್ಮಕ ಕ್ರಮಗಳು ವಿಫಲವಾದವು
2) ಕ್ಷಾಮ ನಿರ್ವಹಣೆಯಲ್ಲಿ ಬ್ರಿಟಿಷರ ಉದಾಸೀ
ನತೆ
3) ಲಾರ್ಡ್  ಕರ್ಜನ್ನನ ಪ್ರತಿಗಾಮಿ ದೋರಣೆ
4) ರಾಷ್ಟ್ರೀಯವಾದಿಗಳು ಭಾರತೀಯರಲ್ಲಿ ತುಂಬಿದ ಆತ್ಮವಿಶ್ವಾಸ ಹಾಗೂ ಆತ್ಮಾಭಿಮಾನ
5) ಅಂತಾರಾಷ್ತ್ರೀಯ ಪ್ರಭಾವ
ಪ್ರಮುಖ   ಘಟನೆಗಳು
1) ಬಂಗಾಳದ ವಿಭಜನೆ
2) ಸೂರತ್ ಒಡಕು
3) ಕ್ರಾಂತಕಾರಿಗಳ ಚಟುವಟಿಕೆಗಳು
4) ಕೋಮುವಾದದ ಬೆಳವಣಿಗೆ
5) ಮಾರ್ಲೆ ಮಿಂಟೋ ಸುಧಾರಣೆಗಳು
6) ಹೋಮ್ ರೂಲ್ ಚಳುವಳಿ
7) ಮಾಂಟಿಗೋ ಜೇಮ್ಸಫರ್ಡ್ ಸುಧಾರಣೆಗಳು 

Friday, December 21, 2018

ಯಾವ ಜನ್ಮ ಪುಣ್ಯ ಫಲವು

ಯಾವ ಜನ್ಮದ  ಪುಣ್ಯ ಫಲವು
ನಾವು ಧನ್ಯರು
ಭಾರತಾಂಭೆ  ಉದರದಲ್ಲಿ ಜನಿಸಿ
ಬಂದವರು

ಹಿಮಾಲಯ ಗಿರಿ ಕಂದರ
ನಮಗೆ ಹಂದರ
ಮಲಯ ಮಾರುತ ತಾಗಿ
ಚಾಮರ ಬಯಲು ಭಾರತ ಆಲಯ ,

ಮಹಾಭಾರತ ರಾಮಾಯಣ
ಧರ್ಮ ಶ್ರೇಷ್ಟರ ರಾಮ ನಿಷ್ಠರ
ಕೃಷ್ಣ ಪರಮಾತ್ಮರು
ಮಾರ್ಗ  ತೋರಿದ  ಶ್ರೇಷ್ಠ ಆಲಯ

ಹಿಂದೂ ಮುಸ್ಲಿಮ್ ಕ್ರೈಸ್ತ
ಪಾರ್ಸಿ ಜೈನ ಬೌದ್ಧರ ನಿಲಯ
ಸರ್ವ ಶಾಂತಿ ಸಹಿಷ್ಣು
ಭಾವದ ಭಕ್ತಿಯ  ಆಲಯ

ಬಂಗಾಳಿ ತಮಿಳು ಗುಜರಾತಿ
ಮರಾಠಿ ಕನ್ನಡ ಹಿಂದಿ
ಸೊಗಡಿನ ಬೆಡಗಿನ ನುಡಿಗಾನ
ಇದೆ ನಮಗೆ ಸವಿಗಾನ

ಇಜಿಪ್ತ  ಚೀನಾ ಮೆಸೊಪೊಟೇಮಿಯಾ
ಪುರಾತನ ನಾಗರಿಕತೆಯ ಸಖ್ಯ
ಮಿಕ್ಕಿ  ಬೆಳೆದಾ ಇತಿಹಾಸ ಸಾರುವ
ಶ್ರೇಷ್ಠ ಪರಂಪರೆ ಸವಿವರ

ಕಡಲ ತೀರ ಅಡವಿ ಸಾಲು
ಒಡಲೊಳದಿರು ಬಂಗಾರ ತೇರು
ಸಿಂಗಾರಕೆ  ಇದಕ್ಕಿಂತ ಯಾರಿಲ್ಲ
ಸರಿಸಮಾನ ಸವಾಲು














ಚೆಲುವೆ

ಚೆಲುವೆ,ನಿನ್ನೊಲುವೆ
ನನ್ನ ಗೆಲುವು
ನಾಸಿಕದ ಮೇಲೆ ನರ್ತಿಸುವ
ನಿನ್ನ ಕನ್ನಡಕ  ನಾನಾಗಬಲ್ಲೆ
ನ್ನಡಕಕ್ಕೆ ತಾಕುವಾ ಮುಂಗೂದಲಿಗೆ
ತಂಗಾಳಿ ನಾನಾಗಬಲ್ಲೆ

ನವಿಲಿನ ನರ್ತನ ನಾಚಿಸುವ
ನಿನ್ನ ನಡಿಗೆಗೆ ನಾ
ಪಾದಾರಕ್ಷಿ ಯಾಗಬಲ್ಲೆ
ನೀ ತೋರಿದಾ ದಾರಿಯಲ್ಲಿ
ನಾ ನಡೆವೆ ಪ್ರೀತಿಯಲ್ಲಿ

ಬಡವನಲ್ಲ ಆಗಸದ
ನಕ್ಷತ್ರದಲ್ಲಿ  ದಾರಿ
ತೋರಿಸಬಲ್ಲೆ
ಕಡಲ ಉಬ್ಬರವ ಮೀರಿ
ಚಲಿಸಬಲ್ಲೆ
ಸೂರ್ಯಾಸ್ತಮಾನದ
ದೂಳಾಗಬಲ್ಲೆ
ಸೂರ್ಯೋದಯದ
ಎಲೆಗಳ  ಇಬ್ಬನಿ
ನಾನಾಗ ಬಲ್ಲೆ

ನಿನ್ನೊಲವು ನನ್ನ
ಬಲ ನಾ ನಿಂತಿಲ್ಲ
ಕವಲು ದಾರಿಯಲ್ಲಿ
ನನ್ನದೊಂದೇ ದಾರಿ
ಅದು ರಹದಾರಿ
ಕಲ್ಲು ಮುಳ್ಳುಗಳಿಲ್ಲ
ಕಂದಕಗಳಂತೂ
ಇಲ್ಲವೇ ಇಲ್ಲ





  
















Sunday, December 16, 2018

ಕಾರ್ಗಿಲ್ ಕದನ

ಕಾರ್ಗಿಲ್ನಾ ಕ್ರಮಣದ  ಕುನ್ನಿಗಳೇ
ಕತ್ತಲೆ ಕವಿದಿದೆ ನಿಮಗೆ
ದಾಯಾದಿಗಳ ಮನೆಗೆ ದಾರಿ ಮಾಡಿ
ಧರ್ಮವ ಮೆರೆದೆವು ನಿಮಗೆ

ದ್ರಾಸ್ ಬಟಾಲಿಕ್ ಗಡಿ ನಾಡಿಗೆ
ಗುಂಡಿನ ಮಳೆಗರೆದಿರಿ ನಮಗೆ
ಸಪ್ತ  ಖಂಡಕೆ ಶಾಂತಿ ಹೇಳಿದ ನಾಡಿಗೆ
ಸವಾಲು ಬೇರೆ ಅಡಿಗಡಿಗೆ
         ಸಾಕಿಲ್ಲವೇನೋ ಆ ಸೋಲುಂಡ ದಿನ
         ಮರೆತಿರಾ  ಇತಿಹಾಸದ ಮಣ್ಣು ಮುಕ್ಕಿದಾ ದಿನಾ
 ಶಾಂತಿಪ್ರಿಯರು ಕ್ರಾಂತಿ ಬಯಸೆವು
ಅಶಾಂತಿ ಬಯಸಿದರೆ ಬಿಡೆವು
        ದ್ವೇಷದ ಜ್ವಾಲೆ ಹೊತ್ತಿಸುವರು ನಿಮಗೆ
         ದ್ವಾಸಿ ಬೇಯಿಸುವರು  ತಮಗೆ
ದಾಸರಾಗುವ ಮುನ್ನ ಇತಿಹಾಸ ಬರೆಯಿರಿ
ಬ್ರಿಟಿಷರು ಬಿತ್ತಿದ ಧರ್ಮ ಜಾತಿ ಜ್ವರ
ತಂದಿತು ಗಡಿನಾಡಿಗೆ ಗುಂಡಿನ ಫಲ
ಕಡಿಯಿರಿ ಆ ಘೋರ ಮರ
ಪಡೆಯಿರಿ ಶಾಂತಿಯ ವರ

Saturday, December 15, 2018

ಭಾರತದ ರಾಷ್ಟ್ರೀಯತೆ ಬೆಳವಣಿಗೆಗೆ ಪ್ರಮುಖ ಅಂಶಗಳು

ಭಾರತದ ರಾಷ್ಟ್ರೀಯತೆ ಬೆಳವಣಿಗೆಗೆ ಪ್ರಮುಖ ಅಂಶಗಳು
1) ಭಾರತದ ಆರ್ಥಿಕ ಹಿನ್ನೆಡೆಗೆ ಬ್ರಿಟಿಷ ಆಳ್ವಿಕೆಯೇ ಕಾರಣವೆಂದು ಪರಿಗಣಿಸಲಾಯಿತು
2) ಭಾರತದಲ್ಲಿ ಬ್ರಿಟಿಷರು ರಾಜಕೀಯ ಐಕ್ಯತೆ ಸ್ಥಾಪಿಸಿ
ಏಕರೂಪದ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ತಂದರು.
3)ಸಾಂಪ್ರದಾಯಿಕ ಶಿಕ್ಷಣ  ವ್ಯವಸ್ಥೆಯ ಏಕಸ್ವಾಮ್ಯತೆಯನ್ನು ಇಂಗ್ಲೀಷ ಶಿಕ್ಷಣ ಮುರಿದು ರಾಷ್ಟ್ರೀಯತೆ ಪ್ರೇರೇಪಿಸಿತು
4)ಬ್ರಿಟಿಷರು ತಮ್ಮನ್ನು ಶ್ರೇಷ್ಠ ಜನಾಂಗವೆಂದು ಭಾವಿಸಿದರು.
5)ಭಾರತದಲ್ಲಿ ರಾಜಕೀಯ ಪ್ರಭುತ್ವ ಸ್ಥಾಪಿಸಲು ತಂದ ಪ್ರತಿಗಾಮಿ ದೋರಣೆಗಳು
6) 19 ನೇ ಶತಮಾನದ  ಪತ್ರಿಕೋದ್ಯಮ  ಮತ್ತು 20 ನೇ  ಶತಮಾನದ ಸಾಹಿತ್ಯ ರಾಷ್ಟ್ರೀಯತೆ ಪ್ರಚೊದಿಸಿತು 




Friday, December 14, 2018

ಪ್ರಶ್ನೆ ನಂ. 37 ಭಾರತ


ಕಾಲಾನುಕ್ರಮದಲ್ಲಿ ಬರೆಯಿರಿ

                                                                                    ಘಟನೆ                                    ಉತ್ತರಗಳು
1)
ಎ) ಕಬೀರರ ಜನನ     1) 4ನೇ ಬೌದ್ಧಮ.                      ಹಾಸಮ್ಮೇಳನ

ಬಿ) ಬಂಗಾಳದ ವಿಭಜನೆ    2) ತಕ್ಕೊಳಂ ಕದನ

ಸಿ) 4ನೇ ಬೌದ್ಧ ಮಹಾಸಮ್ಮೇ 3) ಕಬೀರರ ಜನನ

ಡಿ) ತಕ್ಕೊಳ0 ಕದನ              4) ಮೆಕಾಲೆ ವರದಿ

ಇ) ಮೆಕಾಲೆಯ ವರದಿ           5) ಬಂಗಾಳದ ವಿಭಜನೆ



2) 
ಎ) ಶಿವಾಜಿಯ ಕಿರಿಟ ಧಾರಣೆ  1) ಭಾರತಕ್ಕೆ.     ಆರ್ಯರ ಆಗಮನ

ಬಿ) ಬೆಳಗಾವಿ ಕಾಂಗ್ರೆಸ್ ಅಧಿವೇಶನ 2) ಗೋಳಗುಮ್ಮಟ ನಿರ್ಮಾಣ

ಸಿ) ಜೆ.ವಿ.ಪಿ. ಸಮಿತಿ           3) ಶಿವಾಜಿಯ ಕಿರೀಟ ಧಾರಣೆ
ಡಿ) ಭಾರತಕ್ಕೆ ಆರ್ಯರ ಆಗಮನ 4) ಬೆಳಗಾವಿಕಾಂಗ್ರೇಸ್                                                       ಅಧಿವೇಶನ

ಇ) ಗೋಳಗುಮ್ಮಟ ನಿರ್ಮಾಣ      5) ಜೆ.ವ್ಹಿ.ಪಿ. ಸಮಿತಿ


3) 
ಎ) ರಾಷ್ಟ್ರಕೂಟರ ವಂಶದ ಸ್ಥಾಪನೆ  1) ರಾಷ್ಟ್ರಕೂಟ                                                              ವಂಶದ ಸ್ಥಾಪನೆ

ಬಿ) ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ                                                                2)ಮೀರಾಬಾಯಿಯ ಜನನ

ಸಿ) ಮೀರಾಬಾಯಿಯ ಜನನ  3) 2ನೇ ಪಾಣಿಪತ್ ಕದನ

ಡಿ) ಆರ್ಯ ಸಮಾಜದ ಸ್ಥಾಪನೆ  4) ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ

ಇ) 2ನೇ ಪಾಣಿಪತ್ ಕದನ  5) ಆರ್ಯ ಸಮಾಜದ ಸ್ಥಾಪನೆ


4)
ಎ) 4ನೇ ಆಂಗ್ಲೋ ಮೈಸೂರು ಯುದ್ಧ 1) ಕಾಳಿಂಗ ಯುದ್ದ                                                 
ಬಿ)ಅಮೋಘವರ್ಷನ ಆಳ್ವಿಕೆ     2) 3ನೇ ಬೌದ್ಧ ಸಮ್ಮೇಳನ

ಸಿ) 3ನೇ ಬೌದ್ಧ ಸಮ್ಮೇಳನ     3)ಅಮೋಘವರ್ಷನ ಆಳ್ವಿಕೆ

ಡಿ) ಪ್ಲಾಸಿ ಕದನ                  4) ಪ್ಲಾಸಿ ಕದನ

ಇ) ಕಳಿಂಗ ಯುದ್ಧ               5) 4ನೇ ಆಂಗ್ಲೋ.                                                            ಮೈಸೂರು.   ಯುದ್ಧ



5) 
 ಎ) ಶಿವಾಜಿಯ ಜನನ        1) ಮಹಾವೀರ ಜನನ

ಬಿ) 1ನೇ ಪಾಣಿಪತ ಕದನ    2) ಗುಪ್ತ ಶಕೆಯ ಆರಂಭ

ಸಿ) ಬ್ರಹ್ಮ ಸಮಾಜ           3) 1ನೇ ಪಾಣಿಪತ ಕದನ

ಡಿ) ಗುಪ್ತ ಶಕೆಯ ಆರಂಭ  4) ಶಿವಾಜಿಯ ಜನನ

ಇ) ಮಹಾವೀರ ಜನನ         5 ) ಬ್ರಹ್ಮ ಸಮಾಜ


6) 
 ಎ) ತಾಳಿಕೋಟೆ ಕದನ     1) ವಿಕ್ರಮ ಶಕೆ

ಬಿ) ವುಡ್ಸನ ವರದಿ            2) ಕನ್ನೇಗಾಲ ಯುದ್ಧ

ಸಿ) ಕನ್ನೇಗಾಲ ಯುದ್ಧ           3) ತಾಳಿಕೋಟೆ ಕದನ

ಡಿ) ವಿಕ್ರಮ ಶಕೆ                   4) ಬ್ರಿಟೀಷ ಈಸ್ಟ್ಇಂ.                                              ಡಿಯಾ ಕಂಪನಿ ಸ್ಥಾಪನೆ

ಇ) ಬ್ರಿಟೀಷ ಈಸ್ಟ್ ಇಂಡಿಯಾ 5) ವುಡ್ಸನ ವರದಿ
ಕಂಪನಿ ಸ್ಥಾಪನೆ         
                                               



7) 
 ಎ) ಸಹಾಯಕ ಸೈನ್ಯ ಪದ್ಧತಿ ಜಾರಿ  1) ರಮಾನಂದರ.                                                               ಮರಣ

ಬಿ) ಕರ್ನಾಟಕ ಏಕೀಕರಣ  2) ಬೆಂಗಳೂರಿನ ನಿರ್ಮಾಣ

ಸಿ) ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ 3) ಸಹಾಯಕ.                                                           ಸೈನ್ಯ ಪದ್ಧತಿ ಜಾರಿ

