Sunday, May 31, 2020

* ಸೈನಿಕ ಸಮರ್ಪಣೆ *

ಮರೆಯಲಾಗದು ಭರತ ಭೂಮಿ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/

ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//

ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //

ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//

ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//

             ಬಸನಗೌಡ ಗೌಡರ

Saturday, May 30, 2020

* ಚಿಪ್ಪಿನ ಮುತ್ತು *

* ಚಿಪ್ಪಿನ ಮುತ್ತು *


ನನ್ನನ್ನು ಪ್ರೀತಿಸು ಅಗಲುವ ಮುನ್ನ
ಎನ್ನ ಮುಖ ನೋಡಬಾರದೆ ಚಿನ್ನ
ನಿನ್ನ ಕವಾಟಿನಲ್ಲಿ ಬಂಧಿಸಿಟ್ಟ ಹೊನ್ನು
ಇನ್ನೊಂದು ಬಯಸಿ ಹಾಕುವೆ ಏಕೆ ಕನ್ನ//

ಹಗಲಿರುಳೆನ್ನದೆ ಹಪಹಪಿಸುವೆ ನಿನ್ನ.
ಗಡಿಯಾರ ಮುಳ್ಳಿಗಿಂತ ನಿಕರತನ
ಹಾಡುವೆ ನಿತ್ಯ ಗಾನ ಲಬ್ ಡಬ್
ನಿನ್ನ ತುಡಿತ ಬೆರೆಯುವ ಭಾವಯಾನ//

ಬಯಕೆ ಬೆದರಿ ಬಾಡುವ ಮುನ್ನ
ಕಂಗಳು ರೋದಿಸಿ ಕರಗುವ ಮುನ್ನ
ಕರಗಿದ ನೀರು ಹೋಳೆಯಾಗಿ ಹರಿದು
ಉಪ್ಪಲ್ಲದೆ ಚಿಪ್ಪಿನ ಮುತ್ತು ಮಾಡೆನ್ನ//

ಮರೆತೆ, ಯಮ ಅಡ್ಡಡ್ಡ ಸೀಳುವರು
ಅಗಲಿಸಿ ಕತ್ತರಿ, ತಪ್ಪಿದರೆ ಚಟ್ಟದ ದಾರಿ
ಹಾಳು ಕರಕಲು ತಿನಿಸು, ಕೊಬ್ಬು ಮರೆ
ಹಿತದಿ ಮೈಮುರಿ ಇದೆ ಪ್ರೀತಿಯ ದಾರಿ //

                  ಬಸನಗೌಡ ಗೌಡರ


Thursday, May 28, 2020

* ಬದುಕಿನ ತೇರು*









ಪತಿ ಪರದೈವ ಎಳೆ ಬದುಕಿನ ತೇರ
ಪಟ್ಟಣ ದೂರ ಬೆಟ್ಟ ಬಹು ಇಳಿಜಾರು
ಪರ ಚಿಂತೆ ಬಿಡು, ಬೇಡ ಬೇಜಾರು
ಪರಶಿವನ ನಾಮ ಒಂದೇ ಜಾಗರಣೆ//

ಬಾಹುಬಲದಲಿ ಸಾಕಿದೆ ಹತ್ತು ಹಲವು
ಪಕ್ಕ ಬಲಿತ ಮೇಲೆ ಹಕ್ಕಿ ಹಾರಿದವು
ಸಿಕ್ಕ ಸಿಕ್ಕಲ್ಲಿ ತೆಲುತಿದೆ ತಾ ಮುದಿಹಾವು
ನಿನ್ನ ಸಲುಗೆ ಅವರಿಗೆಸೇರವ ಭಯವು

ಹುಟ್ಟಿ ತವರೆಳೆದೆ, ಬೆಳೆದು ಬಳ್ಳಿ ಎಳೆದೆ
ಬದುಕು ಬಡಿವಾರ, ಗಾಲಿ ಜೋಕಾಲಿ
ನಿಲ್ಲದೆ ನಿಟ್ಟುಸಿರಾಕಿ ಎಳೆದೆ ಬೀಳದೆ
ಸಲ್ಲದೆ ಬರು ಬಿರು ಬಾಣಕೆ ಕಿವುಡಾಗಿ

ದಾರಿ ಯಾವುದು ತಿರುವುಗಳದೆ ಚಿಂತೆ
ಅಪ್ಪಮ್ಮ ಕಲಿಸಿದ ಪತಿಪರದೈವವಂತೆ
ಬಾಗಿ ಬೆಂಡಾದರೂ ಬಿಡದ ಮಾಯೆ
ಬಿಡದೆ ನೆನಪಿಸುವವು ಕನಸಿನ ಛಾಯೆ

               ಬಸನಗೌಡ ಗೌಡರ 

ಸಾರ್ಥಕತೆ






ಕಣ್ಣಲ್ಲಿ ಹುಟ್ಟುವ ಪ್ರೇಮನಿವೇದನೆ
ಕಾಡಾದರೇನು ನಾಡಾದರೇನು ?
ಹೃದಯ ತಟ್ಟಿ ಅರಳಿತು ತನು ಮನ
ಕಾಳಿದಾಸನ ಲೇಖನಿಗದು ಪ್ರೇರಣ//

ಅರಸನ ಸರಸ ಬಯಸಬಹುದೆ ?
ಶಾಕುಂತಲೆಗೆ ಸಾಗಿ ಬಂತು ಬಾಗ್ಯ
ಅಪ್ಸರೆಯ ಮೀರೀಸುವ ತಪಸ್ವಿ ಕನ್ಯೆ
ಕಣ್ಣು ಮಾತನಾಡಿ ಕನಸು ಕಟ್ಟಿದವು.//

ಬಳ್ಳಿ ಬೆಸುಗೆಗೆ ಬೆಳದಿಂಗಳು ಸೂಸಿ
ಬೀಜಾಂಕುರಕೆ ಉಂಗುರವೆ ಸಾಕ್ಷಿ
ದೊರೆ ಮರೆತನು ಜಿಂಕೆ ಶಾಪವಾಗಿ
ಮುರಿಯಿತು ಹೃದಯ ವಿರಹವಾಗಿ //

ಪ್ರೀತಿಗೆ ಬಂತು ಸೇತುವೆ ಮತ್ಸ್ಯವಾಗಿ
ಸಾವು ಸಾರ್ಥಕ ತಾ ಉಂಗುರ ನುಂಗಿ
ಕಾಡು ಮಲ್ಲಿಗೆ ನಾಡು ಸೇರಿ ಹಾಡಿತು
ನಾಡ ಬೃಂದಾವನದಿ ಜಿಂಕೆ ಚೆಲ್ಲಾಡಿತು//

           ಬಸನಗೌಡ ಗೌಡರ

Tuesday, May 26, 2020

* ಆರಕ್ಷಕ *



ಕೊರೊನಾ ಕರ್ತವ್ಯ ಈ ಸೈನಿಕ
ಗಡಿಸೈನಿಕನಿಗೇನು ಕಡಿಮೆ ಆರಕ್ಷಕ
ಮನೆಯ ಬಾಗಿಲೆ ಗಡಿಯಂತೆ
ಮಡದಿ ಮಕ್ಕಳ ತನು ಮುಟ್ಟದಂತೆ//

ಕಾಣದ ವೈರಿಗಳ ಕಡು ಆಕ್ರಮಣ
ಕುಟುಂಬದ ಭಾವಗಳ ಅಲುಗಾಟ
ಮುಂದಿದ್ದರು ಮುಟ್ಟದ ಗೂಣಗಾಟ
ಮುಖ ನೋಡಿ ಮನಸ್ಸು ತಾಕಲಾಟ//

ಮುತ್ತುವ ಹತ್ತು ಭಾವಗಳ ತತ್ತರಿಸಿ
ತುತ್ತು ಇಳಿಯಲು ತಿಣಕಾಡುತಿದೆ
ಹೆತ್ತ ಕರುಳೆ ಜಾರಿದಂತೆ ಹಿಚುಕಿದೆ
ಕರ್ತವ್ಯ ಕೂಗು ಸದಾ ಕುಕ್ಕುತಿದೆ//

ಬಿಸಿಲುಗಾಳಿ, ಹುಸಿಮಾತಿಗೆ ಹೆದರರು
ಸತತ ಕಾಲಿಗೆ ಚಕ್ರಕಟ್ಟಿದವರಿವರು
ಕಾಕಿ ಸಡಲಿಸಿ ಗಂಜಿಗೂ ಪುರಸೊತ್ತಿಲ್ಲ
ದಣಿವಾರಿಸಲು ಪವಡಿಸಲಾಗಲಿಲ್ಲ //

         ಬಸನಗೌಡ ಗೌಡರ 

* ಮಮತೆ ತಾಯಿ*




* ಮಮತೆಯ ತಾಯಿ *

ಮಮತೆಯ ಮಡಿಲಿನ ಹಡೆದಮ್ಮ
ನೀ ಜಗಕ್ಕೆಲ್ಲ ಹೆದರುವೆ ಏನಮ್ಮ
ನಾನಿರುವೆ ನೀ ಮರತೆ ಏನಮ್ಮ
ನಾನು ನಿನಗಮ್ಮ ನೀನು ನನಗಮ್ಮ//

ಲೋಕದ ನಿಂದೆ ಏನೆ ಬರಲಿ
ಕಷ್ಟದ ಕುಲುಮೆಯಲ್ಲಿ ಬೆಂದು
ನಿನ್ನಿಷ್ಟದ ದಾರಿಯಲ್ಲಿ ನೆಡೆದು
ಲೋಕಕ್ಕೆ ಬೆಳಕಾಗುವೆನಮ್ಮ//

ದುಷ್ಟ  ಕೂಳರು ಕಟ್ಟಿದ ಕೋಟೆ
ಭ್ರಷ್ಟರೆ ತುಂಬಿ ಮೃಷ್ಟಾನ್ನ ತಿಂದರು
ನೀ ನಿಕೃಷ್ಟವಾಗಿ ಹೊರಬಂದೆ
ಕೋಟಿ ಛಿದ್ರಗೊಳಿಸುವೆನಮ್ಮ//

ಮಡಿ ಮೈಲಿಗೆ ಮುಂದೆ ಮಾಡಿ
ಮನದಲ್ಲಿ ನಿನ್ನ ಸಣ್ಣವಳಾಗಿ ಮಾಡಿ
ಸಣ್ಣ ಕೂಲಿಯಾಗಿಸಿದರು ತಾಯಿ
ಕಣ್ಣು ಬಿಟ್ಟು ನೋಡೊಮ್ಮೆಕರಗಿಸುವೆ/

        ಬಸನಗೌಡ ಗೌಡರ 

Monday, May 25, 2020

* ಮರೆಯದ ಮಹಾಂತರು *


ಮರೆಯದಿರು ಮಹಾಂತರ ಮಾತಿದು
ಮನ ಒಪ್ಪವ ತನು ಒಪ್ಪವ ಮಾತಿದು/
ಶರಣ ಸಂತರ ಸರಳ ಸಂದೇಶವಿದು
ಮಹಾಂತ ಸಂತರ ಜೋಳಿಗೆ ಮಾತಿದು //

