Monday, May 31, 2021

* ಉರಿಬಿಸಿಲಿನಲ್ಲಿ ಕೂಗಿದ ಕೊಗಿಲೆ *

 ಇದು ಕವನವೂ ಅಲ್ಲ ,ಕತೆಯೂ ಅಲ್ಲ, ಕನಸಂತೂ ಮೊದಲೆ ಅಲ್ಲ, ಇಂದು ಮಧ್ಯಾಹ್ನ ಮನೆಯ ಮುಂದಿನ ಮರದಲ್ಲಿ ಕೇಳಿದ ಕೊಗಿಲೆ, ಕಾಗೆಯ ಗಾನ


* ಉರಿಬಿಸಿಲಿನಲ್ಲ ಕೂಗಿದ ಕೊಗಿಲೆ *

ಎನ್ನಂಗಳದ ಸೊಬಗು ಏನೆಂದು ವರ್ಣಿಸಲಿ...  
ಒಂದು ತೆಂಗು, ಎರಡು ಬಾದಾಮಿ ಮೂರು ಹೊಂಗೆ, ಇನ್ನರೆಡು ಬೇವು ಒಂದು ಸಾಗವಾನಿ,ಇದು ಎಣಿಕೆಯಲ್ಲ, ಗೌರವ ಪಡೆಯುವ 
ಹವಣಿಕೆಯೂ ಅಲ್ಲ, ನನ್ನದೆನ್ನವ ಅಧಿಕಾರವು ನನಗಿಲ್ಲ, ಪುರಸಭೆಯ ದಾರಿ 
ಭಗವಂತ ಬೀಸಿದ ಗಾಳಿ 
ಅವರೆ ಹರಿಸಿದ ನೀರು 
ಬಿಲ್ಲು ಕಟ್ಟಿ ದೆನೆಂದರೆ ಬಡಿವಾರವೆಲ್ಲ. . 
ಅದು ಸರ್ಕಾರ ನೀಡಿದ ಸಂಬಳದಿಂದ 
ನನ್ನದೆನ್ನುವುದೆನಿಲ್ಲ ....
ನನ್ನ ಮರಗಳೆಂದರೆ ನಗಲಾರರೆ 
ಇಂದು ಮಟ ಮಟ ಮಧ್ಯಾಹ್ನ 
ಮಲಗಿ ನಿದ್ರೆಗೆ ಜಾರುವ ಮುನ್ನ 
ಇಂಪಾದ ದ್ವನಿಯೊಂದು ಇಣುಕಿ  ನೋಡಿತು 
ಕರ್ಣ ಕುಟೀರದ ಮೇಲೆ ಕೂಹೂ ,ಕೂಹೂ ....
ಕತ್ತೆತ್ತಿ ನೋಡಿದೆ ಬಣ್ಣ ಕರಿದು ದ್ವನಿ ಬಂಗಾರ 
ಉರಿ ಬಿಸಿಲಿನಲ್ಲಿ ಸೃಷ್ಟಿಯಾಯೀತು ಸ್ವರ್ಗ ಸೃಂಗಾರ
ಸೆರೆಹಿಡಿದೆ ನನ್ನ ಕೆಮರಾ ಕಣ್ಣಿಂದ 
ಸುರಸುಂದರ ಉಲಿದಾಗ ನೆಲಮುಗಿಲೆ ತಂಪು 
ಕೂಹೂ ಕೊಹೂ........
ಗಂಧರ್ವ ಲೋಕವೆಂಬುದು ನಾನರಿಯೆ,
ಎಡಬಲದಿ ಅರಳಿರುವ ಎರಡು ಬದಾಮಿ, 
ಎಡದಲ್ಲಿ ಕೋಗಲೆ, ಬಲದಿಂದ ಕಾಗೆ 
ಕರ್ಕಸವೆಂದು ಅನಿಸಲಿಲ್ಲ ಕಾಗೆಯ ಕೂಗು..
ಸಾಗಿ ಬಂದುದೆ ನಾನರಿಯದ ನಾಕ. 
ನವಿಲೊಂದೆ ಬಾಕಿ..... ನಾನಿರುವೆನಲ್ಲ..!
ಕುಣಿದು ಕುಪ್ಪಳಿಸಲು... 
ಹನಿಯಬಂದ ರವಿ ಕಿರಣದಿಂದ... 
ಸೋತ ಓಡುತಿರುವನು ಜಾರಿಕೊಂಡು.
ರಜೆಯ ಮಜಾ ಹೇಗೆಂದು ತಿಳಿಯಿತು 
ಕಾಗೆ ಕೋಗಿಲೆಯಿಂದ ...
ಅದಕ್ಕಾಗಿ ನಾನು ಶರಣಾದೆ 
ಮನೆಯ ಮುಂದಿನ ಮರಗಳಿಗಿಂದು 
ಮರೆಯದೆ ಗಿಡನೆಡಬೇಕು ಜೂನ 
ಐದರಂದು ಎಂದೆಂದೂ.....

Sunday, May 30, 2021

* ಬೇಕು ನಿಸರ್ಗದ ನರ *

ಕರವಲ್ಲವಿದು ಸೃಷ್ಟಿಯ ವರ 
ಬೆರುಳು ಬಂಧನದಿ ಅರಳಿದೆ ವನ/
ಸೆರಗೊಡ್ಡಿ ಬೇಡುವೆ ಸ್ಮಶಾನ ಶಿವನ
ಮರದ ರೂಪದಲ್ಲಿ ತೋರು ವದನ //

ಅಂದು ಪಶುಪತಿ ಸಿಂಧೂ ಕೊಳ್ಳದ
ಇಂದು ಹರ, ಹೆಸರಿಗೇನು ಇಲ್ಲ ಬರ/
ತಂದು ನಮಿಸಿ ಬೇಡುವೆವು ವರ
ತುಂಬಿ ಹರಡಲಿ ಶ್ರೀಗಂಧದ ಪ್ರವರ//

ಹಸಿದು ಮುಕ್ಕುವ ಕಾಡು ಹೆಬ್ಬುಲಿಯ  
ಹೊಸಿಕಿ ಹಾಕುವ ಭಯವ ಕಳೆದು /
ಹರಣಿ ತಾ ಸ್ವಚ್ಛಂದವಾಗಿ ಬೆಳೆದು 
ಹೊಸ ಸಂದೇಶ ಹಾಡಿದೆ ಜಗದಲಿ//

ಪಶು ಪಕ್ಷಿಗಳಿಗೆ ಸ್ವಚ್ಛಂದ ಕನಸು
ಯಶ ಕಂಡು ಹಾರುವವು ನಭ ಏರಿ
ಪಾಶವಿ ಕೃತ್ಯ ಎಸಗುವರಿಲ್ಲ ಈ ಬಾರಿ  
ನಿಸರ್ಗದ ನರನ ಸೃಷ್ಟಿಸು ಮುರಾರಿ //


                ಬಸನಗೌಡ ಗೌಡರ

                  ಗುಳೇದಗುಡ್ಡ 


Saturday, May 29, 2021

* ತಲೆ ತಲಾಂತರ *

ತಲೆಮಾರು ಬೆಳೆದು ಬಂತು, ನಿಂತು 
ನೆಲದ ಹಿಡಿಮಣ್ಣಿನ ಚಂದದ ಬೇರಿಂದ 
ತಲೆಯಲ್ಲಿ ಚಿಗುರಲಿಲ್ಲ ಅಪ್ಪ ಅಜ್ಜನಿಗೆ
ಕುಲವೆ ಧರಿಯಲ್ಲಿ ಸಕಲವೂ ಎಂದು//

ಮಗನ ತಲೆಯಲ್ಲಿ ಆಸೆಯ ಚಿಗುರೆಲೆ
ಬಾಗಿನಡೆವ ಭಾವನೆ ಮಾಡಿದ ಕೊಲೆ
ಸಾಗಿನೆಡೆದ ಕಾಣಲಿಲ್ಲ ಸಾಗರದ ಅಲೆ
ಸುತ್ತವರಿದಾಗ ಕಡಲಿವನಿಗೆ ಜ್ವಾಲೆ//

ಶರಧಿಯ ಸರಿಸುವ ಹರಸಾಹಸ
ಕೊರಕಲು ಕಂಡಾಗ ತಲೆಯ ಬಿರುಕು
ಗೊರಕೆ ಹೊಡೆದವರಿಗೆ ಈಗ ಮರುಕ
ಬೇರು ಭದ್ರಪಡಿಸ ನಿಂತ ತಲೆ ತಿರುಕ//

ಕಾಲ ಕಳೆಯುವ ಮುನ್ನ ಸಾಲಿಗೇರಲಿ
ಶೂಲವದು ಸಕಲವು ತನಗಾಗೆಂದಲಿ
ಬಾಲಕಳದು ಬೆಳದು ಬೆಳಕಾಗು ಜಗದಿ
ಛಲವಿರಲಿ ಕಟ್ಟುವೆ ಕಾಡಿನ ನಾಡನು//

ಬಸನಗೌಡ ಗೌಡರ 


    


Friday, May 28, 2021

* ಹೀಗೊಂದು ಕೊರೋನಾ ಪುರಾಣ *

         ಕಾಲಪುರುಷನಿಗೆ ಕರಣೆ ಎಂಬ ಮೂರಕ್ಷರದ ಅರ್ಥವೆ ತಿಳಿಯದು ಅದು ಇತ್ತೀಚೆಗಂತು ಆತ ತಲೆ ಕೆಟ್ಟವರಂತೆ ವರ್ತಿಸುತ್ತಿದ್ದಾನೆ,ಅದಕ್ಕೆ ಅವನಿಗೆ ಸ್ವರ್ಗ ಲೋಕದಲ್ಲಿ ಶಿಕ್ಷಣದ ಕೊರತೆ ಎಂದು ಕಾಣಿಸುತ್ತದೆ.ಅಲ್ಲಿಯ ಪ್ರಭುತ್ವದ ಅಸಮರ್ಥ ಆಡಳಿತದ ಫಲಶ್ರುತಿ ಇದಕ್ಕೆ ಕಾರಣವಿರಬಹುದೇನೊ?  ನಮ್ಮ ಪಕ್ಕದ  ಹಳ್ಳಿ ಪರಂಧಾಮಯ್ಯ  ಗೊಣಗುತ್ತ ಹೊರಟಿದ್ದರು ....ಅದೆ ಸಮಯಕ್ಕೆ ಬಂದ ಮೇಸ್ಟ್ರು ಗುರುಶಾಂತಯ್ಯ ಲಗುಬಗೆಯಿಂದ ಕಾಯಿಪಲ್ಲೆ  ಖರೀದಿಸಿ ಮರಳಿ ಮನೆಗೆ ತೆಗೆದು ಕೊಂಡು ಮನೆ ಸೇರುವ ದಾವಂತದಲ್ಲಿದ್ಧರು.ಪರಂಧಾಮಯ್ಯನನ್ನು  ನೋಡಿದ್ದೆ ತಡ ಅವನಿಗಾಗಿ ಕಾಯಲೆ ಬೇಕಾಯಿತು,ಯಾಕಂದ್ರೆ ಬಿಟ್ಟು ಹೋದರೆ ಸುಮ್ಮನೆ ಬಿಡುವ ಆಸಾಮಿಯಲ್ಲ ,ಮತ್ತ ಒಂದ ಓಣಿಯಾವ ಬೇರೆ, ಇವನು ಯಾವಾಗಲೂ ಜಗತ್ತು ತನ್ನ ಮೇಲೆ ಬಿದ್ದವರಂತೆ ದೇಶದ ಬಗ್ಗೆ ಮಾತಾಡುತ್ತಿದ್ದ, ಆದರೆ ಆಸಾಮಿ ಕೆಟ್ಟ ವನಂತೂ ಅಲ್ಲ, ಹೀಗಾಗಿ ಗುರುಶಾಂತಯ್ಯ ಮೇಷ್ಟ್ರು ತನ್ನ  ಖರೀದಿ ಮುಗಿದಿದ್ದರೂ ಅವರಿಗಾಗಿ ಹತ್ತ ನಿಮಿಷ ಕಳೆಯಬೇಕಾಯಿತು. ಮೇಷ್ಟ್ರು ತನಗಾಗಿ ನಿಂತಿರುವದನ್ನು ಗಮನಿಸಿದ ಪರಂಧಾಮಯ್ಯ ಎಷ್ಟು ತೆಗೆದುಕೊಂಡನೋ ಏನೂ, ತನಗಾಗಿ ನಿಂತವರನ್ನು ಕಾಯಿಸಿದ ಜಾಯಮಾನ ಅವನದಲ್ಲ ಹೀಗಾಗಿ ಐದೆ ನಿಮಿಷದಲ್ಲಿ ಹಾಜಾರಾದ ಎಷ್ಟು ಕೊಂಡನೋ ಆ ದೇವರೆ ಬಲ್ಲ ... ಇಬ್ಬರು ದಾರಿಯಲ್ಲಿ ಹರಟುತ್ತಾ ಮನೆಯ ಕಡೆ ಹೆಜ್ಜೆ  ಹಾಕಲು ಪ್ರಾರಂಭಿಸಿದರು. ಪರಂಧಾಮಯ್ಯ ಸುಮ್ಮನೆ ಇರುವ ಮನಷ್ಯನೆ ಅಲ್ಲ ಬಿಡಿ ,ತನ್ನ ಲೋಕ ಪ್ರೀತಿ ಪ್ರಾರಂಭಿಸಿಯೆ ಬಿಟ್ಟ, ಅಲ್ಲ ಶಾಂತಯ್ಯ ಸರಕಾರದವರು ಸಂತೇ ಮಾಡಲು 6.0 ರಿಂದ 10.00 ವರೆಗೆ ಟಾಯಂ ಕೊಟ್ಟಾರು ಅಂದರೆ ಎಷ್ಟುಗಂಟೆಯಾಯಿತು 4.00 ಗಂಟೆಯಾಯಿತು, ಈ ನಾಲ್ಕು ಗಂಟೆ ಮುಗಿದ ಮೇಲೂ ರಸ್ತೆಗೆ ಇಳಿದು ಮಸ್ತ್ ಬಾರಿಸಿಕೋತರ ಅಂದರ ಏನಿದರ ಅರ್ಥ ? "ಮೈಯಾಗ ಕೊರೋನಾ ಇದ್ದರ ಓಡಿ ಹೋಗಲಿ" ಅಂತ ಶಾಂತಯ್ಯ ಮೇಷ್ಟ್ರು  ನಕ್ಕರು.ಇರಲಿ "ಶಾಂತಯ್ಯ ಕೊರೋನಾ ಓಡಿ ನಮ್ಮ ಪೋಲೀಸರ ಬಡಗೀಗೆ ಬಂದರ ಹೇಂಗ " ಮತ್ತೆ ಪರಂಧಾಮಯ್ಯ ಪೋಲೀಸರ ಕಾಳಜಿ ಪ್ರಾರಂಭ ಆಯಿತು. ಶಾಂತಯ್ಯ ಹೇಳಿದರು "ಇಲ್ಲಾರಿ ಅದಕ ನಮ್ಮ ಕಮೀಷನರ್ ಸಾಹೇಬರು ಬಡಿಬ್ಯಾಡರಿ ಅಂತ  ಆರ್ಡರ್ ಮಾಡ್ಯಾರಿ ಟಿವ್ಯಾಗ ನೋಡಿರಿಲ್ಲ ನಾಲ್ಕು ಹುಡುಗರನ್ನ ನಿಲ್ಲಿಸಿ ಹೂವಿನ ಹಾರ ಹಾಕಿ ಮೇಲ ಆರತಿ ಮಾಡಿ, ಚಂದ್ರಮಾ ಬಳದದ್ದನ್ನ ನೋಡಿರಿಲ್ಲ" ಶಾಂತ ಯ್ಯ ನಿನಗ ಗೊತ್ತದ ಇಲ್ಲ ಹಳ್ಳಿಯ ಮಂದಿ ಮಾರಮ್ಮನ ಜಾತ್ರೆಯಲ್ಲಿ ಬಲಿ ಕೊಡುವದಕಿಂತ ಮೊದಲ ಹಿಂಗ ಹಾಕತಾರೇನಪ. ಇಷ್ಟಕ ನಮ್ಮ ಜನ ತಿಳಕೋ ಬೇಕು ಇಲ್ಲಾ ಹಂದಿಗೆ ಹೊಡದಂಗ ಹೊಡಿತಾರ .ಈ ಜನ ಸುಮ್ಮನೆ ಇರುವರಲ್ಲರಿ ಅದನ್ನ ಕೋರ್ಟಿಗೆ ಪೋಲೀಸರ ವಿರುದ್ಧವಾಗಿ ಹೋಗ್ಯಾರ, ಶಾಂತಯ್ಯ ಹೇಳಿದರು" ಬಡಿದದ್ದಕ್ಕೆ  ಕೋರ್ಟ ಏನ ಹೇಳತಂದರ ಮತ್ತ ಬಡಗೆ ಅಂದರೆ ಪೂಜೆ ಮಾಡಾಕ ಇಡಾಕ ಇರತಾವ ಏನ ?  ಅವರಿಗೂ ಮನಸ್ಸು ಒಂದು ಇರತದ ಜನರು ಅರ್ಥ ಮಾಡಕೊಳ್ಳಬೇಕು ಅಂತ ಕ್ಯಾಕರಸಿ ಉಗಳಿ ಕಳಿಸಿತು.ಸರಕಾರ ಇರೊದ ನಮ್ಮ ಸಲುವಾಗಿ ಅನ್ನೋದ ಅರ್ಥ ಮಾಡಿಕೊಳ್ಳಬೇಕು ಜನ. ಪರಂಧಾಮಯ್ಯನ ಪುರಾಣ ಮತ್ತ ಪ್ರರಂಭಿಸಿಯೆ ಬಿಟ್ಟ ಸರ್ "ಎನ ಇರಲಿ ಏನ ಆಗತ್ತ ಅದು ಒಳ್ಳೆಯದಕ್ಕದಕ್ಕಂತ ಹೆಂಗ ಕಾಲ ಅದ ಹಂಗ ಹೊಂದಿಕೊಳ್ಳ ಬೇಕು "ಅಲ್ಲ ರಿ ,ಮದುವೆ ಲಕ್ಷ,ಲಕ್ಷ ಖರ್ಚು ಮಾಡಿ ಮಾಡುವದು ತಪ್ಪಿದೆ ,ಪ್ರೆಸ್ಟೆಜ ಅಂತ ನೂರಾ ಎಂಟ ಐಟಂ ಮಾಡಿ ತಿಪ್ಪಿಗೆ ಎಸೆಯುವದು ತಪ್ಪಿದೆ. "ಅಂದರ ಇನ್ನು ಮುಂದ ಜನಸಂಖ್ಯೆ ಕಡಿಮೆ ಆಗತ್ತ ಅನ್ನವನ ಮತ್ತ ನೀನು...

ಹಾಂಗಲ್ಲರಿ ಮಾಸ್ತರ ಸೊಚ್ಚತೆ ಬಗ್ಗೆ ಹೇಳಿದರ ಯಾರು ತೆಲಿನ ಕೆಡಸಿಕೂಳ್ಳತಿರಲಿಲ್ಲ ಈಗ ನೋಡರಿ ಹೇಗ ಹಾದಿಗ ಬಂದಾರ ,ನೀವು ಏನ ಅನ್ನರಿ ಸರ್, ಕೊರೋನಾ ಚನ್ನಾಗಿಯೇ ಪಾಠ ಕಲಿಸಿದೆ ಬಿಡ್ರಿ ಸರ್. 

ಅಲ್ಲ ರಿ ಪರಂಧಾಮಯ್ಯ ಜಗತ್ತು ದಿನ ಸಾವಿರಾರು ಜನ ಸಾಯಕ ಹತ್ಯಾರ ಅವರಿಗೆ ಹಾಸಿಗೆ, ಹೆಡ್, ಆಕ್ಸಿಜನ್ ಅಂತ ಚಿಂತಿ ಮಾಡಿದರ ಒಳ್ಳೆಯದು ಆತು ಅಂತೀರಲ್ಲರಿ...ಅಲ್ಲರಿ ಮಾಸ್ತರ್, ನಮ್ಮ ಜನರಿಗೆ ಬುದ್ಧಿ  ಯಾವಾಗ ಬರುತ್ತೋ ಯಾರಬಲ್ಲ ಸರಕಾರ ಜನರಿಗೆ ಅನುಕೂಲ ಆಗಲಿ ಅಂತ ವ್ಯಾಕ್ಸಿನ್ ಔಷದ ಪ್ರೀ ಕೊಟ್ರು ಅದರಾಗೂ ರೊಕ್ಕ ಕಮಾಯ ಮಾಡಕ ಹತ್ಯಾರಲ್ಲ ಅದಕ್ಕೇನ ಅಂತೀರಾ, ಜಗತ್ತು ಅಂದರ ಎಲ್ಲಾ ತರ ಜನ ಇರೂದ ಅಂತವರಿಗೆ ಅಂತಾ ಒಂದು ವ್ಯವಸ್ಥೆ ಇದೆ ಅವರಿಗೆ ಏನು ಪಾಠ ಕಲಿಸಬೇಕು ಅದನ್ನು ಕಲಸತದ " ನೀವು ವ್ಯಾಕ್ಸಿನ್ ಹಾಕಿಸಿಕೊಂಡೀರ ಇಲ್ಲ"

ಶಾಂತಯ್ಯ ಕೇಳಿದರು ,ಸರ್ ನಿನ್ನೆ ಹೋಗಿದ್ದೆವು ಸ್ಟಾಕ ಕಾಲಿ ಆದವು ಬರತಾವ ಅಂತ ಹೇಳಿದರು .ಮತ್ತೊಂದು ಸಾರಿ ಹೋಗಬೇಕರಿ."ಅಲ್ರಿ ಸರ್ ನಿನ್ನೆ ಪೇಪರಿನಾಗ ಓದಿದೆ ದೊಡ್ಡ ದೊಡ್ಡವರು ಏನ ಹೇಳಿದರಂದರ ಇವು ಅಲೆ ಮ್ಯಾಗ ಅಲೆ ಬರತಾವು ಆದರ ಜೊತೆ ಹೇಗೆ ಬದಕಬೇಕು ಅನ್ನುದನ್ನ ಕಲಕೊ ಬೇಕು ಅಂತ ಬರದಿದ್ದರ ನೋಡರಿ.ಅದಕ್ಕೂ ಟ್ಯೂಷನ ತೊಗೊಳೊ ಕಾಲ ಬರತ್ತ ಏನ, ನೋಡರಿ.ಆ ಕೆಲಸ ಈಗಾಗಲೇ ಮಾಧ್ಯಮದವರು ಮಾಡ್ಯಾರಿ,ಸರಕಾರದವರು ಮಾಡ್ಯಾರ ಅದರಂಗ ನಡೆದರ ಇಂತಹ ಹತ್ತ ಕೂರೋನ ಬಂದರು ಎದುರಿಸಬಹುದು ಅನ್ನುವದರೊಳಗಾಗಿ ಪರಂಧಾಮಯ್ಯನ ಮನೆ ಸಮೀಪ ಬಂತು ಬದುಕಿದೆಯಾ ಬಡಜೀವ ಎಂದು ಮನೆ ದಾರಿ ಹಿಡಿದರು ಶಂತಯ್ಯ.

