ಬದಾಮಿ ತಾಲೂಕು ತಮಗೆಲ್ಲರಿಗೂ ತಿಳಿದ ಹಾಗೆ ಒಂದು ಐತಿಹಾಸಿಕ,ನಿಸರ್ಗ ರಮನೀಯ ಪ್ರದೇಶಗಳಿಂದ ಆವೃತವಾದ ಪ್ರದೇಶ ಆ ತಾಲೂಕು ಭೌಗೋಳಿಕವಾಗಿ ವಿಸ್ತಾರವಾಗಿರುವದರಿಂದ ಆಡಳಿತ ದ ಅನುಕೂಲಕ್ಕಾಗಿ ಅದನ್ನು ವಿಭಾಗಿಸಿ ಗುಳೇದಗುಡ್ಡ ನಗರ ಕೇಂದ್ರ ವಾಗಿಟ್ಟುಕೊಂಡು ಇನ್ನೊಂದು ತಾಲೂಕನ್ನು ನಿರ್ಮಿಸಲಾಗಿದೆ ಈ ಗುಳೇದಗುಡ್ಡ ತಾಲೂಕು ಜಲಪಾತಗಳಿಂದ ತುಂಬಿರುವ ಪ್ರದೇಶವೆಂದರೆ ತಪ್ಪಾಗಲಿಕ್ಕಿಲ್ಲ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಜಲಪಾತವೆಂದರೆ ಕೋಟೆಕಲ್ಲ ದಿಂದ ಸುಮಾರು 2 ಕಿಲೋ ಮೀಟರ್ ಅಂತರದಲ್ಲಿ ಬರುವ ದಿಡಗಿನ ಪಾಲ್ಸ್ ಅತ್ಯಂತ ಸುಂದರವಾದ ಪಾಲ್ಸ್ ,ಅದನ್ನು ಈಗಾಗಲೆ ನೋಡಿದ್ದರಿಂದ ಇನ್ನುಳಿದ ಜಲಪಾತ ನೋಡಬೆಕೆನ್ನುವದು ನನ್ನ ಸಹ ಉಪನ್ಯಾಸಕರ ಮಹದಾಸೆಯಾಗಿತ್ತು ಇದಕ್ಕಿಂತ ಹೆಚ್ಚಾಗಿ ನಮ್ಮಕಾಲೇಜಿನ ಜೀವ ಶಾಸ್ತ್ರ ಉಪನ್ಯಾಸಕಿಯರಾದ ಶ್ರೀಮತಿ ಜಯಮಾಲಾ ಯಡವನ್ನವರ ಆಸೆ ಇನ್ನೂ ಹೆಚ್ಚಿನ ದಾಗಿತ್ತು ಕಾರಣ ಇಷ್ಟೆ ಅವರಿಗೆ ಇರುವ ನಿಸರ್ಗದ ತುಡಿತ ಅಂದರೆ ಅಲ್ಲಿಯ ಜೀವ ವೈವಿಧ್ಯ ನೋಡ ಬೇಕು ಈ ಪ್ರದೇಶದ ಪರಿಸರವನ್ನು ಆಸ್ವಾದಿಸಿ ಮಕ್ಕಳಿಗೆ ಅರ್ಥಪೂರ್ಣ, ಜೀವಂತ ಪಾಠದ ಅವರ ಕನಸು .ಅದನ್ನು ಸಾಕಾರಗೊಳಿಸಲು ಎಲ್ಲರನ್ನು ಹುರುದುಂಬಸಿದರು ಕಾಲೇಜು ಅವದಿಯ ನಂತರ ಎಂದಾಗ ಕಾಲೇಜಿನ ಪ್ರಾಚಾರ್ಯರು ತಲೆ ಅಲ್ಲಾಡಿಸಬೇಕಾಯಿತು,ಅವರ ಸಂತೋಷಕ್ಕೆ ಮೇರೆ ಇರಲಿಲ್ಲ .ಇನ್ನೊಂದು ಮುಖ್ಯ ವಾದ ವಿಷಯ ನಾನು
ಹೇಳದೆ ಹೋದರೆ ನನ್ನ ಬರವಣಿಗೆ ಅಪೂರ್ಣ ವಾದೀತು ಅದೇನೆಂದರೆ ಈ ವರ್ಷ ಜೀವಶಾಸ್ತ್ರ ವಿಷಯದಲ್ಲಿ 100 ./. ಫಲಿತಾಂಶ ತಂದ ಮೊದಲಿಗರು ಅವರೆ. ವಿಜ್ಞಾನ ವಿಭಾಗದಲ್ಲಿ ಸರಕಾರಿ ಸಂಸ್ಥೆಗಳಲ್ಲಿ ತರುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೂ ಹೌದು, ಆದರೆ ಸಾಧನೆಯಾಗಿದ್ದಂತು ಸತ್ಯ .