ಕಾವಿ ಜೋಳಿಗೆ ಬೇಡಿಕೆ ಮಾತಿದು
ಸತತ ದುಡಿಯದೆ ಸಂಸಾರ ಹಿಂಡಿದ/
ಸಕಲವು ಇದ್ದು ಸನ್ಮಾರ್ಗ ಹಿಡಿಯದ
ವ್ಯಸನಿಗಳಿಗೆ ಶ್ರೀಗಳ ಕಿವಿಮಾತಿದು//

ಸರ್ವಸಂಗ ತ್ಯಾಗಿ, ಸೇವೆಯ ಯೋಗಿ
ಜಾತಿ, ಮತ, ಪಂಥ,ಧರ್ಮ ಮೀರಿದ/
ಶ್ರೇಷ್ಠ ಸಂತರ ಸನ್ಮಾರ್ಗದ ಮಾತಿದು
ಬಸವ ಪಥದ ನಡೆಯ ಮಾರ್ಗವಿದು/

ಮದ ಮತ್ಸರ ಲೋಭ ವರ್ಜಿಸುವ
ದುಷ್ಚಟ ದಾನ ನೀಡುವ ಮಾತಿದು/
ಸಕಲರಿಗೂ ಲೇಸನು ಬಯಸವ
ಬಸವಾನುಯಾಯಿ ಹಿತನುಡಿಯಿದು/

               ಬಸನಗೌಡ ಗೌಡರ

Sunday, May 24, 2020

* ನಿಸರ್ಗ ಮಗು *





ಮಾಸದ ನಗುವಿನ ಹಸನ್ಮಖ ಮಗು
ಕೆಸರು, ಮಾಸುವ ದೇಹಕ್ಕೆ, ಮನಕ್ಕಲ್ಲ.
ನಗುವಿನಲ್ಲಿ ಸಂದೇಶ ನೀಡಿದೆ ಶರಣು
ಮಗು ಮಾನವ ತಂದೆ ನಿಜ ಮಗು //

ಇತಿಹಾಸ ಹಂಗಿಲ್ಲ ಭವಿಷ್ಯಚಿಂತೆಯಿಲ್ಲ
ಬಂದಂತೆ ಸ್ವೀಕರಿಸುವೆ ಸಂತೆಯೆಲ್ಲಾ
ಬದುಕುವ ಹಠವೂಂದೆ ಜೀವನದಲ್ಲಿ
ಬರಿ ಬೊಗಳೆ ಮಾತಿಗೆ ಬೆಲೆಯಿಲ್ಲ//

ಮಣ್ಣಿಂದ ಜಗವು ಮಣ್ಣಿಂದ ಬೆಲೆಯು
ಮಣ್ಣಿಂದರೆ ಹೆದರುವುದು ಜಗವೆಲ್ಲ
ಅನ್ನವನು ಉಣ್ಣುವುದು ಮಣ್ಣಿಂದಲೆ
ಮಣ್ಣಿಂದಾದ ಕೆಸರಿಗೇಕೆ ನಾನಂಜಲಿ//

ಅಪ್ಪ ಅಮ್ಮ ಯಾರೆಂದು ತಿಳಿದಿಲ್ಲ
ತಿಳಿದಿದ್ದರೆ ಕಟ್ಟಿ ಹಾಕುತಿದ್ದರೇನೊ ನನ್ನ
ದಿನ ಬೆಳಗಾದರೆ ವೈದ್ಯ, ಇಂಜಿನಿಯರ
ಹಪ ಹಪಿಸಿ ಕೊಲ್ಲುತ್ತಿದ್ದರೇನೂ ನನ್ನ//

                ಬಸನಗೌಡ ಗೌಡರ


* ಕವಿಕುಡಿಗಳು *

ಕನ್ನಡ ಮಾಮರದ ಹೆಮ್ಮೆಯ 
ಕವಿ ಕುಡಿಗಳು ನಾವು  //

ಭಾವ ಲೋಕಕ್ಕೆ ಜಾರಿ
ಕಾವ್ಯ ಲೋಕದಲ್ಲಿ ಮಿಂದು
ಸುಂದರ ಲೋಕದಲ್ಲಿ ತೇಲುವ
ಕನ್ನಡದ ಕಂದಮ್ಮಗಳು ನಾವು //

ಬರಹ ಬಯಕೆಯನೇರಿ
ಸಾರುವೆವು ಸಾಹಿತ್ಯ ಸತ್ವವನ್ನು
ಬದುಕು ನೀಡಿದಷ್ಟು ಸವಿದು
ಸಾಕ್ಸತ್ಕಾರ ಪಡುವೆವು ನಾವು//

ನಿಸರ್ಗವ ಸೇರಿ ಕೃತಕತೆ ಮೀರಿ
ಸ್ವರ್ಗ ಸಮಾನತೆ ಸವಿ ತಿರಳುನ್ನು
ಸತತ ಸವಿದು ಸರಿದಾರಿ ನಡೆದು
ಭಾವಗಳ ಬೆಸೆಯುವೆವು ನಾವು//


             ಬಸನಗೌಡ ಗೌಡರ

* ಪಾವನ ನಾಡು *

ಸ್ಪರ್ಧೆ: ನಾಡಗೀತೆ

ಕ್ರಮ ಸಂಖ್ಯೆ: 13

 * ಪಾವನ ನಾಡು *

ಕನ್ನಡನಾಡಿದು ಕವಿ ಕೋಗಿಲೆ ಬೀಡಿದು
ಕರುನಾಡಿದು ಕಲೆ ರಸಿಕರ ನೆಲೆವೀಡಿದು
ಸಾಧುಸಂತರು ಇಲಕಲ್ ಮಹಾಂತರು
ಶಿವಕುಮಾರಶ್ರೀ ಬೆಳಗಿದ ನಾಡಿದು //ಪ//

ಬಯಲು ಮಲೆ ತೀರ ಮುಕುಟ ಮಣಿ
ಬಂಗಾರ ಬೆಳೆದ ಕೋಲಾರ ಚಿನ್ನಗಣಿ
ಭಾರತ ಮಾತೆಯು ಇವಳಿಗೆ ಜನನಿ
ಕನ್ನಡಿಗರುಸಿರಿನ ಹಸಿರು ಶಾಲಿನಿ//

ಚಾಲುಕ್ಯ ಬಲ, ಹೊಯ್ಸಳ ಶಿಲ್ಪಕಲೆ
ಬಸವ ಮಧ್ವ ಕನಕರ ನೆಲೆಯಿದು
ಹಕ್ಕ ಬುಕ್ಕ,ಕೃಷ್ಣ ದೇವರಾಯರಾಳಿದ
ಧರ್ಮ ರಕ್ಷಣೆಯ ವೈಭವದ ನಾಡಿದು//

ನವರಾತ್ರಿ ಬೆಳಗಿದ ಮೈಸೂರ ಅರಸರ
ಆಧುನಿಕ ಸ್ಪರ್ಶದ ತಳಪಾಯವಿದು
ನಲ್ಮೆಯ ಶ್ರೀಗಂಧದ ತಳವೀಡಿದು
ಭಾರತ ಪುತ್ರರ ಹೆಮ್ಮೆಯ ನಾಡಿದು//

                ಬಸನಗೌಡ ಗೌಡರ

Saturday, May 23, 2020

* ಹೆಸರು *

ಎಷ್ಟು ಹೆಸರು ಹತ್ತಿವೆ ಹಿಂದೆ
ನಮ್ಮ ಅಪ್ಪ ಅಮ್ಮ ಇಟ್ಟರೊಂದು/
ಗೆಳೆಯರಿಟ್ಟರು ಇನ್ನೊಂದು
ಏಣಿ ಆಟದಲ್ಲಿ ಏರಿದಾಗೊಂದು
ಇಳಿದಾಗ,ಒಂದು
ಏಣಿ ಮುರಿದಾಗ ಮತ್ತೊಂದು //

ಆಶ್ರಯದಲ್ಲಿ ಒಂದು, ಶ್ರಮದ್ದೊಂದು
ಅವಸ್ಥೆ ತಂದಿತು ಇನ್ನೊಂದು /
ಪಾಠ ಮಾಡಿ ಬೋಧಕನಾದೆ
ಮಡದಿಗೆ ಪತಿಯಾದೆ
ಒಪ್ಪಿ ನಡೆದರೆ ಆದರ್ಶ ದಂ.........ಪತಿಯಾದೆ //

ನೂಸಲಿನಲ್ಲಿ ಹೆಸರು ಬರೆವನೆ ಬ್ರಹ್ಮ!
ಗಾಸಿಗೊಂಡ ಗಾಬರಿಯಲಿ/
ಹಸಿಮಣ್ಣೆ ಮಾಡಿಟ್ಟ ಭರದಲ್ಲಿ
ನಿನಗಿಷ್ವ ವಾದ ನಾಮ ಹರಳಿನಲಿ
ಒತ್ತು ಹರವಾದ ಹಣೆಯಲ್ಲಿ
ನಿನಗೊಪ್ಪುವ ತರದಲ್ಲಿ //

        ಬಸನಗೌಡ ಗೌಡರ 

Friday, May 22, 2020

* ರಾಷ್ಟ್ರ ಪ್ರೇಮಿಸಂತ *


ಸ್ಪರ್ಧೆ: ವ್ಯಕ್ತಿ ಚಿತ್ರಣ

ಕ್ರಮ ಸಂಖ್ಯೆ : 13

* ರಾಷ್ಟ್ರ ಪ್ರೇಮಿಸಂತ *

ರಾಮ,ಕೃಷ್ಣರ ಪರಮ ಸನ್ಯಾಸವತಾರಿ
ಪರಮಹಂಸರ ಪರಮ ಶಿಷ್ಯ
ಪುರುಷ ಸಿಂಹ, ವಿಶ್ವಧರ್ಮ ಸಮ್ಮೇಳನ
ಭಾರತದ ನಿಧಿ, ವಿವೇಕದ ಪ್ರತಿನಿಧಿ //

ಗುರುವಿನ ತತ್ವದ ಮಠ ಸ್ಥಾಪಕ
ದೀನ, ದಲಿತ, ಮಹಿಳೋದ್ಧಾರಕ
ಅಲ್ಪಾಯುಸ್ಯದಲ್ಲಿ ಮಹಾ ಸಾಧಕ
ಜಗವೆ ಮೂಕವಿಶ್ಮಯ ನಿನ್ನ ನೋಡಿ /

ಹಿಂದೂ ಧರ್ಮದ ಹಿರಿಮೆ ತಿಳಿಸಿ
ರಾಷ್ಟ್ರೀಯತೆ ಜಗದಲಿ ಅರಳಿಸಿ
ಸ್ವಾತಂತ್ರ್ಯ ಚಳುವಳಿ ಪ್ರಭಾವಿಸಿ
ಸಮಾನತೆ ಹರಿಕಾರನಾದೆ ಋಷಿ

ಮಾನವ ಧರ್ಮ ಮೈಗೂಡಿಸಿ
ಅಶ್ವವೇರಿದಂತೆ ವಿಶ್ವ ಸಂಚರೀಸಿ
ಹುಸಿ ಕರ್ಮಠರಿಗೆ ಬಿಸಿಮುಟ್ಟಿಸಿ
ಪಶ್ಚಿಮಕ್ಕೂ ಗುರುವಾದೆ ಸನ್ಯಾಸಿ /

           ಬಸನಗೌಡ ಗೌಡರ 

* ಚಾರುಲತೆ *

ಸ್ಪರ್ಧೆ: ಪ್ರೇಮಗೀತೆ .

ಕ್ರಮ ಸಂಖ್ಯೆ: 13

* ಚಾರುಲತೆ *

ನನ್ನೊಲಮೆ ಬಯಸಿತು ಚಾರುಲತೆ
ಹಾಡುವೆ ಕೊಗಿಲೆಯ ಧ್ವನಿಯಾಗಿ
ರಾಗತಾಳ ಮೇಳೈಸಿ ಸ್ವರಮಾಲೆಯಾಗಿ
ಭಾವ ಸ್ವೀಕರಿಸು ಪುಳಕ ಅಲೆಯಾಗಿ/ಪ/

ಬಿರುಬಿಸಿಲು ಕಾರ್ಮೋಡ ತೇಲಿಸಿ
ಬಾಗಿ ಮುಂಗಾರು ಮಳೆ ಸುರಿಸು
ಗುಡುಗು ಮಿಂಚು ಬಿರುಗಾಳಿಗೆ ಬಗ್ಗದೆ
ಸಿಂಚನ ಸ್ವೀಕರಿಸುವೆ ಭುವಿಯಾಗಿ.//

ಬೃಂದಾವನ ಭೃಂಗದ ಸಂಗೀತ ಆಲಿಸಿ
ವಿರಹವೇರಿದ ವರ ಮಹಾಕವಿಯಾಗಿ
ರಚಿಸುವೆ ಕವನ ಮಹಾಕಾಳಿದಾಸನಾಗಿ
ಹಾಡು ನಾ ಸ್ವೀಕರಿಸುವೆ ಪ್ರೇಮಿಯಾಗಿ.//

ನನ್ನಂತರಂಗ ಭಾವತರಂಗ ಚಿಲುಮೆ
ನಾ ಬೆಸೆಯುವೆ ಹೃದಯದ ಒಲುಮೆ
ಪ್ರತಿದಿನ ಮನೆ ಮನ ಮಹಾನವಮಿ
ಸ್ವೀಕರಿಸಿವೆ ದಸರೆಯ ಗೊಂಬೆಯಾಗಿ.//

ನೀಡಿದ ಸ್ಪರ್ದೆ : ಶಾಯಿರಿಗಳು

ಕುವೆಂಪು - ತಂಡ

ನೀಡಿದ ಸ್ಪರ್ಧೆ  : ಶಾಯಿರಿಗಳು

ಶಬ್ದಗಳು  -   ಕನಸು,  ಮನಸ್ಸು,

ಶಾಯಿರಿ- 1

ಪ್ರಿಯೆ ಕಟ್ಟಿದೆ ಕನಸೊಂದನು ನಿನ್ನ ಅರಮನಿಯಲ್ಲಿಟ್ಟು ನಾ ಮುತ್ತು ಸುರಿಸುವಾ. /
ಪ್ರಿಯ..ಕರ, ಎಮ್ಮಿ ಹಾಲುಣಿಸಿದೆ ಇಂದು ಹಾಲಿಲ್ಲ ಅದಕ್ಕೊಂದು ಕೊಟ್ಟಿಗೆ ಕಟ್ಟು ಸುರಸುಂದರ. /


ಶಾಯಿರಿ - 2

ಗಂಡ ಹೇಳಿದ ಮನಸ್ಸಿನೊಳಗಡೆ  ದುಗುಡ ನಿನಗೆ ಹ್ಯಾಗ ಹೇಳಲೇ ತಗಡ...  /
ದಿನಾ ನೊಡಿ ಸಾಕಾಗಿ ಈಗ ಅದ ತಗಡ ತೊಗೊಂಡ ಗ್ವಾಡಿ ಕೆರಿತಿನಿ  ನೋಡ /

ಶಾಯಿರಿ_3

ನೀ ದೂರ ಅದಿ ಅಂದರೆ ಪ್ರೀತಿ,
ಹೆಚ್ಚು ಆಗಾಕ ಹತೈತಿ ಅಂದಾಂಗ/
ನೀ ಸಮೀಪ ಬಂದೀದಿ ಅಂದರ
ಸಮರ ಸಮೀಪ ಅಂದಾಂಗ/

Tuesday, May 19, 2020

* ಭಾವತರಂಗ *

ಭಾವಗೀತೆ ಸ್ಪರ್ಧೆಗಾಗಿ :
ವಿಷಯ : ತರಂಗ

* ಭಾವತರಂಗ *

ಹದಿಹರಿಯದ ಭಾವ ಎದೆ ಉಕ್ಕಿ ,
ನದಿಯಂತೆ ಹರಿಯತಿದೆ ಸೊಕ್ಕಿ.
ಸುಧೆ ಕೃಪೆ ಮಾಡು ಪ್ರೀತಿ ನೀನಿಕ್ಕಿ
ರಾಧಯ ಕೃಷ್ಣನಾಗುವೆ ನಾ.. ಸಾಕಿ//

ನನ್ನೆದೆಯ ಭಾವ  ಬರಿ ಬರಡು,
ನಿನ್ನ ಮೋಡದ ಮಳೆ ಹರಡು
ಕೃಷ್ಣ ಕಾವೇರಿ ಬೃಂದಾವನ
ಅನುದಿನವು  ಹಸಿರು ಬನ //

ಕಾಯಿಸದೆ ಕೃಪೆಯಿರಲಿ ಮನ
ಮರೆತು ಮಿಡಯದಿರೆ ದಿನ
ಭಾವತರಂಗ ಜಲತರಂಗ ಕಣ
ಅಂತರಾತ್ಮದ ವಿಪ್ಲವ ಅನುದಿನ //

ನೀನೊಲಿದ ದಿನ ಹಾಲು ಜೇನು
ನಗುನಗುತಾ ಸ್ವರ್ಗ ಸವಿದ ದಿನ
ನವನವೀನ ಗಾನ ಸರ ಸಂಚಲನ
ಗಂಧರ್ವಗಾಯನ ನನ್ನ ಭಾವಮನ //

ಬಸನಗೌಡ ಗೌಡರ

Monday, May 18, 2020

* ಸಹಜ ನಗು *

ನಿಸರ್ಗದ ಕುಡಿಗಳು ನೀವು
ನಿಮ್ಮೆತ್ತರಕೆ ಏರಲಾರೆವು ನಾವು
ನಿಮ್ಮ ಬದುಕು ಖರೀದಿಸಬಹುದು
ನಿಮ್ಮ ನಗುವು ಖರೀದಿಸಲಾರೆವು /

ನಿಷ್ಕಲ್ಮಶ ನಗುವಿಗೆ ಸರಿಸಮವುಂಟೆ
ನಿಸರ್ಗದೆತ್ತರಕ್ಕೆ ನಾವೇರಲುಂಟೆ
ಹುಸನ್ಮುಖದ ನಗು ಹೂವಿನೂಂದಿಗೆ
ಪೈಪೋಟಿ ಇಳಿದು ಧಾವಿಸುತಿದೆ/

ಸಹೋದರಿಯ ಆಪ್ತ ಸಹಬಾಳು
ಒಡಲೊಳಗೇ ಚೀರುವ,ಗೋಳು
ಅಂಬರದರಸಿದ ತಂಗಿ ಸಹಜಬಾಳು
ನಿತ್ಯ ರೈತ ಮಕ್ಕಳ ನಿಸರ್ಗದ ದೂಳು/

ಕಾನ್ವೆಂಟ ಶರ್ಟ, ಟೈ ಬೂಟು ಹಾಕಿ
ಕಲಿತು ಹೆಮ್ಮೆಯಲಿ ಕಡಲು ದಾಟಿ
ಕೂರೋನಕೆ ತತ್ತರಿಸಿ ತವರು ನೆನಪಿಸಿ
ಬಾಗಿದಸಹೋದರರೆ ಹೂವು ಸ್ವಾಗತ/

              ಬಸನಗೌಡ ಗೌಡರ 

* ತೆಪ್ಪ ಪಯಣ *

ತುಂಬಿದ ಹೂಳೆಯದು ನನ್ನೂರಿನ,
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//

ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ  ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//

ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//

ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//

ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//

              ಬಸನಗೌಡ ಗೌಡರ

* ಕಲಿಕೆ *

ಅಳುತ ಕಲಿಯುವ ಕಲಿತು
ಮರೆಯುವ ಅನುದಿನ ಪರೀಕ್ಷೆಗೆ
ಕಲಿಯುವ,ಕಲಿಸುವಿಕೆಗೆ
ಲಗಾಮು ಹಾಕುವ//

ಕಲಿಕೆಯದು ಗ್ರಹಿಕೆಗಳ ವಿಕರಣ /
ಮಕ್ಕಳೆಂದರೆ ಚಿಕ್ಕವರೆಂಬ ಭಾವ
ತುಕ್ಕು ಹಿಡಿದು  ಹಕ್ಕಿನಿಂದ ಕಲಿಸ
ಹೂರಟವನ ತಡೆಯುವ //

ಶಿಕ್ಷಣವೆಂದರೆ ಅಕ್ಷರ ಜ್ಞಾನವಲ್ಲ.
ಹಾಗಂದ ಪಕ್ಷಕ್ಕೆ ನನ್ನ ಸವಾಲು
ನಿರಕ್ಷರಿಗಳಿಗಿಂತ ಸಾಕ್ಷರಿಗಳೆ
ನಮ್ಮ ನಿಜ ಸವಾಲು ? //

ಪ್ರೀತಿಯು ಶಿಸ್ತಿನ ಸಂಸ್ಕಾರ ,
ಶಿಕ್ಷಣದ ತಾಯಿ ಬೇರು
ಅನುದಿನವು ಆಗಲಿ ಮನನ
ನಿತ್ಯ ಅನುರಣನ//

ಎಲ್ಲ ತಿಳಿದವರು ಬಹು ವಿರಳ,
ಎಲ್ಲ ತಿಳಿದಂತೆ ನಟಿಸುವರು ಬಹಳ
ಪಾಲಕರು ಹರಳು ಆರಿಸುವ,
ಶೋಧಿಸುವ ಕೆಲಸ ಸತತ.//

ಜಾರದಿರಲಿ ಜಾಳಗೆಯಲ್ಲಿ ಜಾಗೃತಿ
ನಮ್ಮದಾಗಿರಲಿ ವಿನಮ್ರತಿ
ಸರಳವೂ ಅಲ್ಲ ಕಠಿಣವೂ ಅಲ್ಲ
ಸತತ ಸ್ವಿಕರಿಸೋಣ ಸನ್ಮತಿ.//

         ಬಸನಗೌಡಗೌಡರ

Sunday, May 17, 2020

* ಬದಲಾವಣೆ *

ಹೆಣ್ಣು ಹಡೆದವರು ಸಣ್ಣ ರೈತರಿವರು
ಕಣ್ಣುಕಾಣದವರು ಕರ್ಮವೆಂದವರು
ಕಿವಿಯಿದ್ದು ಕೇಳದ ಕಿವಡರಿವರು
ಹೆಣ್ಣುಸಂರಕ್ಷಣೆ ಶಾಸನ ಓದಿದವರು/