Tuesday, May 25, 2021

* ಚಲುವೊಂದೆ ಗೆಲುವಲ್ಲ ಕುಲಕೆ *

ಕವಲು ದಾರಿಯಲಿ ನಿಂತು ...
ನವಿಲು ನಾ ಕುಣಿಯಬಹುದೆ/
ಬಯಲೂ ಬೇಕು,ನಿನ್ನೊಲವು ಬೇಕು
ಚೆಲುವೊಂದೆ ಗೆಲುವಲ್ಲ ಕುಲಕೆ //

ಸಾವಿರ ಕಣ್ಣು ಸಾಲದು ಎನ್ನೊಳು 
ಸವಿಯಲು, ಸವೆಯಬೇಕು ಬಾಳು / 
ಸಾವಿನ ಮನೆಯವರೆಗೆ ಇದೆ ಗೋಳು
ಸುಮ್ಮನೆ ದುಡಿಯ ಬಂದ ಜೀತದಾಳು

ನರಿ ನಾಯಿ ಭಯದ ಚಿಂತೆ
ಹರಿಯಿಲ್ಲದೆ ತಿರುಗುವದುಂಟೆ /
ವರ ಬೇಕು ಕಾಡುಮೃಗ ಕೈಹಾಕದಂತೆ
ಇರುವ ಭಾಗ್ಯವ ನೆನೆಯಲು ನಿಂತೆ//

ಹಾಡುವ ಹಕ್ಕಿಗೆ ಜಿಗಿಯುವ ಚಿಟ್ಟೆಗೆ
ಬಾಡಿ ಅರಳುವ ಹೂವಿಗಿಲ್ಲ ಕೂರತೆ/
ಹೆಡೆ ಎತ್ತಿದ ಹಾವಿಗಿದೆ ಹುಳಹುಪ್ಪಡಿ 
ಅಡಿಗಡಿಗೂ ಇದೆ ಅನ್ನದ ಜೋಪಡಿ//

ದಟ್ಟಡವಿಯಲ್ಲಿ ಕಟ್ಟುತಿರುವೆ ಮನೆ
ಇಟ್ಟಂತೆ ಇರುವುದು ಸೃಷ್ಟಿಯ ಗಂಟು/
ಬಿಟ್ಟಿರಬಹುದೆ ಗಿಡಮರ, ಬಳ್ಳಿ ನಂಟು
ಗಟ್ಟಿಯಾಗಿ ಕುಣಿಯವೆ ಶಿವನುಂಟು//


                    ಬಸನಗೌಡ ಗೌಡರ 

Monday, May 24, 2021

* ಕವಲು ದಾರಿಯ ನಿರ್ಧಾರ *

             ಅಂದು ನಿದ್ದೆ ಬಾರದ ದಿನ ,ಮಧ್ಯ ರಾತ್ರಿಯ ಸಮಯದಲ್ಲಿ ಎದ್ದು ಕುಳಿತ, ನಿರವ ಮೌನ ನಾಯಿಗಳು ಬೀಕರವಾಗಿ ಬೊಗಳುತ್ತಿದ್ದವು. ಊರಾಚೆ ನರಿಗಳು ಊಳಿಡುವ ಶಬ್ದ .ಕುಳಿತಾದರು ಏನು ಮಾಡುವದು, ಮತ್ತೆ ಮಗ್ಗಲು ಬದಲಿಸಿದರೆ ಬರಬಹುದೆಂದು ಮತ್ತೆ ಹಾಸಿಗೆಗೆ ಒರಗಿದ .ನಿದ್ರೆ ಬರುತ್ತಿಲ್ಲ, ನಮ್ಮ ಕಾಕಾ ಪೆಗ್ಗು ಹಾಕಲು ಕಲಿತದ್ದು ಏಕೆ ಅಂತ ಈಗ ಅರಿವಾಯಿತು....! ಆದರೆ ನಾನು ನನ್ನ ಕಾಕ ಹನುಮಂತನಂತೆ ಅಜ್ಞಾನಿಯಲ್ಲವಲ್ಲ.  ಏನಾದರೊಂದು ಸಾಧನೆ ಮಾಡಿಯೇ ಮಾಡಬೇಕೆಂದು ದೃಢ ನಿರ್ಧಾರ ಮಾಡಿದ .ಅಣ್ಣ ನೀಡಿದ ಹಳೆ ಮೊಬೈಲ್ ಅವನನ್ನೆ ನೋಡುತ್ತ ಎಲ್ಲಾ ಹೊದ್ದು ಮಲಗಿದಂತೆ ಕಾಣುತ್ತಿತ್ತು. ಅದರಲ್ಲಿ ಇರುವುದಾದರು ಏನು ? ಹತ್ತಾರು ಗ್ರೂಪ್ ಗಳಿಂದ ಬಂದ ಅವೆ ಹಳಸಲು ಫೋಟೋಗಳು ಒಂದು ಸಾರೆ ಬಂದ ಫೋಟೋ ಮತ್ತೆ ಮತ್ತೆ ಬಂದು ಗ್ಯಾಲರಿ ಯನ್ನು ಡಸ್ಟಬಿನ್ ಮಾಡಿದ್ದವು,ಅವೆ ಸಹೋದರರ ದಿನ , ಸಹೋದರಿ ದಿನ ,ಮಗನ ದಿನ, ಮಗಳದಿನ , ಲವ್ವರಿಗಾಗಿ ಇನ್ನೊಂದು ದಿನ ಎಂತಹ ವಿಪರ್ಯಾಸ , ಪ್ರೀತಿ ಮಾಡಲು ಒಂದೆ ದಿನ ಸಾಕಾ... ಅವ್ವ,ಅಪ್ಪನಿಗೂ ಒಂದೊಂದು ದಿನ ಇನ್ನುಳಿದ 364 (ಅವತ್ತು ಬಿಟ್ಟು)ದಿನ ಏನು ? ಹಾಳಾದ ಮೊಬೈಲ್ ಹೊಂದಿದ ಹೈಕಳುಗಳು ತಂದು ಹಾಕವ ಅವೆ ಪೋಸ್ಟಗಳು, ಯಾವಾಗ ಹೊರಹಾಕುವರೋ ಎಂದು ಉಸಿರುಗಟ್ಟಿ ಕುಳಿತ ನಿರುಪಯುಕ್ತ ಜೀವಗಳು,ಕಳೆಯಾದರು ಪರವಾಯಿಲ್ಲ ಕಿತ್ತು ತೆಗ್ಗಿಗೆ ಹಾಕಿದರೆ ಗೊಬ್ಬರವಾರೂ ಆದೀತು ..!  ಇದರಿಂದ ಏನಾಗಬೇಕು ಇವಗಳನ್ನು ಹೊರಹಾಕಲು ಅಮೂಲ್ಯ ಅರ್ಧ ಗಂಟೆ ಯಾದರೂ ಹಾಳು ಮಾಡಬೇಕು.ಕಿತ್ತು ತಿನ್ನುವ ಬಡತನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನ ಪಡಬೇಕೋ ಅಥವಾ ಇನ್ನೊಂದು ವರ್ಷ ಉಳಿದ ಪದವಿಯನ್ನು ಪೂರ್ಣ ಗೊಳಿಸಬೇಕೋ ಗೊಂದಲದ ಗೂಡಾಗಿತ್ತು ಶಿವಣ್ಣನ ಮನಸ್ಸು, ಜೀವನವೆಂದರೆ ಹಾಗೆ ಕವಲು ದಾರಿ, ಯಾವುದನ್ನು ಆಯ್ದು ಕೊಳ್ಳಬೇಕು? ಸರಳ ದಾರಿ ಆಯ್ದು ಕೊಂಡರೆ ಸೀಮೀತ ಬದುಕಿಗೆ ಹೋಗುತ್ತೇವೆ . ಸ್ವಲ್ಪ ರಿಸ್ಕ ಇರುವ ದಾರಿಯನ್ನು ಆಯ್ದು ಕೊಂಡರೆ ಗೌರವದ ಸ್ಥಾನದ ಕಡೆಗೆ ಹೊಗುತ್ತೇವೆ, ರಿಸ್ಕದಾರಿ ತುಳಿಯುವಾಗ ಬಹು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಇಲ್ಲವೆಂದೆರೆ ಪಾತಾಳ ಶತಸಿದ್ದ. ಶಿವಣ್ಣ ಮಾತ್ರ ರಿಸ್ಕದಾರಿಯನ್ನೆ ತುಳಿಯವ ನಿರ್ದಾರ ತೆಗೆದುಕೊಂಡ ಯಾಕೆಂದರೆ ಸರಳ ದಾರಿಯಲ್ಲಿ ಗದ್ದಲ ಬಹಳ , ಎಲ್ಲರೂ ಈ ಮಾರ್ಗ ದಿಂದ ಹೋಗಲು ಬಯಸುವವರೆ .ಹೀಗಾಗಿ ಈ ದಾರಿ ಬಿಟ್ಟು ರಿಸ್ಕದಾರಿಯನ್ನು ಆಯ್ದುಕೊಂಡ , ಅಲ್ಲಿ ಗದ್ದಲ ಕಡಿಮೆ ಶ್ರಮ ಹಾಕಿದರೆ ಗುರಿ ತಲುಪಬಹುದೆಂದು ಆತ ನಿರ್ಧರಿಸಿದ. ಮುಂಜಾನೆ ಎದ್ದವನೆ ತಂದೆಗೆ ಹೇಳಿದ "ಇನ್ನು ಮುಂದೆ ನಾನು ದಿನವಿಡಿ ಬಸ್ ನಲ್ಲಿ ಅಡ್ಡಾಡುವದು ,ಇರುವ ಮೂರು ಎಕರೆಯಲ್ಲಿ ಎಲ್ಲರೂ ದುಡಿಯುವದು ಅಕಾಲಿಕ ಮಳೆ ಸಾಲದದ ಸುಳಿ ಕೂಲಿನಾಲಿ,ಒಪ್ಪೊತ್ತಿನ ಊಟ, ಪೀಸ್ ಗಾಗಿ ಇನ್ನೊಬ್ಬರ ಬಾಗಿಲು ಬಡಿಯುವುದು ನನಗೆ ಬೇಡಾಗಿದೆ ". ಇದಕ್ಕೆ ಪರ್ಯಾಯವಾಗಿ ನಾನು ಬೇರೆ ಹೆಜ್ಜೆ ಇಡುತ್ತೇನೆಂದಾಗ ತಂದೆ ಮಲ್ಲಪ್ಪನಿಗೆ ದಿಕ್ಕು ತಿಳಿಯದಂತಾಯಿತು ಮಗ ದಾರಿ ತಪ್ಪಿದನೆಂದು ಭಾವಿಸಿ ಊರು ಬಿಟ್ಟು ಹೋಗದಂತೆ ಪರಿ ಪರಿಯಾಗಿ ಬೇಡಿಕೊಂಡ, ಆದರೆ ಶಿವಣ್ಣ ತಂದೆಯ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಯಾಕೆಂದರೆ ಈಗಾಗಲೆ ಆತ ನಿರ್ಧಾರ ಮಾಡಿಯಾಗಿತ್ತು.ರೈಲು ನಿಲ್ದಾಣದಲ್ಲಿ ಬಂದು ಕುಳಿತು  ತನ್ನ ಮನೆತನದ ಕಷ್ಟದ ದಿನಗಳನ್ನು ಮೆಲುಕು ಹಾಕಿದಾಗ ಭೂಮಿಯು ಬಿರಿದಂತಾಯಿತು ಕಣ್ಣಿನಲ್ಲಿ  ನೀರು ಬಂದರೂ ಹೊರಹಾಕುವಂತಿಲ್ಲ ಅದುಮಿ ಹಿಡಿದ "ನಾನು ಗಂಡಸಲ್ಲವೆ ? ಮನೆ ಮನೆಗೆ ಬಣ್ಣ ಹಚ್ಚುವ ಕಾಯಕ ಮಾಡಿದ ಹಿಟ್ಲರ್ ಜರ್ಮನಿಯನ್ನೆ ಆಳದನಲ್ಲವೆ ,ಪೇಪರ ಮಾರಾಟ ಮಾಡಿದ ಎ ಪಿ ಜೆ ಅಬ್ದುಲ್ ಕಲಾಮ ಭಾರತದ ರಾಷ್ಟ್ರಪತಿಯಾಗಲಿಲ್ಲವೆ ? " ಎನ್ನುವಷ್ಟರಲ್ಲಿಯೆ ಹುಬ್ಬಳ್ಳಿಯ ಕಡೆ  ಹೋಗುವ ರೈಲು ಬಂದು ನಿಂತಿತು,ರೈಲು ನಿಂತಾಗಲೆ ವಾಸ್ತವ ಜಗತ್ತಗೆ ಬಂದಿದ್ದ ,ರೈಲು ಏರಿ ಕುಳಿತ "ಚುಕ್ ಬುಕ್ ಎಂಬ ಶಬ್ದ  ಓಡುತ್ತಿತ್ತು ಮತ್ತೆ ತನ್ನ ಕಷ್ಟದ ದಿನಗಳು ರೈಲಿನಂತೆ ಓಡಹತ್ತಿತು" ಆದರೆ ಮುಂದೆ ರೂಪಿಸಬೇಕಾದ  ಜೀವನದ ದಾರಿಯ ಕಡೆ ಅದನ್ನು ಹೊರಳಿಸಿದ .ತನಗೆ ಆತ್ಮೀಯ ಸ್ನೇಹಿತ ಮಲ್ಲಯ್ಯ ಹಿರೇಮಠ ರೊಮನಲ್ಲಿ ಉಳಿದಕೊಳ್ಳಬೇಕು ನಂತರ ಅತಿ ಸುಲಭವಾಗಿ ಸಿಗುವ ಕೆಲಸವೆಂದರೆ ಗಾರ್ಡ ಕೆಲಸ ತಾನೆ ?  ಒಂದು ಹೊತ್ತಿನ ಊಟ ಮಾಡಿಯಾದರು ಪರವಾ ಇಲ್ಲ, ಶಿಕ್ಷಣ ಮುಂದುವರೆಸಿ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿ ನನ್ನ ಬಡತನ ಹಂಗಿಸಿದ ಜನರ ಮುಂದೆ ತಲೆ ಎತ್ತಿ ಬದುಕಬೇಂದು ಬಯಸಿದ .ಯೋಚನೆ ಪೂರ್ಣ ಮಾಡುವ ಮೊದಲೆ ಹುಬ್ಬಳ್ಳಿ ರೈಲು ನಿಲ್ದಾಣ ತಲುಪಿಯಾಗಿತ್ತು.ಬಾರವಾದ ಹೆಜ್ಜೆಯಲ್ಲಿಯೆ ಸ್ನೇಹಿತನ ಮಲ್ಲಯ್ಯನ ರೂಮ ತಲುಪಿದ.ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಮಲ್ಲಯ್ಯ ಪ್ರೀತಿಯಿಂದ ಉಪಚರಿಸಿದ ಅದಕ್ಕೆ ಹೇಳುವುದು ಸ್ನೇಹಿತ ಎಂದರೆ ಎರಡನೆಯ ಹೆಂಡತಿ ಎಂದು. ಎಂದಿನಂತೆ ಕ್ಲಾಸ ಮುಗಿಸಿದ ಆದರೆ ಮನಸ್ಸು ಮಾತ್ರ ಸ್ವಂತ ಕಾಲಮೇಲೆ ನಿಂತರೆ ಎಷ್ಟು ವಾಸಿ ಎಂದು ಹೇಳುತ್ತಿತ್ತು. ಸಂಜೆ ಸರಿಯಾಗಿ ಆರು ಗಂಟೆ ಆಗಿರಲಿಲ್ಲ ಗಾರ್ಡ ಕೆಲಸ ನೀಡುವ ಎಜಂಟ ಆಫೀಸ್ ಮಂದೆ.. ಸ್ನೇಹಿತ ಮತ್ತು ತಾನು ಬಂದು ನಿಂತಿದ್ದರು.ಗಾರ್ಡ ಕೆಲಸ ನೀಡುವ ಸೂಪರ್ ವೈಸರ್ ಎಲ್ಲಾ ಮಾಹಿತಿ ಪಡೆದ

 ಮೇಲೆ ನೀನು ಕರ್ತವ್ಯಕ್ಕೆ ಹಾಜರಾಗಬಹುದು ಆದರೆ ಡ್ರೆಸ್ ನೀಡುವ ಸಲುವಾಗಿ ಎರಡು ಸಾವಿರ ಅಡ್ವಾನ್ಸ್ ನೀಡಬೇಕೆಂದು ಕರಾರು ಹಾಕಿದ .ಈಗ ಮುಗಿಲು ಹರಿದು ಮೇಲೆ ಬಿದ್ದ ಅನುಭವವಾಯಿತು " ಆ ಹಣವಿದ್ದರೆ ನಾನೇಕೆ ಈ ಗಾರ್ಡ ಕೆಲಸ ಮಾಡಲು ಬರಬೇಕೀತ್ತು, ನಾನು ಮಲ್ಲಯ್ಯ ನ ಹಾಗೆ ಸರಾಗವಾಗಿ ವಿದ್ಯೆ ಕಲಿಯಬಹುದಿತ್ತಲ್ಲವೆ ? ಅದು ಇಲ್ಲದ ಕಾರಣಕ್ಕಾಗಿ ಇಲ್ಲಿ ಬಂದದ್ದು" ಎಂದು ಮನದಲ್ಲೆ ನೊಂದು " ನಾಳೆ ನಾವು ಹಣದೊಂದಿಗೆ ಬರುತ್ತೇವೆ ಎಂದು ಜಾಗ ಕಾಲಿ ಮಾಡಿದರು.ದಾರಿ ಯುದ್ದಕ್ಕೂ ಎರಡು ಸಾವಿರ ಹೊಂದಿಸುವದು ಹೇಗೆ ? ಮಲ್ಲಯ್ಯ ನೇ ಶಿವಣ್ಣನಿಗೆ ಮಾರ್ಗ ದರ್ಶನ ನೀಡಿದ ,ಹೇಗೂ ನಮ್ಮ ಅಣ್ಣನೆ ನಗರ  ಸಭೆಯಲ್ಲಿ ಗುಮಾಸ್ತನಿದ್ಧು ನಾಳೆ ಸಂಬಳದ ದಿನ  ಎರಡು ಸಾವಿರ ಕೇಳಿ ನೋಡು ನಾನೂ ಪ್ರಯತ್ನ ಮಾಡುತ್ತೇನೆ ಎಂದ.ಇವರು ರೂಮಿಗೆ ಹೋಗುವದಕ್ಕೂ ಆತ ಬರುವದಕ್ಕೂ ಸರಿ  ಆಗಿತ್ತು. ಇದ್ದ ವಿಚಾರ ಹೇಳಿದ ಶಿವಣ್ಣ ಬಡ್ಡಿಯಾದರೂ ಪರವಾಯಿಲ್ಲ ಸಹಾಯ ಮಾಡಬೇಕಂದು ಅಂಗಲಾಚಿದ , " ಹುಚ್ಚ ಇಂತಹ ಕೆಲಸಕ್ಕೆ ಯಾರಾದರು ಬಡ್ಡಿ ಪಡಿಯುತ್ತಾರೇನೊ  ಎಂದವನೆ ಎರಡು ಸಾವಿರ ಇಪ್ಪತ್ತು ಗರಿ ಗರಿ ನೋಟ ನೀಡಿ, ನಿನಗಾದಾಗ ನೀಡು ಆಯ್ತಾ " ಎಂದ.ದೇವರು ಇಳಿದು ಬಂದ ಅನುಭವಾಯಿತು.ಸಂಜೆಯಾದರೆ ಗಾರ್ಡ ಕೆಲಸ  ಮುಂಜಾನೆ ಕ್ಲಾಸ್, ಹಗಲು ಡ್ಯೂಟಿ ಬಂದರೆ...! ? ಮಲ್ಲಯ್ಯ ನ ನೋಟ್ಸ್ ಇವನಿಗೆ ಕ್ಲಾಸ್, ದಿನಗಳು  ಸರಿದವು ಪರೀಕ್ಷೆ  ಮುಗಿದು ಫಲಿತಾಂಶ ಬಂದಾಗ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಪಾಸಾಗಿದ್ದ.ಇವರ ಸಂತೋಷಕ್ಕೆ ಪಾರವೆ ಇಲ್ಲ.ಶಿಕ್ಷಕನಾಗುವ ಬಯಕೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ  ಮಹಾವಿದ್ಯಾಲಯದಲ್ಲಿ ಬಿಇಡಿ ಪಡೆದ .ಸರಕಾರದ ನೇರನೇಮಕಾತಿಯ ಪ್ರಯೋಜನ ಪಡೆದ ಶಿವಪ್ಪ 

ಶಿಕ್ಷಕನಾಗಿ ಆಯ್ಕೆ ಯಾಗಿದ್ದ .ಕಷ್ಟವೆಂದು ಶಿಕ್ಷಣಕ್ಕೆ ಗುಡ್ ಬಾಯ್  ಹೇಳಿದ್ದರೆ ... ? ಅಥವಾ ನಿದ್ರೆಗೆ ಕಾಕನ ದಾರಿ ಹಿಡಿದು ಮಧ್ಯದ ದಾಸನಾಗಿದ್ದರೆ....ಕವಲುದಾರಿ ಬಂದಾಗ ತೆಗೆದುಕೊಳ್ಳುವ ನಿರ್ಧಾರ ನಮ್ಮನ್ನು ನಿರ್ಮಾಣ ಮಾಡುತ್ತದೆ.ಹಾಗಾಗಿ ತಾಳ್ಮೆಯಿಂದ ಸರಿಯಾದ ದಾರಿಯಲ್ಲಿ  ನಡೆಯುವ ನಿರ್ಧಾರ ತೆಗೆದುಕೊಳ್ಳಬೇಕು, ನೀವೇನಂತೀರಿ ..?

Sunday, May 23, 2021

Ramesh video comment

* ಬದುಕಲು ಬೇಕು
ಬದುಕುವ ಮಾತು *

  ಸ್ನೇಹಿತರೆ ,ಇಂದು ಚಿತ್ರರಂಗದ ಹೆಸರಾಂತ ನಟ ರಮೇಶ್ ರವರ ವಿಡಿಯೋ ನೋಡುವ ಅವಕಾಶ ನನಗೆ ಸಿಕ್ಕಿತುಹೇಗೆಂದರೆ ನನ್ನ ಸ್ನೇಹಿತರು,ಸಾಹಿತಿಗಳು ಹಾಗೂ ಸಾಹಿತ್ಯ ಅಕಾಡಮಿ ಸದಸ್ಯರು ಆದ ಶ್ರೀ ಸಿದ್ದಲಿಂಗಪ್ಪ .ಬೀಳಗಿಯವರು ಪಾರವರ್ಡ ಮಾಡಿ

ಹೀಗೆ ಬರೆದಿದ್ದರು " ಸಮಾಧಾನಕ್ಕಾಗಿ ಕೇಳಿ, ಸಾವಧಾನದಿಂದ ಕೇಳಿ " ಎಂಬ ತಲೆಬರಹದಲ್ಲಿ ಕಳುಹಿಸಿದ್ದರು.ಅದನ್ನು ಸಾವಧಾನವಾಗಿ ಕೇಳಿ ಬಂದ ಕೆಲವು ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು, ಅದನ್ನು ನನ್ನದೆ ಆದ ಶೈಲಿಯಲ್ಲಿ  ಹಂಚಿಕೊಳ್ಳುತ್ತಿದ್ದೇನೆ.

      "ಎಂತಹದೆ ಸಂದರರ್ಭದಲ್ಲಯೂ ನಮ್ಮ ಮೂಡ್ ಹಾಳು ಮಾಡಿಕೊಳ್ಳಬಾರದು"ಒಂದು  ಕ್ಷಣ ಮೂಡ್ ಹಾಳಾದರೆ  ಮುಂದಿನ 24 ಗಂಟೆಯ ಸಂತೋಷ ಹಾಳಾಗುತ್ತದೆ.ಇದು  ಬೇಕಾ ? ಕೆಲವು ಜನರು ಇರುತ್ತಾರೆ ಹೆಂಡತಿ ಅನ್ನಕ್ಕೆ  ಉಪ್ಪು ಸ್ವಲ್ಪ  ಹೆಚ್ಚು ಹಾಕಿದರೂ ಸಿಡಮಿಡಿ ಗೂಂಡು ತಮ್ಮ  ಮೂಡ್  ಹಾಳ ಮಾಡಿಕೊಳ್ಳುತ್ತಾರೆ.

