ಅಶೋಕನ ಜೀವನ ಹಾಗೂ ಸಾಧನೆಗಳನ್ನು ವಿವರಿಸಿರಿ.
ಅಶೋಕನು ಮೌರ್ಯ ಅರಸರಲ್ಲಿಯೇ ಶ್ರೇಷ್ಠ ಅರಸನಾಗಿದ್ದು ಯುದ್ಧದ ಗೆಲುವಿನ ನಂತರ ಯುಧ್ಧವನ್ನು ತ್ಯಜಿಸಿ ಬೌದ್ದ ಧರ್ಮವನ್ನು ಸ್ವೀಕರಿಸಿ ಸಂಪೂರ್ಣ ಜೀವನವನ್ನು ಜನರ ಶಾಂತಿ ಮತ್ತು ಕಲ್ಯಾಣಕ್ಕಾಗಿ ದುಡಿದ.
ಅಶೋಕ ಸಾಶಪೂ 273 ರಲ್ಲಿ ಅಧಿಕಾರಕ್ಕೆ ಬಂದನಾದರೂ 269 ರಲ್ಲಿ ಪಟ್ಟಾಭಿಷೇಕ ಮಾಡಿಕೊಂಡನು.
ಕಳಿಂಗ ಯುದ್ಧ ಸಾಶಪೂ 261:.ಅಶೋಕ ಅಧಿಕಾರಕ್ಕೆ ಬಂದ ಮೇಲೆ ತನ್ನ ಸಾರ್ವಭೌಮತ್ವ ವಿಸ್ತರಿಸಲು ಕಳಿಂಗ ಯುದ್ಧ ಮಾಡಿ ಗೆದ್ದ ನಾದರೂ ಅದರ ರಕಪಾತ ಕಂಡು ದುಃಖತಪ್ತನಾದ ಮತ್ತು ತನ್ನ ವಿದೇಶಾಂಗ ನೀತಿ ಬದಲಾಯಿಸಿದ. ಉಪಗುಪ್ತನೆಂಬ ಬೌದ್ಧ ಸನ್ಯಾಸಿಯ ಪ್ರಭಾವದಿಂದ ದಿಗ್ವಜಯದ ಬದಲಾಗಿ ಧರ್ಮ ವಿಜಯದ ನೀತಿ ತನ್ನದಾಗಿಸಿಕೊಂಡ.
ಅಶೋಕನ ಶಾಸನಗಳು:ಅಶೋಕ ಶಿಲಾಶಾಸನ ಹೊರಡಿಸಿದ ಮೊದಲ ಅರಸ ಇವು ಆತನ ಆದರ್ಶ ಮತ್ತು ಮನೋಭಾವ ಅರಿಯಲು ಸಹಾಯ ಮಾಡುತ್ತವೆ.ಅವು ಪ್ರಾಕೃತಿಕ ಪಾಳಿ,ಬ್ರಾಹ್ಮಿ ಖರೋಷ್ಠಿ ಲಿಪಿಯಲ್ಲಿ ಕಂಡು ಬರುತ್ತವೆ.ಜೇಮ್ಸ್ ಪ್ರಿನ್ಸೆಪ್ಇವುಗಳನ್ನು ಮೊದಲು ಓದುವದರ ಮೂಲಕ ಸಂಶೋಧಿಸಿ ಬೆಳಕಿಗೆ ತಂದ
ಕರ್ನಾಟಕದಲ್ಲಿ ಅಶೋಕನ ಶಿಲಾಶಾಸನ ಕಂಡುಬರುವ ಸ್ಥಳಗಳೆಂದರೆ ಮಸ್ಕಿ, ಗವಿಮಠ, ಪಾಲ್ಕಿಗುಂಡ,ಬ್ರಹ್ಮಗಿರಿ ಸಿದ್ಧಾಪುರ ನಿಟ್ಟೂರು, ಕಲಬುರಗಿಯ ಸನ್ನತಿ.ಈ ಶಿಲಾಶಾಸನಗಳು ಅಶೋಕನನ್ನು ದೇವನಾಂಪ್ರಿಯ,ಪ್ರಿಯದರ್ಶಿ ಎಂದು ಉಲ್ಲೇಖಿಸುತ್ತವೆ.