ಡಿ) ರಮಾನಂದರ ಮರಣ 4) ಕನ್ನಡ ಸಾಹಿತ್ಯ ಪರಿಷತ್ತಿನ.                                              ಸ್ಥಾಪನೆ

ಇ) ಬೆಂಗಳೂರಿನ ನಿರ್ಮಾಣ  5) ಕರ್ನಾಟಕ ಏಕೀಕರಣ



8) 
 ಎ) ರಾಜಾ ತೋಡರ ಮಲ್ಲನಮಲ್ಲನ 1)ಕಾನಿಷ್ಕನ
 ಕಂದಾಯ ಪದ್ಧತಿ.      ಸಿಂಹಾಸನಾರೋಹಣ
 ಬಿ) ಬಸವೇಶ್ವರ ಜನನ          2) ತಲಕಾಡು ಕದನ

ಸಿ) ಕಾನಿಷ್ಕನ ಸಿಂಹಾಸನಾರೋಹಣ 3) ಬಸವೇಶ್ವರ ಜನನ

ಡಿ) ತಲಕಾಡು ಕದನ       4) ಬಹಮನಿ ಮನೆತನದ ಸ್ಥಾಪನೆ

ಇ) ಬಹಮನಿ ಮನೆತನದ ಸ್ಥಾಪನೆ      5) ರಾಜಾ ತೋಡರ                                              ಮಲ್ಲನ ಕಂದಾಯ ಪದ್ಧತಿ



9)
  ಎ) ವಿಕ್ಟೋರಿಯಾ ರಾಣಿಯ ಘೋಷಣೆ      1) ಸಂಘಂ                                                            ಯುಗದ ಆರಂಭ

ಬಿ) ಹರಪ್ಪಾ ನಿವೇಶನ ಶೋಧನೆ  2) ಕೈಲಾಸನಾಥ                                                            ದೇವಾಲಯ ನಿರ್ಮಾಣ

ಸಿ) ಸಂಘಂ ಯುಗದ ಆರಂಭ      3) ಜನರಲ್ ಸರ್ವೀಸ್                                    ಎನ್‍ಲಿಸ್ಟಮೆಂಟ ಕಾಯ್ದೆ ಜಾರಿ

ಡಿ) ಜನರಲ್ ಸರ್ವೀಸ್ ಎನ್‍ಲಿಸ್ಟಮೆಂಟ ಕಾಯ್ದೆ ಜಾರಿ                                 4) ವಿಕ್ಟೋರಿಯಾ ರಾಣಿಯ ಘೋಷಣೆ

ಇ) ಕೈಲಾಸನಾಥ ದೇವಾಲಯ ನಿರ್ಮಾಣ      5) ಹರಪ್ಪಾ ನಿವೇಶನ ಶೋಧನೆ



10) 
ಎ) ಶಾಶ್ವತ ಕಂದಾಯ ಪದ್ಧತಿ ಜಾರಿ 1) ನರ್ಮದಾ ನದಿ                                                             ಕದನ

ಬಿ) ರಾಜ್ಯ ಪುನರ್ ವಿಂಗಡನಾ ಸಮಿತಿ ರಚನೆ                                                             2) ಮನ್‍ಸಬ್‍ದಾರಿ ಪದ್ಧತಿ

ಸಿ) ಮನ್‍ಸಬ್‍ದಾರಿ ಪದ್ಧತಿ    3) ವಾಂಡಿವಾಷ್ ಕದನ

ಡಿ) ವಾಂಡಿವಾಷ್ ಕದನ 4) ಶಾಶ್ವತ ಕಂದಾಯ ಪದ್ಧತಿಜಾರಿ

ಇ) ನರ್ಮದಾ ನದಿ ಕದನ  5) ರಾಜ್ಯ ಪುನರ್ ವಿಂಗಡನಾ                                               ಸಮಿತಿ ರಚನೆ



ನಕ್ಷೆ ಕಾರ್ಯ ಪ್ರಶ್ನೆ ನಂ. 31 (ಎ)

1)    ಎ) ಹರಪ್ಪಾ : ರಾವಿ ನದಿಯ ದಡದಲ್ಲಿದೆ. 1921ರಲ್ಲಿ ದಯಾರಾಂ ಸಹಾನಿಯವರು ಈ ನಿವೇಶನವನ್ನು ಉಖ್ಕನನ ಮಾಡಿದರು. ಪಶ್ಚಿಮ ಪಂಜಾಬಿನ ಮೊಂಟೆಗೊಮರಿ ಜಿಲ್ಲೆಯಲ್ಲಿದೆ.

ಬಿ) ತಕ್ಷಶಿಲಾ : ಪಾಕಿಸ್ತಾನದಲ್ಲಿದೆ. ಗಾಂಧಾರ ಪ್ರಾಂತದ ರಾಜಧಾನಿ ಪ್ರಮುಖ ವಿಶ್ವವಿದ್ಯಾಲಯವಿದೆ.

ಸಿ) ಪಾಟಲಿಪುತ್ರ : ಗಂಗಾ ನದಿಯ ದಂಡೆಯ ಮೇಲಿದೆ. ಪ್ರಸ್ತುತ ಪಾಟ್ನಾ ಎಂದು ಕರೆಯಲ್ಪಡುವ ಬಿಹಾರದ ರಾಜಧಾನಿ. ಅಂದಿನ ಗುಪ್ತರ ರಾಜಧಾನಿಯೂ ಆಗಿತ್ತು

ಡಿ) ಬಾದಾಮಿ : ಬಾಗಲಕೋಟ ಜಿಲ್ಲೆಯಲ್ಲಿದೆ ಚಾಲುಕ್ಯರ ರಾಜಧಾನಿ ಇದರ ಆರಂಭಿಕ ಹೆಸರು ವಾತಾಪಿ.

ಇ) ಕಂಚಿ : ಇದು ಪಲ್ಲವರ ರಾಜಧಾನಿ ತಮಿಳನಾಡಿನ ಮದ್ರಾಸ ಸಮೀಪದಲ್ಲಿದೆ. ಪ್ರಾಚೀನ ಕಾಲದ ಪ್ರಮುಖ ವಿದ್ಯಾಕೇಂದ್ರ, ಪ್ರಸಿದ್ಧ ಕಾಮಾಕ್ಷಿ ದೇವಾಲಯ ಇಲ್ಲಿದೆ


2)   ಎ) ಹಳೇಬೀಡು : ಇದು ಹಾಸನ ಜಿಲ್ಲೆಯಲ್ಲಿದೆ. ಧೋರ ಸಮುದ್ರ ಇದರ ಮೊದಲ ಹೆಸರು ಹೊಯ್ಸಳರ ರಾಜಧಾನಿ, ಮಲಿಕಾಫರನ ದಾಳಿಗೆ ತುತ್ತಾದ ಪ್ರದೇಶ

ಬಿ) ದೆಹಲಿ : ಯಮುನಾ ನದಿಯ ದಡದಲ್ಲಿದೆ. ದೆಹಲಿ ಸುಲ್ತಾನರ ಮತ್ತು ಮೊಗಲರ ರಾಜಧಾನಿ ಸದ್ಯದ ಭಾರತದ ರಾಜಧಾನಿಯಾಗಿದ್ದು ಇಲ್ಲಿ ಕುತುಬ್ ಮಿನಾರ ಕೆಂಪು ಕೋಟೆಗಳಿವೆ

ಸಿ) ದೇವಗಿರಿ : ಮಹಾರಾಷ್ಟ್ರದಲ್ಲಿದೆ. ಅಲ್ಲಾವುದ್ದೀನ್‍ನ ದಾಳಿಗೆ ತುತ್ತಾದ ಪ್ರದೇಶ ಮಹ್ಮದ್ ಬಿನ್ ತೂಗಲಕ್‍ನು ದೆಹಲಿಯಿಂದ ಇಲ್ಲಿಗೆ ರಾಜಧಾನಿ ಬದಲಾವಣೆ ಮಾಡಿದನು.

ಡಿ) ಪಾಣಿಪತ್ : ಇದು ಹರಿಯಾಣದಲ್ಲಿದೆ. ದೆಹಲಿಯ ಉತ್ತರಕ್ಕೆ 60 ಮೈಲಿ ದೂರದಲ್ಲಿದೆ. ಇಲ್ಲಿ ಐತಿಹಾಸಿಕ ಮೂರು ಕದನಗಳಾದವು.

ಇ) ಆಗ್ರಾ : ಯಮುನಾ ನದಿಯ ದಡದ ಮೇಲಿದೆ. ಷಾಹಜಹಾನನಿಂದ ನಿರ್ಮಿತ ಜಗತ್‍ಪ್ರಸಿದ್ಧ ತಾಜಮಹಲ್ ಇಲ್ಲಿದೆ.




3)    ಎ) ಹಂಪಿ : ವಿಜಯನಗರದ ರಾಜಧಾನಿ ಬಳ್ಳಾರಿ ಜಿಲ್ಲೆಯಲ್ಲಿದೆ. ಭವ್ಯ ಸ್ಮಾರಕಗಳಿವೆ ಹೆಸರಾದ ಪ್ರದೇಶ.

ಬಿ) ಬೀದರ : ಬಹಮನಿ ರಾಜ್ಯದ ರಾಜಧಾನಿ ಮಹ್ಮದ ಗವಾನ ನಿರ್ಮಿತ, ಮದರಸ ಇಲ್ಲಿದೆ. ಕರ್ನಾಟಕದ ಉತ್ತರ ಭಾಗದಲ್ಲಿದೆ

ಸಿ) ವಿಜಯಪುರ : ಕರ್ನಾಟಕದ ಉತ್ತರ ಭಾಗದಲ್ಲಿದೆ ಆದಿಲ್‍ಷಾಹಿಗಳ ರಾಜಧಾನಿ, ಐತಿಹಾಸಿಕ ತಾಣ ಗೋಳಗುಮ್ಮಟ, ಬಾರಾಕಮಾನ, ಇಬ್ರಾಹಿಂ ರೋಜಾಗಳು ಇಲ್ಲಿವೆ

ಡಿ) ಕಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಬ್ರಿಟೀಷರ ಪ್ರಥಮ ರಾಜಧಾನಿ ಸ್ವದೇಶಿ ಚಳುವಳಿಯ ಕೇಂದ್ರ ಸ್ಥಾನ

ಇ) ಬಾಂಬೆ : ಮಹಾರಾಷ್ಟ್ರದ ರಾಜಧಾನಿ ವಾಣಿಜ್ಯ ನಗರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನ ನಡೆದ ಸ್ಥಳವಾಗಿದೆ.



4)   ಎ) ಪಾಂಡಿಚೇರಿ : ಮದ್ರಾಸಿನ ಕೋರಮಂಡಲ ಪ್ರದೇಶ. ಫ್ರೆಂಚರ ರಾಜಧಾನಿ ಅರವಿಂದ್ರಾಶ್ರಮ ಇಲ್ಲಿದೆ

ಬಿ) ಶ್ರೀರಂಗ ಪಟ್ಟಣ : ಮಂಡ್ಯ ಜಿಲ್ಲೆಯಲ್ಲಿದೆ. ಮೈಸೂರ ಒಡೆಯರ, ಟಿಪ್ಪುವಿನ ರಾಜಧಾನಿ. ಶ್ರೀರಂಗನಾಥ ದೇವಾಲಯ ಇಲ್ಲಿದೆ

ಸಿ) ಮಿರತ್ : ಉತ್ತರ ಪ್ರದೇಶದ ರಾಜ್ಯ ದೆಹಲಿಯ ಸಮೀಪವಿದೆ. ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರ

ಡಿ) ಜಲಿಯನ್ ವಾಲಾಬಾಗ : ಪಂಜಾಬಿನ ಅಮೃತ ಸರದಲ್ಲಿದೆ. ಇಲ್ಲಿನ ಸಭಾಂಗಣದಲ್ಲಿ 1919 ಏಪ್ರೀಲ್ 13 ರಂದು ಜನರಲ್ ಡಯರ ಗುಂಡಿನ ಮಳೆ ಸುರಿಸಿದ ಕೃತ್ಯ ನಡೆಯಿತು.



ಇ) ದಂಡಿ : ಗುಜರಾತಿನ ಪಶ್ಚಿಮ ತೀರದಲ್ಲಿದೆ. 1930ರಲ್ಲಿ ಗಾಂಧೀಜಿ ಸಬರಮತಿ ಆಶ್ರಮದಿಂದ ದಂಡಿಗೆ ಹೊರಟು ಉಪ್ಪಿನ ಸತ್ಯಾಗ್ರಹ ಕೈಕೊಂಡರು.

ಕುಶಾನರು


ಕುಶಾನರು :

·   ಮೂಲತಃ ಕುಶಾನರು ಯೂ-ಚೀ ಎಂಬ ಹೆಸರಿನ ಜನಾಂಗಕ್ಕೆ ಸೇರಿದವರಾಗಿದ್ದು ಚೀನಾದಲ್ಲಿ ವಾಸವಾಗಿದ್ದರು.

·   ಕುಶಾನರ ಮೊದಲ ದೊರೆ ಕುಜುಲಕಾಡಪ್ಯೆಸಸ್ ಕಾನಿಷ್ಕನು ಕುಶಾನರ ವಂಶದ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು.

·   ಇತಿಹಾಸಕಾರರ ಪ್ರಕಾರ ಕಾನಿಷ್ಕನು ಶಕಯುಗದ ಸ್ಥಾಪಕನಾಗಿದ್ದು ಸಾ.ಶ 78 ರಲ್ಲಿ ಈತನ ಸಿಂಹಾಸನರೋಹಣ ನಡೆಯಿತು.

·   ಕುಶಾನರು ಚೀನಾದ ಅರಸನಿಗೆ ಕಪ್ಪು ಕಾಣಿಕೆಗಳನ್ನು ಸಲ್ಲಿಸುತ್ತಿದ್ದುದರಿಂದ ಅದನ್ನು ನಿಲ್ಲಿಸಲು ಕಾನಿಷ್ಕನು  ಚೀನಾದ ಮೇಲೆ ದಾಳಿ ಮಾಡಿ “ಪಾನ್ ಚೌ” ಎಂಬ ಚೀನಿ ಸೇನಾನಿಯಿಂದ ಸೋಲನ್ನು ಅನುಭವಿಸಿದನು.

·   ಕಾನಿಷ್ಕನು ಆರಂಭದಲ್ಲಿ ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕಾಲಾನಂತರದಲ್ಲಿ  ಅಶ್ವಘೋಷನ ಪ್ರಭಾವದಿಂದ ಬೌದ್ಧಧರ್ಮ ಸ್ವೀಕರಿಸಿದನು.

·  ಬೌದ್ಧಧರ್ಮ ಪ್ರಸಾರಕ್ಕಾಗಿ ಕಾನಿಷ್ಕನು ತೆಗೆದುಕೊಂಡ ಕ್ರಮಗಳು.

1)  ಬೌದ್ಧಧರ್ಮಕ್ಕೆ ಮತ್ತು ಬೌದ್ಧಬಿಕ್ಕುಗಳಿಗೆ ರಾಜಾಶ್ರಯ ನೀಡಿದನು.

2)  ಬಿಕ್ಷುಗಳ ಉಪಯೋಗಕ್ಕೆ  ವಿಹಾರ ಮತ್ತು ಮಠಗಳನ್ನು ಸ್ಥಾಪಿಸಿದನು.

3)  ಧರ್ಮ ಪ್ರಸಾರಕ್ಕೆ ಜಪಾನ್,ಟಿಬೇಟ್ ಮತ್ತು ಮಧ್ಯಪ್ರಾಸ್ತ್ಯ ರಾಷ್ಟ್ರಗಳಿಗೆ ಅನೇಕ ಅನುಯಾಯಿಗಳನ್ನು ಮತ್ತು ನಿಯೋಗಗಳನ್ನು ಕಳುಹಿಸಿದನು.

·   ಕಾನಿಷ್ಕನು ಬೌದ್ಧದರ್ಮದಲ್ಲಿ ತಲೆದೋರಿದ ವಿವಾದಗಳನ್ನು ಸರಿಪಡಿಸಲು ಸಾ.ಶ. 102 ರಲ್ಲಿ ಕಾಶ್ಮೀರದ ಕುಂಡಲವನದಲ್ಲಿ 4 ನೇ ಬೌದ್ಧ ಮಹಾಸಮ್ಮೇಳನವನ್ನು ಏರ್ಪಡಿಸಿದನು.