"ಎಲ್ಲರೊಳಗೊಂದಾಗು ಮಂಕುತಿಮ್ಮ"ಜನರನ್ನು  ಮೆಚ್ಚಿಸುವದು ಆ ಜನಾರ್ದನಿಂದನೂ ಸಾಧ್ಯವಾಗುದಿಲ್ಲ” ಎನ್ನುವ ಮಾತೊಂದು ಇದೆ ಯಾರನ್ನೂ ಮೆಚ್ಚಿಸಲು ನಾವು ನಮ್ಮ ಅತಿಯಾದ ಶ್ರಮ ಹಾಕಬೇಕಿಲ್ಲ ಮತ್ತು ಒಂದು ಸಣ್ಣ ತಪ್ಪು ನಡೆದರೆ ಜಗತ್ತೆ ಮುಳಿಗಿದ ಹಾಗೆನೂ ವರ್ತಸವ ಅವಶ್ಯಕತೆಯೂ ಇಲ್ಲ, ನಾವು ನಮ್ಮ ಸರಿಯಾದ ದಾರಿಯಲ್ಲಿ ಇದ್ದರೆ ಸಾಕು ತಾವಾಗಿಯೆ ಮೆಚ್ಚುತ್ತಾರೆ. ಮೆಚ್ಚದಿದ್ದರೆ ಬಿಡಲಿ ಬಿಡಿ ! ಆಗುವದಾದರು ಏನು ? ಇನ್ನು ನಮ್ಮನ್ನು ವಿರೋಧಿಸುವವರು ಇರಬಹುದು ! ಅವರು ನಾವು ಕೆಟ್ಟದ್ದನ್ನು ಮಾಡಿದರೆ ವಿರೋಧಿಸಬೇಕೆಂದೂನು ಇಲ್ಲ ಒಳ್ಳೆಯದನ್ನು ಮಾಡಿದರೂ ವಿರೋಧಿ ಸುತ್ತಾರೆ. ವಿರೋಧಿಸುತ್ತಲೆ ಇರಬೇಕು ನಮ್ಮನ್ನು ಸರಿ ದಾರಿಯಲ್ಲಿ ಎತ್ತರಕ್ಕೆ ಬೆಳೆಸುವವರು ಅವರೆ ! ನಮ್ಮನ್ನು ವಿರೋಧಸುತ್ತಾರೆ ಎಂದರೆ ನಾವು ಅವರಿಗಿಂತ ಮುಂದೆ ಇದ್ದೇವೆ ಎಂದೆ ಅರ್ಥ !  ನಾವು ಮುಂದೆ ಹೋಗತಾ ಇರಬೇಕು ಅವರು ವಿರೋಧಿಸುತ್ತಲೆ ಇರಬೇಕು'ನಮ್ಮನ್ನು ಸರಿ ದಾರಿಯಲ್ಲಿ ನಡೆಸಿ ಎತ್ತರಕ್ಕೆ ಏರಿಸುವವರು ಅವರೆ !  ಹಾಗಾಗಿ ಪ್ರಾಜ್ಞರು ಹೇಳಿದ್ದು "ನಿಂದಕರು ಇರಬೇಕು ಹಂದಿಯ ಹಾಗೆ " ಇನ್ನು  ನಮ್ಮ ಸುತ್ತ ಇರುವವರೂ  ಕೂಡಾ ಕೃತ್ರಿಮ ಬಂಧು, ಬಳಗ, ಸ್ನೇಹಿತರು ಆಗಿರಬಾರದು, ಬದಲಾಗಿ  ನಮ್ಮ ಗುಣ ನಡತೆ ನೆಚ್ಚಿ ಬಂದವರಾಗಿರಬೇಕು. ಒಂದು ವೇಳೆ ಬರದಿದ್ದರೆ ಚಿಂತೆ ಮಾಡಬೇಕಾಗಿಲ್ಲ . ಅವಕಾಶಕ್ಕಾಗಿ ಸುತ್ತುವ ಬಹಳಷ್ಟು  ಬಂಧು ಬಳಗ  ಸ್ನೇಹಿತರಗಿಂತ ಬಂದುಗಳಿಲ್ಲದೆ ಒಬ್ಬಂಟಿಯಾಗಿರವುದೆ ಲೇಸು....!  ಯಾರನ್ನೊ ಮೆಚ್ಚಿಸಲು ಬದುಕುವದಕ್ಕಿಂತ ಮೆಚ್ಚಿ ಬಂದ ಕೆಲವರನ್ನು ದೇವರೆಂದು ಭಾವಿಸಿ ಅವರಿಗಾಗಿ ಬದುಕುವದರಲ್ಲೆ ನಿಜವಾದ ಸಂತೋಷ ವಿರುವುದು. ಬದುಕುವಾಗ ಬೇರೆಯವರು ಏನು ಅಂತಾರೆ, ಒಪ್ಪತಾರ , ಒಪ್ಪೊದಿಲ್ಲವಾ ಎನ್ನುವ ಗೊಂದಲವಂತು ಸದಾ ಪ್ರತಿಯೊಬ್ಬನಿಗೂ ಇದ್ದೆ ಇರುತ್ತೆ. ಇದು ಸಹಜವು ಕೂಡಾ ಹೌದು. ಸ್ನೇಹಿತರಾಗಲಿ ಅಥವಾ ನೆರೆ ಹೊರೆಯವರಾಗಲಿ ಅವರು ಕೊಡುವ ವಿಮರ್ಶೆಯು ಅದು ಒಳ್ಳೆಯದೋ ಅಥವಾ ಕಟ್ಟದ್ದೋ..ಮುಖ್ಯವಲ್ಲ , ಒಬ್ಬ ವ್ಯಕ್ತಿಯು ಮನ್ನುಗ್ಗಲು ಇಲ್ಲವೆ ಹಿಂದೆ ಸರಿಯಲು ಕಾರಣವಾಗುತ್ತದೆ.  ಕೆಲವೊಮ್ಮೆ ಒಬ್ಬ ವ್ಯಕ್ತಿಯು ಬೆಳೆಯಲು ಕಾರಣವಾಗುವ ವಿಮರ್ಶೆ ,ಅದು ಆತನ ಪ್ರಗತಿಗೆ ಊರುಗೋಲಾಬೇಕು ವಿನಹ ಜಾರಿ ಬೀಳುವ ಬಂಡೆಯಾಗಬಾರದು. ಇದರ ಅರ್ಥ ತಪ್ಪು ಇದ್ದದ್ದನ್ನು ಸರಿಯಾಗಿದೆ ಎಂದು ಹೇಳುವದಲ್ಲ ಬದಲಾಗಿ ಅದನ್ನು ನವಿರಾಗಿ ಮೈದಡವಿ ಮನವರಿಕೆ ಮಾಡಬೇಕು, ಅದು ಎಲ್ಲಾ ರಂಗಕ್ಕೂ ಅನ್ವಯಿಸುವ ವಿಧಾನ ಅದು ಶಿಕ್ಷಣದ ರಂಗದಲ್ಲಿ ಗುರು ಶಿಕ್ಷಣ ನೀಡುವದಾಗಿರಬಹುದು ಅಥವಾ  ತಂದೆ ತನ್ನ ಮಗುವನ್ನು ಬೆಳೆಸುವಾಗಲಾದರೂ ಆಗಿರಬಹುದು. ಬೆಳವಣಿಗೆ ಇದು ನಿರಂತರವಾಗಿ ನೆಡೆಯುವ ಪ್ರಕ್ರಿಯೆ. ತೀರಾ ಕಾಡು ಸ್ಥಿತಿಯಲ್ಲಿ ಇದ್ದ ಮಾನವ ಸ್ಥಿತಿಗೆ ಬಂದು ತಲುಪಲು ಹಲವಾರು ಏಳು ಬೀಳುಗಳನ್ನು ಕಂಡೆ ಇಲ್ಲಿ ಬಂದು ನಿಂತದ್ದು ಇದರಲ್ಲಿ ತಿದ್ದುವಿಕೆ ನಿರಂತವಾಗಿ ನಡೆಯುತ್ತಲೂ ಬಂದಿದೆ, ತಿದ್ದಲ್ಪಡುವ ವ್ಯಕ್ತಿ ತಿದ್ದುವ ವ್ಯಕ್ತಿಯನ್ನು ಸ್ವೀಕರಿಸುವ ರೀತಿಯೂ ಕೂಡಾ ವ್ಯಕ್ತಿ ಬೆಳವಣಿಗೆಗೆ ಕಾರಣವಾಗುತ್ತದೆ .ವ್ಯಕ್ತಿ ಬೆಳವಣಿಗೆ ಸಂದರ್ಭದಲ್ಲಿ ವಿಮರ್ಶೆ ಯನ್ನು ಸಮಚಿತ್ತದಿಂದ ಸ್ವೀಕರಿಸಬೇಕಾಗುತ್ತದೆ ಅಂದರೆ ಬರುವ ಟೀಕೆ ಟಿಪ್ಪಣಿಗಳನ್ನು ಧನಾತ್ಮಕ ಚಿಂತನೆಯಿಂದ ನೋಡಬೇಕು. ಒಂದು ವೇಳೆ ನಾವಿಡುವ ಹೆಜ್ಜೆಯನ್ನು  ನಮಗರಿವಿಲ್ಲದೆ ತಪ್ಪಾಗಿ ಇಟ್ಟಿದ್ದರೆ ಬರುವ ಟೀಕೆ ಟಿಪ್ಪಣಿಗಳನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಬೇಕು, ಜಾಡಿ ಹಿಡಿದು ಪೂರಕವಾದವುಗಳನ್ನು ಆಯ್ದು ಅವುಗಳನ್ನು ಬೆಳವಣಿಗೆಗೆ ಹೇಗೆ ಪೂರಕವಾಗಿವೆ ಎನ್ನುವುದುದನ್ನು ನಿರ್ಧರಿಸಿ ಕಾರ್ಯ ಪ್ರವೃತ್ತರಾಗಬೇಕು. ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳಲ್ಲಿ ಬಹು ವ್ಯಾಪಕವಾಗಿ ಕಂಡು ಬರುವ ಲೈಕ ಮತ್ತು ಡಿಸ್ ಲೈಕಗಳು (ವಿಮರ್ಶೆ ) ಜೋರಾಗಿ ನಡೆಯುತ್ತಿವೆ ಇದು ವ್ಯಕ್ತಿಯೊಬ್ಬನ ನಡೆಯನ್ನು ನೋಡುಗ ಗಮನಿಸುವ ಮತ್ತು ಮಾರ್ಗದರ್ಶನ ಮಾಡುವ ಬಹು  ವ್ಯಾಪಕವಾದ ಪ್ರತಿಕ್ರಿಯೆ. ಹಿಂದಿನ ಕಾಲದಲ್ಲಿ ವ್ಯಕ್ತಿಯೊಬ್ಬನ ನಡೆಯನ್ನು ಗುರುತಿಸುವ ,ನಿರ್ದರಿಸುವ ಮಾಪನ ಬಹು ಕಡಿಮೆಯಾಗಿತ್ತು ಅಂದರೆ ಸೀಮಿತ ವಲಯದಲ್ಲಿ ನಡೆಯುತ್ತಿತ್ತು ಕೆಲವೆ ಕೆಲವರು ನೀಡುವ ಲೈಕ್ ಮತ್ತು ಡಿಸ್ ಲೈಕಗಳಿಂದ ತನ್ನ ನಡೆಯನ್ನು ನಿರ್ದರಿಸಬೇಕಾಗಿತ್ತು, ಇದು ವ್ಯಕ್ತಿಯೊಬ್ಬನು ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರಣವಾಗಿ ವ್ಯಕ್ತಿ ವಿಕಸನಕ್ಕೆ ಅಡತಡೆಯಾಗುತ್ತಿತ್ತು. ಈಗ ಹಾಗಿಲ್ಲ ನಿರ್ಧಾರ ಹಾಗೂ ನಿರ್ಣಯ ತೆಗೆದು ಕೊಳ್ಳುಲು ವ್ಯಾಪಕವಾದ ಅವಕಾಶವುಂಟು, ಆದರೆ ಬರುವ ಸಾಕಷ್ಟು ವಿಮರ್ಶೆ, ಟೀಕೆ, ಟಪ್ಪಣೆಗಳ ನೈಜತೆಯನ್ನು ಗುರುತಿಸವುದು ಅಷ್ಟೆ ಮುಖ್ಯ. ಅದು ನಿರ್ದರಿಸುವವನ ಸಾಮರ್ಥ್ಯ ವನ್ನು ಅವಲಂಬಿದೆ, ಆತ ವಿಶ್ಲೇಷಿಸವ, ಆಯ್ದುಕೊಳ್ಳುವ, ನಿರ್ಣಯಿಸುವ ಪರಿ ಸರಿಯಾದ ನಿಟ್ಟಿನಲ್ಲಿ ಸಾಗಬೇಕು.ಅಂದರೆ ನಾವು ನಾವಾಗಿರಬೇಕು ಕ್ಷಣಕ್ಷಣಕ್ಕೂಜೀವನದಲ್ಲಿ  ಬರುವ ಲೈಕ್ ಮತ್ತು ಡಿಸ್ ಲೈಕಗಳಗೆ  ವಿಚಲಿತರಾಗಬಾರದು ಅಂದರೆ ನಮ್ಮ ಮೂಡ್ ಯಾವಾಗಲೂ  ಹಾಳು ಮಾಡಿಕೊಳ್ಳಬಾರದು. ಒಂದು ಕ್ಷಣದಲ್ಲಿ ಹಾಳಾದ ಮೂಡು 24 ಗಂಟೆ ಅಮೂಲ್ಯ ಸಮಯವನ್ನು ನುಂಗಿ ಹಾಕುತ್ತದೆ. ಇಂತಹ ಸಂದೇಶ ಹೊತ್ತು ತಂದ ವಿಡಿಯೋ  ಮನಸ್ಸನ್ನು ಗಟ್ಟಿಗೊಳಿಸುಲು ಇರುವ ಸೈಕೋಥೆರಪಿಯಾಗಿತ್ತು.

 

ಧನ್ಯವಾದಗಳು ರಮೇಶ್ ಸರ್ ಗೆ ಮತ್ತು ಕಳುಹಿಸಿದ ಸಿದ್ದಲಿಂಗಪ್ಪ ಬೀಳಗಿ ಯವರಿಗೆ

 

Friday, May 21, 2021

ಗುರಿ ಹಿಡಿದು, ತಾಳ್ಮೆ ಬಿಟ್ಟರೆ ..!

 * ಗುರಿ ಹಿಡಿದು, ತಾಳ್ಮೆ ಬಿಟ್ಟರೆ ..!     * 


         ಆದರ್ಶವೆ ಹಾಗೆ ಮಾತನಾಡುವವನ ಮಾತಲ್ಲಿ  ಇಲ್ಲವೆ ಉಪದೇಶ ಮಾಡುವವನ ಬಾಯಲ್ಲಿ ಹೂವು ಅರಳುವ ರೀತಿಯಲ್ಲಿ  ಅರಳುತ್ತದೆ.  ಆದರೆ ಆ ಹೂವು ಶಿವನಿಗೆ ಏರಬೇಕಲ್ಲವೆ ಅದು ಸರಳವಾದ ಕೆಲಸವಲ್ಲ ಬಿಡಿ, ಅಲ್ಲಿಗೆ ತಲುಪಬೇಕಾದರೆ ಸಾವಿರ ಹಳ್ಳ, ಕೊಳ್ಳ,ಶಿಖರ,ಕಂದರ ದಾಟಬೇಕಾಗುತ್ತದೆ.ಹೀಗೆ ತಲುಪಬೇಕಾದರೆ ತುಂಬಾ ತಾಳ್ಮೆಯ ಅವಶ್ಯಕತೆ ಇದೆ ಇದನ್ನು ಎಲ್ಲರಲ್ಲಿಯೋ ನಿರೀಕ್ಷೆ ಮಾಡಲಾದೀತೇ ? ಇಲ್ಲಿಯವರೆಗೆ ನಾನು ಏಕೆ ಪೀಠಿಕೆ ಹಾಕಿದೆ ಎಂದರೆ.. ಒಂದೂರಿನಲ್ಲಿ ಒಂದು ಪದವಿ ಪೂರ್ವ ಕಾಲೇಜು ಇತ್ತು. ಅಲ್ಲಿರುವ ವಿದ್ಯಾರ್ಥಿಗಳು ಅಷ್ಟೇನು ಜಾಣರು ಅಲ್ಲದ, ದಡ್ಡರೂ ಅಲ್ಲದ ಮಧ್ಯಮ ಹಾದಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಇದ್ದರು.ಏಕೆ ಹೀಗೆ ಎಂದರೆ ,ಬಹುತೇಕ ವಿದ್ಯಾರ್ಥಿಗಳ ಕಾಲೇಜು ನೆಪದಲ್ಲಿ ಬಸ್ ನಲ್ಲಿ ಅಡ್ಡಾಡಲು ಪಕ್ಕದ ನಗರದ ಕಾಲೇಜು ಕಡೆ ಮುಖ ಮಾಡಿದ್ದರು. ಕಾಲೇಜಿನಲ್ಲಿ ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿನೀಯರೆ ಇದ್ದರು ಅವರು ಮಾತ್ರ ಬಹು ಆಸಕ್ತಿಯಿಂದ ಕಲಿಯುತ್ತದ್ದರು ಹುಡುಗರು ಮಾತ್ರ ತಮ್ಮ ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ಮಹತ್ವ  ನೀಡಿ ಕೆಲಸವಿಲ್ಲದಾಗ ಮಾತ್ರ ಬಹಳ ಅಚ್ಚುಕಟ್ಟಾಗಿ ಕಾಲೇಜಿಗೆ ಬರುತ್ತಿದ್ದರು.ಹುಡುಗಿಯರು ಮಾತ್ರ ಕಾಲೇಜಿಗೆ ತಪ್ಪಿಸಿದವರಲ್ಲ ನೂರಕ್ಕೆ ನೂರು ಹಾಜರಿ. ಆ ಕಾಲೇಜಿಗೆ ಹೊಸದಾಗಿ ಬಂದ ಇತಿಹಾಸದ ಮೇಷ್ಟ್ರು ಶಿಸ್ತಿಗೆ ಹೆಸರಾದವರು ಅವರೆ ಪ್ರಕಾಶ.ತಮ್ಮ ಶಿಸ್ತಿನ ಪಾಠ  ಹೇಳುತ್ತ  "ನೋಡಿರಿ ಆ ಹುಡುಗಿಯರನ್ನಾದರು ನೋಡಿ " punctuality" ಎಂದರೇನು ಎನ್ನುವದನ್ನು ಕಲಿತುಕೊಳ್ಳಿರಿ" ಎಂದದ್ದಕ್ಕೆ ಪಾಠ ಮುಗಿದ ಮೇಲೆ ಬಂದ ಹುಡುಗರು ತಮ್ಮ ಮೇಷ್ಟರಿಗೆ ಹೇಳಿದರು " ಅದು ಅವರ punctuality   ಅಲ್ಲ ಸರ್.. ಮನೆಯಲ್ಲಿ  ಕೆಲಸ ಹತ್ತುತ್ತವೆ ಎಂದು ಕಾಲೇಜಿನಲ್ಲಿ ಬಂದು ಕುಳಿತು ಕೊಳ್ಳುವುದು ಸರ್ " ಎಂದು ನಗ ಚಟಾಕೆ ಹಾರಿಸಿದರು .ಪಾಲಕರು ಮಾತ್ರ ಮದುವೆಯವರೆಗೆ ಕಲಿಯಲಿ ಎಂದು ಹುಡುಗಿಯರನ್ನು ಕಾಲೇಜಿಗೆ ಕಳುಹಿಸಿದಂತೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿಗಾವಹಿಸಿದಂತೆ ಕಾಣುತ್ತಿರಲಿಲ್ಲ.ಇದಕ್ಕೆ ಅಪವಾದ ಎಂಬಂತೆ ಮಾಲಾ ಎಂಬ ಹುಡುಗಿಯು ಅದೆ ಕಾಲೇಜಿನಲ್ಲಿ ಓದುತ್ತಿದ್ದಳು ಆ ಹುಡುಗಿಯು ಶ್ರೀಮಂತರ ಮನೆಯ ಹುಡುಗಿ ಅವರ ಅಪ್ಪನೂ ಕೂಡಾ ಅದೆ ಕಾಲೇಜಿನಲ್ಲಿ ಕಾಲೇಜು ಸುಧಾರಣಾ ಸಮಿತಿ ಸದಸ್ಯನಾಗಿದ್ದ ಹೀಗಾಗಿ ಆಗಾಗ ಕಾಲೇಜಿಗೆ ಬಂದು ಕಾಲೇಜಿನ ಸುಖ ದುಃಖದಲ್ಲಿ ಭಾಗಿಯಾಗುತ್ತಿದ್ದ.ಮಗಳ ಶಿಕ್ಷಣದ ಬಗ್ಗೆ ಕೇಳಿ ಹೆಮ್ಮೆ ಪಡುತ್ತಿದ್ದ ಮಾಲಾನೂ ಕೂಡಾ ಅಷ್ಟೇ ಕಾಲೇಜಿನಲ್ಲಿ ಎಲ್ಲ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು.ಭಾಷಣ ,ಹಾಡುಗಾರಿಕೆಯಲ್ಲಿ ಎತ್ತಿದ ಕೈ, ಕಾಲೇಜು ಕಾರ್ಯಕ್ರಮ ಗಳಲ್ಲಿ ಇವಳದೆ ನಿರೂಪಣೆ ,ಅರಳು ಹುರಿದಂತೆ ಮಾತುಗಳು.ಇವಳು ನಿರೂಪಣೆಗೆ ನಿಂತರೆ ಟಿ.ವಿ.ನಿರೂಪಕಿಯೂ ತಲೆ ತಗ್ಗಿಸಬೇಕು ಅಂತಹ ವಾಕ್ ಪಟುತ್ವ.ಕೇವಲ ಪಠ್ಯೇತರ ಚಟುವಟಿಕೆಗಳಲ್ಲಿ ಅಷ್ಟೇ ಅಲ್ಲ ಪಾಠದಲ್ಲಿಯೂ ಮುಂದು. ಎಲ್ಲ ವಿಷಯಗಳಲ್ಲ ಇವಳ ಅಂಕಗಳು 90 ರ ಆಚೆ ಇಚೆಯೆ ಓಡಾಡುವುದು.ಹೀಗಾಗಿ ಎಲ್ಲಾ ಉಪನ್ಯಾಸಕರ ಅಚ್ಚುಮೆಚ್ಚಿನ ಹುಡುಗಿ .ಇವಳು ಇಲ್ಲದ ದಿನ ಉಪನ್ಯಾಸಕರ ಪಾಠ ಸಪ್ಪೆ ಯಾಗುತ್ತಿತ್ತು ಎಂದು ಉಪನ್ಯಾಸಕರು ಮಾತಾಡಿಕೊಳ್ಳುತ್ತಿದ್ದುರು ಕಾರಣ ಒಬ್ಬ ಉತ್ತಮ ಉಪನ್ಯಾಸಕನ ಪಾಠ ತನ್ನ ವರ್ಗದಲ್ಲಿ ನಡೆಯುವ ಸಂವಾದ ಮತ್ತು ಚರ್ಚೆಯ ಮೇಲೆ ಅವಲಂಬಿತವಾಗಿರುತ್ತದೆ.ವರ್ಗ ಕೋಣೆಯೊಂದು ಅದು ಜೀವಂತವಾಗಿರಬೇಕಾದರೆ ಶಿಕ್ಷಕ ಹೇಳಬೇಕು ವಿದ್ಯಾರ್ಥಿಗಳು ಕೇಳಬೇಕು, ಹಾಗೆಯೇ ವಿದ್ಯಾರ್ಥಿಗಳು ಹೇಳಬೇಕು ಶಿಕ್ಷಕರು ಕೇಳಬೇಕು ಇಲ್ಲದಿದ್ದರೆ ಅದೊಂದು ಹಿಂಸೆಯ ಕೋಣೆಯಾಗಬಹುದು.ಅಂತಹ ಜೀವಂತ ಕ್ಲಾಸ್ ಮಾಡುವಲ್ಲಿ ಮಾಲಾ ಯಾವಾಗಲೂ ಶಿಕ್ಷಕರನ್ನು ಜೀವಂತವಾಗಿಡುತ್ತಿದ್ದಳು.ಆ ಕಾರಣದಿಂದಲೆ ಅವಳು ಎಲ್ಲಾ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಹಾಗೆಯೇ ತನ್ನ ಜೀವನದಲ್ಲಿಯೂ ಉದಾತ್ತ ಆದರ್ಶವನ್ನು ಕಟ್ಟಿಕೊಂಡಿದ್ದಳು ಅವಳಿಗೆ ಬಡವರ ಮೇಲೆ ಎಲ್ಲಿಲ್ಲದ ಪ್ರೇಮ.ಮೊದಲೆ ಹೇಳಿದ ಹಾಗೆ ಶ್ರೀಮಂತರ ಮಗಳು ತನ್ನ ಕೈಲಾಷ್ಟು ಇನ್ನೂಬ್ಬರಿಗೆ ಸಹಾಯ ಮಾಡುತ್ತಿದ್ದಳು.ಪ್ರಕಾಶ ಸರ್ ಹೇಳಿದ ಪಾಠಗಳನ್ನು ಅತ್ಯಂತ ಶ್ರದ್ಧೆಯಿಂದ ಕೇಳುತ್ತಿದ್ದಳು ಮತ್ತು ಜನರಿಗೆ ಸಹಾಯ ಮತ್ತು ಸೇವೆ ಮಾಡಲು ನಾನೊಬ್ಬ ಅಧಿಕಾರಿಯಾಗಬೇಕೆಂದು ತನ್ನ ಬಲವಾದ ಆಶೆಯನ್ನು ಹೊರಹಾಕುತ್ತಿದ್ದಳು ಮತ್ತು ಅದಕ್ಕೆ ಅರ್ಹಳು ಹೌದು. ಪ್ರಥಮ ಪಿಯುಸಿ ಅತ್ಯುನ್ನತ ಅಂಕದೊಂದಿಗೆ ಪಾಸಾಗಿ ದ್ವಿತೀಯ ಪಿಯೂಸಿಗೆ  ಪ್ರವೇಶ ಪಡೆದಳು.ಆದರೆ ಆ ವರ್ಗಕ್ಕೆ ಬಂದಾಗ ಆದದ್ದು ಬೇರೆ ರಾಜ್ಯ ಶಾಸ್ತ್ರ ವಿಷಯದ ಉಪನ್ಯಾಸಕರು ವರ್ಗವಾಗಿ ಬೇರೆ ಊರಿಗೆ ಹೋದರು ಪರಿಣಾಮವಾಗಿ ಪ್ರಾಚಾರ್ಯರು ಪಾಠ ಪ್ರವಚನಕ್ಕೆ ದಕ್ಕೆಯಾಗಬಾರದೆಂದು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರು, ಅದೆ ತಾನೆ ಸ್ನಾತಕೋತ್ತರ ಪದವಿ ಮುಗಿಸಿ ಬಂದ ಹೇಮಂತ ತಕ್ಷಣವೇ ಸಿಕ್ಕ ಉಪನ್ಯಾಸಕ  ಹುದ್ದೆಗೆ ನಿಜವಾದ ನ್ಯಾಯವನ್ನೆ ಒದಗಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರನಾದ .ಮಾಲಾ ಮೊದಲೆ ಸಾರ್ವಜನಿಕ ಸೇವೆಗಾಗಿ ಅಧಿಕಾರಿ ಆಗಬೇಕೆಂದು ಹಪಹಪಿಸುವ ಸಂದರ್ಭದಲ್ಲಿ ಹೇಮಂತ ಆಶಾಕಿರಣವಾದ  ಆಗಾಗ ಅಭ್ಯಾಸದ ನೆಪದಲ್ಲಿ ಬೇಟಿಯಾಗುವ ಅವಕಾಶ ಸಲುಗೆಯ ಹಂತಕ್ಕೆ ಮುಂದುವರೆಯಿತು. ದ್ವಿತೀಯ ಪಿಯುಸಿ ಮುಗಿಯುವದರೊಳಗಾಗಿ ಸಲುಗೆ ಪ್ರೀತಿಯಾಗಿ ಬದಲಾವಣೆಯಾಯಿತು. ಅದಕ್ಕೆ ಜಾತಿಯೂ ಸೇರಿದರೆ ಇನ್ನೇನು ಆಗಬೇಡ ಹೇಳಿ ? 90 ರ ಆಜು ಬಾಜುವಿನಲ್ಲಿದ್ದ ಹುಡುಗಿ ಅರವತ್ತರ ಬಾಜುವಿನಲ್ಲ ಬಂದು ನಿಂತಿದ್ದಳು.ಮುದಿನ ವರ್ಷ ವರ್ಗಾವಣೆಗಳು ನೆಡೆದು ಪ್ರಕಾಶ ಉಪನ್ಯಾಸಕರು ಕೂಡಾ ತಮ್ಮ ಊರಿನ  ಸಮೀಪದ ಕಡೆ ವರ್ಗವಾಗಿ ಹೊಗಿದ್ದರು.ಹೀಗೆ ಬೇರೆ ಊರಿನಲ್ಲಿ ಪ್ರಕಾಶ ಸರ್ ನಾಲ್ಕಾರು ವರ್ಷಗಳ ಸೇವೆ ಮುಗಿಸಿದ ಮೇಲೆ ಯಾವದೋ ಕಾರಣ ನಿಮಿತ್ಯ ತಾನು ಸೇವೆ ಸಲ್ಲಿಸಿದ ಪಕ್ಕದ ನಗರಕ್ಕೆ ಹೋಗುವ ಕಾಲ ಬಂದಿತು. ಲಗುಬಗೆಯಿಂದ ನಡೆದು ಹೋಗುವಾಗ ಎದುರಿಗೆ ಯಾರೋ "ನಮಸ್ಕಾರ ಸರ್"ಎಂದಾಗ ತನ್ನ ಕಣ್ಣು ತಾನು ನಂಬಲಾಗುತ್ತಿಲ್ಲ ,ಅದೆ ಬಾಡಿದ ಮುಖ ಕೆದರಿದ ಕೂದಲು, ಕೈಯಲ್ಲಿ ಒಂದು ಹೆಣ್ಣು ಕೂಸು,ಬಗಲಲ್ಲಿ ಇನ್ನೊಂದು ಗಂಡು ಕೂಸು.ಗುರತು ಹಚ್ಚಲು ಬಹಳ ಸಮಯವೇನು ಹಿಡಿಯಲಿಲ್ಲ.ಪಕ್ಕದಲ್ಲಿಯೇ ನಿಂತವನು ಕೂಡಾ ತಾನ ಈ ಮೊದಲು ಸೇವೆ ಸಲ್ಲಿಸಿದ ಕಾಲೇಜಿನ ಅತಿಥಿ ಉಪನ್ಯಾಸಕ ಹೇಮಂತನೆನ್ನುವುದು ಖಚಿತವಾಗಿತ್ತು . ನಾಚಿ ನೀರಾಗಿದ್ದ ಆತ "ದುಡುಕಿ ತಪ್ಪು ಮಾಡಿದೆವು" ಸರ್ ಇನ್ನೊಂದಿಷ್ಟು ದಿನ ಸಾಧನೆಗಾಗಿ ಅವಧಿ ಯನ್ನು ಮೀಸಲಿಡಬೇಕಾಗಿತ್ತು ಎಂದ. ಪ್ರಕಾಶ ಸರ್ ಗೆ ಏನು ಮಾತನಾಡಬೇಕೆನ್ನವುದೆ ತಿಳಿಯಲೊಲ್ಲದು." ಮಾಲಾ,  ನಾನು ಕನಸು ಕಂಡ ಮಾಲಾ ಎಲ್ಲಿ ಹೋದಳು ?" ನನ್ನ ವಿದ್ಯಾರ್ಥಿ ಉನ್ನತ ಅಧಿಕಾರಿಯಾಗಬೇಕೆಂದು ಬಯಸಿದ್ದೆ ಹೀಗೇಕೆ ಆಯಿತು?"  ಪ್ರಕಾಶಗೆ ಕತ್ತಲೆ ಕವಿದಂತಾಯಿತು. "ಸರ್, ಪ್ರೀತಿಯೆಂಬ ಭೂತ ಮತ್ತು ಹೇಮಂತನ ತಂದೆಯ ಮರಣದ ನಂತರ ಆತನಿಗೆ ಸಿಕ್ಕ ಅನುಕಂಪದ ನೌಕರಿಯ ಭದ್ರತೆಯ ಅಸ್ತ್ರದ ಫಲವಾಗಿ. ತಂದೆ ತಾಯಿ ಬಂಧುಗಳಗವನ್ನು ಮೀರಿ ಇಲ್ಲಿಯವರೆಗೂ ಬಂದು  ನಿಲ್ಲಬೇಕಾಯ್ತು ಸರ್, "ತಾವು ನೀಡಿದ ಆದರ್ಶ ಮತ್ತು ಗುರಿಯನ್ನು ತಲುಪುವಲ್ಲಿ ಎಡಿವಿದೆ " ಎಂದಳು ಮಾಲಾ,ಇರಲಿ ಆದದ್ದು ಎಲ್ಲವೂ ಒಳ್ಳೆಯದಕ್ಕೆ ಆಗಿದೆ. ನಿಮ್ಮ ಗುರಿ ಮತ್ತು ಆದರ್ಶ  ನಿಮ್ಮ ಮಕ್ಕಳಲ್ಲಿ ಕಾಣಿರಿ ಎಂದು ಬಸ್ ಕಡೆ ಮುಖ ಮಾಡಿದರು .ಬಸ್ ನಲ್ಲಿ ಕುಳಿತ ಪ್ರಕಾಶಗೆ ಅವರದೆ ಚಿತ್ರ ಸುಳಿದಾಡಿದ ಅನುಭವ, ದೊಡ್ಡ ಗುರಿ ಸಾಧಿಸಲು ದೊಡ್ಡ ತಾಳ್ಮೆ ಮತ್ತು ನಿರಂತರ ತಪಸ್ಸು ಅವಶ್ಯಕತೆ ಇದೆ !... ಎನ್ನುತ್ತಾ ಪ್ರಯಾಸ ಪಟ್ಟು ಸೀಟು ಹಿಡಿದು ವರಗಿ ಉಸಿರು ಬಿಟ್ಟರು , ಕಂಡಕ್ಟರ್ ಬಂದು  ಟಿಕೆಟ್ ಕೇಳಿ ದಾಗಲೆ ವಾಸ್ತವಕ್ಕೆ ಬಂದರು ಪ್ರಕಾಶ್ ಸರ್.