ಗುಳೇದಗುಡ್ಡ ತಾಲೂಕಿನಲ್ಲಿ ಇರುವ ಇನ್ನುಳಿದ ಜಲಪಾತಗಳೆಂದರೆ ಹುಲ್ಲಿಕೇರಿ ಅವ್ವಕ್ಕನ ಪಾಲ್ಸ್ .ಈ ಜಲಪಾತ ನಮಗೆ ನೋಡಲು ಆಗಲಿಲ್ಲ ಕಾರಣವಿಷ್ಟೆ ನಾವು ಉಪನ್ಯಾಸಕ ಮಿತ್ರರು ಮಧ್ಯಾಹ್ನ ಉಪಹಾರ ತಯಾರಿ ನಡೆಸಿದಾಗಲೆ ಲಗು ಬಗೆಯಿಂದ ಮುಂದೆ ಹೋಗಿ ಅವ್ವಕ್ಕನ ಜಲಪಾತವನ್ನು ಉಳಿದ ಮಹಿಳಾ ಉಪನ್ಯಾಸಕಿ ಶೈಲಾ ಮೇಡಮ್, ಅಕ್ಕ ಮಹಾದೇವಿ ಶೆಟ್ಟರ,ನಾಗಮ್ಮ, ಬಸಮ್ಮ,ಕಣ್ಣು ತುಂಬಿಕೊಂಡು ಆಗಿತ್ತು. ನಮ್ಮ ಗುರಿ ಇನ್ನೂ ಮುಂದೆ ಇರುವ ಹುಲಿಗಮ್ಮನ ಕೊಳ್ಳ, ಹಾಗೂ ಹಾನಾಪೂರ ಗ್ರಾಮದ ಹಾಲಹಂಡೆ ನೋಡಬೇಕಿತ್ತು ,ಈಗಾಗಲೇ ಕಾಲೇಜು ಅವದಿಯ ನಂತರ ಬಂದದ್ದರಿಂದ ವೇಳೆಯ ಅಭಾವದಿಂದ ನಾಗಾಲೋಟದಿಂದ ಮುನ್ನಡೆಯಿತು.ಹಾನಾಪೂರ ಎಲ್ ಟಿ ಗೆ ಬಂದಾಗ ಬೈಕುಗಳು ತಮ್ಮ ವೇಗ ಕಳೆದುಕೊಂಡವು ಕಾರಣ ಹನುಮಪ್ಪನ ಕೊಳ್ಳದ ಜಲಪಾತ. ಈ ಜಲಪಾತಕ್ಕೂ ಹುಲಿಗಮ್ಮನ ಕೊಳ್ಳದ ಜಲಪಾತಕ್ಕೂ ಗುಳೇದಗುಡ್ಡ ತಾಲೂಕಿನ ಜಲಾನಯನ ಪ್ರದೇಶದಿಂದ ನೀರು ಹೋಗುವುದು ಆದರೆ ನೀರು ಹೋಗುವುದು ಬದಾಮಿ ತಾಲೂಕು ವ್ಯಾಪ್ತಿ ಪ್ರದೇಶಕ್ಕೆ ಎನ್ನುವುದು ವಿಶೇಷ ಅದೂ ಅಲ್ಲೊಂದು ಚಿತ್ರದ ಚಿತ್ರೀಕರಣ ನಡೆದಿತ್ತು ಆದರೆ ,ನೋಡಲು ಪುರಸೂತ್ತಿಲ್ಲದ ಕಾರಣ ಆ ಕಡೆ ಗಮನ ಕೊಡಲಾಗಲಿಲ್ಲ. ಯೋಜನೆ ದೊಡ್ಡದು ವೇಳೆ ತುಂಬಾ ಕಡಿಮೆ.
ನಾವೆಲ್ಲಾ ಹನಮಪ್ಪನ ಕೊಳ್ಳದ ಕೆಳಭಾಗದಿಂದ ಜಲಪಾತ ನೋಡಿ ಆಸ್ವಾದಿಸಲು ಲಗುಬಗೆಯಿಂದ ಯದ್ಧಗೆಲ್ಲುವ ಸೈನಿಕರಂತೆ ಕೊಳ್ಳವನ್ನು ಪ್ರವೇಶಿಸಿದೆವು.
