ಮರೆಯಲಾಗದು ಭರತ ಭೂಮಿ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/
ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//
ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //
ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//
ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//
ಬಸನಗೌಡ ಗೌಡರ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/
ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//
ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //
ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//
ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//
ಬಸನಗೌಡ ಗೌಡರ