* ಕ್ಷಮಿಸು ನೀ ತಂದೆ *

ಧರಣಿಯ ಒಡೆಯ ಕರುಣೆ ತೋರು
ಶರಣು ದೇವರೆ ನಿನ್ನಯ ಚರಣಕೆ/
ಕೊರೋನಾ ಎಂಬ ಕತ್ತಿಯ ಹಿಡಿದು
ಕೊಲ್ಲಬೇಡ ನಾವೆಲ್ಲಾ ಹರೋಹರ//

ಮನುಕುಲದ ಹಿತವ ಮೇಲೆ ಮಾಡಿ
ಜೀವಸಂಕುಲ ಮರೆತೆ ನಾವೆ ಕೋಡಿ/
ದಿನವು ನರಳುತಿರುವೆ ಪಾಪ ನೋಡಿ
ನಿಲ್ಲಿಸೆಮ್ಮ ದೀನ ಬದುಕು ಕಾಪಾಡಿ //

ಕಾಡು ಕಡಿದು ನಾಡು ಕಟ್ಟಿದ ನರರ
ನದಿ ನಿಲ್ಲಿಸಿ ಕೊಳೆ ಮಾಡಿದ ಕೂಳರ/
ಧರಣಿ ಒಡಲು ಬಕ್ಷಿಸಿದ ಬಕಾಸುರರ
ಮರೆತು ದಯತೋರು ಕರುಣಾಕರ //

ನೆಲಮುಗಿಲ ಜಯಸಿದೆನೆಂಬ ಮದವು
ನರನ ನೆತ್ತಿಗೇರಿದ ಸ್ವಾರ್ಥದ ಫಲವು/
ನಿನ್ನ ಮಕ್ಕಳೊಮ್ಮೆ ಬಿದ್ದು ಬೇಡುವೆವು
ನರಕದಿಂದೆಮ್ಮ ಸಂರಕ್ಷಿಸು ದೇವಾ//

ಧರ್ಮವೆಂದರೆ ಲಾಂಛನವೆಂದು
ದಿನವಿಡಿ ಹೊಡೆದಾಡಿದೆವು ನೊಂದು/ 
ದಯವೆ ಧರ್ಮ, ಅರಿವಾಯಿತಿಂದು
ದಾರಿ ಹಿಡಿಯಲು ಕ್ಷಮಿಸು ನೀ ತಂದೆ//

                  ಬಸನಗೌಡ ಗೌಡರ 

Wednesday, May 19, 2021

* ಸಾಧನೆಗೆ ಸಿಗದ ಅಂಗ *

ಸಾಧನೆಗೆ ಸಿಗದ ಯಾವ ದಾರಿಗಳಿಲ್ಲ
ಸಾಧಕನ ಕರಗಳಲಿ ಜೊತೆಯಾದುವಲ್ಲ
ಸಾಗರವ ಈಜಿ ಸೇರಿದರು ದೂರವೆಲ್ಲ
ಸಪ್ತ ಖಂಡಗಳನು ತಂದನು ವೃತ್ತದಲ್ಲಿ//

ನಭಕೆ ಮುಖಮಾಡಿ ಮಲಗಿರುವರಲ್ಲ
ಅಗಣಿತ ನಕ್ಷತ್ರ ಗ್ರಹ ಎಣಿಸುವರಲ್ಲ
ಎಣಿಸುವ ಕನಸು ಇನ್ನೂ ಮುಗಿದಿಲ್ಲ
ಮುಗಿಯದೆ ಬಿಡುವವರು ಇವರಲ್ಲ//

ಉಸಿರು ಬಿಗಿ ಹಿಡಿದು ದುಡಿತಾರಲ್ಲ 
ಹಸಿರುಳಿಸಲು ಹುಸಿ ಕಾಳಜಿಯೆ ಎಲ್ಲಾ
ಮೋಸ ಹೋದ ಹೊಸ ದಾಸರಿವರೆಲ್ಲ
ಯಂತ್ರದುಸಿರಿಗೆ ಹಪಹಪಿಸುವರಲ್ಲ//

ದೇಹ ಸೀಳಬಲ್ಲ, ಸ್ಟೀಲ್ ಸೇರಿಸಬಲ್ಲ
ಸಿರಾಮಿಕ್ ಸೇರಸಿ ಗಟ್ಟಿಮಾಡಬಲ್ಲ
ತನಗೆ ಬೇಕೆಂದ ತಳಿ ತಯಾರಿಸಬಲ್ಲ
ತಳಿಗಳೆ ಇವನಳಿದಾಗ ಸನಿಹಕಿಲ್ಲ//

ಮಂಗನಂಗಳಕೆ ಚಂಗನೆ ಹಾರಬಲ್ಲ
ಸಂಘಟನೆಗೆ ಇವನಲ್ಲಿ ಕೊರತೆ ಇಲ್ಲ  
ಅಂಗಳದ ಗೆಳೆಯನ ಚಿಂತೆ ಇವನಿಗಿಲ್ಲ
ಅಂಗವುಳಿಸಲು ಹರಸಾಹಸ ನಿಂತಿಲ್ಲ //


             ಬಸನಗೌಡ ಗೌಡರ

Saturday, May 15, 2021

Nature

 ನಿಸರ್ಗ ಪ್ರೇಮಿಯ ಸ್ವಗತ:

ಇಂದು ಮಾನವನಿಗೆ ಸರ್ವ ರಂಗಗಳಲ್ಲಿ ಹಿನ್ನಡೆಯುಂಟು ಮಾಡುತ್ತಿರುವ ಒಂದು ಪ್ರಭಲ ಶಕ್ತಿ..! ಯಾವುದು ಅಂದರೆ ಅದುವೆ ನನ್ನ ನಿಸರ್ಗ .. ! ಮಾನವನ ಬದುಕಿನ ಬೇರು ಕೂಡಾ ಅಲ್ಲೆ ಇದೆ ಅದನ್ನು ಮರೆತರೆ  ಸರಿಯಾದ ಹೊಡೆತ ಶತಸಿದ್ದ, ಇಂದು ನಾವು ಕಾಣುವ ಹಲವು ಅವಘಡಗಳಿಗೆ ಇದೆ ಕಾರಣ. ಅದು ಚಂಡಮಾರುತವಾಗಿರಬಹುದು, ಭೂಕಂಪವಾಗಿರಬಹುದು, ಭೂಮಿಯ ತಾಪಮಾನದ ಹೆಚ್ಛಳ,ಅಷ್ಟೆ ಏಕೆ ನಾವು ಅತಿ ಜರ್ಜರಿತವಾಗಿರುವ  ಕೊರೋನಾವು ಕೂಡಾ ನನ್ನ ನಿಸರ್ಗಕ್ಕೆ ಮಾಡಿದ ಗೋರ ಅನ್ಯಾಯವಲ್ಲದೆ ಇನ್ನೇನು ಹೇಳಿ ?  ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಜ್ಞಾನಿ, ವಿಜ್ಞಾನಿ,ತತ್ವಜ್ಞಾನಿ ತಂತ್ರಜ್ಞಾನಿ ಹತ್ತಿರ ಕೇಳಿ ನೋಡಿ ಪುಂಕಾನುಪುಂಕವಾಗಿ ಹರಿದು ಬರುವ ಒಂದೆ ಒಂದು ಮಾತು ಅದುವೆ ಧನಾತ್ಮಕ ಚಿಂತನೆ ಮಾಡಬೇಕು. ಒಪ್ಪಬೇಕಾದ ಮಾತೆ. ಇದರಲ್ಲಿ ಎರಡು ಮಾತಿಲ್ಲ ಆದರೆ ಈಗ ಅನುಭವಿಸುತ್ತಿರವ ಅಥವಾ ಪರದಾಡುತ್ತಿರುವ ದೇಶಗಳಾವವು ? ವ್ಯಕ್ತಿಗಳಾರು ? ಬಾದಿತರಾದವರು ಯಾರು ? ನಮಗೆ ನಾವು ಪ್ರಶ್ನೆ ಮಾಡಿಕೊಳ್ಳೋಣ. ಅವೆಲ್ಲ ಬಡ ಹಾಗೂ ಸಣ್ಣ ದೇಶಗಳ ಜನಸಾಮಾನ್ಯರು.ಅವರು ಮಾಡಿದ ತಪ್ಪಾದರು ಏನು ? ಅಂದರೆ ಅವರು ತಪ್ಪು ಮಾಡಿಲ್ಲ ಅಂತಾನು ನಾನು ಹೇಳೊದಿಲ್ಲ ಅವರೂ ತಪ್ಪು ಮಾಡಿದರು ಅಂದರೆ, ಅವರು ತಪ್ಪು ಮಾಡಲು ಅವಕಾಶ ನೀಡಿದವರು ಯಾರು ? ತಪ್ಪು ಮಾಡದಂತೆ ಶಿಕ್ಷಣ ನೀಡುವ ಮತ್ತು ಅದನ್ನು ತಡೆಯಲು ಇರುವ ಸೇವಾವಲಯದ ಒಂದು ವ್ಯವಸ್ಥೆ ಇದೆಯಲ್ಲವೆ  ! ಅದು ಮಾಡಿದ ಕಾರ್ಯವಾದರು ಏನು ? ಇಡಿ ಉತ್ಪಾದನೆಯ ಶೇಕಡಾ 80 -/- ಭಾಗ ಹೋಗುವುದು ಇದೆ ವಿಭಾಗದ ಬದುಕಿಗಾಗಿ ಅಲ್ಲವೆ ? ಇಂದು ಅತಿ ಹೆಚ್ಚು ನಿಸರ್ಗದ ಮೇಲೆ ದಬ್ಬಾಳಿಕೆ ಮಾಡಿದ ದೇಶಗಳು ಎಂದರೆ ಅವೆ ಬೋಧನೆ ಮಾಡಿದ ದೇಶಗಳು ಎಂದರೆ ತಪ್ಪಾಗಲಾರದು .(ಕೆಲವನ್ನು ಬಿಟ್ಟು)ವಿಪರ್ಯಾಸವೆಂದರೆ ಉಪದೇಶ ಮಾಡಲು ಅವರಿಗಿಂತ ಚೆನ್ನಾಗಿ ಯಾರಿಗೆ ಬರುತ್ತೆ ಹೇಳಿ? ಆದರೆ ಅವರೆಲ್ಲ ಇರುವದು ಉಪದೇಶ ಮಾಡುವ ವಿಭಾಗದಲ್ಲಿ ."ಉಪದೇಶ ಮಾಡುವುದು ಕೈಲಾಗದವರು ಮಾಡುವ ಕೆಲಸ " ಅನ್ನುವುದನ್ನು ಎಲ್ಲೋ ಓದಿದ ನೆನಪು.ಇರಲಿ, ಒಂದು ಮುಖ್ಯವಾದ ವಿಚಾರಕ್ಕೆ ಬರತ್ತೇನೆ.ಈಗ್ಗೆ ಎರಡು ವರ್ಷಗಳ ಹಿಂದೆ ನಾನೂಂದು ಮದುವೆ ಸಮಾರಂಭಕ್ಕೆ ಹೋಗಿದ್ದೆ ಅದು ದೊಡ್ಡದಾದ ಸಿಟಿ.ಮದುವೆಯ ಶಾಸ್ತ್ರ ದಲ್ಲಿ ಭಾಗಹಿಸಿ ಗಡದ್ದಾಗಿ ತಿಂದು ನಾಲ್ಕಾರು ಜನ ಮಾತನಾಡುತ್ತಾ ಹೊರಟಿದ್ದೆವು ಅದೆ ಮಾರ್ಗದಲ್ಲಿ ಒಬ್ಬ ನಡು ಹಂಗಾಮಿನ ಮಹಿಳೆ ಪೋನ್ ನಲ್ಲಿ ಮಾತನಾಡುತ್ತ ಹೊರಟಿದ್ದಳು, ಅದು ವಿಶೇಷವಲ್ಲ...! ವಿಶೇಷ ವೆಂದರೆ ಆ ಮಹಿಳೆ ಮಾತ್ರ ಮುಸರಿ ತಿಕ್ಕುವ ವಳಾಗಿದ್ದಳು ಇದನ್ನು ಅನೇಕ ಜನರಿಗೆ ಜೀರ್ನಸಿಕೂಳ್ಳಲಾಗದೆ ಇಂತವರೂ ಪೋನ್... ಅಪಹಾಸ್ಯ ಮಾಡಿದಾಗ ನನಗೇಕೋ ಸಹ್ಯವಾಗಲಿಲ್ಲ ಇನ್ನೂ ಒಂದು ಹೆಜ್ಜೆ  ಮುಂದೆ ಹೋದ ಪುಣ್ಯಾತ್ಮರು "ಕುರಿ ಕಾಯುವವರ ಕೂಡಾ ದೊಡ್ಡ ದೊಡ್ಡ ಮೊಬೈಲ್ ಇಟ್ಟಿದ್ದಾರೆ ಸರ್" ? ಇದೆಂತಾ ಮಾತು ,ಅವರೂ ಮನುಷ್ಯರು ಅಲ್ಲವೆ, ದೇಶದ ಅಭಿವೃದ್ಧಿಯಲ್ಲಿ ಅವರ ಪಾಲಿಲ್ಲವೆ, ಅವರು ಸಾಕಿದ ಕುರಿ ಮೌಂಸ ಉಣ್ಣೆ ಬೇಕು ,ಅವರ ಕುರಿ ಹಾಕಿದ ಹಿಕ್ಕೆಯಿಂದ ಬೆಳೆದ ಗೋದಿ,ಜೋಳ,ಭತ್ತ ಬೇಕು,ಅವರು ವಿಜ್ಞಾನ ತಂತ್ರ ಜ್ಞಾನದಿಂದಾದ  ನಾಗರಿಕತೆ ಬಳಸುವಾಗ ಇವರಿಗೆ ಅಸಡ್ಡೆ  ಈ ಅಸಮಾನತೆಯ ಮಾತು ಕೇಳಿ ಮೌನವೆ ನನ್ನ ಉತ್ತರವಾಗಿತ್ತು. ಹಾಲಂಡ, ಡೆನ್ಮಾರ್ಕ ಆಸ್ಟ್ರೇಲಿಯಾ ದಂತಹ ದೇಶಗಳಲ್ಲಿ ಪಶುಪಾಲಕರು ನಾಗರಿಕತೆ ಕೂಸಾದ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಅದ್ಭುತವಾದ ಪ್ರಗತಿಯನ್ನು ಸಾಧಿಸಿದ್ದನ್ನು ನಾವು ಕಾಣುತ್ತವೆ, ದೇಶದ ಪ್ರಗತಿಯ ಪಾಲಿನಲ್ಲಿ ಇವರ ಕೊಡುಗೆ ಯತೇಚ್ಚವಾಗಿದೆ ಅದನ್ನು ನಮ್ಮ ಲ್ಲಿ ನಿರೀಕ್ಷೆ ಮಾಡಬಹುದೆ ?  ಮತ್ತೆ ಧನಾತ್ಮಕ ಚಿಂತನೆ ಉಪದೇಶ ಮಾಡುವವರು ನಾವೆ ಅಲ್ಲವೆ. ನಿಸರ್ಗದ ಹೊಡೆತದ ಪೆಟ್ಟು ತಡೆಯಲು ನಾವು ಮಾಡಬೇಕಾಗಿರುವ ವಲಯದ ಕಡೆ ನಮ್ಮ ನಡೆಯೊ ಸ್ಪಷ್ಟವಾಗಿ ಇಟ್ಟುಕೊಳ್ಳೋಣ.  ಈ ಸನ್ನಿವೇಶದಲ್ಲಿ ಜಪಾನಿಯರು ನಮಗೆ ಅನುಕರಣೀಯ ,ಇವರು ಭೂಕಂಪದ ಹೊಡೆತ ತಪ್ಪಿಸಲು ತೇಲುವ ಮನೆ ಕಟ್ಟಬಲ್ಲರು ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೇಳಬಲ್ಲರು, ಇವರಿಂದ ನಾವು ಕಲಿಯಬೇಕಾದದ್ದು ಬಹಳವಿದೆ,ಕನ್ನಡದ ಮೂಲಕ ವಿಜ್ಞಾನ ಕಲಿಸಲು ಸಾಧ್ಯವಿಲ್ಲ ಎಂದು ವಾದ ಮಾಡಿ ಕನ್ನಡದವರನ್ನು ( ಶಿಕ್ಷಕರನ್ನು ವಿದ್ಯಾರ್ಥಿಗಳನ್ನು) ಕುರಿಗಳಂತೆ ಕಂಡವರು ಉಂಟು.ಇಂಗ್ಲಿಷ್ ಇಲ್ಲದೆ ಬದುಕೆ ಇಲ್ಲವೆಂದು  ವಿದ್ಯಾರ್ಥಿಗಳಲ್ಲಿ ಭ್ರಮೆ ಮೂಡಿಸಿದವರನ್ನು ನಾವು ಕಂಡಿದ್ದೇವೆ.(ಎಲ್ಲರೂ ಅಲ್ಲ) ತಾಯಿನುಡಿಗಳಿಗೆ ಗೌರವ ಕೊಡದೆ ,ತಾಯಿಬೇರು ಇರುವ ನಿಸರ್ಗ ಮರೆತು ಮುಗಿಲೆತ್ತರಕೇರವ ಕನಸು ಕಾಣುವವರು ನಾವು ಏರುವುದಾದರು ಎಲ್ಲಿಗೆ ?

         ಬಸನಗೌಡ ಗೌಡರ

Friday, May 14, 2021

 888 ನೇ ಬಸವ ಜಯಂತಿಯ ಶುಭಾಶಯಗಳು, ಕೊರೋನಾದ ಈ ಸಂಕಷ್ಟಗಳ ದಿನಮಾನದಲ್ಲಿ ಬಸವೇಶ್ವರರು ಕಂಡ ಸಮಸಮಾಜದ  ಕಲ್ಯಾಣದ ಆದರ್ಶ ಚಿಂತನೆಗಳನ್ನು ಎನ್ನ ಮನದಲ್ಲಿ ಕಾಪಿಟ್ಟು, ನನ್ನ ಈ ಚಿಕ್ಕ ಕವನವನ್ನು ಬಸವೇಶ್ವರರ ಪಾದಕಮಲಗಳಗೆ  ಸಮರ್ಪಿಸುತ್ತೇನೆ.ಶರಣು,ಶರಣು ಸಕಲಜೀವಾತ್ಮಗಳಿಗೆ.