ಗುಪ್ತರು :

·   ಮೌರ್ಯರು ಪತನಾನಂತರ ಉತ್ತರಭಾರತವು ಅರಾಜಕತೆ ಮತ್ತು ಅನೈಕ್ಯತೆಯ ಬೀಡಾಗಿತ್ತು ಇಂತಹ ಪರಿಸ್ಥಿತಿಯಲ್ಲಿ ಸಾ.ಶ 300ರಲ್ಲಿ ಗುಪ್ತರು ಪ್ರಬಲ ರಾಜ್ಯ ನಿರ್ಮಿಸಿ ಐಕ್ಯತೆ ಸಾಧಿಸಿದರು.

·   ಗುಪ್ತರ ಇತಿಹಾಸವನ್ನು ಅರಿಯಲು ಸಹಾಯಕವಾಗುವ ಪ್ರಮುಖ ಮೂಲಾಧಾರಗಳೆಂದರೆ

1)  ಹರಿಷೇಣನಿಂದ ರಚಿತಗೊಂಡ  ಅಲಹಬಾದಸ್ತಂಭ ಶಾಸನ ಇದು ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುತ್ತದೆ.

2)  ಕಾಳಿದಾಸನ  ಕೃತಿಗಳಾದ ಮಾಳವಿಕಾಗ್ನಿ ಮಿತ್ರ, ಶಾಕುಂತಲ, ರಘುವಂಶ, ಕುಮಾರಸಂಭವ ಮೇಘಧೂತ ಋತುಸಂಹಾರ ಪ್ರಮುಖವಾಗಿವೆ.

3)  ವಿಶಾಖದತ್ತನ ಮುದ್ರಾರಾಕ್ಷಸ ಮತ್ತು ದೇವಿಚಂದ್ರಗುಪ್ತಂ.

4) ರಾಜ್ಯಶೇಖರನ ಕಾವ್ಯಮೀಮಾಂಸೆ.

5)  ಪಾಹಿಯಾನನು ಚೀನಿಯಾತ್ರಿಕನಾಗಿದ್ದು,ಭಾರತದಲ್ಲಿ ಬೌಧ್ದಧರ್ಮದ ತತ್ವಗಳನ್ನು ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದನು ಈ ತನ ಘೋ-ಕೋಕಿ ಎಂಬ ಪುಸ್ತಕ ಪ್ರಮುಖ ಆಧಾರವಾಗಿದೆ.

·   ಈ ವಂಶದ ಸ್ಥಾಪಕ ಶ್ರೀಗುಪ್ತ ಸಾ.ಶ 320ರಲ್ಲಿ ಗುಪ್ತಶಕೆ ಆರಂಭವಾಯಿತು. ಪಾಟಲಿಪುತ್ರ ಮತ್ತು ಉಜ್ಜಯನಿ ಇವರ ರಾಜಾಧಾನಿಗಳಾದ್ದವು.

·   ಸಮುದ್ರಗುಪ್ತನು ಈ ಸಂತತಿಯ ಶ್ರೇಷ್ಠ ದೊರಯಾಗಿದ್ದು, ಸಾಮ್ರಾಜ್ಯ ವಿಸ್ತರಣೆಗಾಗಿ ಆಶ್ವಮೇಧÀಯಾಗವನ್ನು ನೆರವೇರಿಸಿದನು.

·   ಸಮುದ್ರಗುಪ್ತನು ಉತ್ತರಭಾರತದ ದಂಡಯಾತ್ರೆಯನ್ನು ಕೈಗೊಂಡು ನಂದಿನ್, ಬಾಲವರ್ಮ, ನಾಗದತ್ತ, ನಾಗಸೇನ, ರುದ್ರದೇವ ಮುಂತಾದವರನ್ನು ಸೋಲಿಸಿದನು.

·   ಸಮುದ್ರಗುಪ್ತನು ದಕ್ಷಿಣ ಭಾರತದ ಮೇಲೆ ದಂಡೆಯಾತ್ರೆ ಕೈಕೊಂಡು ಕೋಸಲದ ಮಹೇಂದ್ರ, ಕಂಚಿಯ ವಿಷ್ಣುಗೋಪ, ಪಿಸ್ತಪುರದ ಮಹೇಂದ್ರ, ದೇವರಾಷ್ಟ್ರದ  ಕುಬೇರ ಮುಂತಾದವರನ್ನು ಸೋಲಿಸಿದನು.

·   ಈತನು ಶ್ರೇಷ್ಠ ವಿದ್ವಾಂಸನಾಗಿದ್ದು “ಕವಿರಾಜ” ಎಂಬ ಬಿರುದನ್ನು ಹೊಂದಿದ್ದನು.

·   ಸಮುದ್ರಗುಪ್ತನ ನಂತರ ಎರಡನೆಯ ಚಂದ್ರಗುಪ್ತನು ಸಿಂಹಾಸನವನ್ನೇರಿದನು. ಈತನು ವಿಕ್ರಮಾದಿತ್ಯ ಎಂದು ಹೆಸರಾಗಿದ್ದನು.

·   ಗುಪ್ತರ ಕಾಲದಲ್ಲಿ ಕಾಳಿದಾಸ, ಭಾರವಿ, ದಂಡಿ, ಶೂದ್ರಕರಂತಹ ಕವಿಗಳಿದ್ದು “ಕಿರಾತಾರ್ಜುನೀಯಂ” ಕೃತಿಯನ್ನು ಭಾರವಿ, ಅಮರಕೋಶವನ್ನು ಅಮರಸಿಂಹ ರಚಿಸಿದನು.

·   ಈ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದ್ದು ತಕ್ಷಶಿಲಾ,ನಳಂದ,ಅಜಂತ, ಸಾರನಾಥಗಳು ಪ್ರಮುಖ ವಿಶ್ವವಿದ್ಯಾನಿಲಯಗಳಾಗಿದ್ದವು.

·   ಆರ್ಯಭಟ ಶ್ರೇಷ್ಠ ಗಣಿತಶಾಸ್ತ್ರಜ್ಞನಾಗಿದ್ದು, “ಆರ್ಯಭಟೀಯಂ” ಕೃತಿ ರಚಿಸಿದನು.

·   ವರಾಹಮಿರ ಶ್ರೇಷ್ಠ ವಿಜ್ಞಾನಿಯಾಗಿದ್ದು, ಬೃಹತ ಜಾತಕ, ಲಘು ಜಾತಕ, ಬೃಹತ ಸಂಹಿತೆ ಕೃತಿಗಳನ್ನು ರಚಿಸಿದನು.

·   ಈ ಅವಧಿಯಲ್ಲಿ ಧನ್ವಂತ್ರಿಯನ್ನು ಭಾರತೀಯ ವೈಧ್ಯಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.

·   ದೆಹಲಿ ಸಮೀಪದ ಮೆಹ್ರೌೀಲಿ ಕಬ್ಬಿಣ ಸ್ತಂಬಶಾಸನ ಪ್ರಮುಖವಾಗಿದೆ.

·   ಮಥುರಾ,ಬನಾರಸ, ಪಾಟ್ನಾ, ಉದಯಗಿರಿ, ದೇವಗಡ್ ಮುಂತಾದವುಗಳು ಗುಪ್ತರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳಾಗಿದ್ದವು.



ಚೋಳರು :

·   ದಕ್ಷಿಣ ಭಾರತದ ಸಾಮ್ರಾಜ್ಯಗಳಲ್ಲಿ ಚೋಳ ಸಾಮ್ರಾಜ್ಯ ಅತ್ಯಂತ ಪ್ರಾಚೀನವಾಗಿದ್ದು ಅವರ ಇತಿಹಾಸವು ಸಂಘಂ ಯುಗದಿಂದ ಆರಂಭವಾಗುತ್ತದೆ ಸಂಘಂ ಎಂದರೆ ತಮಿಳು ಸಾಹಿತ್ಯ ಸಂಘ ಎಂದರ್ಥ.

·   ತಿರುಕ್ಕುರಳ್, ಶಿಲ¥ದಿÀಗಾರಂ ಮತ್ತು ಮಣಿಮೇಗಲೈ ಸಂಘಂ ಯುಗದ ಪ್ರಮುಖ  ಕೃತಿಗಳಾಗಿವೆ

·   ಇಳೈಯಾನ ಚೋಳನು ಸಂಘಂ ಕಾಲದ ಚೋಳರ ಮೊದಲ ದೊರೆಯಾಗಿದ್ದುನು.

·   ಒಂದನೇ ಪರಾಂತಕನ ಉತ್ತರಮೆರೂರು ಶಾಸನ ಚೋಳರ ಗ್ರಾಮಾಡಳಿತವನ್ನು ತಿಳಿಸುತ್ತದೆ.

·   ಸಾ. ಶ 949ರಲ್ಲಿ ಚೋಳ ಮತ್ತು ರಾಷ್ಟ್ರಕೂಟರ ನಡುವೆ ತಕ್ಕೊಳಂ ಕದನ ನಡೆಯಿತು.

·   ಸಾ.ಶ 1009ರಲ್ಲಿ ಒಂದನೇ ರಾಜರಾಜಚೋಳನು ತಂಜಾವುರಿನಲ್ಲಿ ರಾಜರಾಜೇಶ್ವರ ದೇವಾಲಯವನ್ನು ನಿರ್ಮಿಸಿದನು.

·   ಒಂದನೇ ರಾಜೇಂದ್ರಚೋಳನಿಗೆ ಪಂಡಿತ ಚೋಳ, ಗಂಗೈಕೊಂಡಕೋ¼,À ಕೇದಾರಕೊಂಡ ಎಂಬ ಬಿರುದುಗಳಿದ್ದವು.

·   ಉತ್ತರ ಮೆರೂರು ಗ್ರಾಮವನ್ನು ವಿಭಾಗಿಸಿ ಪ್ರತಿ  ವಿಭಾಗದಿಂದ ಒಬ್ಬೊಬ್ಬ ಸದಸ್ಯರನ್ನು ಒಂದು ವರ್ಷದ ಅವಧಿಗೆ ಕುಡುವಲೈ ಪದ್ದತಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.

·   ಕುಡುವಲೈ ಎಂದರೆ ಅದೃಷ್ಟ ಪÀದ್ದತಿಯಾಗಿದೆ.

·   ಆಯ್ಕೆಯಾದ ಪ್ರತಿನಿಧಿಗಳು ಕಾರ್ಯನಿರ್ವಹಿಸುವ ಸಮಿತಿಗಳನ್ನು ವರಿಯಂ ಎಂದು ಕರೆಯುತ್ತಾರೆ.



ವರ್ಧನರು ಮತ್ತು ಆರಂಭಿಕ ಚಾಲುಕ್ಯರು -ಪಲ್ಲವರು :

·   ಗುಪ್ತರ ನಂತರ ತಲೆದೊರಿದ ರಾಜಕೀಯ ಅನೈಕ್ಯತೆಯನ್ನು ಹೋಗಲಾಡಿಸುವಲ್ಲಿ ಪುಷ್ಯಭೂತಿ ಸಂತತಿಯ ವರ್ಧನರು ಯಶಸ್ವಿಯಾದರು.

·   ವರ್ಧನರ ಇತಿಹಾಸ ತಿಳಿದುಕೊಳ್ಳಲು ಹ್ಯೂಯತ್ಸ್ಯಾಂಗನ ಸಿ-ಯು-ಕಿ, ಬಾಣಬಟ್ಟನ ಹರ್ಷಚರಿತೆ, ಹರ್ಷವರ್ಧನ ತಾಮ್ರಪಟ ಶಾಸನಗಳು ಪ್ರಮುಖ ಆಧಾರಗಳಾಗಿವೆ.

·   ವರ್ಧನರ ಶ್ರೇಷ್ಠ ದೊರೆ ಹರ್ಷವರ್ಧನನಾಗಿದ್ದು, ಪ್ರಭಾಕರವರ್ಧನ ಮತ್ತು ಯಶೋಮತಿ ದಂಪತಿಗಳ ಮಗನಾಗಿ ಜನಿಸಿದನು. ಇವನಿಗೆ ರಾಜವರ್ಧನ ಎಂಬ ಅಣ್ಣ, ರಾಜಶ್ರೀ ಎಂಬ ತಂಗಿ ಇದ್ದಳು. ಥಾಣೇಶ್ವರ ಇವನ ರಾಜಧಾನಿಯಾಗಿತ್ತು. ಇವನು ಉತ್ತರಾಪಥೇಶ್ವರ ಎಂಬ ಬಿರುದು ಹೊಂದಿದ್ದನು.

·   ಹರ್ಷವರ್ಧನನು ಧಾರ್ಮಿಕ ಚರ್ಚೆ ಹಾಗೂ ಹ್ಯೂಯತ್ಸ್ಯಾಂಗವನ್ನು ಸತ್ಕರಿಸಲು ಕನೋಜಿನಲ್ಲಿ ಧಾರ್ಮಿಕ ಸಭೆ ಏರ್ಪಡಿಸಿದನು. ಹ್ಯೂಯೆತ್ಸಾಂಗ ಅದರ ಅಧ್ಯಕ್ಷತೆ ವಹಿಸಿದನು. ಅದೇ ರೀತಿ ಸಾ.ಶ 643 ರಲ್ಲಿ ಪ್ರಯಾಗದಲ್ಲಿ ಬೌದ್ಧ ಸಮ್ಮೇಳನ ಏರ್ಪಡಿಸಿದನು.

·   ಹರ್ಷವರ್ಧನನು ರತ್ನಾವಳಿ, ಪ್ರಿಯದರ್ಶಿಕಾ, ಮತ್ತು ನಾಗಾನಂದ ಎಂಬ ಕೃತಿಗಳನ್ನು ರಚಿಸಿದನು.



ಆರಂಭಿಕ ಚಾಲುಕ್ಯರು :

·   ಕರ್ನಾಟಕ ಮೊದಲ ಅರಸ ಮನೆತನ ಕದಂಬರದ್ದಾಗಿದ್ದು, ಮಯೂರವರ್ಮ ಈ ವಂಶದ ಸ್ಥಾಪಕನಾಗಿದ್ದಾನೆ. ಇವನ ಕಾಲದಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನವನ್ನು ರಚಿಸಲಾಯಿತು.

·   ಕರ್ನಾಟಕವನ್ನು ಆಳಿದ ಶ್ರೇಷ್ಠ ಮನೆತನಗಳಲ್ಲಿ ಗಂಗರ ಮನೆತನವೂ ಒಂದಾಗಿದ್ದು ಸಾಹಿತ್ಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಗಂಗರ 4ನೇ ರಾಚಮಲ್ಲನ ಪ್ರಧಾನಮಂತ್ರಿ ಚಾವುಂಡರಾಯ ಸಾ.ಶ 983ರಲ್ಲಿ ಶ್ರವಣಬೆಳಗೊಳದಲ್ಲಿ 58 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಿಸಿದನು.

·   ಬದಾಮಿ ಚಾಲುಕ್ಯರನ್ನು ಆರಂಭಿಕ ಚಾಲುಕ್ಯರೆಂದು ಕರೆಯಲಾಗಿದೆ “ವರಾಹ” ಇವರ ರಾಜ ಲಾಂಛನವಾಗಿದ್ದು ಬದಾಮಿಯನ್ನು ರಾಜಧಾನಿಯನಾಗಿ ಮಾಡಿಕೊಂಡು ಆಳ್ವಿಕೆ ಆರಂಭಿಸಿದರು. ದಕ್ಷಿಣಾಪಥೇಶ್ವರ ಎಂದು ಬಿರುದಾಂಕಿತನಾದ ಇಮ್ಮಡಿ ಪುಲಕೇಶಿಯು ಈ ವಂಶದ ಶ್ರೇಷ್ಠ ಅರಸನಾಗಿದ್ದನು.

·   ಸಾ.ಶ 634ರಲ್ಲಿ ಭಿಕರ ಯುಧ್ದ ಪುಲಕೇಶಿಗೂ ಮತ್ತು ಹರ್ಷವರ್ಧನನಿಗೂ ನರ್ಮದಾ ನದಿ ತೀರದಲ್ಲಿ ಭೀಕರ ಯುಧ್ದ ನಡೆಯಿತು. ಇದನ್ನು ನರ್ಮದಾನದಿ ಕದನ ಎನ್ನುವರು ಇದರಲ್ಲಿ ಜಯಶಾಲಿಯಾದ ಇಮ್ಮಡಿ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಪಡೆದನು. ಇದಲ್ಲದೆ ಸತ್ಯಾಶ್ರಯ, ಮಹಾರಾಜಾಧಿರಾಜ, ಪೃಥ್ವಿ ವಲ್ಲಭ ಎಂಬ ಬಿರುದುಗಳನ್ನು ಹೊಂದಿದ್ದನು.

