ಅಂದು ನಿದ್ದೆ ಬಾರದ ದಿನ ,ಮಧ್ಯ ರಾತ್ರಿಯ ಸಮಯದಲ್ಲಿ ಎದ್ದು ಕುಳಿತ, ನಿರವ ಮೌನ ನಾಯಿಗಳು ಬೀಕರವಾಗಿ ಬೊಗಳುತ್ತಿದ್ದವು. ಊರಾಚೆ ನರಿಗಳು ಊಳಿಡುವ ಶಬ್ದ .ಕುಳಿತಾದರು ಏನು ಮಾಡುವದು, ಮತ್ತೆ ಮಗ್ಗಲು ಬದಲಿಸಿದರೆ ಬರಬಹುದೆಂದು ಮತ್ತೆ ಹಾಸಿಗೆಗೆ ಒರಗಿದ .ನಿದ್ರೆ ಬರುತ್ತಿಲ್ಲ, ನಮ್ಮ ಕಾಕಾ ಪೆಗ್ಗು ಹಾಕಲು ಕಲಿತದ್ದು ಏಕೆ ಅಂತ ಈಗ ಅರಿವಾಯಿತು....! ಆದರೆ ನಾನು ನನ್ನ ಕಾಕ ಹನುಮಂತನಂತೆ ಅಜ್ಞಾನಿಯಲ್ಲವಲ್ಲ. ಏನಾದರೊಂದು ಸಾಧನೆ ಮಾಡಿಯೇ ಮಾಡಬೇಕೆಂದು ದೃಢ ನಿರ್ಧಾರ ಮಾಡಿದ .ಅಣ್ಣ ನೀಡಿದ ಹಳೆ ಮೊಬೈಲ್ ಅವನನ್ನೆ ನೋಡುತ್ತ ಎಲ್ಲಾ ಹೊದ್ದು ಮಲಗಿದಂತೆ ಕಾಣುತ್ತಿತ್ತು. ಅದರಲ್ಲಿ ಇರುವುದಾದರು ಏನು ? ಹತ್ತಾರು ಗ್ರೂಪ್ ಗಳಿಂದ ಬಂದ ಅವೆ ಹಳಸಲು ಫೋಟೋಗಳು ಒಂದು ಸಾರೆ ಬಂದ ಫೋಟೋ ಮತ್ತೆ ಮತ್ತೆ ಬಂದು ಗ್ಯಾಲರಿ ಯನ್ನು ಡಸ್ಟಬಿನ್ ಮಾಡಿದ್ದವು,ಅವೆ ಸಹೋದರರ ದಿನ , ಸಹೋದರಿ ದಿನ ,ಮಗನ ದಿನ, ಮಗಳದಿನ , ಲವ್ವರಿಗಾಗಿ ಇನ್ನೊಂದು ದಿನ ಎಂತಹ ವಿಪರ್ಯಾಸ , ಪ್ರೀತಿ ಮಾಡಲು ಒಂದೆ ದಿನ ಸಾಕಾ... ಅವ್ವ,ಅಪ್ಪನಿಗೂ ಒಂದೊಂದು ದಿನ ಇನ್ನುಳಿದ 364 (ಅವತ್ತು ಬಿಟ್ಟು)ದಿನ ಏನು ? ಹಾಳಾದ ಮೊಬೈಲ್ ಹೊಂದಿದ ಹೈಕಳುಗಳು ತಂದು ಹಾಕವ ಅವೆ ಪೋಸ್ಟಗಳು, ಯಾವಾಗ ಹೊರಹಾಕುವರೋ ಎಂದು ಉಸಿರುಗಟ್ಟಿ ಕುಳಿತ ನಿರುಪಯುಕ್ತ ಜೀವಗಳು,ಕಳೆಯಾದರು ಪರವಾಯಿಲ್ಲ ಕಿತ್ತು ತೆಗ್ಗಿಗೆ ಹಾಕಿದರೆ ಗೊಬ್ಬರವಾರೂ ಆದೀತು ..! ಇದರಿಂದ ಏನಾಗಬೇಕು ಇವಗಳನ್ನು ಹೊರಹಾಕಲು ಅಮೂಲ್ಯ ಅರ್ಧ ಗಂಟೆ ಯಾದರೂ ಹಾಳು ಮಾಡಬೇಕು.