ಸ್ತ್ರೀಸಭಲತೆ  ಬೇರು ಇಳಿಸಿಹರು
ಶಾಸನದ ಸರಕು ಅರಿಯದವರು.
ಬಳಸದೆ ಸಂತೃಪ್ತಿ ಪಡುವವರು.
ಬಳಸಿದವರೆಲ್ಲ ಬಸವಳಿದವರು /

ತೋಟದ ಮಾಲೀಕರಿವರು ಕೋಟೆಯ
ರಕ್ಷಣೆಗೆ ಭದ್ರ ಕಾವಲು ನೀಡದವರು
ಹೂವು ರಕ್ಷಣೆಗೆ ಹಪಹಪಿಸಿದವರು
ಕಿತ್ತರೂ ಚಿಂತೆ ಕೀಳದಿದ್ದರೂ ಚಿತೆ /

ಮಾಲಕನ ಚಿಂತೆ ದೇವರಿಗೆ ಸಲ್ಲಬೇಕು
ದೇವರಾದರೂ ಎಷ್ಟು ಜನ ಇದ್ದಾರು
ಗಲ್ಲಿಗೂಂದು ಗುಡಿ ಕಟ್ಟಿ ದವರಷ್ಟೆ
ಮಿಕ್ಕದವೆಲ್ಲವೂ ಕುರಿರುಚಿ ಕಂಡವರು

ನಾವು ಬೆಳೆಯಬೇಕು ಬದಲಾಗಬೇಕು
ಹೂವು ಇದ್ದಲ್ಲೆ ದೇವರು ಬರಬೇಕು
ನಿತ್ಯವೂ ಅರಳಿ ಸತ್ಯದಿಂದಿರಬೇಕು
ಸಕಲ ಅಳವಡಿಕೆ ತೋಟವಾಗಬೇಕು/

                 ಬಸನಗೌಡ ಗೌಡರ

Saturday, May 16, 2020

* ಗೆಳೆಯನ ಹಂಬಲ *

ಅಳಿಯದ ಅಚ್ಚಳಿಯದ ಅವಿನಾಶದ
ಅವಿನಾಭಾವ ಸಂಬಂಧದ, ಮಹಲು
ನಿರ್ಮಿಸಲೊಬ್ಬ ಗೆಳೆಯನ ಹಂಬಲ.
ಅನುದಿನ ಕಾಯುತಿರುವೆ ಗೆಳೆಯ//

ಡೋಲಿ ಹೊರಸಲಲ್ಲ ಹೊರಲು ಅಲ್ಲ
ನಮನ ಕೇಳಲಲ್ಲ ಬಯಸುವದು ಇಲ್ಲ
ಅಪ್ಪಿ ಆತ್ಮೀಯ ಹೆಗಲು ನೀಡಲು.
ಅನುದಿನ ಕಾಯುತಿರುವೆ ಗೆಳೆಯ//

ಪಡ್ಡೆ ಹುಡುಗ ಶತದಡ್ಡ ಜಾಣರಲ್ಲ
ವಿಶೇಷಣಗಳೆ ಶತವಿದ್ದ ಕಾಲದಲ್ಲಿ
ಕಣ್ಣುತಪ್ಪಿಸಿ ಜೀರಬಾವಿ ಜಿಗಿದಂತೆ
ಜೊತೆಗಿರಲು ಕಾಯತಿರುವೆ ಗೆಳೆಯ

ಬೇವು ಏರಿ ಮಾವಿಗೆ ಕಲ್ಲು ಹೊಡೆದು
ಬಾರಿಯ ಗಿಡದ ಮಸಲತ್ ಮಾಡಿ
ಮಾಲಿಕ ಬೆತ್ತ ನೀಡದರೂ ಬಿಡದಂತೆ
ಜೊತೆಗಿರಲು ಕಾಯತಿರುವೆ ಗೆಳೆಯ//

ಎದುರು ಹೊಗಳಿ ನಂತರ ತೆಗಳದ
ವಾಚಾಳಿಯಂತೆ ತಲೆಯೆಲ್ಲಾ ತಿನ್ನದ
ಸಾಚಾನೆಂದು ನಂಬಿಸಿ ಹುಸಿನಗೆಯ
ಬೀರದ ಮೌನಿಗೆ ಕಾಯುತಿರುವೆ ಗೆಳೆಯ//

             ಬಸನಗೌಡ ಗೌಡರ

* ನಿಷ್ಕಲ್ಮಶ ನೆರವು. *

ಮಾತು ಮೌನದಲಿ ಕೃತಿ ಸೇರಿ
ಮನವು ಹಾರಾಡಲೊಂದು ದಾರಿ
ದಿನವೂ ನಮ್ಮ ಬಾಳು ರಹದಾರಿ
ನೆರವಿಲ್ಲದೆ ತಲಪದು ಹೆಗ್ಗುರಿ//

ಅಪ್ಪ ಮಗನಲ್ಲಿ, ತಾಯಿ ಮಗಳಲ್ಲಿ,
ಸಹೋದರ, ಸಹೋದ್ಯೋಗಿಯಲ್ಲಿ
ಜಗತ್ತೆ ನಡಗಿಸಿದ ಸರ್ವಾಧಿಕಾರಿಯಲ್ಲಿ
ನಿನ್ನ ಅನಗ್ರಹವಿಲ್ಲದೆ ನಡೆಯದಲ್ಲಿ. //

ನನ್ನೂರ ಗಲ್ಲಿ, ನಾನೂಂದು ಕಂಡೆ
ನಡೆದ ವಿಸ್ಮಯ ಚಕಿತಗೊಂಡೆ
ಎರಡು ಬಾಳೆ ಮೂರು ದಾನಿಯ
ನರಳುತ್ತ ಸ್ವೀಕರಿಸಿದ ದೀನದ್ವನಿಯ//

ಒಂದು ಮಾತಿತ್ತು ಎಡಗೈದಾನವದು
ನೆರವು ತಾ ಬಲಗೈಗೆ ತಿಳಿಯ ಬಾರದು.
ಮರೆತು ಮಾಡಿದ ನೆರವು, ಸಿಗುವುದು
ಮಳೆಗಾಲದಂತೆ ಮನ ತಣಿಸುವುದು.//

ನನ್ನವಳು ಅನುದಿನ ನೀಡಿದ ಒಲವು
ನಾನು ಹೇಗೆ ಹೇಳುವುದು ಹಲವು
ನನ್ನಂತರಾತ್ಮದ ಗೆಲುವಿಗೆ ಆಗಿಹವು
ರಹದಾರಿಯ ಅಪ್ಪಟ ದೇಶಿ ನೆರವು //

             ಬಸನಗೌಡ ಗೌಡರ 

Friday, May 15, 2020

* ಶಿಖರವೇರಿದಾಗ *

ಏರು ನೀನೆರು ಛಲಗಾರ ನೀನೇರು,
ನೀನೆರಿದಾಗ ನಿನ್ನಪಾದದಲ್ಲಿ ನಿನ್ನೂರು.
ತುದಿಸೇರು ನಿನ್ನವರ ಮನೆ ಚಿಕ್ಕದಲ್ಲಿ,
ಮರೆಯದಿರು ನೀ ನಿಟ್ಟ ಹೆಜ್ಜೆ ತಳದಲ್ಲಿ./ಪ/

ಏರುವಾಗ ನಾನೊಮ್ಮೆ ಯೋಚಿಸಿದೆ,
ಎತ್ತರ ಹತ್ತುವಾಗ ಹತ್ತು ಕುತ್ತುಗಳೆಂದು.
ಕಲ್ಲುಮುಳ್ಳು ತರಚಿತು ಅಲ್ಲಿಲ್ಲೊಂದು,
ಉಸಿರನ ಗುರಿಯಿತ್ತು  ಶಿಖರದ್ದೊಂದು./1/

ಶಿಖರದ ತುದಿಯಲ್ಲಿ ಶಿವನ ಶಾಂತಿ,
ಮೇಲ ಮಂದ ಮಾರುತದ ಕ್ರಾಂತಿ.
ಮುಟ್ಟಿದ ಮನವು  ಚಡಪಡಿಸಿತಲ್ಲಿ,
ಮನಪುಲಕ,ಹತ್ತಿದ ಗರ್ವ ನೆತ್ತಿಗೇರಿತಲ್ಲಿ./2/

ಮೆಟ್ಟಿದ ನನ್ನಂತರಕ್ಕೆ ಸರಿಸಮಾನರಿಲ್ಲ
ಸಾಲು ಶಿಖರಗಳೆಣಿಸಿ ಹಕ್ಕು ಸಾಧಿಸಲೆ.
ಶಿಲೆ ಕೆತ್ತಿ ಸಾಹಸದ  ಶಾಸನ ಬರೆಸಲೆ.
ಶಿಖರವೆ ನೊಡಿ ಮುಸಿಮುಸಿ ನಕ್ಕಿತಲ್ಲಿ./3/

ನಿನ್ನಂತೆ ಏರೀದರು ಸಾವಿರ ಸಾವಿರ,
ಏರಿದ ಪಿತ್ತ ನೆತ್ತಿಗೇರಿ ಗರಬಡಿದರು.
ಹತ್ತಿದ ರಭಸಕ್ಕೆ ಇಳಿಜಾರೆ ಮರೆತರು,
ನೋಡಲ್ಲಿ ನಿಮ್ಮಂತವರ ಅಸ್ತಿಪಂಜರ./4/

                🖋️   ಬಸನಗೌಡ ಗೌಡರ. 

Thursday, May 14, 2020

* ಅರಿವು *

ಮಾತು ತ್ಯಜಿಸಿ ಮೌನ ಸ್ವೀಕರಿಸಿ
ಮನ ಶಾಂತಿ ಕಂಡು ಬೆರಗಾದೆ
ಮೊದಲೆ ತಿಳಿದರೆ ಸುಲಭದ ಹಾದಿ
ನಾನೇಕೆ ಕಳೆದ ಸರಳ ನೆಮ್ಮದಿ /ಪ/

ಸುಂದರ ಬದುಕಿಗೆ ಸಾವಿರ ಹಾದಿ
ಮಂದಿರ, ಮಸೀದಿ, ಚರ್ಚನು ತಿರುಗಿ
ಮನದಲ್ಲಿ  ಅರಿಯದೆ ಮಾತಾಡಿದೆ
ಮಾತೆ ಮಲ್ಲಿಗೆಯಾಗದೆ ಕೊಲ್ಲಿಸಿದೆ

ಮದನಿಕೆ ಬಯಸಿ ಜಗವದು ತಿರುಗಿ
ಮಡದಿ ಮನ ನಾನರಿಯದೆ ಹೋದೆ
ಮಂಕು ಹಿಡಿದ ಮನಕೆ ಮರೆಯಾದೆ
ತಿಳಿದರೆ ನಾನೇಕೆ ಕಳೆದೆ ಸುಖ ನಿದ್ದೆ

ಮನೆಯದು ನೆಮ್ಮದಿ ನೀಡುವ ಸೌಧ
ಮನೆಯಾಕೆ ಮನ ಅರಿಯದೆ ಹೋದೆ
ಗಗನಕ್ಕೇರಿದ ಭಾವ ತೀರದ ಯಾನ
ಎಲ್ಲೆಡೆ ಹುಡುಕಲು ಮಾಡಿದೆ ಪಯಣ