* ವಚನ ಮಂತ್ರ ನೇಗಿಲು ತಂತ್ರ *

ಭಾವಗಳ ಬೆಸೆವ ಬಸವ
ಜಯಂತಿ, ಜಗವೆಲ್ಲ ಜರುಗಲಿ /
ಕಲ್ಲು ಮನಗಳನು ಕರಗಿಸಿ
ಸಮಾನತೆಯ ಜ್ಯೋತಿ ಬೆಳಗಲಿ//

ಕೂಡಿ ಬಾಳಿ ಕರ್ಮ ಮಾಡುವ 
ಬದುಕು, ಭಕ್ತಿ ಭಂಡಾರವಾಗಲಿ/
ಕಂಡರಾಗದ ಜನರ ಮೂಢತನ 
ತುಂಡು ತುಂಡಾಗಿ ತೊಲಗಲಿ// 

ಅಂತಸ್ತಿನ ಹಂತ ಅರಿಯುವ 
ಯೋಗ್ಯತೆ ,ಅಳತೆ ಮಾನವಾಗಲಿ/
ಜಾತಿ ಎಂಬ ಸೂತಕ ಹರಿಯಲು
ಅಂತ್ಯಜನೂ  ಧನಿಕನಾಗಲಿ // 

ಲಿಂಗ,ಜಾತಿ ಭೇಧ ಅಳಿಯುವ
ಶರಣರ, ಸಂತತಿ ಸತತ ಏರಲಿ/
ಸಂಸ್ಕಾರದ ಸತಿ ಸುತರಿರುವ
ಸಂಸಾರದಲ್ಲಿಯೆ ಸದ್ಗತಿ ಸಿಗಲಿ //

ದಾನದಿಂದ ಧರ್ಮ ಮೆರೆಯುವ
ವಿಚಾರ ,ಸಂಕೀರ್ಣ ಮೊಳಗಲಿ/
ವಚನ ಮಂತ್ರ ನೇಗಿಲು ತಂತ್ರ 
ಸರ್ವಸ್ವತಂತ್ರ ಗಣತಂತ್ರ ಏರಲಿ//


          ಬಸನಗೌಡ ಗೌಡರ

Thursday, May 13, 2021

* ಸತ್ಯವನ್ನು ಹೂತಿಡಲು ಸಾಧ್ಯವಿಲ್ಲ *

          ಧಾವಂತದ ಬದುಕಿನಲ್ಲಿ ಜೀವನಾನುಭವವನ್ನು ಮೆಲುಕು ಹಾಕಲು ಆಗುತ್ತಲೆ ಇರಲಿಲ್ಲ ಆ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಕೊರೋನಾಕ್ಕೆ ಧನ್ಯವಾದಗಳನ್ನು ಹೇಳಬೇಕು, ಆದರೆ ಅದರ ಅಟ್ಟಹಾಸ  ನೋಡಿದರೆ ಅದನ್ನು ಹೊಸಕಿ ಹಾಕಬೇಕು ಅನಿಸುತ್ತೆ ಆದರೆ ಏನು ಮಾಡುವುದು ಕೈಯಲ್ಲಿ ಸಿಗೋದಿಲ್ಲವಲ್ಲ... !, ಹಿಡಿ ಶಾಪ ಹಾಕಿ ತೆಪ್ಪಗೆ ಮನೆಯಲ್ಲಿ ಕುಳಿತುಕೊಂಡಿದ್ದೇವೆ ! ಇದೆ ಕೆಲಸ ಯಾವನಾದರೊ ಮನುಷ್ಯ ಮಾಡಿದ್ದರೆ..? ಅದರ ಕಥೆನೆ ಬೇರೆ ಆಗುತ್ತಿತ್ತು,  ಇರಲಿ ನಾನು ಏನು ಹೇಳಲಿಕ್ಕೆ ಹೊಂಟಿದ್ದೀನಿ ಎಂದರೆ ನಾನು ಸಣ್ಣ ವನಿದ್ಧಾಗ ನಮ್ಮ ಅಪ್ಪ  ಕೆಲವು ಕಥೆಗಳನ್ನು ಹೇಳುತ್ತಿದ್ದ ಅದನ್ನು ಈಗ ಹಂಚಿಕೊಳ್ಳುವ ಆಶೆ ಆಯಿತು ಅದಕ್ಕೆ ಅದರಲ್ಲಿ ಒಂದನ್ನು ಹಂಚಿಕೊಳ್ಳುವ  ಪ್ರಯತ್ನ ಮಾಡುತ್ತಿದ್ದೇನೆ.ನಮ್ಮಪ್ಪ ಮೂರು ಕ್ಲಾಸು ಮುಗಿಸಿ ನಾಲ್ಕನೆಯ ಇಯತ್ತೆಗೆ ಶಾಲೆಗೆ ಗುಡ್ ಬಾಯ್ ಹೇಳಿದ್ದ. ಆದರೆ ವ್ಯವಹಾರ ಜ್ಞಾನದಲ್ಲಿ ನನಗಿಂತ ತುಂಬಾ ಮಂದಿದ್ದ ಆತನ ಬಿಡುವಿನ ವೇಳೆಯಲ್ಲಿ ರಾಮಾಯಣ, ಮಹಾಭಾರತ ,ಕೆಲವು ನಾಟಕ ಹಾಗೂ ಕಥೆಗಳನ್ನ ಓದುತ್ತಿದ್ದ ಮತ್ತು  ಅವಗಳನ್ನು ಹಾಗೂ ತನ್ನ ಜೀವನಾನುಭವಗಳನ್ನು ನನಗೆ ಆಗಾಗ  ಹೇಳುತ್ತಿದ್ದ .ಬಹುಶಃ ಇಂದಿನ ಮಕ್ಕಳಿಗೆ ಅಂತಹ ಭಾಗ್ಯ ಕಡಿಮೆಯೇ ಅಂತ ನನ್ನ ಭಾವನೆ .ಅದೇನೆ ಇರಲಿ  ಮಕ್ಕಳಂತೂ ಸಂಪೂರ್ಣವಾಗಿ ಟಿ ವಿ ಅಥವಾ ಮೊಬೈಲ್ ದಾಸರಾಗಿದ್ದಾರೆ. ಅದರ ಒಳಿತು ಮತ್ತು ಕೆಡುಕಿನ ಬಗ್ಗೆ ಈಗ ಚರ್ಚೆ ಮಾಡುತ್ತಾ ಕುಳಿತು ಕೊಳ್ಳುವದು ಬೇಡ.  ಒಂದೂರಿನಲ್ಲಿ ಕಲ್ಲಪ್ಪ ಅಂತ ಒಬ್ಬ ಪ್ರಗತಿಪರ ರೈತ ಇದ್ದ ಒಂದು ಸಾರೆ ಎಲ್ಲರಿಗಿಂತ ಚನ್ನಾಗಿ ಇರುವ ಹೋರಿ ತರಬೇಕು ಅಂತ ಅನಿಸಿತು.ಎಲ್ಲರಿಂದ ಪ್ರಶಂಸೆ ಪಡೆಯಬೇಕು ಅಂತ ಮೂಡಲಗಿ ಜಾತ್ರೆಗೆ ಹೋಗಿ ಒಂದು ಜೊತೆ ಸುಂದರವಾದ ಹೋರಿಗಳನ್ನು ಖರೀದಿಸಿ ತಂದ . ಊರಿನಲ್ಲಿ ಎಲ್ಲರೂ ಹೋಗಿ ನೋಡಿದ್ದೆ, ನೋಡಿದ್ದು ಎಲ್ಲರೂ ಎತ್ತುಗಳನ್ನು ಹೋಗಳಿದ್ದೆ ,ಹೊಗಳಿದ್ದು. ವರ್ಣನೆಯಿಂದ ಕಲ್ಲಪ್ಪ ಉಬ್ಬಿ ಹೋದ.ರಾತ್ರಿಯಲ್ಲಾ ಅವರ ಹೊಗಳಿಕೆ ಅವನನ್ನು ಆಕಾಶದಲ್ಲಿ ತೇಲಿಸಿದಂತೆ ಮಾಡಿತು, ಸರಿಯಾಗಿ ನಿದ್ರೆನೆ ಬರಲಿಲ್ಲ ಯಾವಾಗ ಹೊತ್ತು ಹೊಂಟೀತು ಅವುಗಳಿಗೆ ನನ್ನ ಹೊಸ ಚಕ್ಕಡಿ(ಬಂಡಿ) ಹೂಡಿ, ಓಡಿಸಿ ಎಲ್ಲರಿಂದ ಸೈ ಅನಿಸಿ ಕೊಳ್ಳುಬೇಕು ಅಂದುಕೊಂಡ .ಮುಂಜಾನೆ ಎತ್ತುಗಳಗೆ ಹೊಟ್ಟು ಕಾಳು ತಿನಿಸಿ ರೆಡಿ ಮಾಡಿದ. (ಇವತ್ತು ನಾಗರಿಕರು ನಾವು ಎನ್ನುವವರಿಗೆ  ಕಾರು ಖರೀದಿಸಿದಾಗ ಇರುತ್ತಲ್ಲಾ ಅಂತಹ ಉಲ್ಲಾಸ ಇತ್ತು.) ಸರಿಯಾಗಿ ಹನ್ನೊಂದುವರೆ ಆಗಿರಬೇಕು, ಎತ್ತುಗಳಿಗೆ ಕೊಳ್ಳಗಟ್ಟಿದ ಹೋರಿಗಳು ಬಿರುಗಾಳಿಯಂತೆ ಗಾಳಿಯ ರಭಸದಲ್ಲಿ ಓಡಲು ಹತ್ತಿದವು. ಅವುಗಳನ್ನು ನಿಯಂತ್ರಣ ಮಾಡಲು ಸಾಧ್ಯವೆ ಆಗುತ್ತಿಲ್ಲ, ಮುಗದಾನಕ್ಕೆ ಹಗ್ಗ ಇದ್ದರೂ ಅವುಗಳನ್ನು ಹಿಡಿದು ಜಗ್ಗುವ ರಭಸಕ್ಕೆ ಕೈ ಉರಿಯ ಹತ್ತಿದವು. ಸುಮಾರು ಅರ್ಧ ಕಿಲೋಮೀಟರ್ ಸಾಗಿರಬೇಕು ಅಲ್ಲಿ ಒಂದು ಬೇವಿನ ಮರದ ಕೆಳಗೆ ಒಬ್ಬಳು ಹೆಂಗಸು ಬೇವಿನ ಬೀಜಗಳನ್ನು ಆರಿಸುತ್ತಿದ್ದಳು ಅದು ರೋಡಿನ ಸಮೀಪ ತನ್ನ ಮಗುವನ್ನು ಹಾಕಿ. ಅದು ಅವಳ ಮಗು  ಎಂದು ಇವನಿಗೆ ಅರಿತುಕೊಳ್ಳಲು  ಬಹಳ ಸಮಯವೇನು ಹಿಡಿಯಲಿಲ್ಲ, ಆಗ ಅವಳಿಂದ ಐದು ನೂರು ಮೀಟರ್ ಅಂತರದಲ್ಲಿದ್ದ.ಇನ್ನೇನು ತನ್ನ ಚಕ್ಕಡಿ ಆ ಮಗುವಿನ ಮೇಲೆ ಹಾಯ್ದು ಹೋದರೆ ...? ಹೌಹಾರಿ ಒಂದೆ ಸವನೆ ಚೀರಲು ಪ್ರಾರಂಭಿಸಿದ.ಬೇ. ಬೀಜ ಆರಿಸೋ ಹೆಣ್ಣು ಮಗಳೆ... ನಿನ್ನ ಮಗುವನ್ನು ತೆಗೆದುಕೊ ಹೋರಿಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಚೀರಿದ, ಅದರೆ ಆ ಹೆಂಗಸು ಮಾತ್ರ ತನ್ನ ಕಾಯಕದಲ್ಲಿ ಮಗ್ನಳಾಗಿ ತನ್ನ  ಮಗು ಇಷ್ಟು ದೂರ ಇದೆ ದೂರ ಹೊಡೆದುಕೊಂಡು ಹೋಗಲು ಇವನಿಗೇನು ದಾಡಿ ಇನ್ನೂ ಅಷ್ಟು ದಾರಿ ಇಲ್ಲವೇನು ? ಹೊಸ ಹೋರಿ ದರ್ಪ ಇವನದು ಎಂದು ಬೀಜ ಆರಿಸುವದರಲ್ಲೆ ಮಗ್ನಳಾದಳು.ಇವತ್ತು ನಾವು ಇಂತಹ ಸನ್ನಿವೇಶವನ್ನು ದಿನನಿತ್ಯ ಕಾಣಬಹುದು. ನಾವು ಬೈಕು ಓಡಿಸುತ್ತಿರುತ್ತೇವೆ... ಮೂರನಾಲ್ಕು ಹುಡುಗರು ಸೇರಿ ಮಾತನಾಡುತ್ತು ಹೋಗುತ್ತಿರುತ್ತಾರೆ  ನಾವು ಹಾರ್ನ ಹಾಕುತ್ತೇವೆ, ಹುಡುಗರು ಮಾತ್ರ ಸರಿಯುವದಿಲ್ಲ, ಅವರು ಅಂದು ಕೊಳ್ಳುವದೇನೆಂದರೆ ಇನ್ನೂ ಅಷ್ಟು ದಾರಿ ಇದೆ ಹಾದು ಹೋಗಲಿ, ಇಲ್ಲವೆ ನಮ್ಮ ಮೇಲೆ ಹಾಯಿಸಿಕೊಂಡು ಹೋಗುತ್ತಾನೇನು ಆ ಮಗ ? ಎನ್ನುವ ದಾಟಿಯಲ್ಲಿ ಇರುತ್ತಾರೆ ಆ ಹುಡುಗರು. ನಮ್ಮ ದಿನ ನತ್ಯದ ಬದುಕಿನಲ್ಲಿ ಇದು ಸಾಮಾನ್ಯ. ಹಾಗೆಯೇ ಆ ಬೀಜ ಆಯುವ ಹೆಣ್ಣು ಮಗಳು ವರ್ತಿಸಿದಳು. ಕಲ್ಲಪ್ಪ ಎಷ್ಟೆ ಪ್ರಯತ್ನ ಮಾಡಿದರೂ ಅವುಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗದೆ ಮಗುವಿನ ಮೇಲೆ ಹಾದು ಸ್ಥಳದಲ್ಲಿ ಮರಣ ಹೊಂದಿತು. ಆಗ ಆ ತಾಯಿ ಲಬೋ.. ಲಬೋ.. ಬಡಿದುಕೊಂಡು ಚಿರಾಡಿ ಅಳಹತ್ತಿದಳು ,ಕಾಲ ಮಿಂಚಿ ಹೋಗಿತ್ತು . ಪರಿಣಾಮವಾಗಿ ಆ ಮಹಿಳೆ ಪಿರ್ಯಾದಿ ನೀಡಿದಳು ಮತ್ತು ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದಳು ಮತ್ತು ಮಗುವನ್ನು ಕೊಂದ ಪಾಪಿಗೆ ಉಗ್ರ ಶಿಕ್ಷೆಯಾಗಬೇಕೆಂದು ನ್ಯಾಯಾಧೀಶರಲ್ಲಿ ಬೇಡಿಕೊಂಡಳು.ಇತ್ತ ಕಡೆ ಕಲ್ಲಪ್ಪ ಚಿಂತಾಕ್ರಾಂತನಾದ ತನಗೆ ಶಿಕ್ಷೆ ಖಚಿತವೆಂದು ಮನೆಯಲ್ಲಿ ಗೋಳಾಡಿದ ಏನು ಮಾಡುವುದು ನಡೆದು ಹೋಗಿದೆ ಹೇಗಾದರು ಮಾಡಿ ಪಾರಾಗಬೇಕಲ್ಲ ಒಳ್ಳೆಯ ವಕೀಲರನ್ನು ಹಿಡಿದು ಸಂಕಷ್ಟದಲ್ಲಿ ಪಾರಾಗಬೇಕೆಂದು ಪ್ರಸಿದ್ಧ ವಕೀಲರನ್ನು ಬೇಟಿಯಾದ ,ಆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ .ಒಂದು ಮಾತು ಇದೆ ವೈದ್ಯ, ವಕೀಲರಲ್ಲಿ ಆದದ್ದನು ಸರಿಯಾಗಿ ಹೇಳಬೇಕು, ಏನು ಮುಚ್ಚಿಡಬಾರದು. ಹಾಗೆಯೇ ಎಲ್ಲಾ ವಿವರಿಸಿದ .ನಂತರ ಹಾಯಿಸಿದ ಹೋರಿಗಳನ್ನು ವಕೀಲರಿಗೂ ತೋರಿಸಿದ, ಹೊರಿಗಳೆ  ಅಷ್ಟು ಚಂದವಾಗಿದ್ದವು .ವಕೀಲರಿಗೂ ಅಂತಹ  ಹೋರಿ ಹೊಂದಬೇಕು ಎನ್ನುವಷ್ಟು ಆಕರ್ಷಕ ವಾಗಿದ್ದವು. ಆಗ ವಕೀಲರು ಹೇಳಿದರು ಆ ಎರಡು ಹೋರಿಗಳನ್ನು ನನಗೆ ನೀಡಿದರೆ ನಾನು ನಿನ್ನನ್ನು ಈ ಕೇಶಿನಿಂದ ಬಿಡುಗಡೆಗೊಳಸುವೆನೆಂದು ಹೇಳಿದರು. ಕಲ್ಲಪ್ಪನಿಗೆ ಎಲ್ಲಿಲ್ಲದ ಸಂತೋಷ ಬೇಕಾದಷ್ಟು ಹೋಗಲಿ, ಕೊಡಲು ಆತ ರೆಡಿಯಾಗಿದ್ದ  ಹೋರಿಗಳು ಹೋದರೆ  ಹೋಗಲಿ ಶಿಕ್ಷೆಯಿಂದ ಆತನು ಪಾರಾಗಬೇಕಾಗಿತ್ತು.ವಿಚಾರಣೆ ಸಮೀಪಿಸಿತು. ವಿಚಾರಣೆ ಹಿಂದನ ದಿನ ವಕೀಲರು ಕಲ್ಲಪ್ಪನನ್ನು ಕರೆದು ನೀನು ಇಂದಿನಿಂದ ಮೂಕ, ವಿಚಾರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡುವ ಹಾಗಿಲ್ಲ .ಎಂದರು.ಎದುರು  ವಕೀಲರು ಏನೆ ಕೇಳಿದರು ಬಾಯಿ ತೆಗಯಕೂಡದು, ತೆಗೆದರೆ ಶಿಕ್ಷೆ ಖಚಿತವೆಂದು ವಕೀಲರು ತಾಕೀತು ಮಾಡಿದರು. ವಿಚಾರಣೆ ದಿನ ಬಂದೆ ಬಿಟ್ಟಿತು ಮಗು ಕಳೆದುಕೊಂಡ ಮಹಿಳೆಯೂ ಬಂದಿದ್ದಳು. ನ್ಯಾಯಾದೀಶರ ಮುಂದೆ ಪಾಟಿ ಸವಾಲು ಪ್ರಾರಂಭವಾಯಿತು ಎದರು ಪಕ್ಷದ ವಕೀಲರು ಕಲ್ಲಪ್ಪ ನನ್ನು ಕುರಿತು ಪ್ರಶ್ನೆ ಮಾಡಲು ಪ್ರಾರಂಭಿಸಿದರು ನಿನ್ನ ಹೇಸರೇನು ? ....ಉತ್ತರ ವಿಲ್ಲ ..., ನಿಮ್ಮ ಊರು ಯಾವುದು? ... ಉತ್ತರವಿಲ್ಲ... ನೀನು ಈ ಹೆಣ್ಣುಮಗಳ ಮಗುವಿನ ಮೇಲೆ ಚಕ್ಕಡಿ ಹಾಯಿಸಿದ್ದು ಸತ್ಯವೆ ?.. ಅದಕ್ಕೂ ಕಲ್ಲಪ್ಪನು ಉತ್ತರ ನೀಡಲಿಲ್ಲ ಆಗ ಕಲ್ಲಪ್ಪನ ವಕೀಲ ಎದ್ದು ನಿಂತು ನನ್ನ ಕಕ್ಷಿದಾರ ಮೂಕನಿದ್ದಾನೆ ಎಂದಾಗ, ಆ ಬೀಜ ಆಯುವ ಮಹಿಳೆಯ ಸಿಟ್ಟು ನೆತ್ತಿಗೇರಿತು.ಇಲ್ಲ ಸರ್ ಈತ ಸಳ್ಳು ಹೇಳುತ್ತಿದ್ದಾನೆ . ಈತ ಚಕ್ಕಡಿ ಹಾಯಿಸಿದ ಸ್ಥಳದಿಂದ ಅರ್ಧ ಕಿಲೋ ಮೀಟರ್ ದೂರ ಇದ್ದಾಗಲೆ ಇಡಿ ಊರಿಗೆ ಕೇಳುವಂತೆ ನನ್ನ ಹೋರಿ ನನಗೆ ಹಿಡತ ತಪ್ಪಿವೆ ಎಂದೂ, ಮಗು ಪಕ್ಕಕ್ಕೆ ತೆಗೆದುಕೋ ಎಂದು ಚೀರುತ್ತಾ ಬಂದದ್ದನ್ನು ನಾನೇ ಕೇಳಿದ್ದೇನೆ, ಅವನಿಗೆ ಮಾತು ಬರುತ್ತದೆ .ಆತ ಮೂಕನಲ್ಲ.......ಎಂದು ಹೇಳುತ್ತಾ ತನ್ನ ತಪ್ಪನ್ನೂ ತನಗರಿವಿಲ್ಲದೆ ಹೊರಗೆ ಹಾಕಿಯಾಗಿತ್ತು .ಹೀಗೆ ಜಾಣನಾದ  ವಕೀಲ ತನ್ನ  ಕಕ್ಷಿದಾರ ನಿರಪರಾದಿ ,ಆ ಮಗು ಸಾಯಲು ಅವನದು ದುರದ್ದೇಶವಿಲ್ಲವೆನ್ನುವುದನ್ನು ನಿರೂಪಿಸಿದ.ಇದರಿಂದ ನಮಗೆ ಮನವರಿಕೆಯಾಗುವದೇನೆಂದರು ಸತ್ಯವನ್ನು ಯಾವುದೆ ಸಂದರ್ಭದಲ್ಲಿ ಮುಚ್ಚಿಡಲು ಸಾಧ್ಯವಿಲ್ಲ, ಅದು ಹೂತಿಟ್ಟರು ಯಾವಗಲಾದರೂ ಒಂದು ದಿನ ಹೂರ ಬಂದೆ ಬರುತ್ತದೆ.ಅದಕ್ಕೆ ತನ್ನದೆ ಅದ್ಭುತವಾದ ಶಕ್ತಿ ಇದೆ.ಇದಕ್ಕೆ ತಾವೆಲ್ಲ ಏನಂತೀರಾ ?