ಕಿತ್ತು ತಿನ್ನುವ ಬಡತನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನ ಪಡಬೇಕೋ ಅಥವಾ ಇನ್ನೊಂದು ವರ್ಷ ಉಳಿದ ಪದವಿಯನ್ನು ಪೂರ್ಣ ಗೊಳಿಸಬೇಕೋ ಗೊಂದಲದ ಗೂಡಾಗಿತ್ತು ಶಿವಣ್ಣನ ಮನಸ್ಸು, ಜೀವನವೆಂದರೆ ಹಾಗೆ ಕವಲು ದಾರಿ, ಯಾವುದನ್ನು ಆಯ್ದು ಕೊಳ್ಳಬೇಕು? ಸರಳ ದಾರಿ ಆಯ್ದು ಕೊಂಡರೆ ಸೀಮೀತ ಬದುಕಿಗೆ ಹೋಗುತ್ತೇವೆ . ಸ್ವಲ್ಪ ರಿಸ್ಕ ಇರುವ ದಾರಿಯನ್ನು ಆಯ್ದು ಕೊಂಡರೆ ಗೌರವದ ಸ್ಥಾನದ ಕಡೆಗೆ ಹೊಗುತ್ತೇವೆ, ರಿಸ್ಕದಾರಿ ತುಳಿಯುವಾಗ ಬಹು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಇಲ್ಲವೆಂದೆರೆ ಪಾತಾಳ ಶತಸಿದ್ದ. ಶಿವಣ್ಣ ಮಾತ್ರ ರಿಸ್ಕದಾರಿಯನ್ನೆ ತುಳಿಯವ ನಿರ್ದಾರ ತೆಗೆದುಕೊಂಡ ಯಾಕೆಂದರೆ ಸರಳ ದಾರಿಯಲ್ಲಿ ಗದ್ದಲ ಬಹಳ , ಎಲ್ಲರೂ ಈ ಮಾರ್ಗ ದಿಂದ ಹೋಗಲು ಬಯಸುವವರೆ .ಹೀಗಾಗಿ ಈ ದಾರಿ ಬಿಟ್ಟು ರಿಸ್ಕದಾರಿಯನ್ನು ಆಯ್ದುಕೊಂಡ , ಅಲ್ಲಿ ಗದ್ದಲ ಕಡಿಮೆ ಶ್ರಮ ಹಾಕಿದರೆ ಗುರಿ ತಲುಪಬಹುದೆಂದು ಆತ ನಿರ್ಧರಿಸಿದ. ಮುಂಜಾನೆ ಎದ್ದವನೆ ತಂದೆಗೆ ಹೇಳಿದ "ಇನ್ನು ಮುಂದೆ ನಾನು ದಿನವಿಡಿ ಬಸ್ ನಲ್ಲಿ ಅಡ್ಡಾಡುವದು ,ಇರುವ ಮೂರು ಎಕರೆಯಲ್ಲಿ ಎಲ್ಲರೂ ದುಡಿಯುವದು ಅಕಾಲಿಕ ಮಳೆ ಸಾಲದದ ಸುಳಿ ಕೂಲಿನಾಲಿ,ಒಪ್ಪೊತ್ತಿನ ಊಟ, ಪೀಸ್ ಗಾಗಿ ಇನ್ನೊಬ್ಬರ ಬಾಗಿಲು ಬಡಿಯುವುದು ನನಗೆ ಬೇಡಾಗಿದೆ ". ಇದಕ್ಕೆ ಪರ್ಯಾಯವಾಗಿ ನಾನು ಬೇರೆ ಹೆಜ್ಜೆ ಇಡುತ್ತೇನೆಂದಾಗ ತಂದೆ ಮಲ್ಲಪ್ಪನಿಗೆ ದಿಕ್ಕು ತಿಳಿಯದಂತಾಯಿತು ಮಗ ದಾರಿ ತಪ್ಪಿದನೆಂದು ಭಾವಿಸಿ ಊರು ಬಿಟ್ಟು ಹೋಗದಂತೆ ಪರಿ ಪರಿಯಾಗಿ ಬೇಡಿಕೊಂಡ, ಆದರೆ ಶಿವಣ್ಣ ತಂದೆಯ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಯಾಕೆಂದರೆ ಈಗಾಗಲೆ ಆತ ನಿರ್ಧಾರ ಮಾಡಿಯಾಗಿತ್ತು.ರೈಲು ನಿಲ್ದಾಣದಲ್ಲಿ ಬಂದು ಕುಳಿತು ತನ್ನ ಮನೆತನದ ಕಷ್ಟದ ದಿನಗಳನ್ನು ಮೆಲುಕು ಹಾಕಿದಾಗ ಭೂಮಿಯು ಬಿರಿದಂತಾಯಿತು ಕಣ್ಣಿನಲ್ಲಿ ನೀರು ಬಂದರೂ ಹೊರಹಾಕುವಂತಿಲ್ಲ ಅದುಮಿ ಹಿಡಿದ "ನಾನು ಗಂಡಸಲ್ಲವೆ ? ಮನೆ ಮನೆಗೆ ಬಣ್ಣ ಹಚ್ಚುವ ಕಾಯಕ ಮಾಡಿದ ಹಿಟ್ಲರ್ ಜರ್ಮನಿಯನ್ನೆ ಆಳದನಲ್ಲವೆ ,ಪೇಪರ ಮಾರಾಟ ಮಾಡಿದ ಎ ಪಿ ಜೆ ಅಬ್ದುಲ್ ಕಲಾಮ ಭಾರತದ ರಾಷ್ಟ್ರಪತಿಯಾಗಲಿಲ್ಲವೆ ? " ಎನ್ನುವಷ್ಟರಲ್ಲಿಯೆ ಹುಬ್ಬಳ್ಳಿಯ ಕಡೆ ಹೋಗುವ ರೈಲು ಬಂದು ನಿಂತಿತು,ರೈಲು ನಿಂತಾಗಲೆ ವಾಸ್ತವ ಜಗತ್ತಗೆ ಬಂದಿದ್ದ ,ರೈಲು ಏರಿ ಕುಳಿತ "ಚುಕ್ ಬುಕ್ ಎಂಬ ಶಬ್ದ ಓಡುತ್ತಿತ್ತು ಮತ್ತೆ ತನ್ನ ಕಷ್ಟದ ದಿನಗಳು ರೈಲಿನಂತೆ ಓಡಹತ್ತಿತು" ಆದರೆ ಮುಂದೆ ರೂಪಿಸಬೇಕಾದ ಜೀವನದ ದಾರಿಯ ಕಡೆ ಅದನ್ನು ಹೊರಳಿಸಿದ .ತನಗೆ ಆತ್ಮೀಯ ಸ್ನೇಹಿತ ಮಲ್ಲಯ್ಯ ಹಿರೇಮಠ ರೊಮನಲ್ಲಿ ಉಳಿದಕೊಳ್ಳಬೇಕು ನಂತರ ಅತಿ ಸುಲಭವಾಗಿ ಸಿಗುವ ಕೆಲಸವೆಂದರೆ ಗಾರ್ಡ ಕೆಲಸ ತಾನೆ ? ಒಂದು ಹೊತ್ತಿನ ಊಟ ಮಾಡಿಯಾದರು ಪರವಾ ಇಲ್ಲ, ಶಿಕ್ಷಣ ಮುಂದುವರೆಸಿ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿ ನನ್ನ ಬಡತನ ಹಂಗಿಸಿದ ಜನರ ಮುಂದೆ ತಲೆ ಎತ್ತಿ ಬದುಕಬೇಂದು ಬಯಸಿದ .