·   ಇಮ್ಮಡಿ ಪುಲಿಕೇಶಿಯ ಸೊಸೆ ವಿಜಯಭಟ್ಟಾರಿಕೆ “ಕೌಮುದಿ ಮಹೋತ್ಸವ” ಕೃತಿಯನ್ನು ರಚಿಸಿದಳು.

·   ಇಮ್ಮಡಿ ಪುಲಕೇಶಿಯ ಆಸ್ಥಾನಕವಿ ರವಿಕೀರ್ತಿ ಪುಲಕೇಶಿಯ ದಿಗ್ವಿಜಯಗಳನ್ನು ವಿವರಿಸುವ ಐಹೊಳೆ ಶಾಸನವನ್ನು ರಚಿಸಿದನು.

·        ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು ಅರಂಭಿಕ ಚಾಲ್ಯುಕರ ಪ್ರಮುಖ ಕಲಾಕೇಂದ್ರಗಳಾಗಿದ್ದು, ಐಹೊಳೆಯಲ್ಲಿ ಲಾಡಖಾನ್ ದೇವಾಲಯ, ದುರ್ಗದ ದೇವಾಲಯ, ಮೇಗುತಿ ಜೈನ ದೇವಾಲಯ ಪ್ರಮುಖವಾಗಿವೆ.

·   ಪಟ್ಟದ ಕಲ್ಲಿನಲ್ಲಿ - ಸಂಗಮೇಶ್ವರ,ವಿರೂಪಾಕ್ಷ, ಮಲ್ಲಿಕಾರ್ಜುನ, ಪಾಪನಾಥ, ಕಾಶಿವಿಶ್ವನಾಥ, ದೇವಾಲಯಗಳು ಪ್ರಮುಖವಾಗಿವೆ.

·   ದಕ್ಷಿಣ ಬಾರತದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪಲ್ಲವರು ಅಗ್ರಗಣ್ಯ ಕೊಡುಗೆ ನೀಡಿದ್ದಾರೆ. ಅವರ ಪ್ರಮುಖ ಕಲಾ ಕೇಂದ್ರಗಳೆಂದರೆ,

ಕಂಚಿ, ಮಹಾಬಲಿಪುರಂ

ರಾಷ್ಟ್ರಕೂಟರು :

·   ದಕ್ಷಿಣ ಭಾರತದಲ್ಲಿ ಬೃಹತ ಸಾಮ್ರಾಜ್ಯ ಸ್ಥಾಪಿಸಿ ದೀರ್ಘಕಾಲ ಆಳ್ವಿಕೆ ನಡೆಸಿದ ಕೀರ್ತಿ ರಾಷ್ಟ್ರಕೂಟರಿಗೆ ಸಲ್ಲುತ್ತದೆ.

·   ಗುಲ್ಬರ್ಗಾ ಜಿಲ್ಲೆಯ ಮಾನ್ಯಖೇಡ ಇವರ ರಾಜಧಾನಿಯಾಗಿತ್ತು. ಗರುಡ ಇವರ ರಾಷ್ಟ್ರಲಾಂಛನವಾಗಿತ್ತು.ದಂತಿದುರ್ಗ ರಾಷ್ಟ್ರಕೂಟರ ಮೊದಲ ದೊರೆಯಾಗಿದ್ದನು.

·   ಒಂದನೇ ಕೃಷ್ಣನು ಎಲ್ಲೋರಾದಲ್ಲಿ ಸಾ.ಶ 770 ರಲ್ಲಿ  ಏಕ ಶಿಲಾ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು.

·   ರಾಷ್ಟ್ರಕೂಟರ ಆರಂಭಿಕ ದೊರೆಗಳಲ್ಲಿ ಧ್ರುವನ ಪ್ರಮುಖನಾಗಿದ್ದು ಧಾರಾವರ್ಷ, ಶ್ರೀವಲ್ಲಭ, ನರೇಂದ್ರದೇವ, ಕಲಿವಲ್ಲಭ ಎಂಬ ಬಿರುದುಗಳನ್ನು ಹೊಂದಿದನು.

·   3ನೇ ಗೊವಿಂದನ ಬಿರುದುಗಳೆಂದರೆ-ಜಗತ್ತುಂಗ, ಪ್ರಭೂತವರ್ಷ, ಶ್ರೀವಲ್ಲಭ, ತ್ರಿಭೂವನದವಳ.

·        ಅಮೋಘವರ್ಷನು ರಾಷ್ಟ್ರಕೂಟರ ಪ್ರಸಿದ್ದ ದೊರೆಯಾಗಿದ್ದನು. ಈತನ ಆಸ್ಥಾನಕ್ಕೆ ಸಾ.ಶ-851 ರಲ್ಲಿ ಅರಬ್À ಪ್ರವಾಸಿ ಸುಲೇಮಾನ ಭೇಟಿ ನೀಡಿದನು. ಅಮೋಘವರ್ಷನಿಗೆ ನೃಪತುಂಗ,ವೀರನಾರಾಯಣ, ಶ್ರೀವಲ್ಲಭ, ರಟ್ಟಿಮಾರ್ತಾಂಡ, ಅತಿಶಯದವಳ ಎಂಬ ಬಿರುದುಗಳಿದ್ದವು.



·   ರಾಷ್ಟ್ರಕೂಟರು ಸಾಹಿತ್ಯ ಪೋಷಕರಾಗಿದ್ದು ಈ ಅವಧಿಯಲ್ಲಿ ಕನ್ನಡದ ಮೊದಲ ಸಾಹಿತ್ಯ ಕೃತಿ “ಕವಿರಾಜವಮಾರ್ಗ”ಶ್ರೀ ವಿಜಯನಿಂದ ರಚಿಸಲ್ಪಟ್ಟಿತು.

·   3ನೇ ಕೃಷ್ಣನ ಆಸ್ಥಾನದಲ್ಲಿದ್ದ ಪೊನ್ನನು ಶಾಂತಿಪುರಾಣ ಮತ್ತು ಭುವನೈಕ್ಯೆ ರಾಮಾಭ್ಯುದಯ ಎಂಬ ಕೃತಿಗಳನ್ನು ರಚಿಸಿದನು ಇವನಿಗೆ “ಉಭಯಕವಿ ಚಕ್ರವರ್ತಿ” ಎಂಬ ಬಿರುದಿತ್ತು.

·        ರಾಷ್ಟ್ರಕೂಟರ ಸಾಮಂತ ಅರಸನಾದ ವೇಮುಲವಾಡದ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪನು ವಿಕ್ರಮಾರ್ಜುನ ವಿಜಯ (ಪಂಪಭಾರತ) ಮತ್ತು ಆದಿಪುರಾಣ ಗ್ರಂಥಗಳನ್ನು ರಚಿಸಿದನು. ಈತನನ್ನು “ಕನ್ನಡದ ಆದಿಕವಿ” ಎಂದು ಕರೆಯಲಾಗಿದೆ. ವಡ್ಡಾರಾಧನೆ ಹಳೆಗನ್ನಡದ ಮೊದಲಗಧ್ಯ ಕೃತಿಯಾಗಿದೆ.



ನಂತರದ ಚಾಲುಕ್ಯರು ಮತ್ತು ಹೊಯ್ಸಳರು :

·   ರಾಷ್ಟ್ರಕೂಟರ ಸಾಮಂತರಾಗಿದ್ದ ನಂತರದ ಚಾಲುಕ್ಯರನ್ನು ಕಲ್ಯಾಣದ ಚಾಲುಕ್ಯರೆಂದು ಕರೆಯಲಾಗಿz.É 2ನೇ ತೈಲಪ ಈ ಸಂತತಿಯ ಸ್ಥಾಪಕನಾಗಿದ್ದು ಮಾನ್ಯಖೇಡ ಅವರ ಮೊದಲ ರಾಜಧಾನಿಯಾಗಿತ್ತು ನಂತರ ಅದನ್ನು ಕಲ್ಯಾಣಕ್ಕೆ ವರ್ಗಾಯಿಸಲಾಯಿತು.

·   6ನೇ ವಿಕ್ರಮಾದಿತ್ಯನು ಈ ವಂಶದ ಅತ್ಯಂತ ಪ್ರಮುಖ ಅರಸನಾಗಿದ್ದು ಸಾ.ಶ 1076ರಲ್ಲಿ ವಿಕ್ರಮಶಕೆ ಎಂಬ ಹೊಸಶಕೆ ಆರಂಭಸಿದನು. ಈತನಿಗೆ ಪೆರ್ಮಾಡಿದೇª,À ತ್ರಿಭುವನಲ್ಲ ಎಂಬ ಬಿರುದುಗಳಿದ್ದವು. ಈತನ ಆಸ್ಥಾನದಲ್ಲಿದ್ದ ಬಿಲ್ಹಣನು “ವಿಕ್ರಮಾಂಕದೇವಚರಿತಂ” ಕೃತಿಯನ್ನು ರಚಿಸಿದನು.

·   ಸತ್ಯಾಶ್ರಯನ ಆಸ್ಥಾನದಲ್ಲಿದ ರನ್ನನು ಅಜಿತನಾಥ ಪುರಾಣ ಮತ್ತು ಸಾಹಸಭೀಮ ವಿಜಯ (ಗದಾಯುಧ್ದ) ಗ್ರಂಥಗಳನ್ನು ರಚಿಸಿದನು. ಇವನಿಗೆ “ಕವಿಚಕ್ರವರ್ತಿ” ಎಂಬ ಬಿರುದಿತ್ತು.

·   3ನೇ ಸೋಮೇಶ್ವರನ ಅಭಿಲಾಷತೀರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ಕೃತಿಯು ಸಂಸ್ಕøತದ ಮೊದಲ ವಿಶ್ವಕೋಶವಾಗಿದೆ.



ದ್ವಾರಸಮುದ್ರದ ಹೊಯ್ಸಳರು :



·   ಹೊಯ್ಸಳರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು. ದ್ವಾರಸಮುದ್ರ, ಶಶಕಪುರ, ಬೇಲೂರ ಇವರ ರಾಜಧಾನಿಗಳಾಗಿದ್ದವು. ಸಳ ಈ ಸಾಮ್ರಾಜ್ಯದ ಸ್ಥಾಪಕನಾಗಿದ್ದನು.

·   ಹೊಯ್ಸಳ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ಅರಸನಾದ ವಿಷ್ಣುವರ್ಧನನು ಮಹಾಮಂಡಲೇಶ್ವರ, ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ, ಮಲೆಪೆರೊಳ್‍ಗಂಡ ತತ್ಪಾದ ಪದ್ಮೋಪ ಜೀವನ್ ಎಂಬ ಬಿರುದುಗಳನ್ನು ಹೊಂದಿದ್ದನು.

·   ಹೊಯ್ಸಳರು ಹೊಯ್ಸಳ ಶೈಲಿ ಎಂಬ ಹೊಸಶೈಲಿಯನ್ನು ಬೆಳೆಸಿದರು. ಬೇಲೂರಿನ ಚನ್ನಕೇಶವ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ, ದೊಡ್ಡವನಹಳ್ಳಿಯ ಲಕ್ಷ್ಮಿ, ಗೋವಿಂದನಹಳ್ಳಿಯ  ಪಂಚಲಿಂಗೇಶ್ವರ ದೇವಾಲಯಗಳು ಪ್ರಸಿದ್ದವಾಗಿವೆ.











ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವನ್ನು ಚರ್ಚಿಸಿರಿ.


           ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವನ್ನು ಚರ್ಚಿಸಿರಿ.

ಉತ್ತರ;    ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಜನಸಾಮಾನ್ಯರ ಚಳುವಳಿಯನ್ನಾಗಿ ಮಾಡಿದರು ಮತ್ತು ಭಾರತದ ಜನತೆಗೆ ಸತ್ಯಾಗ್ರಹ ಎಂಬ  ಅಸ್ತ್ರ ನೀಡಿ ಯಶಸ್ವಿಯಾಗಿ ಮುನ್ನೆಡಿಸಿದರು.

 ಮೊಹನದಾಸ ಕರಮಚಂದ ಗಾಂಧಿ 1893 ರಿಂದ 1914 ರವರೆಗೆ ದಕ್ಷಿಣ ಆಪ್ರಿಕಾ ಸರ್ಕಾರದ ವಿರುದ್ಧ ಹೊರಾಡಲು ಸತ್ಯಾಗ್ರಹ ತಂತ್ರ ಕಂಡು ಕೊಂಡು 1915 ಕ್ಕೆ ಭಾರತಕ್ಕೆ ಮರಳಿ  ಸಬರಮತಿ ಆಶ್ರಮದಲ್ಲಿ ಸತ್ಯ, ಅಹಿಂಸೆ ಆದರ್ಶಗಳನ್ನು ಅನುಸರಿಸಿ ಬಹುಬೇಗ ಮೂರು ಹೊರಾಟಗಳಲ್ಲಿ ತೊಡಗಿದರು

  ಅವುಗಳೆಂದರೆ ಚಂಪಾರನ್ ಸತ್ಯಾಗ್ರಹ ತೀನಕಾತೀಯಾ ವಿರುದ್ಧ ಮೊದಲ ಕಾಯಿದೆ ಭಂಗ ಚಳುವಳಿ ಸಂಘಟಿಸಿ ತೀನ ಕಾತಿಯಾ ರದ್ದುಗೊಳಿಸಿದರು. ಅಹಮದಾಬಾದ ಗಿರಣಿ ಮುಷ್ಕರದಲ್ಲಿ ಮೊದಲ ಉಪವಾಸ ಸತ್ಯಾಗ್ರಹ ಕೈಕೊಂಡು ಕಾರ್ಮಿಕರಿಗೆ ಸಂಬಳ ಹೆಚ್ಚಿಸುವಂತೆ ಮಾಡಿದರು. ಗುಜರಾತಿನ ಖೇಡ ಸತ್ಯಾಗ್ರಹದಲ್ಲಿ ಮೊದಲ ಅಸಹಕಾರ ಚಳುವಳಿ ಮಾಡಿ ಶಕ್ಯರಿದ್ದವರು ತೆರಿಗೆ ಕೊಡುವಂತೆ ಮಾಡಿದರು.

 1919 ರ ಜಲಿಯನ್ ವಾಲಾಭಾಗ ಹತ್ಯಾಕಾಂಡಕ್ಕೆ ನೊಂದು ತಮ್ಮ ಬಿರುದನ್ನು ಮರಳಿಸಿದರು.ಖಿಲಾಪತ್ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡುವ ಮೂಲಕ ಗಾಂಧೀಜಿ ಹಿಂದೂ ಮುಸ್ಲಂ ಸ್ನೇಹ  ಗಾಢ ಗೊಳಿಸಲು ಕಾರಣೀಭೂತರಾದರು. 1919 ಆಗಷ್ಟ 1 ರಂದು ತಿಲಕರು ತೀರಿಕೊಂಡಾಗ ಗಾಂಧೀಜಿಯವರು ಕಾಂಗ್ರೆಸ್ ಮುನ್ನೆಡೆಸುವ ಜವಾಬ್ದಾರಿ ಪಡೆದು ಅಸಹಕಾರ ಚಳುವಳಿ ಪ್ರಾರಂಭಿಸಿದರು.ವಿದೇಶಿ ವಸ್ತು ಬಹಿಷ್ಕರಿಸಿ ಜಾಗೃತಿ ಮೂಡಿಸಿದರು ಮತ್ತು ಖಾದಿ ವಸ್ತ್ರ ಹೆಮ್ಮೆಯ ವಿಷಯವಾಯಿತು.ಆದರೆ 1922 ರ ಚೌರಿ ಚೌರಾ ಘಟನೆಯಿಂದಾಗಿ ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.ಅಸಂತೃಪ್ತರಾದ ಮೊತಿಲಾಲ ನೆಹರು  ಸಿ ಆರ್ ದಾಸ ಸ್ವರಾಜ್ಯ ಪಕ್ಷ ಕಟ್ಟಿದರು.

  1929 ರಲ್ಲಿ ಲಾಹೋರ ಕಾಂಗ್ರೆಸ್ ಅಧಿವೇóಶನದಲ್ಲಿ “ಪೂರ್ಣ ಸ್ವರಾಜ್ಯ” ಕಾಂಗ್ರೆಸ್ ಗುರಿ ಎಂದು ನೆಹರು ಘೋಷಿಸಿದರು ಮತ್ತು ಕಾಯ್ದೆ ಭಂಗ ಚಳುವಳಿ ಯನ್ನು  ಆರಂಭಿಸಲು ಗಾಂಧೀಜಿಯವರಿಗೆ ಅಧಿಕಾರ ನೀಡಿದರು.