ಧರ್ಮ: ಧರ್ಮ ನಿಷ್ಠನಾಗಿದ್ದ ಅಶೋಕ ತಂದೆ ತಾಯಿಗೆ ವಿಧೆಯರಾಗಿರಬೇಕು ,ಸತ್ಯ ನುಡಿಬೇಕು,ಅವಲಂಬಿತರನ್ನು ಪ್ರೀತಿಶಬೇಕು,ಪ್ರಾಣಿಗಳಿಗೆ ಹಿಂಸೆ ನೀಡಬಾರದೆಂದು ಧರ್ಮ ನಿಷ್ಠಗುಣಗಳನ್ನು ತಿಳಿಸಿದ.
ಬೌದ್ಧ ಧರ್ಮದ ಹರಡುವಿಕೆಗೆ ಅಶೋಕ ತೆಗೆದುಕೊಂಡ.ಕ್ರಮಗಳು:
1) ಬೌದ್ಧಧರ್ಮದ ಪವಿತ್ರ ಸ್ಥಳಗಳಿಗೆ ಬೇಟಿ ನೀಡಿ ಧರ್ಮ ಗೋಷ್ಠಿ ಗಳನ್ನು ನಡೆಸಿದ.ಲುಂಬಿನಿ, ಗಯಾ,ಸಾರನಾಥ ಇತ್ಯಾದಿ.
2) ಬೌದ್ಧ ಧರ್ಮದ ವಿಹಾರಗಳ ನಿರ್ಮಾಣಕ್ಕೆ ದಾನದತ್ತಿ ನೀಡಿದ.
3)ಬುದ್ಧನ ತತ್ವ ಗಳ ಪ್ರಚಾರಕ್ಕಾಗಿ ಶಿಲಾಶಾಸನಗಳನ್ನು ಕೆತ್ತಿಸಿದ.
4) ಧರ್ಮದ ಪ್ರಚಾರಕ್ಕಾಗಿ ಧರ್ಮಮಹಾಮಾತ್ರರು ಹಾಗೂ ಸ್ತ್ರೀ ಅಧ್ಯಕ್ಷ ಮಹಾಮಾತ್ರರ ನೇಮಕ ಮಾಡಿದ.
5) ಬೌದ್ಧ ಬಿಕ್ಷುಗಳ ಆಂತರಿಕ ಭಿನ್ನಾಭಿಪ್ರಾಯ ಹೋಗಲಾಡಿಸಲು ಸಾಶಪೂ 250 ರಲ್ಲಿ ಮೂರನೆಯ ಬೌದ್ಧ ಸಮ್ಮೇಳನ ಏರ್ಪಡಿಸಿದ.
6) ಬರ್ಮಾ,ಅಫ್ಘಾನಿಸ್ಥಾನದಂತ ದೇಶಗಳಿಗೆ ನಿಯೋಗಗಳನ್ನು ಕಳುಹಿಸಿದ ಸ್ವತಹ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ರನ್ನು ಶ್ರೀಲಂಕಾ ಕ್ಕೆ ಕಳುಹಿಸಿದ.
7) ಪ್ರಜೆಗಳಿಗೆ ತಂದೆಯಂತೆ ಅನೇಕ ಕಲ್ಯಾಣ ಕಾರಕ ಚಟುವಟಿಕೆ ಮಾಡಿದ
ರಸ್ತೆ ಬದಿಯಲ್ಲಿ ಫಲನೀಡುವ ಮರ ನೆಡುವದು.ಮಾನವ ಹಾಗೂ ಪ್ರಾಣಿಗಳಿಗೆ ಆಸ್ಪತ್ರೆಯ ನಿರ್ಮಾಣ ಮುಂತಾದವು
ಹೀಗೆ ವಿಶಾಲವಾದ ಸಾಮ್ರಾಜ್ಯ ಸ್ಥಾಪನೆ ಮಾಡಿ ಪ್ರಜೆಗಳ ಶಾಂತಿ ಮತ್ತು ಕಲ್ಯಾಣಕ್ಕೆ ದುಡಿದು "ಹತ್ತಾರು ಸಾವಿರ ರಾಜ ಮಹಾರಾಜರ ತುಂಬಿರುವ ಇತಿಹಾಸವೆಂಬ ದಿಗಂತದಲ್ಲಿ ಅಶೋಕ ದೃವತಾರೆಯಾಗಿ ಬೆಳಗುತ್ತಿದ್ದಾನೆ.