ಯೋಚನೆ ಪೂರ್ಣ ಮಾಡುವ ಮೊದಲೆ ಹುಬ್ಬಳ್ಳಿ ರೈಲು ನಿಲ್ದಾಣ ತಲುಪಿಯಾಗಿತ್ತು.ಬಾರವಾದ ಹೆಜ್ಜೆಯಲ್ಲಿಯೆ ಸ್ನೇಹಿತನ ಮಲ್ಲಯ್ಯನ ರೂಮ ತಲುಪಿದ.ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಮಲ್ಲಯ್ಯ ಪ್ರೀತಿಯಿಂದ ಉಪಚರಿಸಿದ ಅದಕ್ಕೆ ಹೇಳುವುದು ಸ್ನೇಹಿತ ಎಂದರೆ ಎರಡನೆಯ ಹೆಂಡತಿ ಎಂದು. ಎಂದಿನಂತೆ ಕ್ಲಾಸ ಮುಗಿಸಿದ ಆದರೆ ಮನಸ್ಸು ಮಾತ್ರ ಸ್ವಂತ ಕಾಲಮೇಲೆ ನಿಂತರೆ ಎಷ್ಟು ವಾಸಿ ಎಂದು ಹೇಳುತ್ತಿತ್ತು. ಸಂಜೆ ಸರಿಯಾಗಿ ಆರು ಗಂಟೆ ಆಗಿರಲಿಲ್ಲ ಗಾರ್ಡ ಕೆಲಸ ನೀಡುವ ಎಜಂಟ ಆಫೀಸ್ ಮಂದೆ.. ಸ್ನೇಹಿತ ಮತ್ತು ತಾನು ಬಂದು ನಿಂತಿದ್ದರು.ಗಾರ್ಡ ಕೆಲಸ ನೀಡುವ ಸೂಪರ್ ವೈಸರ್ ಎಲ್ಲಾ ಮಾಹಿತಿ ಪಡೆದ
ಮೇಲೆ ನೀನು ಕರ್ತವ್ಯಕ್ಕೆ ಹಾಜರಾಗಬಹುದು ಆದರೆ ಡ್ರೆಸ್ ನೀಡುವ ಸಲುವಾಗಿ ಎರಡು ಸಾವಿರ ಅಡ್ವಾನ್ಸ್ ನೀಡಬೇಕೆಂದು ಕರಾರು ಹಾಕಿದ .ಈಗ ಮುಗಿಲು ಹರಿದು ಮೇಲೆ ಬಿದ್ದ ಅನುಭವವಾಯಿತು " ಆ ಹಣವಿದ್ದರೆ ನಾನೇಕೆ ಈ ಗಾರ್ಡ ಕೆಲಸ ಮಾಡಲು ಬರಬೇಕೀತ್ತು, ನಾನು ಮಲ್ಲಯ್ಯ ನ ಹಾಗೆ ಸರಾಗವಾಗಿ ವಿದ್ಯೆ ಕಲಿಯಬಹುದಿತ್ತಲ್ಲವೆ ? ಅದು ಇಲ್ಲದ ಕಾರಣಕ್ಕಾಗಿ ಇಲ್ಲಿ ಬಂದದ್ದು" ಎಂದು ಮನದಲ್ಲೆ ನೊಂದು " ನಾಳೆ ನಾವು ಹಣದೊಂದಿಗೆ ಬರುತ್ತೇವೆ ಎಂದು ಜಾಗ ಕಾಲಿ ಮಾಡಿದರು.