  1930 ಮಾರ್ಚ 12 ರಂದು ಸಬರಮತಿ ಆಶ್ರಮದಿಂದ ದಂಡಿಯವರೆಗೆ ಕ್ರಮಿಸಿ ಹಿಡಿ ಉಪ್ಪು ತಯಾರಿಸಿ ಉಪ್ಪನ ಕಾನೂನನ್ನು ಮುರಿದರು.ಬ್ರಹತ್ ಪ್ರಮಾಣದಲ್ಲಿ ಜನರು ಚಳುವಳಿಯಲ್ಲಿ ಭಾಗವಹಿಸಿದರು ಬ್ರಿಟಿಷರು ದಮನಕಾರಿ ಕ್ರಮ ಅನುಸರಿಸಿ ಹತ್ತಿಕ್ಕಿದರು.ಮೊದಲ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧಿಜಿ ಭಾಗವಹಿಸಲಿಲ್ಲ 1931 ರ ಗಾಂಧಿ-ಇರ್ವಿನ್ ಒಪ್ಪಂದದೊಂದಿಗೆ 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀüಜಿ ಭಾಗವಹಿಸಿದರು ಮತ್ತು ಕಾಂಗ್ರೆಸ್ ಮಾತ್ರ ಭಾರತವನ್ನು ರಾಜಕೀಯವಾಗಿ ಪ್ರತಿನಿದಿಸುತ್ತದೆ ಹಾಗು ಯಾವುದೆ ಪ್ರತ್ಯೇಕ ಮತದಾನ ಮುಸ್ಲಿಮರಿಗೆ ಹಾಗೂ ಅಸ್ಪøಶ್ಯರಿಗೆ ಒದಗಿಸಬಾರದೆಂದು ಪ್ರತಿಪಾದಿಸಿದರು,ಇಂಗ್ಲೆಢಿನ ಪ್ರಧಾನಿ ಮೆಕೆಡೊನಾಲ್ಡ ಪ್ರತ್ಯೇಕ ಮತದಾನ ವ್ಯವಸ್ಥೆ ಘೊಷಿಸಿದಾಗ ಗಾಂಧೀಜಿ ವಿರೋಧಿಸಿದರು. ಗಾಂಧೀಜಿ-ಅಂಬೇಡ್ಕರ್ ನಡುವೆ ಬಿನ್ನಾಭಿಪ್ರಾಯ ಉಂಟಾಯಿತು ಆದರೆ ಪೂನಾ ಒಪ್ಪಂದದೊಂದಿಗೆ ಕೊನೆಗೊಂಡತು.

 ತೃತೀಯ ದುಂಡುಮೇಜಿನ ಸಮ್ಮೇಳನದಲ್ಲಿ ಗಾಂಧೀಜಿ ಭಾಗವಹಿಸಲಿಲ್ಲ ಆದರೆ ಅಸ್ಪøಶ್ಯತೆ ನಿರ್ಮೂಲನೆಗಾಗಿ ಭಾರತದಾದ್ಯಂತ ಸಂಚರಿಸಿ ಕೆಟ್ಟ ಆಚರಣೆ ಬಗ್ಗೆ ತಿಳುವಳಿಕೆ ನೀಡಿದರು.ದ್ವಿತೀಯ ಮಹಾಯುದ್ದದಲ್ಲಿ ಭಾರತದ  ಒಪ್ಪಗೆ ಇಲ್ಲದೆ ಭಾರತವು ಮಿತ್ರ ರಾಷ್ಡ್ರಗಳ ಪರವಾಗಿ ಭಾಗವಹಿಸುವದೆಂದು ಬ್ರಿಟಷರು ಘೋಷಿಸಿದರು, ಪರಿಣಾಮವಾಗಿ ಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹ ಆರಂಭಿಸಿದರು.

 ಭಾರತೀಯರನ್ನು ಮನವೊಲಿಸಲು ಮಾಡಿದ ಅಗಷ್ಟ ಪ್ರಸ್ತಾಪ ಹಾಗೂ ಕ್ರಿಪ್ಸ ಸಂಧಾನಗಳು ವಿಫಲವಾದವು, ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಬಾಂಬೆ ಯಲ್ಲಿ ಸಭೆ ಸೇರಿ ಭಾರತ ಬಿಟ್ಟು ತೊಲಗಿ ನಿರ್ಣಯ ಠರಾವು ಸ್ವೀಕರಿಸಿ ಗಾಂಧೀಜಿಯರನ್ನು ನೇತೃತ್ವ ವಹಿಸಲು ಕೊರಿತು, ಗಾಂಧೀಜಿ ಮಾಡು ಇಲ್ಲವೆ ಮಡಿ ಘೋಷಣೆ ನೀಡಿದರು.ಗಾಂಧೀಜಿಯವರನ್ನಲ್ಲದೆ ಪ್ರಮುಖ ನಾಯಕರನ್ನು ಬಂದಿಸಿದರು ಪರಿಣಾಮವಾಗಿ ಹಿಂಸಾತ್ಮಕ ಚಳುವಳಿ ನಡೆದವು ಆದರೆ ಬ್ರಿಟಿಷರು ಅವುಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರು.

 2ನೇ ಯದ್ಧಾನಂತರ ಕ್ಯಾಬಿನೆಟ್ ಆಯೋಗ ರಚಿಸಿದರು.ಮುಸ್ಲಿಮ ಲೀಗ್ ನೇರ ಕಾರ್ಯಾಚರಣೆಗೆ ಕರೆ ನೀಡಿತು.ಕೊಲೆ ಸುಲಿಗೆಗಳಾದವು 1946 ರಂದು ಮೌಂಟಬ್ಯಾಟನ್ ಮಾತುಕತೆ, 1947 ರಂದು ಸಂವಿಧಾನ ಕಾಯಿದೆ ಜಾರಿಯಾಗಿ ಊರ್ಜಿತವಾಯಿತು. ಭಾರತ ದೇಶ ಇಬ್ಬಾಗವಾಗಿ 1947 ಅಗಷ್ಟ 15 ರಂದು ಭಾರತ ದೇಶ ಸ್ವಾತಂತ್ರ್ಯ ಪಡೆಯಿತು.

      ಹಿಗೆ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರು ಸತ್ಯ ಅಹಿಂಸೆ ಸತ್ಯಾಗ್ರಹ ಅಸû್ರಗಳನ್ನು ಬಳಸಿ ರೈತರು ಕಾರ್ಮಿಕರನ್ನೊಳಗೊಂಡು ಚಳುವಳಿಯನ್ನು ಸಂಘಟಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ

Tuesday, December 11, 2018

ರಾಷ್ಟ್ರೀಯತೆ ಬೆಳವಣಿಗೆ


ರಾಷ್ಟ್ರೀಯತೆ ಬೆಳವಣಿಗೆ
       ರಾಷ್ಟ್ರೀಯತೆ ಎಂದರೆ ತಮ್ಮ ರಾಷ್ಟ್ರದ ಬಗ್ಗೆ ಜನರ ನಿಷ್ಠೆ ಹಾಗೂ ಭಕ್ತಿ ಎಂದು ಹೇಳಬಹುದು. ಇನ್ನೊಂದು ಅರ್ಥದ ತಮ್ಮ ಸಂಸ್ಕತಿ, ಭಾಷೆ ಮತ್ತು ರಾಷ್ಟ್ರದ ಬಗ್ಗೆ ಜನರ ಉತ್ಕಟ ಪ್ರೀತಿ, ಇದು ಜನರನ್ನು ತನ್ನ ಎಲ್ಲಾ ವೈವಿದ್ಯತೆ ಗಳನ್ನು ಮೀರಿ ಒಂದುಗೂಡಿಸುತ್ತದೆ.  Nationalism is the only thread which binds the people together in the thread of oneness

                ರಾಷ್ಟ್ರೀಯತೆ ಪರಿಕಲ್ಪನೆಯನ್ನು ಮೊದಲು 18 ನೇ ಶತಮಾನದಲ್ಲಿ ಯುರೂಪಿನಲ್ಲಿ ಕಾಣುತ್ತೆವೆ. ಪ್ರಾನ್ಸ ಕ್ರಾಂತಿಯ ಶಿಶು ಎಂದು ಕರೆದುಕೊಂಡಿರುವ ನೆಪೋಲಿಯನ್ ಯುರೋಪಿನ ಚಿತ್ರಣ ಬದಲಿಸುವ ಮೂಲಕ ಒಂದು ಜನಾಂಗ ಒಂದು ಭಾಷೆ ಒಂದು ಸಂಸ್ಕøತಿ ಜನರು ಒಂದುಗೂಡುವಂತೆ ಮಾಡುವ  ಮೂಲಕ ಯುರೋಪಿನಲ್ಲಿ ರಾಷ್ಟ್ರೀಯತೆ ಬೆಳವಣಿಗೆಗೆ ಕಾರಣಿಭೂತನಾದ ಫಲಶೃತಿಯಾಗಿ ಇಟಲಿ,ಜರ್ಮನಿಯಂಥಹ ರಾಷ್ಟ್ರಗಳು ಉಗಮವಾದವು,ಈ ರಾಷ್ಟ್ರಗಳ ಉಗಮಕ್ಕೆ ಕಾರಣರಾದ ಜೋಶೆಪ್ ಮ್ಯಜನಿ ಕೌಂಟ ಕವೂರ,ಬಿಸ್ಮಾರ್ಕ ಸ್ಮರಣೀಯರು.

        20ನೇ ಶತಮಾನದ ಆದಿ ಭಾಗದಲ್ಲಿ ರಾಷ್ಟ್ರೀಯತೆ ಉಗ್ರರಾಷ್ಟ್ರೀಯತೆ ರೂಪ ತಾಳಿ ಎರಡು ಮಹಾಯುದ್ದಗಳು ಸಂಭವಿಸಿ ಅಪಾರ ಹಾನಿಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ ಆದರೆ 19ನೆಯ ಶತಮಾನದಲ್ಲಿ ಆರಂಭವಾದ ರಾಷ್ಟ್ರಿಯತೆ ಬೆಳವಣಿಗೆ ಏಷಿಯಾ ಆಪ್ರಿಕಾ ಲ್ಯಾಟಿನ ಅಮೆರಕಾದ ದೇಶಗಳು ಸ್ವಾತಂತ್ರ್ಯ ಹೊಂದಲು ದಾರಿ ಮಾಡಿಕೊಟ್ಟಿತು. ಆಧುನಿಕ ಇತಿಹಾಸದ ಪ್ರಗತಿ ಆ ದೇಶದ ರಾಷ್ಟ್ರೀಯತೆ ಮೇಲೆ ನಿಂತಿರುವದು ಅಷ್ಟೆ ಸತ್ಯ.

           ಪ್ರಾಚೀನ ಭಾರತದಲ್ಲಿ ರಾಷ್ಟ್ರೀಯತೆ ಕೊರತೆಯಿಂದಾಗಿ ಬಾರತವು ಹಲವಾರು ದಾಳಿಗಳನ್ನು ಕಾಣುವಂತಾಯಿತು ಸಾಮ್ರಾಟ ಅಶೋಕನ ಪೂರ್ವದಲ್ಲಿ ಗ್ರಿಕರು (ಅಲೆಗ್ಸಾಂಡರ) ಭಾರತದ ಮೆಲೆ ದಾಳಿ ಮಾಡಿದರು, ಮೌರ್ಯರ ಪತನಾನಂತರ ಶಕರು ಭಾರತದ ಮೇಲೆ ದಾಳಿ ಮಾಡಿದರು. ಸಾ.ಶ. 40 ರ ಹೊತ್ತಿಗೆ ಕುಶಾನರು ಭಾರತದ ಮೆಲೆ ದಾಳಿ ಮಾಡಿ ಭಾರತದಲ್ಲಿ ಅಧಿಕಾರ ಸ್ಥಾಪಿಸಿದರು. ಸಾ.ಶ. 450 ರ ಸುಮಾರಿಗೆ ಗುಪ್ತರ ಅವದಿಯಲ್ಲಿ ಹೂಣರ ದಾಳಿಯು ಭಾರತದಲ್ಲಿ ಸುವರ್ಣ ಯುಗ ನಿರ್ಮಿಸಿದ ಗುಪ್ತರ ಅವನತಿಗೆ ಅಲ್ಪ ಮಟ್ಟನ ಕಾರಣವಾಯಿತು.ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮರಲ್ಲಿ ಅರಬ್ಬರು ಮೊದಲಿಗರು 712ರಲ್ಲಿ ಬಸ್ರಾದ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಬಿನ್ ಖಾಸಿಮ ಭಾರತದ ಮೇಲೆ ದಾಳಿ ಮಾಡಿ ಅಪಾರ ರಕ್ತಪಾತಕ್ಕೆ ಕಾರಣನಾದ. ಸಾಶ.1000 ರಿಂದ 1027 ರ ವರೆಗೆ ಘಜ್ನಿ ಮಹಮದ 17 ಸಾರಿ ದಂಡಯತ್ರೆ ಮಾಡಿದ ಈ ಅವದಿಯಲ್ಲಿ ಗುಜರಾತಿನ ಸೋಮನಾಥದವರೆಗೂ ಬಂದಾಗ ಅತ್ಯಂತ ಸಣ್ಣ ಸೈನ್ಯದ ಘಜ್ನಿ ಮಹಮದ್ ನನ್ನು ಎದುರಿಸಲಾರದ್ದು ರಾಷ್ಟ್ರೀಯತೆಯ ಕೊರತೆಯಲ್ಲದೆ ಇನ್ನೆನು ? ನಂತರ ಒಂದುವರೆ ಶತಮಾನಗಳವರೆಗೆ ಭಾರತ ಯಾವುದೆ ದಾಳಿಗೆ ಒಳಗಾಗಲಿಲ್ಲಿ ಸಾ.ಶ 1175 ರಿಂದ ಮಹಮ್‍ದ ಘೊರಿ ದಾಳಿ ಪ್ರಾರಂಭವಾಗಿ ಸಾ.ಶ. 1206 ರಲ್ಲಿ ಭಾರತದಲ್ಲಿ ದೆಹಲಿ ಸುಲ್ತಾನರ ಆಡಳಿತ ಪ್ರಾರಂಭವಾಗುವಂತಾಯಿತು. ಇದೆ ಅವದಿಯಲ್ಲಿ ಅಂದರೆ 1221 ರಲ್ಲಿ ವಾಯವ್ಯ ಭಾರತದಲ್ಲಿನಡೆದ ಚೆಂಘೀಜಖಾನ ದಾಳಿ,ಸಾ.ಸ.1399 ರಲ್ಲಿ ದೆಹಲಿಯನ್ನು ನಡುಗಿಸಿದ ಕುಂಟ ತೈಮೂರನ ದಾಳಿಯು ಉಲ್ಲೇಖನಾರ್ಹ.  ಸಾ.ಶ.1526 ರಿಂದ 1707 ರ ವರೆಗೆ ಆಳಿದ ಮೊಗಲರು ವಿದೇಶಿಗರೆ ಅವರ ವಂಶದ  ಕುಡಿ 1857 ರ ವರೆಗೆ ಅಸ್ಥಿತ್ವದಲ್ಲಿ ಇತ್ತು                                                                                                                   

    1492 ರಲ್ಲಿ ಭಾರತಕ್ಕೆ ಬಂದ ಪೋರ್ಚಗೀಸರಾದಿಯಾಗಿ ಭಾರತವಾಳಿದ ಆಂಗ್ಲರು ವ್ಯಾಪಾರಕ್ಕಾಗಿ ಭಾರತಕ್ಕೆಬಂದು ರಾಷ್ಟ್ರೀಯತೆಯ ಕೊರತೆಯಿಂದ ಅನೈಕ್ಯದಿಂದ ಕಚ್ಚಾಡುತ್ತಿದ್ದ ಭಾರತೀಯರನ್ನು ಸೋಲಿಸಿ ರಾಜ್ಯಾಡಳಿತ ಮಾಡಿದರು. ಆಡಳಿತದ ಅನುಕೂಲಕ್ಕೆ ಭಾರತೀಯರಿಗೆ ನೀಡಿದ ಶಿಕ್ಷಣದಿಂದ ಭಾರತೀಯರು ರಾಷ್ಠ್ರೀಯತೆ ಬೆಳೆಸಿಕೊಳ್ಳಲು ಸಹಾಯಕವಾಯಿತು. ಭಾರತೀಯರು ರಾಷ್ಠ್ರೀಯತೆಗೆ ಕಾರಣವಾದ ಅಂಶಗಳೆಂದರೆ;

 1) ಬ್ರೀಟಿಷರ ಆರ್ಥೀಕ ಶೋಷನೆ ಅರಿವು

 2)ಭಾರತವನ್ನುಆಡಳತಕ್ಕಾಗಿಒಗ್ಗೂಡಿಸಿದ್ದು                         
3) ಏಕರೂಪದ ಆಡಳಿತ ವ್ಯವಸ್ಥೆ & ನ್ಯಾಯಾಂಗ ವ್ಯವಸ್ಥೆ

 4) ಭ್ರಿಟಿಷರು ಅನುಸರಿಸಿದ ಪ್ರತಿಗಾಮಿ ದೊರಣೆ

 5) ಭಾರತದ ಪತ್ರಿಕೊದ್ಯಮ ಮತ್ತು19&20 ನೇ ಶತಮಾನದ ಆರಂಭದ ಸಾಹಿತ್ಯ ಭಾರತೀಯರಲ್ಲಿ ರಾಷ್ಟ್ರಿತೆಯನ್ನು ಪ್ರಚೋದಿಸಿವು. ರಾಷ್ಟ್ರೀಯತಯನ್ನು ಪ್ರಚೋದಿಸುವ ಅನೇಕ ಲೆಖನಗಳು & ಕವಿತೆಗಳು ಇಂಗ್ಲಿಷ ಹಾಗು ದೇಶಿ ಭಾಷೆಗಳೆರಡರಲ್ಲೂ ಪ್ರಕಟವಾದವು. ವಿದ್ವಾಂಸರು ಸಂಶೋಧನೆಗಳನ್ನು ನಡೆಸಿ ಭಾರತದ ಭವ್ಯ ಸಾಂಸ್ಕøತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಇದು ಭಾರತದ ಸಾಂಸ್ಕøತಿಕ ಪರಂಪರೆ,ರಾಷ್ಟೀಯವಾದಿಗಳಲ್ಲಿ ಹೆಮ್ಮೆ ಹಾಗು ಆತ್ಮವಿಸ್ವಾಸವನ್ನು ತುಂಬಿತು

           ಭಾರತದ ರಾಷ್ಟ್ರಿಯ ಚಳುವಳಿಗಳು ವಿವಿಧ ಹಂತಗಳಲ್ಲಿ ನಡೆದವು ಅವು ಮಂದಗಾಮಿಗಳ ಹೋರಾಟ ಇರಬಹುದು ಇಲ್ಲವೆ ತೀವ್ರಗಾಮಿಗಳ ಹೋರಾಟವಿರಬಹುದು ಇಲ್ಲವೆ ಕ್ರಾಂತಿಕಾರಿಗಳು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂಸಾತ್ಮಕ ಚಟುವಟಿಕೆಗಳಿಗೆ ಸಿದ್ದರಿದ್ದ ಗುಪ್ತ ಸಂಘಗಳಿರಬಹುದು,ಇವರೆಲ್ಲರ ಪ್ರಯತ್ನದ ಫಲದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.