             ಬಸನಗೌಡ ಗೌಡರ

Wednesday, May 12, 2021

* ಸಂತೋಷ ಸಂಪತ್ತಿನಲ್ಲಷ್ಟೆ ಇಲ್ಲ *

         "ನೀವು ಇದೀರಾ ದಂಡ ಪಿಂಡ 10 ವರ್ಷ ಆಯಿತು ಏನು ಗಳಿಸಿದ್ದೀರಿ ಹೇಳಿ? " ಆ ಪಕ್ಕದ ಮನೆ ಪಂಕಜ  ನೋಡರಿ ಎಷ್ಟು ಜಬರದಸ್ತ ಅದಾರ.ಅವರ ಗಂಡ ಗುಮಾಸ್ತರು ಅದಾರ ಅಂತೀರಾ, ಮತ್ತ ಏನ ಗತ್ತ ದೌಲತ್, ನೀವು ಇದೀರಿ ಎರಡು, ಎರಡು ಡಿಗ್ರಿ ಪಡೆದೀನಿ ಅಂತೀರಿ, ಮೇಲೆ ದೊಡ್ಡ ಮಾಸ್ತರು ಆಗೀನಿ ಅಂತೀರಿ ಏನು ಮಾಡೋದು. ಅವಳು ಮತ್ತು ಅವಳ ಗಂಡ ರಾಜಾನಂಗ ಜೀವನಾ ಲೀಡ ಮಾಡತಾರ.... ಜೀವನ ಅಂದರ ಹಂಗ ಕಳೀಬೇಕು ರೀ. ಜೀವನ ಹೆಂಗ ಎಂಜಾಯ್ ಮಾಡಬೇಕೆನ್ನವುದನ್ನ ಅವರಿಂದ ನೋಡಿ ಕಲಿಬೇಕು ನೋಡರಿ , ಕೊಳ್ಳಾಗ ನಕ್ಲೆಸ್ ,ತಾಳಿ ಚೈನ , ಜುಮಕಿ ಒಂದಾ ಎರಡಾ, ಸೀರಿ ಒಂದು ದಿನಾ ಉಟ್ಟದ್ದು  ಇನ್ನೊಂದು ದಿನ ಉಡಾಂಗಿಲ್ಲ..! ನಾನು ದಿವಸಾ ಈ ಪಂಕಜಾ ವಾಕಿಂಗ ಅಂತಾ ಹೋಗುದನ್ನ ನೋಡತಾ ಇರತೀನಿ ಇವತ್ತನ ಸೀರೆ ನಾಳೆ ಇರಂಗಿಲ್ಲ ಇವಳು ವಾಕಿಂಗ್ ಹೋಗತಾಳಾ ಇಲ್ಲ ನನ್ನ ಸೀರಿ ಇಷ್ಟ ಅದವಾ ಅಂತ ತೋರಸಾಕ  ಹೋಗತಾಳ ನನಗಂತೂ ಗೊತ್ತ ಆಗತಾ ಇಲ್ಲ "....ಇವಳ ಭಾಷನ ಕೊರೋನಾ ಸೋಂಕಿತರ ಸಂಖ್ಯೆ ಏರಿದಂಗ ಏರಾಕ ಹತ್ತಿತು  ! ಲೆ... ಲೇ.. ಶಾರದಾ ನಿಲ್ಲಸಪಾ ,ಹಾಂಗ ಗೋಲಗುಂಬಜ್ ಎಕ್ಸ್ ಪ್ರೆಸ್ ಟ್ರೈನ ಹೋದಂಗ ಹೊಂಟಿಯಲ್ಲ ಒಂದ ಸ್ವಲ್ಪ ಗಾಡಿ ನಿಲ್ಲಸಲ್ಲ, ಒಂದೆ ಸವನ ಓಡಕ ಹತ್ತಿಯಲ್ಲ ನಿನಗ ಏನು ಬೇಕು ನೇರವಾಗಿ ನನ್ನ ಕೇಳ ಎಲ್ಲದಕೂ ಸರಿಯಾಗಿ ಉತ್ತರ ನಾನು ಕೊಡತೇನು.ನಿನಗ ಏನಬೇಕು? ಎಂಜಾಯ್ ಮೆಂಟ ಬೇಕು ಅಷ್ಟೆ ತಾನೆ ? ನನಗ ಎಂಜಾಯ್ ಮೆಂಟ ಅಂದರೇನು ನನಗ ಉತ್ತರ  ಕೂಡು .ಅದಕ್ಕೆ  ಶಾರದಾ ತಕ್ಷಣವೇ ಹೇಳಿದಳು "ಯಾವಾಗಲೊ ಸಂತೋಷದಿಂದ ಇರುವುದು"ಅಷ್ಟು ತಿಳಿಯುದಿಲ್ಲೇನ್ರಿ.? ಸಂತೋಷದಿಂದ ಇರಾಕ ಬಂಗಾರನ ಇರಬೇಕು ಅಂತ ನೀನಗ ಯಾರ ಹೇಳಿದರು ? ಇನ್ಫೋಸಿಸ್ ಕಂಪನಿ ಒಡೆಯ ನಾರಾಯಣ ಮೂರ್ತಿ ಅದಾರ ಗೊತ್ತ ಅದಾ ಏನು, ಅವರ ಹೆಂಡತಿ ಸುಧಾ ಮೂರ್ತಿ ಅಂತ ಅದಾರ ಅವರನ್ನು ನೋಡಿಯೇನು ಅವರು ಮನಸ್ಸು ಮಾಡಿದರ ಕೆ ಜಿ ಗಂಟಲೆ ಬಂಗಾರ ಮೈಮೇಲ ಹಾಕೋಬಹುದು ಆದರ ಅವರು ಮೈಮೇಲೆ ಕರಿಮಣಿ ಸರ ಮಾತ್ರ ಇರುತ್ತೆ ಆದರೂ ಅವರು ಎಷ್ಟು ಸಂತೋಷದಿಂದ ಇರತಾರ ಗೊತ್ತ ಅದ ಏನು ? ಅದಕ ಶಾರದ ಹೇಳಿದಳು , ಹಾಂಗ ಅಲ್ಲರಿ ...ಅವರು ಬಹಳ ಶ್ರೀಮಂತರ ಅದರ ಹೀಗಾಗಿ ಅವರು ಸಂತೋಷದಿಂದ ಅದಾರ .ಆವಾಗ ಸೀನಪ್ಪ ತನ್ನ ಹೆಂಡತಿಗೆ ಹೇಳಿದ " ನಿನಗ ಹಿಂಗ ಹೇಳಿದರ ಅರ್ಥ ಆಗವಲ್ತು ನಾನು ನಿನಗ ಒಂದು ದೃಷಾಂತ ಹೇಳತೀನಿ ಕೇಳು. ನಾನು ಒಬ್ಬ ಅರ್ಥ ಶಾಸ್ತ್ರದ ಉಪನ್ಯಾಸಕ ಅದಿನಿ ಗೂತ್ತದ ಇಲ್ಲ ನಿನಗ ?  "ನನಗ ಒಬ್ಬ ಸೆಂಗಾ ಮಾರುವ ಅಜ್ಜ ಒಂದು ಪಾಠ ಕಲಿಶ್ಯಾನು ಹೇಳತೇನು ಕೇಳು ಅಂತ ಸೀನಪ್ಪ ದೃಷಾಂತ ಪ್ರಾರಂಭಿಸಿಯೇ ಬಿಟ್ಟ. ಆಗ ಶಾರದಾ "ಹ್ಯಾಂಗೂ ಕರೋನಾ ಐತಿ ಹೂರಗ ಹೋಗುವ ಹಾಗಿಲ್ಲ. ಹೊರಗ ಹೋದರ ಪೋಲೀಸರು ದನಕ ಬಡದಂಗ ಬಡಿತಾರ, ಏನ ನಿಮ್ಮ ಪುರಾಣ ಹೇಳರಿ ಕೇಳತಿನಿ  ಅಂದಳು.ನಾನು ದಿನಾಲು ಮಕ್ಕಳಿಗೆ ಅರ್ಥಶಾಸ್ತ್ರ ಪಾಠ ಮಾಡಿ ಬ್ಯಾಸರಾದಾಗ ಬಸಪ್ಪನ ಚಹಾದಂಗಡಿಗೆ ಹೋಗಿ ಚಹ ಕುಡಿಯುವದು ರೂಢಿ ಹೀಂಗ ದಿನಾಲೂ ಹೋಗುವಾಗ ಉಪಗಡಲಿ ಮಾರುವ ಬುಡ್ಡೆಸಾಬನನ್ನು ನೋಡತಾ ಇದ್ದೆ ಆತ ಸುಮಾರು ಹತ್ತು ವರ್ಷಗಳಿಂದ ಅದನ್ನೇ ಮಾಡುತ್ತಾ  ಹೋಗುತ್ತಿದ್ದ ಮತ್ತು ಅದೆ ಸ್ಥಿತಿಯಲ್ಲೆ ಇದ್ದ.  ಆವತ್ತು ಪಿರೇಡ ಲೀಸರ ಇದ್ದ ಕಾರಣಕ್ಕೆ ಒಂದೆರಡು ಮಾತಾಡಸಬೇಕು ಅಂತ ಅನಿಸಿತು ಹೋಗಿ " ಬುಡ್ಡೆಸಾಬ್ ಆರಮ ಇದಿಯಾ ಅಂತಾ ಕೇಳಿದೆ ,ಅದಕ ಆತ ಏನರಿ ಬುದ್ಧಿ ಸಕತಾಗೆ ಇದಿನಿ, ಅಂತ ಕಾಲಮ್ಯಾಗ ಕಾಲ ಹಾಕಿ ಸಿಗರೇಟ್ ದಮ್ ಎಳದ, " ದೇವರ ಕೊಟ್ಟ ಬೇವಿನ ಗಿಡದ ನೆರಳು ಅದರಿ ,ದಿನ ಎರಡು ನೂರ ಲಾಭ ಅದರಿ, ಅಲ್ಲಾ ..ನನಗೇನು ಕಡಮಿ ಮಾಡಿಲ್ಲಾ ಸರ್"  .ಸಂತೋಷವಾಗಿ ಇದ್ದನಿ,ಅಂದ. ನಾನು ಕೇಳಿದೆ.ನೀನು ಯಾವಾಗ ಶ್ರೀಮಂತ ಆಗಾವಾ, ಅಲ್ಲಪಾ ದಿವಸಕ್ಕ ಎಷ್ಟು ಉಳಸತಿ ಹೇಳು. ಎಂದು ನಾನು ಆತನಿಗೆ ಒಂದು ಕ್ಲಾಸ್ ತೆಗೆದುಕೊಂಡು ಹೇಳಿದೆ. "ನೀನು ದುಡಿದದ್ದರಲ್ಲಿ ದಿನಾ ಐವತ್ತು ರೂಪಾಯಿ ಉಳಿಸು ಒಂದು ತಿಂಗಳಿಗೆ ಎಷ್ಷಾಯಿತು ಹದಿನೈದು ನೂರು ಆಯಿತು,  ಒಂದು ವರ್ಷ ಕ್ಕೆ ಎಷ್ಟಾಯಿತು, 18250.00 ಆಯಿತು, ಅದನ್ನು ಒಂದು ಕಿರಾಣಿ ಅಂಗಡಿ ಹಾಕು ಒಂದು ದಿನಕ್ಕೆ, ಒಂದು ವರ್ಷ ಕ್ಕೆ ಲಾಭ ಎಷ್ಟು ಆಗುತ್ತೆ ಗೊತ್ತಾ? ಆಮೇಲೆ ಏನು ಮಾಡಬೇಕು ಸರ್? ಒಂದು ಪ್ಯಾಕ್ಟರಿ ಹಾಕಬೇಕು,ಅದಕ ಸಾಬಿ ಹೇಳಿದ  ಆಮೇಲೇನು ಮಾಡಬೇಕು ಸರ್, " ಒಂದು ಕಾರು ತೋಗೊ,ಆಮೇಲೆ ಒಂದು ದೊಡ್ಡ ಬಂಗಲೆ ಹಾಕಿಸು ,"ಆಮೇಲೆ ಏನು ಮಾಡಬೇಕು ಸರ್",ಅದಕ್ಕೆ ನಾನು  ಹೇಳಿದೆ ಅಷ್ಟು ತಿಳಿಯುವುದಿಲ್ಲ ವೇನು ? ಆ ಮನೆ ಮುಂದೆ ರಾಜನ ಹಾಗೆ ಕಾಲು ಮೇಲೆ ಕಾಲು ಹಾಕಿ  ಕುಳಿತು ಕೊಳ್ಳಬೇಕು ಎಂದೆ .ಆಗ ಬಡ್ಡೆ ಸಾಬ್ ನಿಧಾನವಾಗಿ ಹೇಳಿದ .ಸರ್ ಈಗ ನಾನು ಮಾಡುತ್ತಿರುವದೇನು ಅದನ್ನೇ ಅಲ್ಲವೇ ಎಂದಾಗ, ನನ್ನ ಅರ್ಥ ಶಾಸ್ತ್ರದ ಪಾಠ ಆತನ ತಾತ್ವಿಕ ಪಾಠದಲ್ಲಿ ನೀರಿನಂತೆ ಕರಗಿ ಹೋಯಿತು." ಶಾರದಾ ಮನುಷ್ಯನಿಗೆ ಸಂತೋಷ ಎನ್ನುವುದು ಹೂರಗಿನಿಂದ ಅಥವಾ ಬಂಗಾರ ಶ್ರೀಮಂತಿಕೆಯಿಂದ ಬರುವುದಿಲ್ಲ ಬದಲಾಗಿ ಅದು ನಮ್ಮ ಅಂತರಾತ್ಮ ದಲ್ಲಿಯೆ ಇರುತ್ತದೆಂದಾಗ ಶಾರದಾ ಸಂಜೆಯ ಬಿಸಿಯೂಟ ತಯಾರಿಸಲು ಅಡುಗೆಯ ಮನೆ ದಾರಿ ಹಿಡಿದಳು.


                             ಬಸನಗೌಡ ಗೌಡರ

Monday, May 10, 2021

* ರಾಷ್ಟ್ರ ಪಥ *

ಕನಸೊಂದು ಕಂಡೆ ಕನ್ನಡದ ಕಂದ 
ಕವಿ ಶೈಲದ ಕುಸುಮ ನಾನಿಂದು
ಕಾವೇರಿಯಿಂದ ಗೋದಾವರಿವರೆಗೆ  
ಶ್ರೀವಿಜಯನ ಮಾತು ಮೀರಿದೆ
ಹಾಯಾಗಿ //

ವಿಂದ್ಯ ಸಾತ್ಪುಡಿ ಪರ್ವತವ ಏರಿ
ಬಯಲು ಬೆಳವಲ ನಾಗರಿಕತೆ ಹೀರಿ 
ಮರಿದುಂಬಿಯಾಗಿ ಹಿಮಪುಷ್ಪವೇರಿ
ಮನದುಂಬಿ ಹಾಡಿದೆ ಕೊಗಿಲೆಯ 
ಮರಿಯಾಗಿ//

ಸಹ್ಯಾದ್ರಿ ಮಲೆಗಳ ಚಂದನವನ
ವೈಚಾರಿಕ ಕವಿಗಳ ಕವನದ ಚರಣ 
ಪಂಪ, ಪೂನ್ನ, ಕುವೆಂಪು ಪಾದದ
ಕಂಪು ಸೂಸುವ ಮೈಸೂರು 
ಮಲ್ಲಿಗೆಯಾಗಿ//

ವಂಗನಾಡಿನ ಗಂಗೆಯ ತಟದ 
ಸುಂದರಬನದ ಬಿಳಲುಗಳ ವನ
ಅಂದದ ಹುಲಿಗಳ ಘರ್ಜನೆ ಮನ
ವಂದೆ ಮಾತರಂ ಹಾಡುವೆ
ದ್ವನಿಯಾಗಿ //

ಪಡುವಣ ನಾಡಿನ ಕಾಡಿನ ಕೇಸರಿ
ಪವಡಿಸಿದ ಗಿರ್ ಗತ್ತಿನ ಘರ್ಜನೆ  
ಸಬರಮತಿ ಸಂತನ ಶಾಂತಿ ಮಂತ್ರ 
ಸತ್ಯ ಅಹಿಂಸೆ ಸನ್ಮಾರ್ಗ ಬೆಳೆಯ 
ಫಲವಾಗಿ // 

             ಬಸನಗೌಡ ಗೌಡರ

* ಸಾಕು ಧಾವಂತ *

ಮಾತು ಕರಗಿ ಮೌನವೇರುವ ಕಾಲ
ದಿನ ಬೆಳಗಾದರೆ ಕಠೋರ ಕರ್ಕಶ 
ಬೀಭತ್ಸ ಮರಣ ಮೃದಂಗಳ ಅಲೆ
ಬಂದು ಬೀಸಿದೆ ಕಾಣದ ಜೀವ ಜ್ವಾಲೆ//

ಕಿವಿ ತಮಟೆ ಸೀಳುವ ಶುದ್ದಿಗಳು
ಒಗಟಾಗಿ ಕಾಡುವವು ಮನ ದಿನವೆಲ್ಲ 
ಜಾಗಟಿ ಹೊಡೆದರು ಅದೆ ಮೊಂಡತನ
ಹೇಳಿದ್ದೆ ಹೇಳಿದ್ದು ಕೇಳಾಗಿದೆ ಸಿನಿಕತನ//

ಕಾಲನ ಕೈಗಳ ಬೇರುಗಳರಿಯದ ಜನ
ಕಾಣುವ ಸತ್ಯವ ಬೆನ್ನು ಹತ್ತವರು ದಿನ
ಕಾಣದ ಸತ್ಯ ವೂ ಉಂಟು,ಲೆಕ್ಕವಿದೆ
ಕರ್ತಾರನ ಸಂಬಳ ತಪ್ಪದೆ ಬರುವುದು//

ಹಗಲಿರಳು ಮನುಕುಲದ ವೇದನೆಗೆ 
ಹೆಗಲು ಕೊಡುವ ಸಂವೇದನಾಶೀಲರ
ಹೃದಯಗಳಿಗೆ ಇಲ್ಲ ನಮ್ಮಲ್ಲಿ ಕೊರತೆ  
ಹಣಕ್ಕೆ ಹೇಸಿಗೆ ತುಳಿದವರದೇಕೆ ಚಿಂತೆ//

ತಾಳಿದ ಬಾಳು ತೆವಳಿ ತಲುಪುವುದು
ತಡಮಾಡದೆ ಓಡಿ ತಲುಪುವದೆಲ್ಲೆಗೆ?
ಕಳೆದದ್ದು ಸಾಕು ದಿನನಿತ್ಯ ಧಾವಂತ 
ಈಗಲಾದರೂ ಇರಲಿ ಮನ ಶಾಂತ//

           ಬಸನಗೌಡ ಗೌಡರ

Thursday, May 6, 2021

* ಪಳಗಿಸು ನೀ ದೇಹ ಮನಸ್ಸು *

ಗೋಲಿ ಆಡುವ ಬಾಲನ ಬೆರಳಿಗೆ 
ಚೀಲದ ಕಸಿಗಳೇರಿಸಿ ಕಳಿಸಿದೆ ಶಾಲೆಗೆ 
ಆಟದ ಬಯಲುಗಳಾದವು ಬಿಕೋ..  
ಕನಸೊಂದೆ ನೀ ವೈದ್ಯನಾಗು ಸಾಕೋ !//

ಸದೃಡ ಯವಕರು, ಸದೃಡ ಸಮಾಜ 
ದೃತಿಗೆಡದೆ ಓಡಬೇಕು ಅಲ್ಲಿ ನಿರಂತರ
ಬೊಜ್ಜು ಬೆಳೆಸಿ ಹೆಜ್ಜೆ ಹಾಕಿದರೆ ಹೇಗೆ?
ಗುಜರಿಗೆ ಬೀಳುವದು ಒಂದೆ ಆಯ್ಕೆ//
 
ರಾಷ್ಟ್ರವೆಂದರೆ ಕಲ್ಲು ಗಾರೆ ಕಟ್ಟಡವಲ್ಲ 
ಕಟ್ಟಬೇಕು ಜನರ ದೇಹ ಮನಸ್ಸಿನಲ್ಲಿ  
ಗಟ್ಟಿಯಾಗಿ ನಿಲ್ಲುವ ದಿಟ್ಟ ಯುವಕರ
ಪಟ್ಟಿ ದೊಡ್ಡದಿದೆ ನೂರಲ್ಲ ಸಾವಿರ //

ಜವಾನನಿಂದ ದಿವಾನನವರೆಗೂ 
ಸರ್ವರಿಗೂ ಬೇಕು ಅನ್ನ ಹಾಕಲು ರೈತ
ಎತ್ತಿ ಇಳಿಸಲು ಬೇಕೆ ಬೇಕು ಕಾರ್ಮಿಕ 
ಎಲ್ಲರೂ ಕೇಳುವುದೊಂದೆ ಮಾಲಕ//

ಬಯಲುಗಳಿಲ್ಲದೆ ಬೆಳೆದವು ಶಾಲೆ 
ಬಾಯಿಪಾಠ ಮಾಡುವದೊಂದೆ ಕಲೆ
ಬರುವದೊಂದೆ ಪುಸ್ತಕ ಮಸ್ತಕದ ನೆಲೆ
ಬಹುಮುಖ ಪ್ರತಿಭೆಗೆ ಯಾವಾಗ ಬೆಲೆ//

ರೋಗಗಳೆಂದರೆ ವೈರಿಗಳೇನೋ ಸರಿ
ಪರಿಹಾರಕ್ಕೆ ವೈದ್ಯರ ಕಾಣುವುದೆ ದಾರಿ
ಇದೊಂದೆ ಪರಿಹಾರವೆಂದರೆ ನೀ ವೈರಿ
ದೇಹ ಮನಸ್ಸು ಪಳಗಿಸು ಶಕ್ತಿ ಮೀರಿ//

            ಬಸನಗೌಡ ಗೌಡರ

Wednesday, May 5, 2021

* ನಾನು ಪರ್ವತವೇರಿದ ತೇನಸಿಂಗನಾದಾಗ *

              ಅಂದು ಬೇಗನೆ ಎದ್ದು ಸ್ನಾನ ಮಾಡಿದೆ ಅವತ್ತು ಹೇಳಬೇಕಾದ ಪಾಠವನ್ನು ಒಂದು ಸಾರೆ ಓದಿ ಅದರ ಬಗ್ಗೆ ನಾಲ್ಕು ಸಾಲು ಪಾಠದ ಟಪ್ಪಣೆ ಬರೆದು( ಉಪನ್ಯಾಸಕರು ಅಂದು ಪಾಠ ಮಾಡಬೇಕಾದ ಪರಕಲ್ಪನೆಯ ಬಗ್ಗೆ ನಾಲ್ಕು ಸಾಲು ಡೇಲಿ ಡೈರಿ ಬರೆಯಬೇಕು )  ಲಗು ಬಗಯಿಂದ ಟಿಫನ್ ಮಾಡಿದೆ .ಏಕೆಂದರೆ ನಾನು ಲೇಟಾಗಿ ಪಾಠಕ್ಕೆ ಹೋದರೆ  ಅಪರಾಧಿ ಮನೋಭಾವ ಕಾಡಿದ ಹಾಗೆ ಆಗುವುದು ನನ್ನ ಸ್ವಭಾವ  (ಸಾಮಾನ್ಯವಾಗಿ 10 ನಿಮಿಷ ಮೊದಲೆ ಹೋಗುವುದು ನನ್ನ ಅಭ್ಯಾಸ )  ದಾರಿಯುದ್ದಕ್ಕೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವರ್ಗಗಳಿಗೆ ವಿಷಯವನ್ನು ಹೇಗೆ ಹೇಳಬೇಕು ಮತ್ತು  ಅದನ್ನು  ಮನದಟ್ಟು ಮಾಡಿಕೊಡಬೇಕಾದರೆ ಯಾವ ಉದಾಹರಣೆ ನೀಡಿದರೆ ಸೂಕ್ತ  ಎನ್ನುವ ವಿಚಾರ ಮಾಡತಾ ಹೋಗುತ್ತಿದ್ದೆ, ಇತಿಹಾಸ ವಿಷಯ ವಾಗಿರವದರಿಂದ ಪ್ರಸ್ತುತ ಸಂಗತಿಗಳಿಗೆ ಥಳಕು ಹಾಕುವುದು ಮತ್ತು ಹೋಲಿಕೆ ಮಾಡುತ್ತಾ ಕಲಿಸಬೇಕು, ಉದಾಹರಣೆ ಹೇಳಬೇಕೆಂದರೆ ಚಾಲುಕ್ಯರ ಪಾಠ ಮಾಡುವಾಗ ಗುಪ್ತ ರ ಇಲ್ಲವೆ ಹರ್ಷವರ್ಧನ ಬಗ್ಗೆಯೂ ಹೇಳಬೇಕಾಗುತ್ತದೆ,ವಿಜಯನಗರ ಸಾಮ್ರಾಜ್ಯದ ವಿವರಣೆ ನೀಡುವ ಸಂದರ್ಭದಲ್ಲಿ  ಬಹಮನಿ ಸುಲ್ತಾನರ ಇಲ್ಲವೆ ಉತ್ತರದ ಮೊಗಲ್ ಸಾಮ್ರಾಜ್ಯದ ಬಗ್ಗೆ ಹಾಗು ಯೂರೋಪಿಯನ್ನರ ಆಗಮನದ ಬಗ್ಗೆ ತಿಳುವಳಿಕೆ ನೀಡಬೇಕಾಗುತ್ತದೆ ಇಲ್ಲದೆ ಹೋದರೆ ಇತಿಹಾಸ ವಿಷಯ ನೀರಸ ಪಾಠ ವಾಗುತ್ತದೆ.ಮಕ್ಕಳು ಪಾಠದ ಆಸಕ್ತಿ ಯನ್ನು ಕಳೆದುಕೊಂಡು ವರ್ಗ ಕೊನೆಯು ಮರುಭೂಮಿಯಂತಾಗುತ್ತದೆ.ಅದು ಜೀವಂತವಾಗಿರುವ ವರ್ಗ ಆಗ ಬೇಕೆಂದರೆ ಹೋಲಿಕೆಯಾತ್ಮಕವಾಗಿ ಚರ್ಚೆ ಮುಖಾಂತರ ಕಲಿಸಿಕೊಡಬೇಕು ಎನ್ನುವುದು ನನ್ನ ಭಾವನೆ. ಇರಲಿ ಅವತ್ತಿನ ಪಾಠ "ಮಾನವ  ವಿಕಸನದ ಕಥೆ". ಮಾನವ ವಿಕಸನ ಕಲಿಸಿ ಕೊಡುವ ಮೊದಲು ನಾವು ಭೂಮಿಯ ಉಗಮ ಹಾಗೂ ವಿಕಾಸ ,ಜೀವಿಯ ಉಗಮ  ವಿಕಸನ ಹೇಳಿಯಾಗಿತ್ತು.  ಮುಂದಿನ ಹಂತವೆ ಮಾನವ ವಿಕಸನದ ಕತೆ.ಮಾನವ ವಿಕಸನವಾದ  ಕತೆ ಒಂದು  ರೋಚಕ ಕತೆ, ಈ ವಿಷಯ ಹೇಳವಾಗ ನಾವು ಚಾರ್ಲ್ಸ್ ರಾಬರ್ಟ್ ಡಾರ್ವಿನ ಬಗ್ಗೆ ನೆನಪಿಸಿ ಕೊಳ್ಳದೆ ಹೋದರೆ ಅಪಚಾರವಾದಂತೆ ಆಗುತ್ತೆ ಅನ್ನುವುದು ನನ್ನ ಭಾವನೆ ಈತ ಬ್ರಿಟಿಷ್ ನಿಸರ್ಗ ವಿಜ್ಞಾನಿ " ಭೂಮಿಯ ಮೇಲಿನ ಎಲ್ಲಾ ಪ್ರಭೇಧಗಳ ವಿಕಸನ ಒಂದೆ ಮೂಲದಿಂದ ವಂಶಾನುಗತವಾಗಿ ಮತ್ತು ಕಾಲಾನುಕ್ರಮವಾಗಿ ನಡೆದಿವೆ " ಎಂದು ಪ್ರತಿಪಾದಿಸಿದ  ಈ ಸಿದ್ಧಾಂತದ ತಿರುಳು ವಿಕಸನದ ಪ್ರತಿಕ್ರಿಯೆಯಲ್ಲಿ ಜೀವ ಪ್ರಭೇಧಗಳ ವಿಭಜನೆಯು ನೈಸರ್ಗಿಕ ಆಯ್ಕೆಯ ಪರಿಣಾಮವಾಗಿದೆ ಮತ್ತು ಜೀವಿ ಬದುಕಿ ಉಳಿಯಲು ಸಂಘರ್ಷ ಮಾಡುತ್ತದೆ ಎಂದು ಪ್ರತಿಪಾದಿಸಿದ. ಹೀಗೆ ಡಾರ್ವಿನ ರಚಿಸಿದ  "The Orgin of Species" ಎಂಬ ಕೃತಿಯಲ್ಲಿನ ನೈಸರ್ಗಿಕ ಆಯ್ಕೆಯ ಸಿದ್ದಾಂತವು ನಮಗೆ ಮಾನವನ ವಿಕಾಸದ  ಕಥೆಯನ್ನು ಅರಿಯಲು ಸಹಕಾರಿಯಾಗಿದೆ. ಮಕ್ಕಳೆ  "ಇಂದಿನ ಎಲ್ಲಾ ಮಾನವರು 36 ಮಿಲಿಯ ವರ್ಷ ಗಳ ಹಿಂದೆ ಚಿಂಪಾಂಜಿಗಳು, ಬೊನಬೊ,ಗೊರಿಲ್ಲಾ ಗಿಬ್ಬನ್ ಪೂರ್ವಜ ಪ್ರಭೇದಗಳು ಹೋಮಿನಾಯ್ಡೆ ಎಂಬ ಮೇಲು ಕುಟುಂಬಕ್ಕೆ ಸೇರಿದ್ದವು ಈ ಹೋಮಿನಾಯ್ಡೆ ಮೇಲು ಕುಟುಂಬ ದಿಂದ ಹೋಮೋ ಕುಲದವರೆಗಿನ ವಿಕಸನ ನಡೆಯಲು ಸುಮಾರು 30 ಮಿಲಿಯ ವರ್ಷಗಳು ಬೇಕಾದವು ಹೋಮೊ ಕುಲದ ಉದಯವು ಮಾನವರಂತ ಜೀವಿಗಳನ್ನು ಭೂಮಿಯ ಮೇಲೆ ಸುಮಾರು 5.6 ಮಿಲಿಯ ವರ್ಷಗಳ ಹಿಂದೆ ಸೃಷ್ಟಿಸಿತು ಎಂದು ವಿಜ್ಞಾನಿಗಳು ಹೇಳುತ್ತಾರೆ". ಎಂದು ನನ್ನ ಪಾಠ ವನ್ನು ವಿವರಿಸಿದೆ ಆವಾಗ ವರ್ಗ ಕೊನೆಯಲ್ಲಿ  ಕುಳಿತ ಚಿಕಿತ್ಸಕ ಮನಸ್ಸಿನ ಹುಡುಗ ಒಂದು ಪ್ರಶ್ನೆ ಹೀಗೆ ಕೇಳಿದ ಸರ್ ನನ್ನ ದೊಂದು ಸಣ್ಣ  ಡೌಟ ಏನೆಂದರೆ   ಚಿಂಪಾಂಜಿಗಳು, ಬೊನಬೊ,ಗೊರಿಲ್ಲಾ ಗಿಬ್ಬನ್ ಪೂರ್ವಜ ಪ್ರಭೇದಗಳು ಮೂಲ ಒಂದೆ ಎನ್ನುವುದಾದರೆ (ಮಂಗನಿಂದ ಮಾನವ) ಆ ಎಲ್ಲಾ ಪ್ರಾಣಿಗಳು ಮಾನವರಾಗಲಿಲ್ಲ ಏಕೆ ?  ಈ ಪ್ರಶ್ನೆಗೆ ಡಾರ್ವಿನ ಸಿದ್ದಾಂತದಲ್ಲಿ ಉತ್ತರ ಇದೆ, ಆದರೂ ಮಗುವಿನ ಪ್ರಶ್ನೆಗೆ ನನ್ನ ಉತ್ತರವೂ ಬೇಕಲ್ಲವೆ ? ಅದನ್ನೆ ನಾನು ಬೇರೆ ರೂಪದಲ್ಲಿ ಹೇಳಲು ಪ್ರಯತ್ನಿಸಿದೆ ಅದೇನಂದರೆ   ಮಗು  "ಸೀನಪ್ಪನಿಗೆ ನಾಲ್ಕು ಮಕ್ಕಳು ಇವೆ ಎಂದು ನಾವು ಭಾವಿಸೋಣ ಮೊದಲ ವ್ಯಕ್ತಿಗೆ ಏನನ್ನು ಕಲಿಸದೆ ದನ ಕುರಿ ಕಾಯಲು ಹಚ್ಚಿದ ಇನ್ನೊಬ್ಬನನ್ನು ಎಸ್ ಎಲ್ ಸಿ ವರೆಗೆ ಓದಿಸಿ ಒಕ್ಕಲುತನ ಮಾಡಲು ಹಚ್ಚಿದ ಅಂತ ಇಟ್ಟುಕೊಳ್ಳೋಣ.   ಇನ್ನೊಬ್ಬನನ್ನು ಪಿ ಯು ಸಿ ವರೆಗೆ ಓದಿಸಿ ಸರಕಾರದಲ್ಲಿ ಒಂದು ನೌಕರಿ ಕೊಡಿಸಿದ ಎಂದು ಭಾವಿಸೋಣ ಕೊನೆಯವನನ್ನು ವಿಶ್ವವಿದ್ಯಾಲಯದವರೆಗೆ ಓದಿಸಿ ಪಿಎಚ್ ಡಿ ಪದವಿಯನ್ನು ಹೂಂದುವಂತೆ ಮಾಡಿ ಆತ ಪ್ರಾಧ್ಯಾಪಕ ನಂತರ ಉಪಕುಲಪತಿಯಾಗುವಂತೆ ಮಾಡಿದ ಎಂದು ಇಟ್ಟು ಕೊಳ್ಳುವ. ಈಗ ಹೇಳಿ ಈ ನಾಲ್ಕು ಜನರು ಒಂದೇ ತಂದೆಗೆ ಜನಿಸಿದ ಮಕ್ಕಳಾದರೂ ಈ ನಾಲ್ವರಲ್ಲಿ ವ್ಯತ್ಯಾಸ ಇರುತ್ತೊ ಇಲ್ಲವೂ ? ಈಗ ನಾನು ಹೇಳಿದ್ದು  ಒಂದು ತಲೆ ಮಾರಿನ ಕತೆ, ಹೀಗೆ ಲಕ್ಷಾಂತರ ವರ್ಷಗಳಿಂದ ನೆಡೆದ ಬಂದ ವಿಕಸನದ ಫಲವಾಗಿ ನಾವು ಸೃಷ್ಟಿ ಯಾಗಿದ್ದೇವೆ ಎಂದಾಗ ತಕ್ಷಣವೇ ಆ ವಿದ್ಯಾರ್ಥಿ ಹೇಳಿದ " ಸರ್ ನಾವು ಉಪ ಕುಲಪತಿ ಯಾದವನ ವಂಶಸ್ಥರಲ್ಲವೆ " ಎಂದಾಗ ಹುಡುಗ ರೆಲ್ಲ ಗೂಳ್ಳ ಎಂದು ನಗಹತ್ತಿದರು, ನಾನು ಪರ್ವತವೇರಿದ ತೇನಸಿಂಗನ ಹಾಗೆ ನಗುತ್ತಾ ಹೊರಬಂದೆ.