ಸುಂದರ ಬದುಕು ಅಂದರೆ ಸುಲಭ
ಹೊರಗಡೆ ಹುಡುಕಿದರೆ ತಾ ಸಿಗದು
ದಿವ್ಯದೃಷ್ಟಿ ಒಳಗಡೆ ಅವಿತಿರುವುದು
ಬಳಸಿದಂತೆ ಹನುಮ ಬೆಳೆಯುವುದು

                 ಬಸನಗೌಡ ಗೌಡರ

"ಬಾಳ ಪಯಣ *

ಬಾಳೊಂದು ಭಾವ ಮಂದಿರ
ಪ್ರೀತಿಯೆ ಭುವನದ ಹಂದರ
ಪ್ರತಿಕ್ಷಣ ಅರಳಿಸು ನಿರಂತರ // ಪ//

ಸಾಗರ ಡೋಣಿಗೆ ಸಹಜ ತೆರೆ
ಉಬ್ಬರ ವಿಳಿತ ಮೀರಿ ನೀ ನಡೆ
ಬದುಕದು ಸುಂದರ ಸಾಕಾರ ಪಡೆ //

ಬದುಕೊಂದು ಬಂಡಿಯ ಪಯಣ
ಕಲ್ಲು ಮುಳ್ಳುಗಳೆ ಅಡೆ ತಡೆ ಕಣೋ
ಸಾಧಿಸಿ ಸವೆಸಿ ದಾರಿನಡೆ ಜಾಣ

ಭುವಿಯೊಂದೆ ಜೀವರಾಶಿಗಳ ತಾಣ
ಭೂಕಂಪನ ಜ್ವಾಲಾಮುಖಿ ಸಹಜ
ಸಹಜೀವನ ಕಲಿ ನೀ ಮನುಜ//

ನಾನೊಂದು ಬರಿ ಕಾಗದ ಹಾಳೆ
ಗೀಚದಿರು ಅಲ್ಲಿ ರಾಕ್ಷಸ ಬಾಳು
ಬರೆ ಅಲ್ಲಿ ಸುಂದರ ಕಾವ್ಯ ಕಹಳೆ//

        ಬಸನಗೌಡ ಗೌಡರ

Tuesday, May 12, 2020

* ಬರಹಗಾರ *

ಸಜ್ಜನರ ಸಂತೆ ಅನುಭವದ ಕಂತೆ
ನಿತ್ಯ ನೂಲುವರು ತಮಗಿಷ್ಟ ಬಂದಂತೆ
ಕೂಲಿ ಪಡೆಯದ ಖಾಲಿ ಆಳುಗಳಂತೆ
ನಿತ್ಯವೂ ಇವರಿಗೆ ಸಮಾಜದ ಚಿಂತೆ

ಮಾತಿನ ಮನೆ ಮಹಲು ಕಟ್ಟುವರು
ಸೂರ್ಯ ಚಂದ್ರರನ್ನೆ ಕುಣಿಸಿದವರು
ಇವರಲ್ಲೊ ಸಾವಿರಾರು ಸಾಹಸದ ಜನ
ಸಾಹಿತ್ಯ ಕೃಷಿಯಲ್ಲಿ ನಿತ್ಯ ದುಡಿವ ಜನ

ಭಾಷೆಗಳ ಬಂಧನವಿಲ್ಲ ಬರಹವೆ ಎಲ್ಲ
ಭಾವಜೀವಿಗಳು ಬಹುಕೃತವೇಷಿಗಳಲ್ಲ
ಬರಹದ ಹಿತೈಶಿಗಳೆ ಇವರ ಆಸ್ತಿಗಳೆಲ್ಲ
ಪೆನ್ನು ಹಾಳಿಗಳೆ ಗನ್ನುಗಳೆಂದ ಜನ

ಇವರ ಹೊಲದಲ್ಲಿ  ಗದ್ಯ ಪದ್ಯಗಳು
ಹುಲುಸಾಗಿ ಬೆಳೆ ಬೆಳೆಯುವವರು
ಕೊಯಿಲಿಗೆ ಕೊರತೆಯಿದೆ ಆಳುಗಳ
ಫಸಲು ಬಳಕೆಯನು ನಂಬಿದ ಜನ

ಸಮ್ಮೇಳನಗಳೆ ಇವರ ಹಬ್ಬ ಹರಿದಿನ
ಉಂಡುಟ್ಟು ಮೆರೆಯುವರು ಆ ದಿನ
ವಾದ ವಿವಾದ ಚರ್ಚೆಗಳು ಅನುದಿನ
ನಿರ್ಣಯ ಸಾಧನೆಯ ನಿರ್ಲಿಪ್ತ ಮೌನ

              ಬಸನಗೌಡ ಗೌಡರ


* ಕಂದನ ನಂದನ *

ಅರಿವಿನ ಪರಿದಿಯೊಳ ಅನುದಿನವು
ಅನುರಣನ,ಅಂತ:ಕರಣ ಸುಧೇ ಗಾನ
ಮನೆ ಮನೆಯು ಗಂಧರ್ವ ಗಾನ
ಮಗುವಿರುವ ಮನೆ ಸಂಗೀತ ತಾನ/

ಭಗವಂತ ನೀಡಿದ ಅದು ಶ್ರೇಷ್ಟ ದಾನ
ತೊದಲು ನುಡಿಯದು ಮೇಲ ಆಲಾಪ
ರಾಗ ಲಯ ತಾಳ ಮಧುರ ಗೀತಗಾನ
ನಮ್ಮ ಮನೆ ಮೀರಿಸಿದಾವುದು ತಾನ /

ಸಪ್ತ ಸ್ವರಗಳು ಮೇಳೈಸಿ ಸವಿ ನೆನಪು
ಮನೆಮನಗಳ ಸ್ವರ ಸಿಂಚನದ ತಂಪು
ಗೆಜ್ಜೆಯ ಹೆಜ್ಜೆಯ ನರ್ತನದ ನಾದಕೆ
ದೇವ ಲೋಕವೇ ಜಾರಿ ಬಂತು ಜಗಕೆ /

ಕಂದನಿರುವಾ ಮನೆ ನಂದಗೋಕುಲ
ನಿತ್ಯವೂ ಆಲಾಪ ನವನೂತನ ಕಲಾಪ
ಮನೆ ಮನ ಮಂದಿರಕೆ ನಿತ್ಯಮಂದಾರ
ಸತ್ಯವಿದು ಜಗಕೆ ಸನ್ಮಾನದ ಹಂದರ /

ಭಾವ ಬಂಧನವ ಮೀರಿ ಬಹು ದೂರ
ಜಾವ ಪ್ರತಿ ಕ್ಷಣ ಜಾರಿ ಕಷ್ಟ ಸಂಹಾರ
ಭುವಿಯ ಸಂತಸದ ಕ್ಷಣ ನೀ ಆಧಾರ
ನವಮಾಸವುಂಡ ನೋವೀಗಪರಿಹಾರ

                     ಬಸನಗೌಡ ಗೌಡರ

Monday, May 11, 2020

* ಚಂಚಲೆ ಮನಸ್ಸು *

ನೀ..ಚಂಚಲೆ ತಿರುಗವೆ ಈ ಜಗವೆಲ್ಲ
ಮಾಯಾವಿ ಇಣುಕದ ಲೋಕವಿಲ್ಲ
ಹಯಕೆ ಕಡಿವಾಣ ಹಾಕಿಯೆ ಇಲ್ಲ.
ನಿನ್ನ ಸರಿಸಮವುಂಟೆ, ವೇಗದಲ್ಲಿ //

ನಿನ್ನ ಒಪ್ಪಿಗೆಯಲ್ಲಿ ನಿಂತಿದೆ ಜಗವೆಲ್ಲ.
ಹಿಟ್ಲರ್, ಮುಸೊಲಿನ್ ಟೋಜೊರೆಲ್ಲ
ನಿನ್ನಂತೆ ಅಂದು ತಲೆ ಆಡಿಸಿದರಲ್ಲ
ನೀ ಬಸ್ಮಾಸುರನ ಪಾತ್ರವಹಿಸಿದೆಯಲ್ಲ//

ನನ್ನ ಅಂತರಂಗದ ಅರಿಕೆ ನಿನಗೆ
ನಿನ್ನ ಪ್ರೀತಿಸಲು ಹರಸಾಸಪಡುವೆ
ನನ್ನ ಅಂಕೆಗೆ ಸಹಜದಲಿ ಸಿಗುವೆನಗೆ
ನೀ ವಲಿದರೆ ಗೌರವದ ಶಿಖರವೆನಗೆ //

ನಿನ್ನ ಹಿಡಿತರಲು ನನಗೆ ಗುರುಬೋಧೇ
ಧ್ಯಾನ, ದಾನಧರ್ಮ, ಯೋಗ ಮಾಡು
ನಿಷ್ಟೆಯಲಿ ಹಿಡಿದ ಕಾಯಕ ಮಾಡು
ಬಿಟ್ಟಿರಲು ತಲೆ ಆಗುವುದು ಸುಡಗಾಡು//

ಮರ್ಕಟದ ವಂಶದ ನೀನು ಚಲುವೆ
ನನ್ನರಮನೆಯಲಿ  ಅಡಗಿ ಕುಳಿತಿರುವೆ
ಬೇರಲ್ಲ ಹುಡುಕಿ ಬಸವಳಿಯತಿರುವೆ
ಬಾಕಳ್ಳಿಮನಸೆ ಸವಾರಿನಡೆಸುತಿರುವೆ//


                ಬಸನಗೌಡ ಗೌಡರ

Sunday, May 10, 2020

* ಬದುಕು ಭ್ರಮೆ *

ನಾನು ನನ್ನದೆಂಬ ಮಮಕಾರವೇಕೆ
ಬಯಕೆಯ, ಭ್ರಮೆಬದುಕು ನೂಕು
ಜೆಡ ಬಲೆ ನೇಯ್ದು ಕೊನೆ ಹಾಡಿದಂತೆ
ಬಾಳೆಲ್ಲ ಬವಣೆ ಬದುಕುವುದು ಸಾಕು //

ಗೊರಲಿ ಕಟ್ಟಿತು ಹುತ್ತ, ತಾವೊಂದು
ವಾಸಕ್ಕೆ ಬಂದು ಸೇರಿತು ಹಾವೊಂದು
ತಾನೆ ಕಟ್ಟಿದ ಮನೆ ತನಗೆ ಎರವಾಗಿತ್ತಿಂದು
ನನ್ನದೆನ್ನುವುದು ಬರಿ ಭ್ರಮೆ ಲೋಕದಲ್ಲಿಂದು

ಪಡೆದ ಜ್ಞಾನ ಅನುದಿನವು ನೆರಳಿನಂತೆ
ಎಲ್ಲೆ ಹೋದರು ವೈಭವದ ತೇರಿನಂತೆ
ಜನ ತಾವೇ ನಿಂತು ನಗುತ ಎಳೆಯತಾರ
ಹೂವು ನೀಡುತಾರ ಜೈಕಾರ ಹಾಕುತಾರ /