ಒಂದು ಕ್ಷಣ ಮೂಕವಿಶ್ಮಿತರಾದೆವು ಕಾರಣವೆಂದರೆ ಆ ಮಲೆನಾಡೂ ನಾಚಬೇಕು ಅಂತಹ ಚಲುವು ನೋಡಿ .ಜುಳು ಜುಳು ಹರಿಯುವ ತೊರೆಗಳು ಮುಗಿಲನ್ನೆ ಚುಂಬಿಸುವ ಭಯಂಕರ ಬಂಡೆಗಳನ್ನಾವರಿಸಿದ ಬೆಟ್ಟ ,ಅದರ ಮೇಲೆ ನಡೆಯುತ್ತಿದ್ದ ಚಿತ್ರೀಕರಣ ಎಂಥಹ ಅರಸಿಕನೂ ತಲೆದೂಗವ ಪ್ರಕೃತಿ ಸೌಂದರ್ಯ ,ನೋಡಲು ಎರಡು ಕಣ್ಣು ಸಾಲದಾದವು ,ಅದೆ ಗುಡ್ಡದ ತುದಿಯಲ್ಲಿ ಸ್ಥಾಪನೆಗೊಂಡ ಹನಮಪ್ಪನ ಮುರುಕು ತಗಡಿನ ದೇವಾಲಯ ಅದರಲ್ಲಿ ಪಶ್ಚಮಾಭಿಮುಖವಾಗಿ ನಿಂತ ಹನುಮಂತ ದೇವರು,ಅವನ ದರ್ಶನ ಪಡೆಯುವುದೆ ಒಂದು ಸೌಭಾಗ್ಯದ ಸನ್ನಿವೇಶ ಆ ತೃಪ್ತಿ ಇನ್ನೆಲ್ಲಿಯೂ ಸಿಗದು .
ನಾಗರಿಕರಿಕತೆ ನಾಗಾಲೋಟದಿಂದ ನಿರ್ಮಿಸಿದ ಅದೆಷ್ಟೋ ದೇವಾಲಯ ನಾನು ನೋಡಿದ್ದೇನೆ ಇವೆಲ್ಲವುಗಳನ್ನು ಮೀರಿದ ಜೀವಕಳೆ ನಾನು ಅಲ್ಲಿ ಖಂಡೆ.ನಾನು ಈಗಾಗಲೆ ಬರೆದ ಹಾಗೆ ನಮಗೆ ವೇಳೆ ಚಾಟಿ ಎಟು ಬೀಸುತ್ತಿತ್ತು ಮತ್ತೆ ನಮ್ಮ ಸವಾರಿ ಹುಲಿಗೆ ಮ್ಮನ ಕೊಳ್ಳದತ್ತ. ಗಾಳಿಯ ವೇಗದ ರಭಸದಲ್ಲಿ ಓಡಿತು ನಮ್ಮ ಬೈಕು.
ದೂರದಿಂದಲೆ ನೂರಾರು ಅಡಿಗಳಿಂದ ದುಮ್ಮಿಕ್ಕುವ ಜಲಪಾತ ನಮ್ಮನ್ನು ಕೈಮಾಡಿ ಕರೆಯುತ್ತಿತ್ತು ಜೊತೆಗೆ ಜಾರಿ ಓಡುವ ಸೂರ್ಯನ ಕಳೆದುಕೊಂಡ ನತದೃಷ್ಟರಂತೆ ನಮ್ಮನ್ನು ಅನಿಕಿಸುವಂತಿತ್ತು ಹುಲಿಮ್ಮನ ಕೊಳ್ಳ. ಏಕೆಂದರೆ 3.0 ಗಂಟೆ ದಾಟಿ ಯಾಗಿತ್ತು .ನಾವೇನು ಸಾಮನ್ಯರೇನಲ್ಲ ದುಮ್ಮಕ್ಕಿ ಜಿಗಿಯುವ ಜಲಪಾತಕ್ಕೆ ಹೆಗಲು ನೀಡಿ ಕೆಕೆ ಹಾಕಲು ಬಂದವರೆ .ಮೇಲಿಂದ ರಬಸದಿಂದ ಬುಸುಗುಡುವ ಜಲಪಾತಕ್ಕೆ ತಲೆಬಗ್ಗಿ ನಿಲ್ಲಬೇಕಿತ್ತು.ಇಲ್ಲಿ ಕೆಕೆ ಹಾಕಿದವರೆಷ್ಟೊ, ಬಿದ್ದ ರಬಸಕ್ಕೆ ಮೈಚುರುಗುಟ್ಟರು ಗಟ್ಟಿಗನೆಂದು ತೋರಿಸಿದವರೇಷ್ಟೊ ಲೆಕ್ಕಹಾಕಲಾದಿತೆ
ಅಂತೂ ತೃಪ್ತ ಭಾವ ಎಲ್ಲರಲ್ಲೂ ಹೂರಹೊಮ್ಮಿತ್ತು.ಇನ್ನೊಂದು ವಿಚಾರ ಹೇಳದೆ ಹೋದರೆ ತಪ್ಪಾದಿತೇನೊ ಅದೇನೆಂದರೆ ನಾವು ನಿಶ್ಚಿಂತೆಯಿಂದ ಜಲಪಾತದಲ್ಲಿ ಮಿಂದೇಳಲು ಕಾರಣ ನೀರಿಗಿಳಿಯದೆ ಊಟ ಬಟ್ಟೆಯ ಸ್ಥಳದಲ್ಲಿ ಅಭಯ ನೀಡಿದ ಆಂಗ್ಲಭಾಷೆ ಉಪನ್ಯಾಸಕ ಹರೀಷ ಕುಂದರಗಿ.ಹೊಟ್ಟೆ ಹಸಿದು ತಾಳ ಹಾಕುತಿತ್ತು.