     1947 ರ ಸಂವಿಧಾನೀಯ ಶಾಸನವು ಭಾರತವನ್ನು ಎರಡು ದೇಶಗಳಾಗಿ ವಿಭಜಿಸಲು ಮತ್ತು ಇಲ್ಲಿಯ ಸಂಸ್ಥಾನಗಳು ತಮ್ಮಗಿಷ್ಟವಾದ ದೇಶದಲ್ಲಿ ಸೇರಲು ಇಲ್ಲವೆ ಸ್ವತಂತ್ರವಾಗಿಲು ಅವಕಾಶ ಮಾಡಿಕೊಟ್ಟಿತು ಇದನ್ನೆ  ಆಧಾರವಾಗಿಟ್ಟುಕೊಂಡ ಜುನಾಗಡ,ಹೈದರಾಬಾದ,ಕಾಶ್ಮಿರ ಸಂಸ್ಥಾನಗಳು ವಿಲೀನಕ್ಕೆ ಹಿಂದೆ ಮುಂದೆ ನೋಡಿದವು ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟ ನಿರ್ದಾರದಿಂದಾಗಿ 550 ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಂಡವು, ಈ ಅಖಂಡತೆಯನ್ನು ಕಾಪಾಡಿದ ಸರ್ದಾರ ವಲ್ಲಭಬಾಯಿ ಪಟೇಲರ ಜಯಂತಿಯನ್ನು ಏಕತಾ ದಿನವನ್ನಾಗಿ ಆಚರಿಸುತ್ತಿದ್ದೆವೆ, ಭಾರತ ಸಕಾರವು ಗುಜರಾತಿನ ಸರ್ದಾರ ಸರೊವರದಲ್ಲಿ 182 ಮೀಟರ ಬೃಹತ್‍ಮೂರ್ತಿಯನ್ನು  ನಿರ್ಮಿಸಿ ಅವರಿಗೆ ಗೌರವ ಅರ್ಪಿಸಿದೆ.

     ಮಕ್ಕಳಲ್ಲಿ ಮನೆಯಿಂದಲೆ ರಾಷ್ಟ್ರೀಯತೆ ಪ್ರಾರಂಭವಾಗುತ್ತದೆ ಪಾಲಕರಿಗೆ ಪ್ರಣಾಮ, ಹಿರಿಯರಿಗೆ ಗೌರವ,ಪ್ರೀತಿ ತೊರಿಸುವ ಮೂಲಕ ಪ್ರಾರಂಭವಾಗುತ್ತದೆ ಶಾಲೆಗೆ ಸೇರಿದ ಮೆಲೆ ರಾಷ್ಟ್ರಗೀತೆ ಹಾಡುವ ಮೂಲಕ ಗೀತೆಯಲ್ಲಿ ವರ್ಣಸಿದ ಪಂಜಾಬ ಸಿಂದ್ ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ ಪ್ರದೇಶಗಳ ಪರಿಚಯದೋಂದಿಗೆ ವಿಂದ್ಯ ಹಿಮಾಚಲ ಯಮುನಾ ಗಂಗಾ ನಮ್ಮ ದೇಶದ ಹಿಮಾಲಯ ನದಿ ಬೆಟ್ಟಗಳ ವರ್ಣನೆ ಭಾರತದ ಬಗ್ಗೆ ಅಭಿಮಾನ ಹೊಂದುವಂತ ಮಾಡುತ್ತದೆ, ರಾಷ್ಟ್ರಗೀತೆ,ರಾಷ್ಟ್ರದ್ವಜ,ರಾಷ್ಟ್ರ ಚಿಹ್ನೆ ರಾಷ್ಟ್ರಿಯ ಹಬ್ಬಗಳು ರಾಷ್ಟ್ರಾಭಿಮಾನ ಬೆಳೆಯುವಂತೆ ಮಡುತ್ತವೆ. ಬಾರತೀಯ ಇತಿಹಾಸ, ಸ್ಮಾರಕಗಳು ವಸ್ತು ಸಂಗ್ರಹಾಲಯಗಳು, ನಮ್ಮ ಮಹಾನ್ ಪರಂಪರೆ, ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ಮಹಾಪುರುಷರ ಜೀವನ ಚರಿತ್ರೆಗಳು ಮಕ್ಕಳು ಹೆಮ್ಮೆ ಪಡುವಂತೆ ಮಾಡುತ್ತವೆ.

                                                                                                                                                                                       ಭಾರತ ದೇಶ 3287263 ಚ.ಕಿ ಮೀ ವಿಸ್ಥಾರ ಹೊಂದಿದ್ದು ಅಪಾರ ಖನಿಜ ಸಂಪನ್ನೂಲಗಳ ಆಗರವಾಗಿದೆ ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಕುರುಚಲ ಸಸ್ಯವರ್ಗಗಳವರೆಗೆ ಅಪಾರ ಸಸ್ಯ ರಾಶಿ ಹಾಗೂ ಪ್ರಾಣಿ ಸಂಕುಲಗಳನ್ನು ಹೊಂದಿದೆ.ಭಾರತದ ಇತಿಹಾಸವು ವಿಶ್ವದ ಆರಂಭಿಕ ಇತಿಹಾಸಗಳಲ್ಲಿ ಒಂದಾಗಿದೆ. ಭಾರತೀರು “ವಸುದೈವಕ ಕುಟುಂಬಂ” ಹಾಗೂ ಸರ್ವೇಜನ ಸುಖಿನೋಭವಂತು ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಇದರರ್ಥ ವಿಶ್ವವೆ ಕುಟುಂಬ,ಸಮಸ್ತ ಜನರಿಗೆ ಸುಖವಾಗಲಿ ಎಂದಾಗುತ್ತದೆ

     ಭಾರತಿಯೀರು ಜಗತ್ತಿನ ಸಾಹಿತ್ಯ,ತತ್ವಜ್ಞಾನ ಸಂಗೀತ,ವಾಸ್ತುಶಿಲ್ಪ,ವಿಜ್ಞಾನ ಯೋಗ,ವೈದ್ಯಕೀಯ, ಖಗೋಳಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಸ್ಮಾರಕಗಳಾದ ಕೋಟೆಗಳು ಗಿರಿದುರ್ಗ,ಅರಮನೆಗಳು,ದೇವಾಲಯಗಳು,ಸಮಾದಿಗಳು,ಗುಹೆಗಳು ಭಾರತೀಯ ಕಲಾಶ್ರೇಷ್ಠತೆಯ ಕುರುಹುಗಳಾಗಿವೆ. ವಿಶ್ವಸಂಸ್ಥೆಯು ಹಂಪಿ ಐಹೊಳೆ ಪಟ್ಟದಕಲ್ ಕಜರಾಹೋ ಕೊನಾರ್ಕ ತಾಜಮಹಲ್ ಜಂತರ್ ಮಂತರ್ ಸಾಂಚಿ ಅಜಂತಾ ಎಲ್ಲೋರ ಮುಂತಾದ ಮೂವತ್ತಕ್ಕೂ ಹೆಚ್ಚು ತಾಣಗಳನ್ನು ವಿಶ್ವಪಾರಂಪರೆ ಪಟ್ಟಿಗೆ ಸೇರಿಸಿದೆ.

      ನಿಸರ್ಗಸೌಂದರ್ಯ ತಾಣಗಳಾದ ಗಿರಿದಾಮಗಳು ಹಿಮಾಲಯ ಕಾಶ್ಮೀರಕಣಿವೆ ಕೇರಳದ ರಾಷ್ಟ್ರೀಯ ಉದ್ಯಾನಗಳು ಕಡಲತೀರಗಳು ಮತ್ತು ಐತಿಹಾಸಿಕ ಸ್ಮಾರಕಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ

       ಭಾರತ ದೇಶದ ರಾಷ್ರಚಿಹ್ನೆ,ರಾಷ್ಟ್ರಗೀತೆ,ರಾಷ್ಟ್ರಧ್ವಜ ರಾಷ್ಟ್ರೀಯ ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಮಹಾನ್ ಶಕ್ತಿಗಳು ನಮ್ಮಲ್ಲಿ ಭೌಗೋಳಕ,ಜನಾಂಗೀಯ,ಭಾಷಾ ಸಾಮಾಜಿಕ ಮತ್ತು ಧಾರ್ಮಿಕ ಆರ್ಥಿಕ ವೈವಿಧ್ಯತೆಗಳೇನೆ ಇದ್ದರೂ ನಾವು ಅಖಂಡವಾಗಿದ್ದೇವೆ,ಇದಕ್ಕೆ ಕಾರಣ ಭಾರತವನ್ನು ಹಿಮಾಲಯ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಗೊಳಿಸಿ ಒಂದು ಪ್ರತ್ಯೇಕ ಭೌಗೋಳಕ ವಿಭಾಗ ಮಾಡಿದೆ ಅಲ್ಲದೆ ಭಾರತದ ಪ್ರಾಚೀನ ಆಡಳಿತ ವ್ಯವಸ್ಥೆಗಳು ಬಹುತೇಕ ಏಕರೂಪವಾಗಿದ್ದು  ಅವು ಚಾಣಕ್ಯನ ಅರ್ಥಶಾಸ್ತ್ರದಿಂದ ಹೊರಹೊಮ್ಮಿದವುಗಳಾಗಿವೆ.ಪ್ರಾಚೀನ ಭಾರದಲ್ಲಿ ಏಕರೂಪದ ಆಡಳಿತ ಶಿಕ್ಷಣ &ಸಾಹಿತ್ಯವಿತ್ತು, ರಾಮಾಯಣ ಮತ್ತು ಮಹಾಭಾರತ ಮತ್ತು ಮಹಾಭರತ, ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ.

    ರಾಷ್ಟ್ರದ ಗಡಿಯಲ್ಲಿ ನಮಗೆ ರಕ್ಷಣೆ ನಿಡುತ್ತಿರುವ ನಮ್ಮ ವೀರ ಸೈನಿಕರು ತಮ್ಮ ಪ್ರದೇಶ ಭಾಷೆ,ಜಾತಿ,ಧರ್ಮವನ್ನು ಮೀರಿ ನಮಗಾಗಿ ಪ್ರಾಣಾರ್ಪಣೆ ಮಾಡುತ್ತಿರುವದು ರಾಷ್ಟ್ರೀಯತೆಯಲ್ಲದೆ ಇನ್ನೇನು ? ಇದರ ಯಾವುದೆ ಪರಿವೆ ಇಲ್ಲದೆ ದೇಶದ ಒಳಗಡೆ ಕೆಲವು ವಿಛ್ಛಿದ್ರಕಾರಿ ಶಕ್ತಿಗಳು ಅಂದರೆ ನಕ್ಸಲ್ಯೆಟ ಸಮಸ್ಯೆ ಭಯೋದಕತೆ ಕಾಶ್ಮೀರ ಸಮಸ್ಯೆ ಈಶಾನ್ಯ ಭಾರತದ ಸಮಸ್ಯೆಗಳು,ನಿರಾಶ್ರಿತರ ಸಮಸ್ಯೆ ಮುಂತಾದವು ಭರತದ ಪ್ರಗತಿಗೆ ಮಾರಕವಾಗಿವೆ ಇವುಗಳೆಲ್ಲವನ್ನು ಮೀರಿ ಜಾಗತಿಕವಾಗಿ ಎದ್ದು ನಿಲ್ಲಬೇಕಾದರೆ ಅದಕ್ಕೆ ರಾಷ್ಟ್ರೀಯತೆ ಒಂದು ಪರಿಹಾರವಾಗಬಲ್ಲದು. ಇತ್ತೀಚಗೆ ಕೇಂದ್ರ ಸರಕಾರ ನಾಗರಿಕ ಸೇವೆಗೆ ಸೇರಬೇಕಾದರೆ ಸೈನಿಕ ಸೇವೆ ಕಡ್ಡಾಯಮಾಡಬೇಕೆಂದು ಚಿಂತಿಸುತ್ತಿರುವದು ಇದೆ ಕಾರಣಕ್ಕಾಗಿ ಅಲ್ಲವೆ, ಒಟ್ಟಾರೆಯಾಗಿ ಭಾರತೀಯರಾದ ನಾವೆಲ್ಲ ರಾಷ್ಟಕ್ಕಾಗಿ ನಿಷ್ಠರಾಗಿರುವುದು ನಮ್ಮ ಕರ್ತವ್ಯವಾಗಿದೆ. ದೇಶವನ್ನು ನಾವು ತಾಯಿ ಎಂದು ಭವಿಸಬೇಕು ತಾಯಿ ತನ್ನ ಮಗುವನ್ನು ಹೆಗೆ ಸಂರಕ್ಷಿಸುವಳೋ ಹಾಗೆಯೇ ದೇಶವು ನಮ್ಮನ್ನು ರಕ್ಷಿಸತ್ತದೆ  ಜೈ ಭಾರತ ಮಾತೆ ಜೈ ಕರ್ನಾಟತಕ ದೇವಿ.