Tuesday, May 4, 2021

*ಮಾಸ್ಕ ಹಾಕಿ , ಕೈತೊಳೆದಾಗು ದೇವರು*

ಮಲಗಿ ಮಗ್ಗಲು ಬದಲಿಸಿ ನುಜ್ಜು 
ಗುಜ್ಜಾದೆ ಮಹೇಶ್ವರ, ನಿನ್ನ ಮಹಿಮೆ  
ಎಷ್ಟಂತ ನೋಡಲಿ ಹಾಸಿದ ಕೌದಿ 
ಮನೆಯಲಿ ನಾನಾಗಿರುವೆ ಖೈದಿ /

ರಜೆಯಿದ್ದು ಮಜವಿಲ್ಲದಾಗಿದೆ, ಸಜಾ 
ನಿಟ್ಟುಸಿರೊಂದೆ ಹರಿಯುತಿದೆ, ತಾಜಾ 
ಮುಗಿಯದ ಗೋಳು ಒಂದು, ಎರಡು.
ಸಾಲುಗಟ್ಟಿವೆಯಂತೆ ಮೂರು ನಾಲ್ಕು!

ತಿಂದುಂಡು ಆಗಿರುವೆ ದಂಡ ಪಿಂಡ
ತಿರಿದು ತಿನ್ನಲು ಯಾರಿಗಿಲ್ಲ ಸ್ವಾತಂತ್ರ್ಯ
ಮಾನವನಿಗೆ ಬಂತೀಗ ಪಾರತಂತ್ರ್ಯ
ಕೊರೋನಾದಿಂದಾಗಿಹನು ಅತಂತ್ರ /

ಆರೈಕೆ ಅಂಗಳದಲ್ಲಿ ಅಂಗಲಾಚುವಿಕೆ.
ಸಂಬಂಧಗಳಿಗೆ ಉಳಿಸುವ ಚಡಪಡಿಕೆ
ಸತ್ತ ಹೆಣದ ಮೇಲೆ ಸಂಪಾದನೆ ಸಾಕು
ನಿತ್ಯ ದುಡಿಯುವ ನಿಸ್ವಾರ್ಥ ಬೇಕು /

ವೈದ್ಯ ದಾದಿಯರೆ ನಮ್ಮ ನಿಜ ದೇವರು
ಲಾಟಿ ಬೀಸಿದ ಕರುಣೆ ಕೈಗಳೆ ದೇವರು
ಅಂತರ ಕಾಪಾಡಿದವರೆ ನಿಜ ಸಂತರು
ಮಾಸ್ಕ ಹಾಕಿ ಕೈತೊಳೆದಾಗು ದೇವರು/


Monday, May 3, 2021

* ಅಳಿಲು ಸೇವೆ *

              ಕೊರೋನಾ ಕಾಲದ ಈ ಸಂಕಟದ ಸಂದರ್ಭದಲ್ಲಿ ಏನಾದರೂ ಒಂದಷ್ಟು ಜಾಗೃತಿ ವಿಷಯ ಬರೆಯಬೇಕು ಅಂತ ಅನಿಸಿತು ಅದಕ್ಕೆ ನನ್ನ ಲೇಖನ ಪ್ರಾರಂಭಿಸುತ್ತಿದ್ಧೇನೆ. ಇದು ಒಂದು ಜಿಲ್ಲೆ, ರಾಜ್ಯ, ದೇಶದ ಸಮಸ್ಯೆ ಅಲ್ಲ ಇದು ಜಗತ್ತಿನ ಸಮಸ್ಯೆ ಹಾಗಾಗಿ ಯರೋ ಒಬ್ಬರನ್ನು ದೂರುತ್ತ ಕುಳಿತು ಕೊಳ್ಳುವ ಕಾಲುವು ಇದಲ್ಲ. ಅದು ನಮ್ಮ ಕೆಲಸವು ಅಲ್ಲ. ಹಾಗಾದರೆ ಒಬ್ಬ ನಿಷ್ಠಾವಂತ ಪ್ರಜೆಯಾಗಿ ನಮ್ಮ ಕರ್ತವ್ಯಗಳೇನು ಮತ್ತು ನನ್ನ ಕುಟುಂಬಕ್ಕಾಗಿ ನನ್ನ ಕರ್ತವ್ಯ ವೇನು ಎನ್ನುವುದು ನಮ್ಮ ಮೂಲ ಭೂತ ಪ್ರಶ್ನೆ, ಅದಕ್ಕಾಗಿ ಎರಡು ಮುಖ್ಯವಾದ ಘಟನೆ ಮುಂದೆ ಇಡಲು ಬಯಸುತ್ತೇನೆ .ಘಟನೆ ನಂಬರ ಒಂದು  ಈಗ್ಗೆ ಒಂದೆರಡು ವರ್ಷ ಗಳ ಹಿಂದೆ ನಮ್ಮ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾನ್ಯ ಶ್ರೀ ವಾಯ್ ಎಚ್ ಇಲಾಳ ಸರ್ ಎರಡು ದಿನಗಳ ಹಿಂದಷ್ಟೇ ನನಗೆ ಪೋನ್ ಮಾಡಿ ಕುಶಲೋಪರಿ ಮಾತಾಡಿ ಕೊನೆಗೆ  ಕೊರೋನಾದ ಕಟು ಸತ್ಯ ಬಿಚ್ಚಿಟ್ಟುರು "  ಆದಷ್ಟು ಹುಷಾರಾಗಿ ಇರಬೇಕು ಗೌಡ್ರೆ ,ಸಾಧ್ಯ ವಾದಷ್ಟು ಮನೆಯಲ್ಲಿ ಇರಿ ಅಕಸ್ಮಾತ್ ಹೊರಗೆ ಹೋಗುವ ಅನಿವಾರ್ಯತೆ ಬಂದರೆ ಮಾಸ್ಕ ಅಂತೂ ಬಿಡುವ ಹಾಗೆಯೇ ಇಲ್ಲ. ಅದೆಷ್ಟೋ ಜನ ಉಸಿರಾಡುವ ತೊಂದರೆ ಯಿಂದ ಸಾಯಿತಾ ಇದ್ದರೆ ಎಂದರು ಅದಕ್ಕೆ ನಾನು ಹೇಳದೆ ಸರ್ " ನೀವು ನಿವೃತ್ತಿ ಯಾದ ಮೇಲೆ ನಿಸರ್ಗದ ಮಡಿಲಿಗೆ ಹೋಗಿದ್ದರಿ ನಿಮಗೆ ಅಂತಹ ಯಾವುದೇ ತೊಂದರೆ ಇಲ್ಲ ಬಿಡಿ (ತೋಟದಲ್ಲಿ ವಾಸವಾಗಿದ್ದಾರೆ) ಅದೆಲ್ಲ  ನಗರ ವಾಸಿಗಳಿಗೆ ಅಂದೆ ಅದಕ್ಕೆ ಅವರು ಹೇಳಿದರು " ಕೇವಲ ನಮ್ಮದು  ಅಲ್ಲ ಗೌಡ್ರೆ ನಮ್ಮವರೂ ಕೂಡಾ  ಚೆನ್ನಾಗಿ ಇರಬೇಕು ಅಲ್ವಾ ಅದಕ್ಕೆ ಹುಷಾರಾಗಿ ಎಂದರು.ಏಕೆ ನಾನು ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಿದೆ ಎಂದರೆ ಪ್ರತಿಯೊಬ್ಬರಿಗೂ ತನ್ನದೇ ಅದ ಸರ್ಕಲ್ ಅಂತ ಇರುತ್ತೆ, ಅದರೊಳಗೊಂದು ಜಾಗೃತಿ ಬೀಜ ಹಾಕಿದರೆ ಅದು ಹೆಮ್ಮರವಾಗಿ ಬೆಳೆದು ಖಂಡಿತವಾಗಿಯೂ ಹೂ ಹಣ್ಣು ಕೊಡದೆ ಇರದು .ಮಾನ್ಯ ಶ್ರೀ ಇಲಾಳ ಸರ್ ಗೆ ನಮ್ಮಂತವರಿಂದ ಏನು ಆಗಬೇಕಿಲ್ಲ ಆದರೂ ಕೊಡ ಪೋನ್ ಹಚ್ಚಿ ಎಚ್ಚರಿಸಿದರು , ಕೇವಲ ನನಗೆ ಅಷ್ಟೇ ಅಲ್ಲ ತಮ್ಮ ಸರ್ಕಲ್ ಗಳಲ್ಲಿ ಬರುವವರಿಗೆ ಪೋನ್ ಹಚ್ಚಿದ ಬಗ್ಗೆಯೂ ಹೇಳಿದರು ಇದು ಜಾಗೃತಿ ಅಲ್ಲದೆ ಏನು ಹೇಳಿ ? ಇನ್ನೂಂದು ಘಟನೆ ಹೇಳಲು ಬಯಸುತ್ತೇನೆ ಈ ಪೂರ್ವ ದಲ್ಲಿ ನಾನು ಪ್ರೌಢ ಶಾಲೆ  ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ .ಅಲ್ಲಿ ಒಬ್ಬರು ಆದರ್ಶ ಗಣಿತ ಶಿಕ್ಷಕಿ ಇದ್ದರು.ಈ ಪದ ನಾನು ಏಕೆ ಬಳಸಿದೆ ಅಂದರೆ ನನ್ನ 27 ವರ್ಷದ ಸೇವೆಯಲ್ಲಿ ಅಂತಹ ಗುರಮಾತೆಯನ್ನು ನಾನು ಕಂಡಿಲ್ಲ ಅವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ  ಸಿಕ್ಕಿದೆ ಆ ಮಾತು ಬೇರೆ. ಈಗ ಅವರು ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಬಗ್ಗೆ ಹೊಗಳುತ್ತೇನೆ ಅಂತ ಅಲ್ಲ ಸುಮಾರು ಇಪ್ಪತ್ತೈದು ವರ್ಷಗಳಿಂದ ಒಂದೆ ಊರಿನಲ್ಲಿ ಸೇವೆ ಸಲ್ಲಿಸಿ ಇಡಿ ಊರಿನ ಮನ್ನಣೆ ಪಡೆದಿದ್ದಾರೆ ಅಂತವರ ಬಗ್ಗೆ ಹೇಳುವುದೆಂದರೆ ವಜ್ರ ಹೊಳೆಯುತ್ತದೆ ಎಂದು ಹೇಳಲು ಹೊರಟ ಹಾಗೆ.ಇರಲಿ ಮುಖ್ಯ ವಿಷಯಕ್ಕೆ ಬರುತ್ತೇನೆ ಇಂದು ಬಹುತೇಕ ಜನ ಫೇಸ ಬುಕ್ ಬಳಸುತ್ತಾರೆ ಮತ್ತು ತಮ್ಮದೆ ಪ್ರೊಫೈಲ್ ಇಟ್ಟು ಕೊಳ್ಳುತ್ತಾರೆ .ಇಟ್ಟುಕೊಳ್ಳಿಲಿ ಬಿಡಿ, ಅದು ಅವರ ವೈಯಕ್ತಿಕ ವಿಚಾರ ಅದನ್ನು ಯಾರು ಪ್ರಶ್ನೆ 

ಮಾಡಲು ಬರುವುದಿಲ್ಲ ಆದರೆ ಈಗ ನಾನು ಇದರ ಬಗ್ಗೆ ಏಕೆ ಹೇಳುತ್ತಿದ್ದೇನೆ ಎಂದರೆ ಇವತ್ತು ಅವರು ಪಾರವರ್ಡ ಮಾಡಿದ ಸಂದೇಶ ಮನಕಲಕುವಂತೆ ಇತ್ತು ಯಾವುದೇ ಪೂರ್ವಾಗ್ರಹ ಇಲ್ಲದೆ ಸಾಮಾಜಿಕ ಚಿಂತನೆ ಒಳಗೊಂಡಿತ್ತು. ಇನ್ನೂಂದು ,ಅವರು ಇವತ್ತು ಇಟ್ಟ ಪ್ರೊಫೈಲ್ ನನ್ನ ಮೇಲೆ ಅಗಾದ ಪರಿಣಾಮ ಬೀರಿತು. ತಕ್ಷಣವೇ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆ ಆ ಮಾತು ಬೇರೆ.  ಆ ಪ್ರೊಫೈಲ್ ಸಂದೇಶ ಇಷ್ಟೇ   ಜಗತ್ತಿಗೆ ಅಂದರೆ ಮನುಕುಲಕ್ಕೆ ಗಂಡಾಂತರ ಬಂದಾಗ ಮಾನವೀಯತೆಯನ್ನು ಹೊಂದಿರುವ ನಾಗರಿಕರು ಹೇಗೆ ವರ್ತಿಸಬೇಕೆನ್ನುವ ಸಂದೇಶ ಅದರಲ್ಲಿದೆ . ಒಟ್ಟಾರೆ ನಾವುಗಳು ಯಾವ, ಯಾವದೆ ಸಂದೇಶವನ್ನು ರವಾನೆ ಮಾಡದೆ ಒಂದಷ್ಟು ಜಾಗೃತಿ ಸಂದೇಶಗಳನ್ನು ಕಳುಹಿಸಿ ಸಂಕಷ್ಟ ದಲ್ಲಿರುವ ಮನಸ್ಸುಗಳಿಗೆ ಧೈರ್ಯ ತುಂಬುವ ಮತ್ತು ಜಾಗೃತಿ ಯುಂಟು ಮಾಡುವ ಅಳಿಲು ಸೇವೆ ನಮ್ಮ ದಾಗಬೇಕೆಂಬುದು ನನ್ನ ಬರಹದ ಉದ್ದೇಶ. ವಂದನೆಗಳು ಎಲ್ಲರಿಗೂ . ಜಾಗೃತಿ ಯಿಂದ ಇದ್ದು ಈ ಸಂಕಷ್ಟದ ಸಂದರ್ಭದಲ್ಲಿ ಪಾರಾಗೋಣ.

Sunday, May 2, 2021

* ಗೆದ್ದೆತ್ತಿನ ಬಾಲ ಹಿಡಿಯುವುದು *

            ಚುನಾವಣೆ ಅಂದರೆ ಹೀಗೆ , ನನಗೆ ಒಂದು ಅಪರೂಪದ ಘಟನೆ ಹಂಚಿಕೊಳ್ಳುವ ಮನಸ್ಸಾಯಿತು . ಅದೇನಂದರೆ ಸುಮಾರು 30 ವರ್ಷದ ಹಿಂದಿನ ಮಾತು ಪ್ರಕಾಶ ಎಂಬ ಹುಡುಗ ಇದ್ದ, ಆತ ಡಿಗ್ರಿ ಓದುತ್ತಿದ್ದ ಸಮಯ. ಎಲೆಕ್ಷನ ಪ್ರಚಾರ ಜೋರಾಗಿಯೆ ನೆಡೆಯುತ್ತಿತ್ತು ಹಾಗಾಗಿ  ಪಕ್ಷದವರು ಪ್ರಚಾರಕ್ಕಾಗಿ ಕಾಲೇಜು ಹುಡುಗರನ್ನು ಬಳಸಿಕೊಳ್ಳುತ್ತಿದ್ದರು ಪರಿಣಾಮ ಈ ವಿದ್ಯಾರ್ಥಿಯನ್ನು  ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು( ಈಗ ಆ ಪಾರ್ಟಿ ಹೆಸರು ಬೇಡ) ಪಾರ್ಟಿ ಮೀಟಿಂಗ್ ಗೂ ಕರೆಯುತ್ತಿದ್ದರು, ಹೋಗುತ್ತಿದ್ದರು ಪ್ರಚಾರ ಎಷ್ಟರಮಟ್ಟಗೆ ಮಾಡಿದರೊ ಗೊತ್ತಿಲ್ಲ . ಊಟ, ಚಹಾ ಪಾನಿ ಟಾಯಂ ಪಾಸ್ ಮಾತ್ರ ಆಗುತ್ತಿತ್ತು ಇಲೆಕ್ಷನ್ ಜೋರಾಗಿ ನಡೆಯಿತು ಮತದಾನ ಮುಗಿದ ಮೇಲೆ  ಎಲ್ಲರ ಚಿತ್ತ ಎಣಕೆಯತ್ತ ಎನ್ನವ ಹಾಗೆ  ಎಣಿಕೆ ದಿನ ಬಂದೆ ಬಿಟ್ಟಿತು.ಪಾರ್ಟಿಗಳ ಕಾರ್ಯ ಕರ್ತರು ಮಹಿಂದ್ರ ಗಾಡಿ ಮಾಡಿ ಕರೆದುಕೊಂಡು ಹೋದರು. ಅವನಿಗೂ ಉದ್ಯೋಗ ಇರಲಿಲ್ಲ ಬೇಸಿಗೆ ಬೇರೆ,ಕೆಲಸ ಇರಲಿಲ್ಲ,  ಇಲ್ಲದಿದ್ದರೆ ಅವರ ಅಪ್ಪ  ಅವನ್ನು  ಕಳುಹಿಸುವ ಆಸಾಮಿಯೇನಲ್ಲ ಹೊಲದ ದಾರಿ ಹಿಡಿಯಿಸಿ ಬಿಡುತ್ತಿದ್ದ . ಅವರ ಊರಿನಲ್ಲಿ  ಮಸಾರಿ ಜಮೀನು , ಬೇಸಿಗೆಯಲ್ಲಿ ರೈತಾಪಿ ಮಕ್ಕಳ ಕೆಲಸ  ಏನಂದರೆ ಎತ್ತಿನ ಚಾಕ್ರಿ ಮಾಡಬೇಕು ಮಾಡಿದರೆ ಮುಗಿಯಿತು.ಅವರು ರಾಜರೆ ಆವಾಗ . ಸರಿ ಎಣಿಕೆಗೆ ಹೋಗಬೇಕು ಎಂದು ಮುಂಜಾನೆಯೆ ಎತ್ತುಗಳಿಗೆ ಹೊಟ್ಟು ಮೇವು ತಂದು ಕೊರೆದು ರೆಡಿ ಮಾಡಿದ ಇನ್ನೇನು ಅವನ ಅವಶ್ಯಕತೆ ಮನೆಯವರಗೆ ಇಲ್ಲ ಅನ್ನುವಂತೆ  ಮನವರಿಕೆ ಯಾದ ಮೇಲೆ ಎಣಿಕೆಗೆ ಹೊರಟು ನಿಂತ, ಆಗ ತಾನು ಒಬ್ಬ ನಿಷ್ಠಾವಂತ ಕಾರ್ಯ ಕರ್ತನಂತೆ ಪೋಜು ನೀಡಿದ. ತನ್ನಂತೆ ತಯಾರದ ಯುವಕರ ಜೊತೆ ವಾಹನವೇರಿ ಎಣಿಕೆ ಕೇಂದ್ರದ ದೊರದ ಸ್ಥಳದಲ್ಲಿ ಟಿಕಾಣಿ ಹೂಡಿದರು ಎಣಿಕೆ ಸುತ್ತುಗಳು ಪ್ರಾರಂಭವಾಯಿತು ಒಂದು, ಎರಡು ಹೀಗೆ ಮುಂದುವರೆಯುತ್ತಿತ್ತು ತಮ್ಮ ಅಭ್ಯರ್ಥಿಯ ಮತ ಲೀಡಾದಾಗ ಇವರು ಕೇಕೇ ಹಾಕುತ್ತಿದ್ದರು. ಇನ್ನೊಂದು ಅಭ್ಯರ್ಥಿಯ ಲೀಡ ಬಂದಾಗ ಅವರು ಕೆಕೆ ,ಜೈಕಾರ ಹಾಕುತ್ತಿದ್ದರು .ನೆಕ್ ಟು ನೇಕ್ ಪೈಟ ಹೀಗೆ ಏರಿಳಿತ ನಡೆಯುತ್ತಿತ್ತು ಇನ್ನೇನು ಕೊನೆಯ ಸುತ್ತಿನ ಎಣಿಕೆ ಎಲ್ಲರಿಗೂ  ಕಾತರ ಇವನ ಅಭ್ಯರ್ಥಿಯೆ ಗೆಲ್ಲಬೇಕು ಗುಲಾಲು ಹಾಕಿಕೊಳ್ಳಬೇಕು ಎನ್ನುವ ಉತ್ಸಾಹ ದಲ್ಲಿ ಇದ್ದರು ಅ ಕಾಲ ಬಂದಾಗ ಒಂದು ಗೂಂದಲು ಸೃಷ್ಟಿಯಾಯಿತು, ಇವರ ಅಭ್ಯರ್ಥಿಯು ಗೆದ್ದಂತೆ ಸುದ್ದಿಯ ಹರಿದಾಡಿ ಜೈಕಾರದ ಮೇಲೆ ಜೈಕಾರ ಸಮೀಪ ಸ್ಪರ್ಧೆಯನ್ನು ಕೆಲವರು ನಿಂದಿಸುವ ಕೆಲಸ ಮಾಡಿದರು  ಇವರು ಮಾತ್ರ ಅಂತಹ ನಿಂದಿಸುವ ಕೆಲಸ ಮಾಡಲಿಲ್ಲ ಯಾಕೆಂದರೆ ಅಷ್ಟು ಹಚ್ಚಿಕೊಂಡು ರಾಜಕೀಯ ಮಾಡುವವರು ಇವನಾಗಿರಲಿಲ್ಲ.ಆ ಮಾತು  ಹಾಗಿರಲಿ ಇವರ ಪಕ್ಕದಲ್ಲಿ ಇನ್ನೊಂದು ಊರಿನಿಂದ ಬಂದ ಕಾರ್ಯಕರ್ತರು ಸೇರಿದ್ದರು ಅವರಲ್ಲಿ ಒಬ್ಬಾತ (ಅವನ ಬಗ್ಗೆ ಇವರಿಗೆ ಪರಿಚಯ ಇರಲಿಲ್ಲ ಆ ಮಾತು ಬೇರೆ) ಆತ ಇವರಿಗಿಂತ ಇವರ ಅಭ್ಯರ್ಥಿಯನ್ಷು ಹಾಡಿ ಹೊಗಳಿದ ಜೈಕಾರ ಹಾಕಿದ ಕುಣಿದು ಕುಪ್ಪಳಿಸಿದ .ಅವನಂದುಕೊಂಡ, ಅಭಿಮಾನ ಅಂದರೆ ಹೀಗೆ  ಇರಬೇಕು... ನಾವು ಇದ್ದೇವೆ ಗಾಡಿಗೆ ಮೂಲಾಗಿ ಬಂದಿದ್ದೇವೆ ಎಂದುಕೊಂಡ. ಐದು ನಿಮಿಷ ಕಳೆದಿರಲಿಲ್ಲ ವಿಜಯದ ಚಿತ್ರಣ ಬದಲಾಗಿ ಹೋಗಿತ್ತು  ಪ್ರಕಾಶನ ಅಭ್ಯರ್ಥಿಯೆ ಸೋತಿದ್ದ.  ಪ್ರಕಾಶನ ತಂಡ ಈಗ ಸೋತ ಪಾರ್ಟಿ  ಕಾರ್ಯಕರ್ತರು.  ಒಂದು ಕಡೆ ಚಾ ಕುಡಿಯುತ್ತಾ ಅಸಾಹಯಕರಾಗಿ ನಿಂತರು. ಇಲ್ಲಿ ಯವರೆಗೆ ಇವರ ಅಭ್ಯರ್ಥಿಯನ್ಷು ಹಾಡಿ ಹೊಗಳಿದೆ  ಅಂತ ಹೇಳಿದೆ ಅಲ್ಲವಾ ಆತ ಈಗ ಸಂಪೂರ್ಣ ಬದಲಾಗಿ ಹೋಗಿದ್ದ (ಇವರ ಅಭ್ಯರ್ಥಿಯನ್ನು ಬೈದ, ಏನು ಮಾಡುವ ಹಾಗಿಲ್ಲ)  ಈಗ ನಿಜವಾಗಿ ಗೆದ್ದ ಅಭ್ಯರ್ಥಿಯ ಕಡೆ ಸರಿದು ಜೈಕಾರ ಹಾಕಲು ಪ್ರಾರಂಭಿಸಿದ, ಕುಣಿದು ಕುಪ್ಪಳಿಸಿದ ಸಂಭ್ರಮದಲ್ಲಿ ಮುಳುಗಿದ ಯಾರೊ ಒಬ್ಬ ಹೂಮಾಲೆ ತಂದೂ ಹಾಕಿದರು.ಗುಲಾಲ ಬೇರೆ ಗುರುತು ಹಿಡಿಯುವವರು ಯಾರು ?. ಆಗ ಇವನಿಗೆ ತಾನು ಓದಿದ ಷೇಕ್ಸ್ ಪಿಯರ್ ನ ಮಾತು ನೆನಪಿಗ ಬಂದಿತು " Mob has no mind" ಎಂದು. ಅದೆ ತಾನೆ ಓದಿದ ಜ್ಯೂಲಿಯಸ್ ಸೀಜರನ ನಾಟಕ ನೆನಪಿಗೆ ಬಂತು ,ಬ್ರೂಟಸ್ ಸೀಜರನನ್ನು ಕೊಂದು ಹೇಳ್ತಾನೆ " ನಾನು ಸೀಜರನ ನನ್ನು ಯಾಕೆ ಕೊಂದೆ ಎಂದರೆ ಅವನೊಬ್ಬ ಸರ್ವಾಧಿಕಾರಿ ಆಗಿದ್ದ ಹಾಗಾಗಿ ಕೊಂದೆ" ಎಂದಾಗ ಜನ ಚಪ್ಪಾಳೆ ಹೊಡೆಯುತ್ತಾರೆ .ಅದೆ ಮಾರ್ಕ ಅಂಟೋನಿ ಬಂದು ಸೀಜರನನ್ನು ಗುಣಗಾನ ಮಾಡುತ್ತಾರೆ ಆವಾಗ ಮತ್ತೆ  ಆದೆ ಜನ ಚಪ್ಪಾಳೆ ಹೊಡೆಯುತ್ತಾರೆ ಇದೆ ಅಲ್ಲವೆ ಜನ ಸಮೂಹ. ಅದೇನೆ ಇರಲಿ ಅಪ್ಪನನ್ನು ಒಪ್ಪಿಸಿ ಬಂದ ಪ್ರಕಾಶ  ಸಪ್ಪೆ ಮಾಾರಿ  ಮಾಡಿಕೊಂಡು ಮನೆ ದಾರಿ ಹಿಡಿಯಬೇಕಾಯಿತು. ಇದೆ ಅಲ್ಲವೆ ಜಗತ್ತು .ಹದಿನಾರನೆ ಶತಮಾನದಲ್ಲಿಯೂ ಇತ್ತು ,ಇಗೂ ಇದೆ. ಮುಂದೆಯೊ ಇರುತ್ತೆ ಬಿಡಿ.ಒಟ್ಟಾರೆ ರಾಜಕೀಯ ಅಂಟಿಸಿಕೊಳ್ಳದೆ ಬೆಳೆದು ಬಂದದ್ದೆ ಈತನ ಒಂದು ಸಾಧನೆ ನೀವೇನಂತಿರಿ .... 