ಜನದಟ್ಟಣೆಯ ಪ್ರದೇಶವಾದದ್ಥರಿಂದ ಊಟದ ಸ್ಥಳ ಹನಮಪ್ಪನ ಕೊಳ್ಳದ ಮೇಲ್ಭಾಗಕ್ಕೆ ನಿಗದಿಯಾಯಿತು.
ಊಟವೆಂದರೆ ನಮ್ಮ ಸಮಾಜಶಾಸ್ತ್ರದ ಉಪನ್ಯಾಸಕರನ್ನು ಮರೆಯಲಾದೀತೆ. ಸಂಪೂರ್ಣ ಉಸ್ತುವಾರಿ ಎನ್ ಎಸ್ ಹಿರೇಮಠ ಸರ್ ಅವರದು. ತುಂಬುಗಾಯಿ ಹೀರೆಕಾಯಿ ,ಹೆಸರಕಾಳು ಪಲ್ಯ ,ರೊಟ್ಟಿ ಚಪಾತಿ ಮೇಲೆ ಬಸಮ್ಮ ಅಕ್ಕ ಮಾಡಿದ ಸೇಂಗಾ ಹೋಳಿಗೆ ಬರೆಯುವಾಗು ನೀರು ಬರುತ್ತಿವೆ.ಗಡದ್ದಾಗಿ ಸೇವಿಸಿ ಮುಗಿಸೀದಾಗ ಗಂಟೆ 5.30. ಜಯಮಾಲಾ ಮೆಡಮ ಮಡಿಚಿ ನೀಡಿದ ವಿಳ್ಯದ ಎಲೆ ತಿಂದು ಮನೆ ಸೇರಿದಾಗ 7 .00 ಗಂಟೆ ಸಮೀಪಿಸುತಿತ್ತು ಅದರೂ ಇನ್ನೊಂದು ಕೊರಗು ನಮ್ಮಲ್ಲಿ ಉಳಿದೇ ಬಿಟ್ಟಿತು ಅದುವೆ ಹಾನಾಪೂರ ಹಾಲಹಂಡೆ. ?
ಸಹಕಾರ ನೀಡಿದ ಪ್ರಾಚರ್ಯ ಕಳಸಾ ಸರ್, ಐ ಎಮ್ ದೊಡಮನಿ ಸರ್, ಮಡಿವಾಳರ ಸರ್, ಹಾದಿಕರ ಸರ್,ಕುಂದರಗಿ ಸರ್, ಹಿರೇಮಠ ಸರ್ ಶೈಲಜಾ ಮೇಡಂ, ರಾಂಪೂರ ಮೇಡಮ್, ನಾಗಮ್ಮ, ಶಿಸ್ತು ಬದ್ದವಾಗಿ ಫೋಟೋಗಳನ್ನು ಸೆರೆಹಿಡಿದ ಬಸಮ್ಮ ಅಕ್ಕಅವರ ಪುತ್ರಿಗೆ ಹಾಗೂ ರಿಕ್ಷಾ ಚಾಲಕನಿಗೂ ಸುಸೂತ್ರವಾಗಿ ಪಿಕ್ನಿಕ್ ಗೆ ಆಶೀರ್ವಾದ ಮಾಡಿದ ಹುಲಿಗಮ್ಮದೇವಿಗೆ ಪ್ರಣಾಮಗಳು.