                                                                                                                                                                                                   

























ಮಕ್ಕಳ ಕಲಿಕೆಯಲ್ಲಿ ಭಾರತೀಯ ಪ್ರಜ್ಞೆ

ಮಕ್ಕಳ ಕಲಿಕೆಯಲ್ಲಿ ಭಾರತೀಯ ಪ್ರಜ್ಞೆ 
      ಮಕ್ಕಳೇ ನಮಗೆಲ್ಲ ಹೆಮ್ಮೆಯ ವಿಷಯ ಏನೆಂದರೆ ಭಾರತ ದೇಶ 32,87,263 ಚ.ಕಿ ಮೀ ವಿಸ್ಥಾರ ಹೊಂದಿದ್ದು ಜಗತ್ತಿನಲ್ಲಿ ಏಳನೇ ದೊಡ್ಡ ದೇಶ, ಮಾನವ ಸಂಪನ್ಮೂಲದಲ್ಲಿ2ನೇ ದೇಶ.  ಭಾರತವನ್ನು ಒಂದು ಉಪಖಂಡವೆಂದು ಕರೆಯಲಾಗಿದೆ ಅಂದರೆ ಭಾರತದಲ್ಲಿ ಒಂದು ಖಂಡದಲ್ಲಿ ಇರಬೇಕಾದ ಎಲ್ಲಾ ವೈವಿದ್ಯತೆಗಳು ಭಾರತದಲ್ಲಿ ಇವೆ.
       ಜಾಗತಿಕ ನಕ್ಷೆಯನ್ನು ನೋಡಿದಾಗ ಭಾರತದೇಶವು 80  ಉತ್ತರ ಅಕ್ಷಾಂಶ ದಿಂದ 370 ಉತ್ತರ ಅಕ್ಷಾಂಶದವರೆಗೂ   680 ಪೂರ್ವ ರೇಖಾಂಶದಿಂದ 980 ಪೂರ್ವ ರೇಖಾಂಶದವರೆಗೊ ವ್ಯಾಪಿಸಿದೆ. ಉತ್ತರದಲ್ಲಿ ಹಿಮಾಲಯ ಪರ್ವತಗಳು,ಉತ್ತರದ ಮೈದಾನಗಳು, ಪರ್ಯಾಯ ದ್ವೀಪದ ಪ್ರಸ್ಥಭೂಮಿ, ಪೂರ್ವ & ಪಶ್ಚಿಮ ತೀರ ಪ್ರದೇಶಗಳು ಭಾರತದ ಸ್ವಾಭಾವಿಕ ವಿಭಾಗಗಳು. ಭಾರತವು ಸಂಪನ್ನೂಲಗಳ ಆಗರವಾಗಿದೆ ಇಲ್ಲಿ ಫಲವತ್ತಾದ ಬಯಲು ಪ್ರದೇಶ, ಖನಿಜ ಸಂಪನ್ಮೂಲ ಹೇರಳವಾಗಿದೆ. ವಿಫುಲ ಮಳೆ  ಅನುಕೂಲಕರ ಹವಾಮಾನವು ಸಂಪದ್ಭರಿತ ಮತ್ತು ವೈವಿದ್ಯಪೂರ್ಣ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಬೆಳವಣಿಗೆಗೆ ಕಾರಣವಾಗಿದೆ .
       ಭಾರತೀಯರಾದ ನಾವೆಲ್ಲ ಐಕ್ಯತೆಯಿಂದ ಬದುಕುತ್ತಿದ್ದೇವೆ ಈ ಐಕ್ಯತೆ ಬ್ರಿಟಷರ ಕಾಲದಲ್ಲಿ ಮಾತ್ರ ಆಗಿದ್ದಲ್ಲ, ಪುರಾತನ ಕಾಲದಲ್ಲಿ ಇರಲಿಲ್ಲ ಎಂದು ತೀರ್ಮಾನಸಿದರೆ ದೊಡ್ಡ ತಪ್ಪನ್ನು ಎಸಗಿದಂತೆ ಆಗುತ್ತದೆ ಭಾರತದಲ್ಲಿ ಐಕ್ಯತೆ ಭಾವನೆಯು ಇತ್ತೀಚನದಲ್ಲ ಮತ್ತು ಸಂಶೋಧನೆಯೂ ಅಲ್ಲ, ಇಂತಹ ಭಾವನೆ ಭಾರತದ ನಾಗರಿಕತೆ ಮತ್ತು ಸಂಸ್ಕøತಿಗೆ ಅಸ್ತಿಭಾರಹಾಕಿದವರಲ್ಲಿ ಸ್ಪಷ್ಟವಾಗಿತ್ತು. ಅವರು ಭಾರತದ ಭೌಗೋಳಿಕ ಐಕ್ಯತೆ ಬಗ್ಗೆ ಮೇಲಿಂದ ಮೇಲೆ ಸ್ಫಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಋಷಿಮುನಿಗಳು ಭಾರತವನ್ನು ಭರತವರ್ಷ & ಭರತಖಂಡ,ಎಂದು ಕರೆಯುತ್ತಿದ್ದರು.ಎಲ್ಲ ಪುರಾಣ ಮತ್ತು ಕಾವ್ಯಗಳಲ್ಲಿ ಈ ಹೆಸರು ಅಖಂಡವಾಗಿ ಪ್ರಸ್ತಾಪವಾಗಿದೆ.ವಿಷ್ಣು ಪುರಾಣದ ಒಂದು ಶ್ಲೋಕದಲ್ಲಿ;-
                                      ಉತ್ತರಂ ಯತ್ ಸಮುದ್ರಸ್ಯ ಹಿವiದ್ರಿಶ್ಚೈವ ದಕ್ಷಣಂ
                                  ವರ್ಷಂ ತದ್ಭಾರತಾಮ ನಾಮ: ಭಾರತೀಯತ್ರ ಸಂತತಿ   ಎಂದಿದೆ
ಇದರ ಅರ್ಥ;ಸಮುದ್ರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ದೇಶವೆ ಭಾರತ ಇಲ್ಲಿ ವಾಸಿಸುವ ಜನರು ಭರತನ ವಂಶಸ್ಥರು. ಭಾರತದ ಬಹು ಸಂಖ್ಯಾತರಾದ ಹಿಂದೂಗಳ ಪ್ರಾತ: ಪ್ರಾರ್ಥನೆ ಗೀತೆಯು
                 ಗಂಗೇ ಚ ಯಮುನೆಚೈವ
               ಗೋದಾವರಿ ಸರಸ್ವತಿ.
               ನರ್ಮದೇ ಸಿಂದೂ ಕಾವೇರಿ
               ಜಲಸ್ಮಿನ್ ಸನ್ನಿದಿ ಕುರು || ಎಂದಿದೆ
    ಭಾರತದಲ್ಲಿ ವಿವಿಧ ಧರ್ಮ ಜಾತಿ ಮತ್ತು ಉಪಜಾತಿಗಳು ಕಂಡುಬಂದರೂ ಸಹ ಮೂಲಭೂತವಾಗಿ ಧಾರ್ಮಿಕ ಐಕ್ಯತೆ ಇದೆ ಎಲ್ಲ ಪಂಥಗಳು ಮತಗಳು ಆಧ್ಯಾತ್ಮಿಕ ಮಹತ್ತಿನಲ್ಲಿ ನಂಬಿಕೆನ್ನಿಟ್ಟಿವೆ ಶಿವನ ಮತ್ತು ವಿಷ್ಣುವಿನ ಆರಾಧನೆ ಒಂದಲ್ಲಾ ಒಂದು ರೂಪದಲ್ಲಿ ಭಾರತದಾದ್ಯಂತ ರೂಢಿಯಲ್ಲಿದೆ.ಪುರಾತನ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದೆ ಪವಿತ್ರ ಭಾವನೆಯಿಂದ ಪಠಿಸಲಾಗುತ್ತದೆ. ಬಾರತೀಯ ಜನಜೀವನದ ಗುರಿ ಎಲ್ಲಾ ಕಡೆ ಮೋಕ್ಷ ಮತ್ತು ನಿರ್ವಾಣವಾಗಿದೆ ಧಾರ್ಮಿಕ ಆಚಾರ ವಿಚಾರಗಳು ವಿಧಿ ನಿಯಮಗಳು ಸಾಮಾನ್ಯವಾಗಿ ಒಂದೆಯಾಗಿವೆ. ಮಹಾಭಾರತದಲ್ಲಿ ಉಲ್ಲೆಖಿಸಿರುವಂತೆ ದುಷ್ಯಂತ ಶಾಕುಂತಲೆಯರ ಮಗನಾದ ಭರತನಿಂದಾಗಿ  ಭರತಖಂಡಕ್ಕೆ ಭರತವರ್ಷ ಹಾಗು ಭಾರತ ಹೆಸರು ಬಂದಿದೆ ಈ ದೇಶಕ್ಕೆ ಜಂಬೂದ್ವೀಪ,ಹಿಂದೂಸ್ಥಾನ ಮತ್ತು ಇಂಡಿಯಾ ಎಂಬ ಹೆಸರುಗಳು ಇವೆ
       ಭಾರತದ ಇತಿಹಾಸವು ವಿಶ್ವದ ಆರಂಭಿಕ ಇತಿಹಾಸಗಳಲ್ಲಿ ಒಂದಾಗಿದೆ. ಭಾರತೀಯರು “ವಸುದೈವಕ ಕುಟುಂಬಂಕಂ” ಹಾಗೂ ಸರ್ವೇಜನ ಸುಖಿನೋಭವಂತು ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಇದರರ್ಥ ವಿಶ್ವವೆ ಕುಟುಂಬ,ಸಮಸ್ತ ಜನರಿಗೆ ಸುಖವಾಗಲಿ ಎಂದಾಗುತ್ತದೆ.
     ಭಾರತಿಯೀರು ಜಗತ್ತಿನ ಸಾಹಿತ್ಯ,ತತ್ವಜ್ಞಾನ ಸಂಗೀತ,ವಾಸ್ತುಶಿಲ್ಪ,ವಿಜ್ಞಾನ ಯೋಗ,ವೈದ್ಯಕೀಯ, ಖಗೋಳಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಸ್ಮಾರಕಗಳಾದ ಕೋಟೆಗಳು ಗಿರಿದುರ್ಗ,ಅರಮನೆಗಳು,ದೇವಾಲಯಗಳು,ಸಮಾದಿಗಳು,ಗುಹೆಗಳು ಭಾರತೀಯ ಕಲಾಶ್ರೇಷ್ಠತೆಯ ಕುರುಹುಗಳಾಗಿವೆ. ವಿಶ್ವಸಂಸ್ಥೆಯು ಹಂಪಿ ಐಹೊಳೆ ಪಟ್ಟದಕಲ್ ಕಜರಾಹೋ ಕೊನಾರ್ಕ ತಾಜಮಹಲ್ ಜಂತರ್ ಮಂತರ್ ಸಾಂಚಿ ಅಜಂತಾ ಎಲ್ಲೋರ ಮುಂತಾದ ಮೂವತ್ತಕ್ಕೂ ಹೆಚ್ಚು ತಾಣಗಳನ್ನು ವಿಶ್ವಪಾರಂಪರೆ ಪಟ್ಟಿಗೆ ಸೇರಿಸಿದೆ.
      ನಿಸರ್ಗಸೌಂದರ್ಯ ತಾಣಗಳಾದ ಗಿರಿದಾಮಗಳು ಹಿಮಾಲಯ ಕಾಶ್ಮೀರಕಣಿವೆ ಕೇರಳದ ರಾಷ್ಟ್ರೀಯ ಉದ್ಯಾನಗಳು ಕಡಲತೀರಗಳು ಮತ್ತು ಐತಿಹಾಸಿಕ ಸ್ಮಾರಕಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ
   
       ಪ್ರಾಚೀನ ಬಾರತವು ಭಾರತೀಯರ ಅನೈಕ್ಯತೆಯಿಂದ ಹಲವಾರು ದಾಳಿಗಳನ್ನು ಕಾಣುವಂತಾಯಿತು ಗ್ರಿಕರು (ಅಲೆಗ್ಸಾಂಡರ) ಭಾರತದ ಮೆಲೆ ದಾಳಿ ಮಾಡಿದರು ಮತ್ತು ಭಾರತೀಯ ಸಂಸ್ಕøತಿಗೆ ತಮ್ಮದೆಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಮೌರ್ಯರು ಭರತದಲ್ಲಿ ಮೊದಲು ಬಾರಿಗೆ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿ ಅಡಳಿತ ಮಾಡಿದರು ಅದರ ಶ್ರೇಯಸ್ಸು ಚಂದ್ರಗುಪ್ತ ಮೌರ್ಯ ಮತ್ತು ಆಶೋಕನಿಗೆ ಸಲ್ಲಬೇಕು. ಮೌರ್ಯರ ಪತನಾನಂತರ ಶಕರು&ಕುಶಾನರು ಭಾರತದ ಮೇಲೆ ದಾಳಿ ಮಾಡಿದರು. ಕುಶಾನರು ಭಾರತದ ಮೆಲೆ ದಾಳಿ ಮಾಡಿ ಭಾರತದಲ್ಲಿ ಅಧಿಕಾರ ಸ್ಥಾಪಿಸಿದರು ಮುಂದೆ ಅವರು ಭಾರತೀಯರೆ ಆಗಿ ಹೋದರು ಮತ್ತು ಬಾರತದ ಸಂಸ್ಕøತಿಗೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಗುಪ್ತರು ಸಾಹಿತ್ಯ, ವಿಜ್ಞಾನ,ಖಗೋಳ,ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ,ಅವರು ಭಾರತದಲ್ಲಿ ಸುವರ್ಣ ಯುಗ ನಿರ್ಮಿಸಿದರು.   ಭಾರತದಲ್ಲಿ ಆಶೋಕನ ನಂತರ ವಿಸ್ತಾರವಾದ ಸಾಮ್ರಾಜ್ಯ ಕಟ್ಟಿದ ಶ್ರೇಯಸ್ಸು ಸಮುದ್ರಗುಪ್ತನಿಗೆ ಸಲ್ಲುತ್ತದೆ ಈ ಅವದಿಯಲ್ಲಿ ಹೂಣರ ದಾಳಿಯು ಗುಪ್ತರ ಅವನತಿಗೆ ಅಲ್ಪ ಮಟ್ಟನ ಕಾರಣವಾಯಿತು.
     ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮರಲ್ಲಿ ಅರಬ್ಬರು ಮೊದಲಿಗರು 712ರಲ್ಲಿ ಬಸ್ರಾ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಬಿನ್ ಖಾಸಿಮ ಭಾರತದ ಮೇಲೆ ದಾಳಿ ಮಾಡಿ ಅಪಾರ ರಕ್ತಪಾತಕ್ಕೆ ಕಾರಣನಾದ ಆದರೆ ಅದು ಭಾರತದ ಕೆಲವೆ ಭಗಕ್ಕೆ ಮಾತ್ರ ಸೀಮಿತವಾಗಿತ್ತು ಸಾಶ.1000 ರಿಂದ 1027 ರ ವರೆಗೆ ಘಜ್ನಿ ಮಹಮದ 17 ಸಾರಿ ದಂಡಯತ್ರೆ ಮಾಡಿದ ಈ ಅವದಿಯಲ್ಲಿ ಗುಜರಾತಿನ ಸೋಮನಾಥದವರೆಗೂ ಬಂದಾಗ ಅತ್ಯಂತ ಸಣ್ಣ ಸೈನ್ಯದ ಘಜ್ನಿ ಮಹಮದ್ ನನ್ನು ಎದುರಿಸಲಾರದ್ದು ರಾಷ್ಟ್ರೀಯತೆಯ ಕೊರತೆಯಲ್ಲದೆ ಇನ್ನೆನು ? ನಂತರ ಒಂದುವರೆ ಶತಮಾನಗಳವರೆಗೆ ಭಾರತ ಯಾವುದೆ ದಾಳಿಗೆ ಒಳಗಾಗಲಿಲ್ಲಿ ಸಾ.ಶ 1175 ರಿಂದ ಮಹಮ್‍ದ ಘೊರಿ ದಾಳಿ ಪ್ರಾರಂಭವಾಗಿ ಸಾ.ಶ. 1206 ರಲ್ಲಿ ಭಾರತದಲ್ಲಿ ದೆಹಲಿ ಸುಲ್ತಾನರ ಆಡಳಿತ ಪ್ರಾರಂಭವಾಗುವಂತಾಯಿತು. ಇದೆ ಅವದಿಯಲ್ಲಿ ಅಂದರೆ 1221 ರಲ್ಲಿ ವಾಯವ್ಯ ಭಾರತದಲ್ಲಿನಡೆದ ಚೆಂಘೀಜಖಾನ ದಾಳಿ,ಸಾ.ಸ.1399 ರಲ್ಲಿ ದೆಹಲಿಯನ್ನು ನಡುಗಿಸಿದ ಕುಂಟ ತೈಮೂರನ ದಾಳಿಯು ಉಲ್ಲೇಖನಾರ್ಹ.  ಸಾ.ಶ.1526 ರಿಂದ 1707 ರ ವರೆಗೆ ಆಳಿದ ಮೊಗಲರು ವಿದೇಶಿಗರೆ ಅವರ ವಂಶದ  ಕುಡಿ 1857 ರ ವರೆಗೆ ಅಸ್ಥಿತ್ವದಲ್ಲಿ ಇತ್ತು.ಯಾರೆ ದಾಳಿ ಮಾಡಿರಲಿ ಬಹುತೇಕ ಅವರೆಲ್ಲರು ಭಾರತಿಯರೆ ಆಗಿ ಹೊಗಿದ್ದಾರೆ ಹಾಗಾಗಿ ಜವಾಹರಲಾಲ ನೆಹರೂರವರು ಭಾರತವನ್ನು ಕರಗಿಸು ಮೂಸೆ ಂದು ಕರೆದಿದ್ದಾರೆ.