ಕಷ್ಟ ಸುಖಗಳು ನಾಣ್ಯದ ಎರಡು ಮುಖ
ಸಮನಾಗಿ ನಗುನಗುತ್ತ ಸ್ವೀಕರಿಸಬೇಕು
ಗೀಜಗನ ಗೂಡಿನ ಹೊದಾಣಿಕೆ ಬೇಕು
ಗಳಿಸಬೇಕು ಕಾಗೆಯಂತೆ ಹಂಚಿ ತಿನ್ನಬೇಕು //

ದೇವರು ನೀಡಿದ ಅವದಿ ಮೂರೆ ದಿನ
ಬಯಸಿ ಗಳಸಿದ ಹಚಡ ಆರು ದಿನ
ಮೀನನ್ನು ತಿಂದು ಮೀನು ಬದುಕಿದಾಂಗ
ಗೋರಿ ತೊಡುತಾರ ನನ್ನವರೆ ಜಾಣರಂಗ //


                      ಬಸನಗೌಡ ಗೌಡರ









Saturday, May 9, 2020

* ಅಮ್ಮಾ*

 
ಅಮ್ಮ ಬರವಣಿಗೆಗೆ ನಿಲುಕದ ಪದ
ನನ್ನ ಭೂಮಿಗೆ ಪರಿಚಯಿಸಿದಳಮ್ಮ
ಅಮ್ಮನಿಲ್ಲದ ಜಗದಲ್ಲಿ  ನಮ್ಮದೆನಿದೆ
ನವಮಾಸ ನೋವುಂಡು ಭುವಿಗೆ ತಂದಳಮ್ಮ  //

ಹಸಿದ ಹೊಟ್ಟೆಗೆ, ಬಟ್ಟೆಯ ಕಟ್ಟಿದವಳು
ಹೊಸಬಟ್ಟೆಯುಡಿಸಿ ಹರಿದ ಸೀರಿಯಲಿ
ನಗುನಗುತಾ ಸಂಭ್ರಮವ ಪಟ್ಟವಳು
ಕರುಳು ಬಳ್ಳಿ ಅರಳಲು ಕರಕಲಾದವಳು

ದೇವರು ನಾವು ಹುಟ್ಟಿಸಿದಾ ಪದ
ನಿಸರ್ಗದ ನಿಗೂಢ ತಾ ಅರಿಯದೆ
ನನ್ನವರೆ ಸಂಶೋಧಿಸಿದ ಶ್ರೇಷ್ಟಪದ
ತಾಯಿ ದೇವರಿಗಿಂತ ದೆವರಿನ್ಯಾವದು //

ಸೋಮಾರಿಯಾದಾಗ ತಿದ್ದಿದವಳು
ಕ್ಷಮಿಸಿ ಸಂತೈಸಿ ಸರಿದಾರಿ ತೋರಿದವಳು
ಕಲಿಸುವಾಗ ಸಿಡುಕಿ ಗದರಿಸಿದವಳು
ಶಿರಬಾಗುವ ಮೂದಲ ಗುರುವೆ ಅಮ್ಮ  /

ತಾಯಿ,ಅವ್ವ,ಅಮ್ಮ ಹೇಗೆ ಕರೆಯಲಿ
ಅಮ್ಮನಿಗೆ ಸರಿಸಮವುಂಟೆ ಜಗದಲ್ಲಿ
ಉಸಿರನು ನೀಡಿ ಹೆಸರಾಗಿಸಿದಳಿಲ್ಲಿ
ನಮ್ಮನ್ನು ಹರಿಸಲು ನೀ ಬಾಳಬೇಕಿಲ್ಲಿ

             ಬಸನಗೌಡ ಗೌಡರ

* ವಾದ ಪ್ರತಿವಾದ *

ಆಟದೊಳ ನೂರೆಂಟು ಕಬಡ್ಡಿ
ಕ್ರಿಕೆಟ್ ಖೋಖೋ ಅಟ್ಯಾ ಪಟ್ಯಾ,
ಮೇಲೆ ಕೆಳಗಿಲ್ಲ ನಾಡಿನ ಆಟದಲ್ಲಿ  //
ಅಕ್ಷರ,ಪದ,ಭಾವ,ವಾಕ್ಯ ಕುಣಿಸುವ
ಬರಹವುಂಟು ಮೇಲೆ ಕೆಳಗಿಲ್ಲ, /
ಸಾಹಿತ್ಯದಾಟದಲ್ಲಿ ಸರಿಸಮವೆಲ್ಲ
ಬಗೆ ಬಗೆ ಆಟ ಕಾವ್ಯಪ್ರತಿಭೆಗೆ /
ನಾಡಿನಲ್ಲುಂಟು.. ಬೆಲೆ ತಿಳಿದವರಿಗೆ
ಪಾಠ, ತಿಳಿಯದವರಿಗಿಲ್ಲ.//

ಕುವೆಂಪು, ಬೇಂದ್ರೆ,ಕಾರಂತ,
ಗೋಕಾಕ ಮಾಸ್ತಿ ಅನಂತ ಮೂರ್ತಿ
ಕಾರ್ನಾಡ ಕನ್ನಡದ  ಆಸ್ತಿ, ಕನ್ನಡದ
ಆಲಮರ, ತಂಪನ್ನೆರೆದವರು/
ಭಾವ  ಭಾಷೆ, ಬೆಸುಗೆಗೆ,
ಭಾಷೆ ಉಳಿದರೆ. ಸಂಸ್ಕೃತಿ,...ಪ್ರಗತಿ .
ಉಳಿವಿಗೆ ಜನಪದವೇ ಭೂತಾಯಿ/
ಹುಟ್ಟು ಸಾವಿಲ್ಲಿ ......ಕೊಯಿಲುಗೆ
ಕಿತ್ತಾಡುವ ಪಂಡಿತರೆ ವಾಗ್ವಾದಕ್ಕಿಲ್ಲ ಜಾಗ!
ಕರುನಾಡು ಕವಿಗಳ ಸಾಹಿತ್ಯ
ಫಲಪುಸ್ಪ ಬೇಳೆ ಜಾಗ


             ಬಸನಗೌಡ ಗೌಡರ 

Friday, May 8, 2020

* ಕುರುಚಲು ಕೀಳಲ್ಲ *

 * ಬಯಲು ಆಲಯ *
ದೂರಗುಡ್ಡದಲಿ ಸಾವಿರ ಸರಬಂಡೆ
ಕುಳಿತು ಪ್ರಕೃತಿ ಸವಿಯಲು ನಾ ಬಂದೆ
ಸಂಜೆ ತಂಗಾಳಿ ಬೀಸಿ ಬಡಗಣದಿ ತೇಲಿ
ಸಂಚಲನ ಮೈಮನದಿ  ಪುಲಕಗೊಂಡೆ

ಏತ್ತರದ ಬಂಡೆಯೇರಿ ಸುತ್ತಲು ಮೈಮರೆತು
ಕತ್ತೆತ್ತಿ ನೋಡಿದಡೆ ಮನೆ ಮರಗಳ ಸಾಲು
ಜಾರುತಿವೆ ನರಿ ತೊಳ  ಕೌಜಗದ ಸಾಲು
ಸೋತ ರವಿ ಜಾರಿ, ಬಂತು ಚಂದ್ರನ ಪೇರಿ

ಕತ್ತಲದ  ಗುಮ್ಮವೇರಿ ಸುತ್ತಿದೆ ಸಾವಿರ ಸೈನ್ಯ
ಗತ್ತಿನ ಟೀವಿಯ ಬಿರು ಬಿಗುವಿನ ಕಾಲಾಳು
ಅವರೆ ಜಾಲಿ, ತುಗಲಿ, ಬೇವು ಗೂಟಗಳ್ಳಿ
ಗರ್ವದಲಿ ಹೇಳಿದರು ಮಲೆನಾಡಿಗಿಂತ ಕೀಳಲ್ಲ

ಕೆಲಮಳೆಯೆ ಸಾಕೆಮಗೆ ಚಿಗುರಿ ಚಿತ್ತಾರ
ಆಡುಕುರಿ ಹೋತ ಟಗರು ನನ್ನಾಶ್ರಿತರು
ಬಯಲು ಆಲಯವೆ ನಮ್ಮ ಸಿಂಗಾರ
ಮಲೆನಾಡಿನಂತಿಲ್ಲ ನಮ್ಮ ಕನಸುಗಾರ

ನೀವು ಕಲಿಯಬೇಕಾಗಿದೆ ನಮ್ಮಿಂದ
ಕಷ್ಟವನ್ನು ಇಷ್ಟಪಡುವುದು ಹೇಗೆಂದು
ಮಳೆಗಾಳಿ ಬಿಸಿಲು ಬರ ನಮ್ಮ ವೈರಿ
ಬದುಕಿ ತೋರಿಸುವೆವು ನಿಮಗೆ ಸಾರಿ

ನೀರಾದೆ ನಮ್ಮವರ ಕೀಳುರಮೆಕಂಡು
ನಾನು ನಿಮ್ಮಂತೆ ಬೆಳದೆ  ಕೊರತೆಗಳು0ಡು
ಉಸಿಗಿನಲ್ಲಿ ಹಸಿರು ಉಕ್ಕಿಸಿದೆ ಛಲದಿಂದ
ಉಸಿರೆ ಛಲವಾಗಲಿ ನಿಮ್ಮ ಉತ್ಸಾಹದಿಂದ

             ಬಸನಗೌಡ ಗೌಡರ 

Thursday, May 7, 2020

* ಕುದಿಮೌನ *


ಸುಪ್ತಭಾವ ಒಪ್ಪದೆ ಹೊರ ಬಂದು
ಆಪ್ತರಿಗೆ ಪರಿತಪಿಸುತಿದೆ ನೊಂದು
ಪರಿಹರಿಸ ಬಲ್ಲಿಯಾ ಪ್ರಿಯೆ ಇಂದು
ಚೈತನ್ಯ ತುಂಬು ಬಾ ಮರಳಿ ಬಂದು/

ನಾ ಮಾಡಿದ ಮಹಾ ತಪ್ಪಾದರೆನು ?
ನಿನ್ನ ಮುಂದೆ ಹೊಗಳಿದೆ ಆವಳನ್ನು
ಹೃದಯ ಕೊಟೆಗೆ ಸಾವಿರ ಬಾಣ
ಚುಚ್ಚಿ ಚುಚ್ಚಿ ಕೊಲ್ಲಬೇಡ ನನ್ನನ್ನು /

ಅಂತರಾಳದ  ಕುದಿಮೌನ ಹೆಪ್ಪುಗಟ್ಟಿ
ಮೇಲ ಮೈ ಮನ ಒದ್ದಾಡಿ ಮರಗಟ್ಟಿ
ವಿಲವಿಲ, ನೆಲದಲ್ಲಿ ಗೀಚಿದೆ ಕುಲಗೆಟ್ಟು
ಗೀಚಿದ ಗೆರೆಗಳ ನಕ್ಕವು ನನ್ನ ನೊಡಿ /

ಕಾಯಿಸದೆ ಕರುಣೆ ತೊರಿ ಅಪ್ಪಿ ಬಿಡು
ಕಾಲು ಕೀಳೆನು ಅಪ್ಸರೆ ತಪ್ಪಿ ಬಂದರು
ಮದಿರೆ ಮುದ್ದಿಸಿ ಮೋರಿ ದಾಸನಂತೆ
ತಿರುಗುವ ಮುನ್ನ ಕೃಪೆಮಾಡು ಕಾಂತೆ