ದಾರಿ ಯುದ್ದಕ್ಕೂ ಎರಡು ಸಾವಿರ ಹೊಂದಿಸುವದು ಹೇಗೆ ? ಮಲ್ಲಯ್ಯ ನೇ ಶಿವಣ್ಣನಿಗೆ ಮಾರ್ಗ ದರ್ಶನ ನೀಡಿದ ,ಹೇಗೂ ನಮ್ಮ ಅಣ್ಣನೆ ನಗರ ಸಭೆಯಲ್ಲಿ ಗುಮಾಸ್ತನಿದ್ಧು ನಾಳೆ ಸಂಬಳದ ದಿನ ಎರಡು ಸಾವಿರ ಕೇಳಿ ನೋಡು ನಾನೂ ಪ್ರಯತ್ನ ಮಾಡುತ್ತೇನೆ ಎಂದ.ಇವರು ರೂಮಿಗೆ ಹೋಗುವದಕ್ಕೂ ಆತ ಬರುವದಕ್ಕೂ ಸರಿ ಆಗಿತ್ತು. ಇದ್ದ ವಿಚಾರ ಹೇಳಿದ ಶಿವಣ್ಣ ಬಡ್ಡಿಯಾದರೂ ಪರವಾಯಿಲ್ಲ ಸಹಾಯ ಮಾಡಬೇಕಂದು ಅಂಗಲಾಚಿದ , " ಹುಚ್ಚ ಇಂತಹ ಕೆಲಸಕ್ಕೆ ಯಾರಾದರು ಬಡ್ಡಿ ಪಡಿಯುತ್ತಾರೇನೊ ಎಂದವನೆ ಎರಡು ಸಾವಿರ ಇಪ್ಪತ್ತು ಗರಿ ಗರಿ ನೋಟ ನೀಡಿ, ನಿನಗಾದಾಗ ನೀಡು ಆಯ್ತಾ " ಎಂದ.ದೇವರು ಇಳಿದು ಬಂದ ಅನುಭವಾಯಿತು.ಸಂಜೆಯಾದರೆ ಗಾರ್ಡ ಕೆಲಸ ಮುಂಜಾನೆ ಕ್ಲಾಸ್, ಹಗಲು ಡ್ಯೂಟಿ ಬಂದರೆ...! ? ಮಲ್ಲಯ್ಯ ನ ನೋಟ್ಸ್ ಇವನಿಗೆ ಕ್ಲಾಸ್, ದಿನಗಳು ಸರಿದವು ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಪಾಸಾಗಿದ್ದ.ಇವರ ಸಂತೋಷಕ್ಕೆ ಪಾರವೆ ಇಲ್ಲ.ಶಿಕ್ಷಕನಾಗುವ ಬಯಕೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಪಡೆದ .ಸರಕಾರದ ನೇರನೇಮಕಾತಿಯ ಪ್ರಯೋಜನ ಪಡೆದ ಶಿವಪ್ಪ
ಶಿಕ್ಷಕನಾಗಿ ಆಯ್ಕೆ ಯಾಗಿದ್ದ .ಕಷ್ಟವೆಂದು ಶಿಕ್ಷಣಕ್ಕೆ ಗುಡ್ ಬಾಯ್ ಹೇಳಿದ್ದರೆ ... ? ಅಥವಾ ನಿದ್ರೆಗೆ ಕಾಕನ ದಾರಿ ಹಿಡಿದು ಮಧ್ಯದ ದಾಸನಾಗಿದ್ದರೆ....ಕವಲುದಾರಿ ಬಂದಾಗ ತೆಗೆದುಕೊಳ್ಳುವ ನಿರ್ಧಾರ ನಮ್ಮನ್ನು ನಿರ್ಮಾಣ ಮಾಡುತ್ತದೆ.ಹಾಗಾಗಿ ತಾಳ್ಮೆಯಿಂದ ಸರಿಯಾದ ದಾರಿಯಲ್ಲಿ ನಡೆಯುವ ನಿರ್ಧಾರ ತೆಗೆದುಕೊಳ್ಳಬೇಕು, ನೀವೇನಂತೀರಿ ..?