 


 

* ನಗಬೇಕು ಗೆಳೆಯ ನಗಬೇಕು *

ಅಳು ನುಂಗಿ ನಕ್ಕು ನಗಿಸಬೇಕು 
ಸೆಳುವು ನೋಡಿ ಸರಿಯಬೇಕು
ಆಳ ನೋಡಿ ಇಳಿಯಬೇಕು ಗೆಳೆಯ//

ಬಾಳೊಂದು ಗಿಲಕಿ ಕಲಕಬೇಕು 
ಅಲುಗಾಡಿಸಿ ಶಬ್ದ ಹೊರಡಿಸಬೇಕು
ಇಂಪಾದ ದ್ವನಿ ಆಸ್ವಾದಿಬೇಕು ಗೆಳೆಯ//

ಹುಸಿನಗೆಯ ಹೊಗೆ ಕಂಡು ಹಿಡಿಬೇಕು
ಕಸಗೂಡಿಸುವವರು ಮನಗಾನಬೇಕು
ನಸುನಕ್ಕು ಕಸಕೀಳಬೇಕು ಗೆಳೆಯ//

ಪೈಸೆ ಪೈಸೆಗೂ ಲೆಕ್ಕವಿಡಬೇಕು
ಕೈಲಾಗದವರೆ ನಗಲೇಕೆ ರೊಕ್ಕ ಬೇಕು?
ಮೈಚಳಿ ಬಿಟ್ಟು ನಗಬೇಕು ಗೆಳೆಯ //

ನಗುವಾಗ ಮರೆಯದೆ ನಗಬೇಕು 
ಅಳುವವರ ಮರೆಸಿ ನಗಿಸಬೇಕು
ನಕ್ಕರಾರು ನೂಂದಬಾರದು ಗೆಳೆಯ// 

ನಾ ನಕ್ಕರೆ ಹಾಲು ಸಕ್ಕರೆಯಾಗಬೇಕು
ನನ್ನ ವೈರಿಯೂ ತಲೆ ಅಲ್ಲಾಡಿಸಬೇಕು
ಹಾರಾಡಿ ಕುಣಿದಾಡಬೇಕು ಗೆಳೆಯ//

           ಬಸನಗೌಡ ಗೌಡರ

Saturday, May 1, 2021

* ದಾರಿ ತಪ್ಪಿದ ಮಗ *

              ಅದೊಂದು ಅವಿಭಕ್ತ ಕುಟುಂಬ ಏಳೆಂಟು ಎಕರೆ ಜಮೀನು ಅನ್ನಕ್ಕೇನು ಕೊರತೆ ಇರಲಿಲ್ಲ ಹನಮಂತನಿಗೆ ಮೂರು ಜನ ಮಕ್ಕಳು ಮೊದಲನೆಯವನು ಮಲ್ಲಪ್ಪ ತಂದೆಯ ಕೃಷಿ ಕೆಲಸದಲ್ಲಿ ತೊಡಗಿದ ಹೀಗಾಗಿ ಅಕ್ಷರ ಜ್ಞಾನ ಪಡೆಯಲು ಸಾಧ್ಯವಾಗಲಿಲ್ಲ, ಆದರೇನಂತೆ ವ್ಯವಸಾಯದಲ್ಲಿ ಪರಿಣಿತ ಮನೆತುಂಬಾ ಕಾಳು ಕಡಿ ,ಊಟಕ್ಕೇನು ಕೊರತೆ ಇಲ್ಲ. ಇನ್ನು ಎರಡನೆಯ ಮಗ ಕಲ್ಲಪ್ಪ ನಾಲ್ಕು ಕ್ಲಾಸ್ ದಾಟುವಾಗಲೆ ಸುಸ್ತಾಗಿ ಶಿಕ್ಷಣಕ್ಕೆ ಗುಡ್  ಬಾಯಿ ಹೇಳಿದ. ಆದರೆ ಅಷ್ಟೇ ಭೂಮಿಯಲ್ಲಿ ಎಲ್ಲರೂ ಮಾಡುವದಾದರೊ ಏನು ಅಪ್ಪ ಆತನಿಗೆ ಇಪ್ಪತ್ತು ಕುರಿಗಳನ್ನು ಕೊಡಿಸಿ ಅಡವಿಯ ದಾರಿ ಹಿಡಿಸಿದ, ಕುರಿ ಕಾಯುವುದು ಎಂದರೆ ಮೂಗು ಮುರಿಯುವ ಜನಗಳ ಮುಂದೆ( ಆಸ್ಟ್ರೇಲಿಯಾ, ಹಾಲಂಡದಂತ ದೇಶಗಳಲ್ಲಿ ಪಶು ಪಾಲಕರೆ ಕಾರಿನಲ್ಲ ಅಡ್ಡಾಡುತ್ತರೆ ಆ ಮಾತು ಬೇರೆ )ಆತ ವಿಕ್ರಮ ಸಾಧಿಸಿದ್ದ ಇಪ್ಪತ್ತು ನಲವತ್ತಾಗಿ ,ನಲವತ್ತು ಎಂಭತ್ತಾಗಿ ನೂರಕ್ಕಿಂತ ಅಧಿಕ ಕುರಿಗಳ ಒಡೆಯನಾಗಿದ್ದ ಅಲ್ಲದೆ ಎರಡು ಆಳು ಇಟ್ಟು ವೈಜ್ಞಾನಿಕವಾಗಿ ಕುರಿ ಸಾಕಣಿಕೆ ಮಾಡಿದ , ಕುರಿಗಳಗೆ ರೋಗ ಬಂದರೆ ತಾನೆ ಅವುಗಳಿಗೆ ಉಪಚರಿಸಿ ಔಷದ ನೀಡುವ ಪರೀಣಿತಿ ಸಾಧಿಸಿದ.ಆದಾಯ ದ್ವಿಗುಣವಾಗಿ ಯಾರಾದರು ಹೊಲ ಮಾರಲು ತಯಾರಿಯಾದರೆ ಎಲ್ಲರಿಗಿಂತ ಹೆಚ್ಚು ನೀಡಿ ಖರೀದೀಸುವ ಹಂತಕ್ಕೆ ಬಂದಿತು ಕುಟುಂಬ. ಇನ್ನು ಮೂರನೆ ಮಗನೆ ಹಾಲಪ್ಪ ,ಕೊನೆಯವನೆಂದರೆ ಕೇಳಬೇಕೆ ಅತಿಯಾದ ಪ್ರೀತಿ ಹಾಗಾಗಿ ಅವನು ಸರಿಯಾಗಿ ಓದಬೇಕು ಮನೆ ಗೌರವ ಎತ್ತಿ ಹಿಡಿಯಬೇಕು ಎನ್ನುವುದು ಎಲ್ಲರ ಮಹದಾಸೆ . ಸರಕಾರಿ ಹುದ್ದೆ ಪಡೆಯಲಿ ಇಲ್ಲವೆ ಯಾವುದಾದರು ಎತ್ತರದ ಸ್ಥಾನವೇರಲಿ ಎಂದು ಕಾಲೇಜು ಮೆಟ್ಟಿಲನ್ನು ತುಳಿಸಿದರು.ಕಾಲೇಜಿನಲ್ಲಿ ಹೇಳಿ ಕೊಳ್ಳುವ ಸಾಧನೆಯನ್ನು ಮಾಡದೆ ಹೋದರು ಪದವಿ ಪಡೆಯಲು ಸಫಲನಾಗಿದ್ದ.ಕೇವಲ ಪಾಸಿಂಗ್ ಸರ್ಟಿಫಿಕೇಟ್ ನಿಂದ ಯಾವ ಸರಕಾರಿ ಹುದ್ದೆ ಸಿಗುತ್ತೆ  ಹೇಳಿ ? ಮನೆಯಲ್ಲಿ ಹಣಕ್ಕೂ ಕೂರತೆಯಿಲ್ಲ, ಆಳುಕಾಳುಗಳಿಗೂ ಕೊರತೆ ಇಲ್ಲ .ಇದೆ ಅವಧಿಯಲ್ಲಿ ಐದು ವರ್ಷಗಳಿಗೆ ಬರುವ ತಾಲೂಕು ಪಂಚಾಯತ್  ಚುನಾವಣೆಗಳು ಹತ್ತಿರ ಬರುತ್ತಿದ್ದವು ಇದೆ ಸಮಯದಲ್ಲಿ  ಎಲ್ಲರ ಕಣ್ಣಿಗೆ ರಾಚಿದವನೆ ಹಾಲಪ್ಪ. ಚುನಾವಣೆ ಗಳೆಂದರೆ ಸಾಮಾನ್ಯವೆ ಹಿಂದೆ ಮುಂದೆ ಸುಳಿದಾಡದವರನ್ನು ಚನ್ನಾಗಿಯೇ ಸಾಕಬೇಕು, ಸಾಕಲು ನೀರನಂತೆ ಹಣ ಹರಿಸಬೇಕು ಅಂತಹ ಹಣದ ಕೊರತೆ ಇಲ್ಲದೆ ಹೋದರು ಜನರನ್ನು ಕೊಡಿಸಬೇಕಲ್ಲವೆ.! ಜನರನ್ನು ಸೇರಿಸಲು ಪ್ರಯತ್ನಿಸಿ ಸೋತಂತೆ ಭಾಸವಾದರು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲು ಹೇಗ ಸಾಧ್ಯ ?  ಮುಂದೆ ಮುಂದೆ ಸಾಗಿದ.ಚುನಾವಣೆ ನಡೆದವು  ಪರಿಣಾಮವಾಗಿ ತಾಲೂಕಾ ಪಂಚಾಯತ್ ಸದಸ್ಯನಾಗಿ ಆಯ್ಕೆ ಯಾಗಿದ್ದ. ಬರಿ ಆರಿಸಿ ಬರುವುದು ಮುಖ್ಯವಲ್ಲ  ಅಧಿಕಾರ ಬಂದ ಮೇಲೆ ಅದನ್ನು ಬಳಸಿಕೊಳ್ಳವ ಇಲ್ಲವೆ  ಉಳಿಸಿಕೊಳ್ಳುವ ಜಾಣ್ಮೆಯಿಂದ ಆತನ ಭವಿಷ್ಯತ್ ನಿರ್ಧಾರ ವಾಗುತ್ತದೆ.ಇರಲಿ ಇವನಿಂದ ಕೆಲಸ ಬಯಸಿ ಬರುವ ಜನರು ಅದನ್ನು ಮಾಡಿಕೊಳ್ಳಲು ಹಾಲಪ್ಪನನ್ನು ಪಬ್ ಬಾರ ದಾರಿ ಹಿಡಿಸಿದರು. ಆರಂಭದಲ್ಲಿ ಹಣ ಖರ್ಚಾಗದೆ ಸಿಗುವ ಉಲ್ಲಾಸ, ವಿಲಾಸ ಜೀವನ ಮಜವಾಗಿ ಖಂಡಿತು.ಈ ಮೋಜು ಮಸ್ತಿ ಎಲ್ಲಾ ಕಾಲದಲ್ಲಿ ಹೇಗೆ ಸಿಗುತ್ತದೆ ? ಈ ಮೋಜಿನ ಜೀವನಕ್ಕೆ ಹೊಂದಿಕೊಂಡಿದ್ದ ಹಾಲಪ್ಪ ಕ್ರಮೇಣ ಇದನ್ನು ತನ್ನ ಸ್ವಂತ ಹಣದಲ್ಲಿಯೂ ಪ್ರಾರಂಭಿಸಿದ .ಅಲ್ಪ ,ಸ್ವಲ್ಪ ಕೆಲಸದ ಜನ ಇವನನ್ನು ಸಾಹೇಬರೆಂದು ಅಟ್ಟಕ್ಕೇರಿಸಿ ಅನುಕೂಲ ಪಡೆಯಲು ಪ್ರರಂಭಿಸಿದಾಗ ನಿರಾಕರಿಸಲು ಹೇಗೆ  ಸಾಧ್ಯ ಸ್ವಾಭಿಮಾನಿ ಹಾಲಪ್ಪ ನೀರಿನಂತೆ ಹಣ ಖರ್ಚು ಮಾಡಿದ ಅಣ್ಣಂದಿರ ಕಾರ್ಯ ದಲ್ಲಿ  ಸಹಾಯ ಮಾಡಲು ಆತನಿಗೆ ವ್ಯವಧಾನ ಹೇಗೆ ಬಂದೀತು ? ಇದಕ್ಕೂ ಹೆಚ್ಚಾಗಿ ತನ್ನ ತಾಲೂಕು ಪಂಚಾಯತ್ ವ್ಯಾಪ್ತಿಯ ಮಲ್ಲಾಪೂರದ ಗ್ರಾಮ ಪಂಚಾಯತ್ ಸದಸ್ಯೆ, ವಿಧವೆ ನಾಗವ್ವಳೊಂದಿಗೆ ಸಂಬಂಧ ಬೆಳೆಸಿದ ಆರಂಭದಲ್ಲಿ ಮಗ ಚಿಕ್ಕವನಿದ್ದಾಗ ನಾಗವ್ವ ಈತನನ್ನು ರಾಜನಂತೆ ನೋಡಿಕೊಂಡಳು ಅಲ್ಲದೆ ಮಗನ ನೌಕರಿಗಾಗಿ ಇವನಿಂದ ಲಕ್ಷಾಂತರ ಸಹಾಯ ಪಡೆದು ತನ್ನ ಮನೆತನ ಗಟ್ಟಿಗೊಳಿಸಿದಳು.ಈ ಸುದ್ದಿ ಕಾಡ್ಗಿಚ್ಚಿನಂತೆ ತನ್ನ  ಮನೆ ತಲುಪಲು ಬಹಳ ಅವಧಿ ತೆಗೆದು ಕೊಳ್ಳಲಿಲ್ಲ ಕೇವಲ ಮನೆಯಲ್ಲದೆ ಮಡದಿಗೂ ತಲುಪಿ ಸಂಸಾರದಲ್ಲಿ ಬಿರುಕು ಪ್ರಾರಂಭವಾಯಿತು. ಹೆಂಡತಿಯ ತಮ್ಮ ಶ್ರೀಧರ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಹೇಗಾದರೂ ಮಾಡಿ ಅಕ್ಕನ ಬಾಳನ್ನು ಸರಿಪಡಿಸಲು ಹರಸಾಹಸ ಪಟ್ಟ.ಒಂದು ದಿನ ತಾಲೂಕು ಬಸ್ ನಿಲ್ದಾಣದಲ್ಲಿ ಹಾಲಪ್ಪ ಹೋಗುತ್ತಿದ್ದ. ಶ್ರೀ ಧರನಿಗೆ ಮಾವನನ್ನು ಗುರುತು ಹಿಡಿಯಲು ಬಹಳ ಸಮಯವೇನು ಹಿಡಿಯಲಿಲ್ಲ ಸಮೀಪ ಹೋದಾಗ ಸತ್ಯದರ್ಶನವಾದ್ದೆ ಬೇರೆ .ಯಾರ ಯಾರದೊ ಪಾರ್ಟಿ ಹಗಲು ಹೊತ್ತಿನಲ್ಲೆ ಕುದುರೆ ಏರಿದ್ದ ಶ್ರೀಧರ ಮಾವನಿಗೆ ನಮಸ್ಕಾರ ತಿಳಿಸಿ " ಮಾವನವರೆ ನಾನು ನಿಮಗಿಂತ ಸಣ್ಣವ ಬುದ್ದಿ ಹೇಳಬಾರದು ಆದರೂ ಅಕ್ಕನ ಬಾಳು ಹಾಳಾಗ ಬಾರದೆಂದು ತಮ್ಮಲ್ಲಿ ಶಿರಬಾಗಿ ಕೇಳುವೆ.ಅಕ್ಕನೊಂದಿಗೆ ಹೊಂದಿ ತಮ್ಮ ಮುದ್ದಾದ ಮಗುವಿನೊಂದಿಗೆ ಸುಂದರವಾದ ಬದುಕು ಕಟ್ಟಿಕೊಳ್ಳಿ ಎಂದು ಕೈಮುಗಿದ. ಶ್ರೀಧರ " ನಾನು ಈಗ ಬಹು ದೊರ ಬಂದು ಆಗಿದೆ , ನೀನು  ಹೇಳಿದ್ದು ಎಲ್ಲವೂ ಸರಿಯಾಗಿದೆ ಆದರೆ ನನಗೆ ಹಿಂದೆ  ಹೋಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸು "ಎಂದು ತನ್ನ ಗೆಳೆಯರ ಹುಡುಕುತ್ತಾ ಮುನ್ನಡೆದ.ಶ್ರಿಧರನಿಗೆ ಆಕಾಶ ಕಳಚಿ ಬಿದ್ದಂತಾಯಿತು .ನಿಧಾನವಾಗಿ ಮನೆಗೆ ನಡೆದು ಅಕ್ಕನಿಗೆ ಸಂತೈಸಲು ಪ್ರಯತ್ನ ಮಾಡಿದ .ತಮ್ಮ ನ ಸಂತೈಸುವಿಕೆ ಅರ್ಥ ತಿಳಿಯದವಳೇನು ಸೀತಮ್ಮ. ಕೆಲವೆ ದಿನಗಳಲ್ಲಿ ಹಾಸಿಗೆ ಹಿಡಿದು ಶಿವನ ಪಾದ ಸೇರದಳು .ಮಗನ ಮೇಲೆ ಆಶಾ ಗೋಪರ ಕಟ್ಟಿದ್ದ ಹನಮಂತ ಹಾಗೂ ಆತನ ಹೆಂಡತಿ ಬಾಲಮ್ಮ ಒಬ್ಬರಾದ ಮೇಲೆ ಒಬ್ಬರಂತೆ ಇಹ ಲೋಕ ತ್ಯಜಿದರು.ತಂದೆ ತಾಯಿಲ್ಲದ ಅಣ್ಣಂದಿರು ಬದುಕಿನ ಪ್ರತ್ಯೇಕ ಬಂಡಿ ಹೂಡಲು ತಯಾರಿಯಾದರು. ಹೆತ್ತವರೆಂಬ ಮೇಟಿ ಇರುವಾಗ ತಿರುಗದವರು ಇಲ್ಲದಾಗ ತಿರುಗುವದು ಹೇಗೆ ? ಅಣ್ಣಂದಿರ ತಮಗೆ ಬಂದ ಆಸ್ತಿ ತೆಗೆದು ಕೊಂಡು ಬೇರೆಯಾದರು.ಇತ್ತ ಕಡೆ ನಾಗವ್ವ ಮಗ ದೊಡ್ಡವನಾಗಿ ನೌಕರಿ ಹಿಡಿದು ಹಂತಕ್ಕೆ ಮುಟ್ಟಿದಾಗ ಮಗನ ಹಿಂದೆ ದಾರಿ ಹಿಡಿದಳು. ಒಂದು ಮಾತಿದೆ ಕಟ್ಟಿ ಕೊಂಡವಳು ಕೊನೆಯತನಕ ಇಟ್ಟುಕೊಂಡವಳು ಇರುವತನಕ,ಆದರೆ ಈಗ ಆಗಿದ್ದು ಇದೆ ,ಕಟ್ಟಿ ಕೊಂಡವಳನ್ನು ಕಳೆದು ಕೊಂಡಿದ್ದಾನೆ ಇಟ್ಟು ಕೊಂಡವಳು ಗಟ್ಟಿ ಯಾಗಿ ದೂರ ಸರದಿದ್ದಾಳೆ, ಮಾಡುವುದೇನು  ? ನೆಲಗೀರುತ್ತಾ ಮಲಗಿದ್ದಾನೆ ಹಾಲಪ್ಪ . ಮಗು ಅನಾಥವಾಗಿದೆ, ಹಾದಿ ತಪ್ಪಿದವನು ಹಾಸಿಗೆ ಪಾಲಾಗಿದ್ದಾನೆ.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...