               ಬಸನಗೌಡ ಗೌಡರ

Wednesday, May 6, 2020

* ರೈತಯೋಗಿ *

ನಾಡೆಲ್ಲ ನೋಡುವುದು ನಿನ್ನ ಕಡೆ
ಯೋಗಿ .....
ಗೌರವದ ಪಾಲಿನಲಿ ನಿನ್ನ ಸಾಲೆ ಕಡೆ 
ತ್ಯಾಗಿ.....
ಬಿಸಿಲು ಚಳಿಯೆ ಬೆಚ್ಚಿತು 
ಉಕ್ಕಿನ ದೇಹ ನೊಡಿ
ಬಗ್ಗದ ದೇಹವದು ಹುರಿ ಕೂಡಿ //

ಬವಣೆ ನೂರು ಸೊರುತಿಹದು ಸೂರು
ಹರಿದಂಗಿಯಲುಕ್ಕಿದೆ ವಿಶ್ವಾಸದ ಬೆವರು
ಸರ್ವ ಸವಾಲು ಒಡಲೊಳಗದು 
ಭೋಗಿ....
ಸೂರ್ಯನೆ ಸೋತ ನಿನ್ನ ಸಹನಗೆ 
ತಲೆಬಾಗಿ  //

ವರುಣನ ಕರುಣೆ  ಎಣಿಸದೆ ದಣಿದೆ
ಧರಣಿಯ ಪ್ರೀತಿಗೆ ದೇಹವ ಮಣಿಸಿದೆ
ಕಷ್ಟಗಳಿರುತ ಕುಗ್ಗದೆ ನುಗ್ಗುವೆ ಮುಂದೆ..
ಸುಲಿದರೂ ವ್ಯಾಪಾರಿ ಬಕ ಪಕ್ಷಿ ಹಿಂದೆ.  //

ಬೆಲೆ ಕಟ್ಟಲಾಗದು ಜಗ ನಿನ್ನ ಮಹಿಮೆ
ಕುಲವಿಲ್ಲ ಶ್ರಮವೊಂದೆ ನೆಲನಿನ್ನಾಶ್ರಮ
ಹೊಲದಲೂಳುವುದೆ ಪೂಜಾಕ್ರಮ
ಬೆವರೆ ಜಲ, ಬಿಸಿ ಉಸಿರೆ ನಿನ್ನ ಹೋಮ//

ಕಡೆಗಾಳು ತಿಂದು ಹಿಡಿಗಾಳು ನೀಡಿ
ಕೊಡಗೈ ನೀನಾದೆ ಪಶು ಪಕ್ಷಿ ಕಾಪಾಡಿ
ಹುಸಿಯನಾಡುತ ಹೊಸೆದರು ಜಾಲ
ಬೆಸಗೊಳ್ಳದೆ ದೀನನಾಗಲಿಲ್ಲ ನೀ ಬಾಗಿ...//
 
ನನ್ನ ನಮನ ಯೋಗಿ, ನನ್ನ ನಮನ ಯೋಗಿ,
ನನ್ನ ನಮನ ಯೋಗಿ. //

             ಬಸನಗೌಡ ಗೌಡರ

* ಪ್ರಯಾಣ. *

ಬಾಳ ದೋಣಿಯ ಪ್ರಯಣಿಗ ನಾನು
ಸಹ ಪ್ರಯಣಿಗರ ನೆನಪು ಮಧುರ
ನೂರು ಜನ ಸೇರಿದರು ನೂರು ತರ
ಬದುಕೆಲ್ಲ ಒಂದೊಂದುತರ ..ತರ...

ಸಂಗಾತಿ ಸರಸ ಸಹಜೀವನ ಸಾಗಿತು,
ನಿರಂತರ ಸವಿ  ಸವಿ ಸಂಸಾರ ತೇರ.
ಸಂಗೀತ ಉಲ್ಲಾಸ ಮನೆ ಮಂದಿರ
ಸಾವಿರ ದಿನಗಳ ಸಿಹಿ ಮಂದಾರ ದರ..

ಕಡಲ ಒಡಲೊಳ ದೋಣಿ ಸಿರಿ ನಡೆ
ಕಹಿ ನೆನಪುಗಳು ಬರಿ ಆಕಡೆ ಈಕಡೆ
ಕವಲು ಒಡೆಯದೆ ನನ್ನ ದೀರ್ಘ ನಡೆ
ಕಷ್ಟಕಾರ್ಪಣ್ಯ ಸೋಲದ  ನಡೆ..ನಡೆ..

ಸಾವಿರ ನದಿಗಳು ಸಂಗಮ ಕಡಲು
ಸಾರ ಸವಿಯದೆ ಸಪ್ಪೆ ನಾ ಬಿಡಲು
ಸಾಗಿದ ರೀತಿಗೆ ಸಾಗರ ನಾಚಿತು
ಸವಾಲುಗಳೆಲ್ಲ ಸರಿದವು ಸರ.. ಸರ ..

ಸಾಗಿದ ದಾರಿಯ ಸವಿ ಸವಿ ನೆನಪು
ಸವಿಯಲು ನನಗೆ ದೇವರ ಕರುಣೆ
ಪ್ರಾಣಿಗಿಂತ ನಾ ಭಿನ್ನ  ಓ ದೆವರಾಣೆ
ದಯೆಯೆ ಬಾರದೆ ಬಿದ್ದೆ, ಹರೊ..ಹರ..

                 ಬಸನಗೌಡ ಗೌಡರ

Tuesday, May 5, 2020

* ಕರ್ಮ ಯೋಗಿ *

ತುತ್ತಿನ ಚೀಲ ತುಂಬಲು
ನಿತ್ಯ ದುಡಿಯುವವರು ನಾವು
ಸತ್ಯವೇ ನಮ್ಮ ದೇವರು
ಕಾಯಕವೇ ನಮ್ಮ ಧರ್ಮ//ಪ//

ಕೆಸರಾದ ಕೈಗೆ ಮೊಸರು ನೀಡದೇ,
ಹುಸಿ ಭರವಸೆ ನೀಡಿದವರು ನೀವು.
ಹದಮಾಡಿ  ನೆಲವು ಬರಡಾಗದೆ, 
ಹಸಿರಾಗಲು ಉಸಿರಾದವರು ನಾವು//

ನಮ್ಮ ದೆನ್ನುವುದು ಇಲ್ಲಿ ಏನಿಲ್ಲ,
ಕರ್ಮ ಹೆಗಲಿಗೆರಿಸದವರು ನಾವು.
ಪಾಲನೆಯೊಂದರಿತ ಕಾರ್ಮಿಕರು
ಧನಿಯ ಮರ್ಜಿ ನಂಬಿದವರು ನಾವು

ಬೆವರಿನ ಬೆಲೆ ಕೇಳುವವರು ನಾವೆಲ್ಲ,
ಸಂಗ್ರಹಿಸಿ ಮೊಸರು ಮೆಲ್ಲುವ ನೀವು.
ಸಮನಾದ ಬದುಕ ನಮಗೆಕಿಲ್ಲ
ಸತ್ಯ ನಿಯಮ ತಿಳಿಯದವರು ನಾವು

ಕಾರ್ಲಮಾರ್ಕ್ಸ, ಎಂಜಲೊ ಕಹಳೆ,
ಊದಿದ ದ್ವನಿ ಕೇಳದ ಕಿವುಡು ನಾವು.
ಗಣಿ, ಕ್ವಾರಿ, ಗಾರೆಯೇ ಪರೀಕ್ಷೆಯನೆಲೆ
ಉತ್ತರಕ್ಕೆ ಮಾರ್ಕ್ಷ ಬೇಡುವೆವು ನಾವು

                 ಬಸನಗೌಡ ಗೌಡರ

* ಅರಮನೆ *

ನಾನು ನನ್ನೊಳಗೊಂದು
ಅರಮನೆಯ ಕಂಡೆ ಅಂದು,
ನಮ್ಮಪ್ಪನ ಬದುಕಿನ
ಸಿರಿಮನೆಯಲೊಂದು ಅರಮನೆ...
ಸುಂದರ ಸಂಸಾರ, ನಾವೂ
ಕಲಿಯಬೇಕಿತ್ತು ಅದರ
ಸಹಜಿವನ  ನೊಡಿ !
ಚಿಲಿಪಿಲಿ ನಾದಕ್ಕೆ ಭಾಸ್ಕರುನು
ಓಡೋಡಿ  ಬರುತ್ತಿದ್ದ ಅಂದು ..
ನಮ್ಮನೆಯ ನಾಯಿ ಬೆಕ್ಕಿಗೂ
ಅವರದೇ ಧ್ಯಾನ,
ಇವರು ಜಗಳ ಮಾಡುತ್ತಾರೆ ಎಂದು ? ,
ಅವರ ಪ್ರಿತಿಯ ಸರಸಲ್ಲಾಪ ನೊಡಿ.
ಚಿಕ್ಕ ವಿಷಯಕ್ಕೂ ರೇಗಾಡುತ್ತಿದ್ದ
ನಮ್ಮಪ್ಪನೂ ನಾಚಿದನು ಒಮ್ಮೊಮ್ಮೆ.....
ಉಬ್ಬಿ ಉಬ್ಬಿ ಜಿಗಿದವರಿವರು
ಈ ಗುಬ್ಬಿಗೂ.. ಬಂತಲ್ಲ ಇಂದು
ಗಂಡಾಂತರ. ತಂತಿಯೆ ಇಲ್ಲದ
ನಿಸ್ತಂತು ವಾಹಕದಿಂದ
ಬಾಳು ಗಂಡಾಂತಾರ .
ಈ ಚಿಲಿಪಿಲಿ ಕೇಳಬೇಕೆನೋ
ನಾವು ಯಂತ್ರ ಗಳಿಂದ !