      1498 ರಲ್ಲಿ ಪೋರ್ಚಗೀಸರು ಭಾರತಕ್ಕೆಹೊಸ ಜಲಮಾರ್ಗ ಕಂಡುಹಿಡಿದ ಮೆಲೆ ಯುರೋಪಿಯನ್ನರು ಭಾರತಕ್ಕೆ ಬರಲಾರಂಭಿಸಿಸದರು. ಆಂಗ್ಲರು ವ್ಯಾಪಾರದ ಉದ್ದೇಶವಿಟ್ಟುಕೊಂಡು ಭಾರತಕ್ಕೆ ಬಂದಿದ್ದರೂ ಕೂಡಾ ರಾಷ್ಟ್ರೀಯತೆಯ ಕೊರತೆಯಿಂದ ಅನೈಕ್ಯದಿಂದ ಕಚ್ಚಾಡುತ್ತಿದ್ದ ಭಾರತೀಯರನ್ನು ಸೋಲಿಸಿ ರಾಜ್ಯಾಡಳಿತ ವಶಪಡಿಸಿಕೊಂಡರು. ಆಡಳಿತದ ಅನುಕೂಲಕ್ಕೆ ಭಾರತೀಯರಿಗೆ ನೀಡಿದ ಶಿಕ್ಷಣದಿಂದ ಭಾರತೀಯರು ರಾಷ್ಠ್ರೀಯತೆ ಬೆಳೆಸಿಕೊಂಡರು.
ಭಾರತೀಯರ ರಾಷ್ಠ್ರೀಯತೆಗೆ ಕಾರಣವಾದ ಅಂಶಗಳೆಂದರೆ;
 1) ಬ್ರೀಟಿಷರ ಆರ್ಥೀಕ ಶೋಷನೆ ಅರಿವು

 3) ಏಕರೂಪದ ಆಡಳಿತ ವ್ಯವಸ್ಥೆ & ನ್ಯಾಯಾಂಗ ವ್ಯವಸ್ಥೆ
 4) ಭ್ರಿಟಿಷರು ಅನುಸರಿಸಿದ ಪ್ರತಿಗಾಮಿ ದೊರಣೆ
 5) ಭಾರತದ ಪತ್ರಿಕೊದ್ಯಮ ಮತ್ತು19 & 20 ನೇ ಶತಮಾನದ ಆರಂಭದ ಸಾಹಿತ್ಯ ಭಾರತೀಯರಲ್ಲಿ ರಾಷ್ಟ್ರಿತೆಯನ್ನು ಪ್ರಚೋದಿಸಿವು. ರಾಷ್ಟ್ರೀಯತಯನ್ನು ಪ್ರಚೋದಿಸುವ ಅನೇಕ ಲೆಖನಗಳು & ಕವಿತೆಗಳು ಇಂಗ್ಲಿಷ ಹಾಗು ದೇಶಿ ಭಾಷೆಗಳೆರಡರಲ್ಲೂ ಪ್ರಕಟವಾದವು. ವಿದ್ವಾಂಸರು ಸಂಶೋಧನೆಗಳನ್ನು ನಡೆಸಿ ಭಾರತದ ಭವ್ಯ ಸಾಂಸ್ಕøತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಇದು ಭಾರತದ ಸಾಂಸ್ಕøತಿಕ ಪರಂಪರೆ,ರಾಷ್ಟೀಯವಾದಿಗಳಲ್ಲಿ ಹೆಮ್ಮೆ ಹಾಗು ಆತ್ಮವಿಸ್ವಾಸವನ್ನು ತುಂಬಿತು
           ಭಾರತದ ರಾಷ್ಟ್ರಿಯ ಚಳುವಳಿಗಳು ವಿವಿಧ ಹಂತಗಳಲ್ಲಿ ನಡೆದವು ಅವು ಮಂದಗಾಮಿಗಳ ಹೋರಾಟ ಇರಬಹುದು ಇಲ್ಲವೆ ತೀವ್ರಗಾಮಿಗಳ ಹೋರಾಟವಿರಬಹುದು ಇಲ್ಲವೆ ಕ್ರಾಂತಿಕಾರಿಗಳು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂಸಾತ್ಮಕ ಚಟುವಟಿಕೆಗಳಿಗೆ ಸಿದ್ದರಿದ್ದ ಗುಪ್ತ ಸಂಘಗಳಿರಬಹುದು,ಇವರೆಲ್ಲರ ಪ್ರಯತ್ನದ ಫಲದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.
1947 ರ ಸಂವಿಧಾನೀಯ ಶಾಸನವು ಭಾರತವನ್ನು ಎರಡು ದೇಶಗಳಾಗಿ ವಿಭಜಿಸಲು ಮತ್ತು ಇಲ್ಲಿಯ ಸಂಸ್ಥಾನಗಳು ತಮ್ಮಗಿಷ್ಟವಾದ ದೇಶದಲ್ಲಿ ಸೇರಲು ಇಲ್ಲವೆ ಸ್ವತಂತ್ರವಾಗಿಲು ಅವಕಾಶ ಮಾಡಿಕೊಟ್ಟಿತು ಇದನ್ನೆ  ಆಧಾರವಾಗಿಟ್ಟುಕೊಂಡ ಜುನಾಗಡ,ಹೈದರಾಬಾದ,ಕಾಶ್ಮಿರ ಸಂಸ್ಥಾನಗಳು ವಿಲೀನಕ್ಕೆ ಹಿಂದೆ ಮುಂದೆ ನೋಡಿದವು ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟ ನಿರ್ದಾರದಿಂದಾಗಿ 550 ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಂಡವು, ಈ ಅಖಂಡತೆಯನ್ನು ಕಾಪಾಡಿದ ಸರ್ದಾರ ವಲ್ಲಭಬಾಯಿ ಪಟೇಲರ ಜಯಂತಿಯನ್ನು ಏಕತಾ ದಿನವನ್ನಾಗಿ ಆಚರಿಸುತ್ತಿದ್ದೆವೆ, ಭಾರತ ಸಕಾರವು ಗುಜರಾತಿನ ಸರ್ದಾರ ಸರೊವರದಲ್ಲಿ 182 ಮೀಟರ ಬೃಹತ್‍ಮೂರ್ತಿಯನ್ನು  ನಿರ್ಮಿಸಿ ಅವರಿಗೆ ಗೌರವ ಅರ್ಪಿಸಿದೆ.
    .
 
                                                                                                                                                                                                                                                                                                                                                                                                                                                                                                                                                                      ಭಾರತ ದೇಶದ ರಾಷ್ರಚಿಹ್ನೆ,ರಾಷ್ಟ್ರಗೀತೆ,ರಾಷ್ಟ್ರಧ್ವಜ ರಾಷ್ಟ್ರೀಯ ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಮಹಾನ್ ಶಕ್ತಿಗಳು ನಮ್ಮಲ್ಲಿ ಭೌಗೋಳಕ,ಜನಾಂಗೀಯ,ಭಾಷಾ ಸಾಮಾಜಿಕ ಮತ್ತು ಧಾರ್ಮಿಕ ಆರ್ಥಿಕ ವೈವಿಧ್ಯತೆಗಳೇನೆ ಇದ್ದರೂ ನಾವು ಅಖಂಡವಾಗಿದ್ದೇವೆ,ಇದಕ್ಕೆ ಕಾರಣ ಭಾರತವನ್ನು ಹಿಮಾಲಯ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಗೊಳಿಸಿ ಒಂದು ಪ್ರತ್ಯೇಕ ಭೌಗೋಳಕ ವಿಭಾಗ ಮಾಡಿದೆ ಅಲ್ಲದೆ ಭಾರತದ ಪ್ರಾಚೀನ ಆಡಳಿತ ವ್ಯವಸ್ಥೆಗಳು ಬಹುತೇಕ ಏಕರೂಪವಾಗಿದ್ದು  ಅವು ಚಾಣಕ್ಯನ ಅರ್ಥಶಾಸ್ತ್ರದಿಂದ ಹೊರಹೊಮ್ಮಿದವುಗಳಾಗಿವೆ.ಪ್ರಾಚೀನ ಭಾರತದಲ್ಲಿ ಏಕರೂಪದ ಆಡಳಿತ ಶಿಕ್ಷಣ & ಸಾಹಿತ್ಯವಿತ್ತು, ರಾಮಾಯಣ ಮತ್ತು ಮಹಾಭರತ, ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ.

      ಇಂದು ಮಕ್ಕಲ್ಲಿ ಭಾರತೀಯತೆ ಕೊರತೆಯಾಗುತ್ತಿದೆ ಎನ್ನುವದಾದರೆ ಇದಕ್ಕೆ ಶಿಕ್ಷಣದಲ್ಲಿರುವ ದೋಷಗಳು ಕಾರಣವಲ್ಲದೆ ಇನ್ನೇನು? ಮಕ್ಕಳಲ್ಲಿ ಅದು ಮನೆಯಿಂದಲೆ ಭಾರತೀಯ ಪ್ರಜ್ಞೆ ಪ್ರಾರಂಭವಾಗಬೇಕು, ಪಾಲಕರಿಗೆ ಪ್ರಣಾಮ, ಹಿರಿಯರಿಗೆ ಗೌರವ,ಪ್ರೀತಿ ತೊರಿಸುವ ಮೂಲಕ ಸನ್ನಡತೆಯನ್ನು ಕಲಿಸಬೇಕಾಗಿದೆ. ಶಾಲೆಗೆ ಸೇರಿದ ಮೆಲೆ ಅದು ಹೆಮ್ಮರವಾಗಿ ಬೆಳೆಯುತ್ತದೆ ರಾಷ್ಟ್ರಗೀತೆ ಹಾಡುವ ಮೂಲಕ ಗೀತೆಯಲ್ಲಿ ವರ್ಣಸಿದ ಪಂಜಾಬ ಸಿಂದ್ ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ ಪ್ರದೇಶಗಳ ಪರಿಚಯದೋಂದಿಗೆ ವಿಂದ್ಯ ಹಿಮಾಚಲ ಯಮುನಾ ಗಂಗಾ ನಮ್ಮ ದೇಶದ ಹಿಮಾಲಯ ನದಿ ಬೆಟ್ಟಗಳ ವರ್ಣನೆ ಭಾರತದ ಬಗ್ಗೆ ಅಭಿಮಾನ ಹೊಂದುವಂತೆ ಮಾಡುತ್ತದೆ, ರಾಷ್ಟ್ರದ್ವಜ,ರಾಷ್ಟ್ರ ಚಿಹ್ನೆ ರಾಷ್ಟ್ರಿಯ ಹಬ್ಬಗಳು ರಾಷ್ಟ್ರಾಭಿಮಾನ ಬೆಳೆಯುವಂತೆ ಮಡುತ್ತವೆ. ಬಾರತೀಯ ಇತಿಹಾಸ, ಸ್ಮಾರಕಗಳು ವಸ್ತು ಸಂಗ್ರಹಾಲಯಗಳು, ನಮ್ಮ ಮಹಾನ್ ಪರಂಪರೆ, ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ಮಹಾಪುರುಷರ ಜೀವನ ಚರಿತ್ರೆಗಳು ನಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತವೆ. ರಾಷ್ಟ್ರದ ಗಡಿಯಲ್ಲಿ ನಮಗೆ ರಕ್ಷಣೆ ನಿಡುತ್ತಿರುವ ನಮ್ಮ ವೀರ ಸೈನಿಕರು ತಮ್ಮ ಪ್ರದೇಶ ಭಾಷೆ,ಜಾತಿ,ಧರ್ಮವನ್ನು ಮೀರಿ ನಮಗಾಗಿ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಭಾರತ ದೇಶವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ನಾಲ್ಕು ಯುದ್ದಗಳನ್ನು ಮಾಡಿದೆ 1962 ರ ಚೀನಾ ಭಾರತ ಯುದ್ಧ ಹೊರತು ಪಡಿಸಿ 1948,1966,1999 ರ ಭಾರತ ಪಾಕಿಸ್ತಾನ ಯುದ್ಧಗಳಲ್ಲಿ ನಮ್ಮ ಬಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಇತ್ತೀಚಗೆ ಸೈನ್ಯಕ್ಕೆ ಸೇರುತ್ತಿರವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಾಣುತ್ತಿದೆ ಹೀಗಾಗಿಯೆ ಭಾರತ ಸರಕಾರ ನಾಗರಿಕ ಸೇವೆಗೆ ಸೇರುವವರಿಗೆ ಸೈನಿಕ ಸೇವೆ ಕಡ್ಡಾಯ ಮಾಡಲು ಚಿಂತಿಸುತ್ತಿದೆ ಇದರ ಯಾವುದೆ ಪರಿವೆ ಇಲ್ಲದೆ ದೇಶದ ಒಳಗಡೆ ಕೆಲವು ವಿಛ್ಛಿದ್ರಕಾರಿ ಶಕ್ತಿಗಳು  ನಕ್ಸಲ್ಯೆಟ ಸಮಸ್ಯೆ,ಭಯೋತ್ಪಾದಕತೆ, ಕಾಶ್ಮೀರ ಸಮಸ್ಯೆ, ಈಶಾನ್ಯ ಭಾರತದ ಸಮಸ್ಯೆಗಳು,ನಿರಾಶ್ರಿತರ ಸಮಸ್ಯೆ ಮುಂತಾದವಗಳನ್ನು ಜಿವಂತವಾಗಿಡಲು ಪ್ರಯತ್ನಿಸುತ್ತ್ತಿವೆ ಮತ್ತು ಭಾರತದ ಪ್ರಗತಿಗೆ ಮಾರಕವಾಗಿವೆ ಇವುಗಳೆಲ್ಲವನ್ನು ಮೀರಿ ಜಾಗತಿಕವಾಗಿ ಎದ್ದು ನಿಲ್ಲಬೇಕಾದರೆ ಅದಕ್ಕೆ ರಾಷ್ಟ್ರೀಯತೆ ಒಂದು ಪರಿಹಾರವಾಗಬಲ್ಲದು. ಒಟ್ಟಾರೆಯಾಗಿ ಭಾರತೀಯರಾದ ನಾವೆಲ್ಲ ರಾಷ್ಟಕ್ಕಾಗಿ ನಿಷ್ಠರಾಗಿರುವುದು ನಮ್ಮ ಕರ್ತವ್ಯವಾಗಿದೆ. ದೇಶವನ್ನು ನಾವು ತಾಯಿ ಎಂದು ಭಾವಿಸಬೇಕು ತಾಯಿ ತನ್ನ ಮಗುವನ್ನು ಹೆಗೆ ಸಂರಕ್ಷಿಸುವಳೋ ಹಾಗೆಯೇ ದೇಶವು ನಮ್ಮನ್ನು ರಕ್ಷಿಸತ್ತದೆ.  ಜೈ ಭಾರತ ಮಾತೆ ಜೈ ಕರ್ನಾಟಕ ದೇವಿ.



                                                                                                               ಶ್ರೀ ಬಸನಗೌಡ ಯ ಗೌಡರ
                                                                                                                    ಉಪನ್ಯಾಸಕರು
                                                                          ಬಾಲಕರ ಸರಕಾರಿ ಪ, ಪೂ,ಕಾಲೇಜು ಗುಳೇದಗುಡ್ಡ

ಅಂಕುಡೊಂಕಿನ ದಾರಿಗಳೇ

ಅಂಕುಡೊಂಕಿನ
 ದಾರಿಗಳೇ
ಬಿಂಕ ನಿಮಗಿಲ್ಲ
ಸುಂಕ  ಕೀಳುವ
ದೊರೆಗಳಿಗೆ ಅಂಕುಶ
ಯಾಕಿಲ್ಲ
ಆಚೆ ಈಚೆ ಮರಳು
ಚೆಲ್ಲಿ ದೋಚುವರು ಇವರೆಲ್ಲ
ಆಚಾರ ಹೇಳುವ
ಸ್ಥಳದಲ್ಲಿ ಮೊದಲೆ
ಬರುವರು ಇವರೆಲ್ಲ

ಅಂಕುಡೊಂಕಿನ ದಾರಿಗಳೇ
ಬಿಂಕ ನಿಮಗಿಲ್ಲ
ಕಳ್ಳರೆ ಇರಲಿ ಸುಳ್ಳರೆ ಇರಲಿ
ನೀವೆ ಎಲ್ಲರಿಗೂ ಆಧಾರ,
ಸತ್ಯಸಂದರಿಗೆ ಸನ್ಮಾರ್ಗ
ತೊರುವ ನಿತ್ಯ ಕಾಯಕ,
ಸಜ್ಜನ ನಾಯಕರಿಗೆ
ಮಜ್ಜನದ ಅಷ್ಟಕ.
ಸರಾಯಿ ಕುಡಿದು ಸವಾರಿ
ಮಾಡುವ ಬಿಡಾಡಿ ಚಾಲಕರಿಗೆ
ನೀವೆ ಕಳನಾಯಕ !


"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...