          ಬಸನಗೌಡ ಗೌಡರ
   

Monday, May 4, 2020

* ಸಂಧ್ಯಾ ಕಾಲ *


ಸಂಧ್ಯಾ ಕಾಲ, ಸುಂದರವಾಗಲು
ಬಂದು ಸೇರಬೆಕು ಸಾಹಿತ್ಯ ಕಲೆಗೆ 
ಗೊಬ್ಬರವಿದು  ಹೂವು ಹಣ್ಣು ಫಲ 
ಬೆಳೆದು ಸತತ ಸುವಾಸನೆ  ತಮಗೆ //

ದುಂದುವೆಚ್ಚದಿ ಬದುಕು ನೆಡೆಸಲು
ಸವಕಳಿಯದು  ಬಾಳು ದಿನಾಲು
ಬದುಕೇ ಆಗುವುದು ನಿತ್ಯ ಕೊರಡು. 
ಜಾಣನಾಗಿ ಬರೆ ಸತ್ಯದ ಕರಡು. /

ನಿತ್ಯ ಧ್ಯಾನ ಸತ್ಪುರಷರ ಸಂಘ
ಎತ್ತ ಸಾಗಿದರು ಶಾಂತಿಗಿಲ್ಲ ಭಂಗ
ಕಡುವಚನ ಕೇಳಿ ನೀನಾಗು ಕಿವುಡು 
ನೀತಿಗೆ ತಲೆಬಾಗದ ಬಾಳು ಬರಡು //

ಬರುವುದು ಬರಲಿ ,ನಿನ್ನದೆ ನೆರಳು 
ಕಡಲು ಸೇರಲು ಸಾವಿರ ನದಿಗಳು
ತಡೆ ಮಾಡಿದ  ಬಗೆ ಇದೆಯೇ ಹೇಳು
ಮೋಡಕೆ ನೀವೆ ತಳ ವಾದವರು //

ಸೃಷ್ಥಿಯ ನಿಯಮಕೆ ತಲೆಬಾಗು 
ಇಂದೋ ನಾಳೆಯೊ ಕಾಲನ ಕರೆಗೆ
ನಗುತಾ ಹಾಕು ಬೇಕು ಸಲಾಮು  
 ಇದಕ್ಕಿಂತ ಇಲ್ಲ ಭಿನ್ನ ಮಲಾಮು //

                ಬಸನಗೌಡ ಗೌಡರ 
   
   

Sunday, May 3, 2020

K S R N. ನಮನ

*ನಿತ್ಯೋತ್ಸವ ಕವಿಗೆ ಕವನ ನಮನ*

ಮರೆಯಲಾರೆ ನಿಮ್ಮ ಹೆಸರ
ನಮ್ಮ ಬಾಳ ಬದುಕು ಪುಟದಲಿ
ನಿತ್ಯೋತ್ಸವ ಕವಿಯಾಗಿಹೊರಹೊಮ್ಮಿ
ತೋರಿದೆಮಗೆ ದಾರಿ ಹೆಮ್ಮೆಯ //

ಕವನವೆಂಬ ಭಾವ ಬಿತ್ತಿ
ನೆಲೆಸಿದೆಮ್ಮ ಹಣೆಯ ಭಿತ್ತಿಯಲ್ಲಿ
ಶಾಸನದ ಸಾಲಿನಲ್ಲಿ ಕನ್ನಡವ ಬಿತ್ತಿ
ಅಜರಾಮರಗೊಳಿದೆ ವೈಭವವೆತ್ತಿ //

ನಾಡಿನ ಸಿರಿ ನುಡಿಯಲ್ಲಿ ಸೇರಿಸಿ
ನಸುಕಿನ ಹೊಂಬೆಳಕ ಜಗದಲಿ ಹರಿಸಿ
ನಮ್ಮನು ಕುಣಿಸಿ ಹಾಡಿಸಿ ಹಾರೈಸಿ
ನಮ್ಮಿ ಜಗಕೆ ಸಿಗದೆ ಪ್ರಯಾಣಿಸಿದೆ //

ಮಲೆಗಳ ಮನೆ ಮನಗಳ ಗೆದ್ದು
ನಾಡಿನೆಲ್ಲೆಡೆ ವ್ಯಾಪಿಸಿ ಕನ್ನಡ ಗೆದ್ದೆ
ಮತ ಕುಲ ಮೀರಿ ಹಿತವನು ಸಾರಿ
ಕತೆಯಾಗುಳಿದ ನಿಸಾರ್ ಅಹಮದ್//

                   ಬಸನಗೌಡ ಗೌಡರ

* ಕಂದ *


ಮನೆಗೆ ಹಂದರ ಬಾಳು ನಂದನ
ನವ ಜೋಡಿ ನಲಿವು ನರ್ತನ
ಭುವಿಯ ಮೇಲೆ ಭಾಸ್ಕರ ಕಿರಣ
ನವ ಮಾಸ ಎಣಿಕೆ ನವನೂತನ //

ಬಯಕೆ ಬಳಲಿಕೆಯು ಅಪ್ಪಳಿಸಿ
ಮೇಲೆ ಮಾವು, ಮಣ್ಣು ಮುಕ್ಕರಸಿ
ಬಾಳೆಂಬ ಕಡಲು ಬಂದತೆ ಸವೆಸಿ
ಬಂದೆ ಬಿಟ್ಟಿತು ಭಾರವಾದ ಮಾಸ //

ಮೋಡದಲಿ ಗುಡುಗು ಕೊಲ್ಮಿಂಚು.
ಹನಿ ದಾವಿಸಿ ಧರೆಗಿಳಿದು ಇಂಚಿಂಚು.
ತಾಯಿ ಗರ್ಭದಲಿ ಸಿರಿ ಸಂಚಲನ
ಬಸಿದ ರಕ್ತದ ಉಸಿರು ಗಾನ .//

ಸೋಮನುದಯದ ಪ್ರಭೆ ಸೇರಿ
ಬಾಳ ಜೊಡಿಗೆ ಧನ್ಯತೆಯ ಹೇರಿ
ಕುಣಿದು ಕುಪ್ಪಳಿಸಿತು ನವರಂಗ.
ಕಾಯಬೇಕು ಅಪ್ಪಿ ಭಾವತರಂಗ //

ಒಳಹೊರ ಇವನ ಸಾಲು ಸವಾಲು.
ನಂದಗೋಕುಲ ತಾನಾಡಿದ ಮಹಲು
ಬಾಯಿಬಿಡೆ ಗಿಳಿ ಗುಬ್ಬಿ ಕೊಗಿಲೆ   
ತಾನುಲಿದ ತೊದಲೆ ರಾಗ ಆಲಾಪ. //

ಅನವರತ ಗೆಜ್ಜೆಯ ನಾದ ಕುಣಿತ
ನುಜ್ಜುವೆ ಕಣ್ಣರೆಪ್ಪೆ ಸಾಲದಾಯಿತು
ಕೃಪೆ ಇನ್ನೆರಡು ನಯನವಿರಬೆಕಿತ್ತು
ಆ ಶಿವ ಜಿಪುಣ ಕಳಿಸಿದ ಮರೆತು //

ಹಸಿರಂಗಿವುಟ್ಟು ಕೆಸರುಗದ್ದೆ ಓಟ 
ಕೊಸರಿ ,ದಿಟ್ಟಿಸಿ  ನೋಡುವ ನೋಟ
ನೇಸರನಿಗೂ ಆ ಪುಲಕಿತ ಮೈಮಾಟ ದೃಷ್ಟಿತಾಗಿತು,ನೀನೆಮ್ಮಮನೆದೀಪ //

                    ಬಸನಗೌಡ ಗೌಡರ

Saturday, May 2, 2020

* ಮಹತ್ವಾಕಾಂಕ್ಕ್ಷಿ *

ಜಗದಗಲ ಮೇರೆ ಮೀರಿ
ಅಶ್ವಗಳನೇರಿ ವಿಶ್ವ ಸುತ್ತಲು
ಬಯಸುವೆವು ನಾವು //

ಆಸೆಗಳಿಗಿಲ್ಲ ಮಿತಿ ,ಇಂದಲ್ಲ ನಾಳೆ
ವಸಾಹತು ಕಟ್ಟುವೆವು ಜಗದಾಟಿ
ಬ್ರಹ್ಮಾಂಡ,ನೀಹಾರಿಕೆ ದಾಟಿ  //

ನೋವುಂಡು  ನಲುಗಿದ ನರ
ಮಾನವನ ನೆಲೆ ಕಾಣಲು ದೊರ
ಸಾಗುವೆವು ಅನಂತ ಭಾನು ಸೀಳಿ  //

ಅಶ್ವಗಳ ಹೊಟ್ಟೆಗಿಲ್ಲ ಹಿಟ್ಟು
ತಡಿ ಹಿಡಿದು ನಿಲ್ಲಿಸುವ ಮನಸಿಲ್ಲ.
ಪಟ್ಟು ಸಡಲಿಸಲೊಲ್ಲೆವು ನಾವು //

ನೆರೆಮನೆಯು ಹೊಸ ವಸಹಾತು
ಕಟ್ಟುವ ಮುನ್ನ. ದ್ವಜ ಹಾರಿಸಿ
ಕೆಕೆ ಹಾಕಲು ಬಯಸುವೆವು ನಾವು //

ಸಂತರೆಳಿದ ದೇಹನಶ್ವರ ಮಾತು
ನಿಂತು ಕೇಳುವ ವ್ಯವದಾನ ನಮಗಿಲ್ಲ
ವಿಶ್ವವಿಶಾಲ ಪರಿದಿ ತಿಳಿಯದವರು ನಾವು //

                    ಬಸನಗೌಡ ಗೌಡರ

Friday, May 1, 2020

* ನನ್ನೂರು *

* ನನ್ನೂರು *
ನನ್ನೂರ ಜನ ,ನನ್ನೂರಿನ ಜನ
ತೀರಿಸುವುದು ಹೇಗೆ ಇವರ ಋಣ
ಪ್ರೀತಿತುಂಬಿದ ಬೊಗಸೆಗಣ್ಣಿನ
ಶ್ರಮಕ್ಕೆ ಹೆಸರೆ ಈ ನನ್ನ ಜನ //ಪ//

ಗುಡ್ಡದ ಮಣ್ಣಿಗೆ ಅಡ್ಡಡ್ಡ ಬಿತ್ತಿ
ದವಸ, ತೃಣ ದಾನ್ಯ ಬೆಳೆಯುವ ಜನ
ಮುಂಗಾರೊಂದೆ ನಂಬಿ ಬಿತ್ತಿದವರು
ಕಪ್ಪುಮಣ್ಣಿಲ್ಲದೆ ಹಿಂಗಾರು ಬೆಳೆವ ಜನ

ಬಿದ್ದ ಮಳೆಗೆ ಸವಾಲು ಹಾಕಿ
ರಾತ್ರಿಹಗಲೆನ್ನದೆ ಮೈಮುರಿದ ಜನ
ತೇವಾಂಶವುಳಿಸಲು ಹರಸಾಹಸ
ಸುತ್ತಲೂ ಬರ, ಇವರಿಗೆಲ್ಲಿದೆ ಬರ?//

ಮನೆಗೊಂದು ಕುರಿಯ ಹಿಂಡು
ಪ್ರತಿ ಮನೆಯು ಸೈನಿಕರ ದಂಡು
ಉಸುಗು  ಭೂಮಿಯ ತುಂಡು
ಬೆಳೆ ಬೆಳೆಯುವದರಲ್ಲಿವರು ಗಂಡು //

ಸ್ವಾಭಿಮಾನದ ಬದುಕು ತುಳಿದವರು
ಮನಸ್ಸು ಮಲ್ಲಿಗೆ, ಮಾತು ಕಠೋರ
ಕಲ್ಲಿನಲ್ಲಿಯೆ ಮಠ ಕಟ್ಟಿ ಕಾವಿಗೆ
ಶರಣೆಂದ ಕರ್ಮಯೋಗಿಗಳಿವರು//

ಜಾತಿಭೇದಗಳಿಲ್ಲ ಧರ್ಮಗಳ
ಬಂಧನವಿಲ್ಲ ಮುಸ್ಲಿಂ ಹಬ್ಬಕ್ಕೂ
ದೋಲಿ ಹೊತ್ತು ತಿರುಗುವರೆಲ್ಲ
ಸಾಮರಸ್ಯ ಕಲಿಯಬೇಕು ಜಗವೆಲ್ಲ//

              ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...