ನಾಗರಿಕತೆಯ ನಾಗಾಲೋಟ ಅರಿಯುವದಕ್ಕಿಂತ ಮೊದಲು ನಾಗರಿಕತೆ ಎಂದರೇನು ? ಎಂಬುವದನ್ನು ತಿಳಿದುಕೊಳ್ಳೋಣ ಇವತ್ತು ಕೆಲವು ಜನ ನಾಗರಿಕತೆಯನ್ನು ಸಂಸ್ಕೃತಿಗೆ ಸಮಾನ ಅರ್ಥದಲ್ಲಿ ಬಳಸುತ್ತಿರುವುದು ಕಂಡುಬರುತ್ತಿದೆ ವಿಶಾಲ ಅರ್ಥದಲ್ಲಿ ಹೇಳುವುದಾದರೆ “ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸಿದ “ ಮಾನವ ಸಮಾಜವಾಗಿದೆ.ಇಂಗ್ಲಿಷಿನ ಸಿವಿಲೈಜೆಷನ್ ಎಂಬ ಪದವು
‘ ಸಿವ್ಹಿಲಸ್ ' ಎಂಬ ಲ್ಯಾಟಿನ ಪದದಿಂದ ಬಂದಿದೆ .ಇದರ ಅರ್ಥ 'ನಗರ, ಅಥವಾ "ನಗರ ರಾಜ್ಯ'ವೆಂದಾಗುತ್ತದೆ. ನಾಗರಿಕತೆ ಎಂಬುದು “ಹೆಚ್ಚು ಪರಿಪಕ್ವವಾದ ಮತ್ತು ಸಂಸ್ಕರಿಸಿದ ಜೀವನ” ಎಂಬರ್ಥ ಕೊಡುತ್ತದೆ .ನಾವೇನು ಹೊಂದಿದ್ದೆವೆ ಎಂಬುದು ನಾಗರಿಕತೆಯಾದರೆ ನಾವೇನಾಗಿದ್ದೇವೆ ಎನ್ನುವುದು ಸಂಸ್ಕೃತಿ ಎನಿಸಿಕೊಳ್ಳುತ್ತದೆ. ನಾಗರಿಕತೆ ಮಾನವನ ಭೌತಿಕ ವಸ್ತುಗಳನ್ನು ಹೇಳಿದರೆ ಸಂಸ್ಕೃತಿಯು ಧರ್ಮ, ಭಾಷೆ, ಕಲೆ, ಸಾಹಿತ್ಯ ,ಆಚಾರ, ವಿಚಾರ, ಉಡುಗೆ, ತೊಡುಗೆ,ನಂಬಿಕೆ ಮುಂತಾದವುಗಳನ್ನು ತಿಳಿಸುತ್ತದೆ .
ಮಾನವ ನಾಗರಿಕತೆ ಬೆಳೆಸಿಕೊಂಡಿರುವ ಮುಖ್ಯ ಉದ್ದೇಶವೆ ಮಾನವನ ಬದುಕನ್ನು ಸರಳಗೋಳಿಸಿಕೊಳ್ಳುವುದು. ಅದು ಒಂದು ಹಂತದ ವರೆಗೆ
ಸರಿಯಾಗಿಯೆ ಇತ್ತು ಆದರೆ ಮಾನವನ ದುರಾಶೆಯಿಂದ
ಪ್ರಕೃತಿಯ ಮೇಲೆ ಮಾಡುವ ಅತಿಯಾದ ದಬ್ಬಾಳಿಕೆಯಿಂದ ಅಸಮತೋಲನವಾದಂತೆ ಕಂಡು ಬರುತ್ತಿರುವುದು ಅಷ್ಟೆ ಸತ್ಯ. ಪ್ರಮುಖ ಉದಾಹರಣೆಗಳನ್ನು ಹೇಳುವದಾದರೆ ಹರಿಯುವ ನದಿಗಳನ್ನು ತಡೆಯಲು ಬ್ರಹತ್ ಆಣೆಕಟ್ಟುಗಳನ್ನು ನಿರ್ಮಿಸಿದ್ದು, ಎರಡನೆಯದಾಗಿ ಕಾಡುಗಳ ನಾಶ.ಅಣುಸ್ಪೋಟದಂತ ಪ್ರಕ್ರಿಯೆಗಳು.ಇಂಥಹ ಹಲವಾರು ಪ್ರಕ್ರಿಯೆಗಳು ಅದರದೆ ಆದ ಒಂದು ದೊಡ್ಡ ಪಟ್ಟಿಯನ್ನೆ ಕೊಡಬಹುದು. ಅಂದು 18 ನೇ ಶತಮಾನದಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ನಗರಗಳು ಪ್ರವರ್ದಮಾನಕ್ಕೆ ಬಂದವು. ಅಂದರೆ ಹಿಂದೆ ಇದ್ದಿಲ್ಲ ಅಂತ ಅಲ್ಲ ಆದರೆ ಆ ನಗರಗಳ ಮಾತೆ ಬೇರೆ , ಇದು ವಸಾಹಾತುಷಾಹಿ ನಂತರ ಸಾಮ್ರಾಜ್ಯಷಾಹಿ
ಬೆಳವಣಿಗೆ ಹೊಂದಿ ಅದು ಸರ್ವಾಧಿಕಾರಿಗಕಳ ಬೆಳವಣಿಗೆಗೆ ಕಾರಣವಾಯಿತು.ಮುಂದೆ ಇದು ಎರಡು ಮಹಾ ಯುದ್ದಗಳಿಗೆ ಕಾರಣವಾಯಿತು, ಅದರ ನೇರ ಹಾಗೂ ಪರೊಕ್ಷ ಪರಿಣಾಮಗಳು ಜಗತ್ತಿನ ಮೇಲೆ ಉಂಟಾದವು.ನಾನು ಹೇಳಲು ಹೊರಟಿರುವ ಮುಖ್ಯ ಇನ್ನೊಂದು ವಿಷಯವೆಂದರೆ ಜಗತ್ತಿನಲ್ಲಿ ನಗರಗಳು ಅತಿಯಾಗಿ ಬೆಳೆಯಲು ಪ್ರಾರಂಭಿಸಿದವು,ಅದರ ಪ್ರಮುಖ ಬದಲಾವಣೆ ಎಂದರೆ ಸಾಮಾಜಿಕ ಸ್ತರದಲ್ಲಾದದ್ದು ಅದೆನೆಂದರೆ ಮೈಕ್ರೊ ಕುಟುಂಬಗಳು ಅಂದರೆ ವಿಭಜಿತ ಕುಟುಂಬಗಳ ಸಂಖೆ ಹೆಚ್ಚಗುತ್ತಿರುವುದು. ಪ್ರಾಚೀನ ಕಾಲದಿಂದ ನಡೆದು ಬಂದ ಅವಿಭಜಿತ ಕುಟುಂಬಗಳ ಸಂಖೆ ಕಡಿಮೆಯಾಗುತ್ತಿರುವದು. ವಿಶೇಷವಾಗಿ ಕಂಡು ಬರುತ್ತಿರುವ ನಗರ ವಾಸದ ವ್ಯಾಮೋಹ, ಮಾನವನ ಬದುಕನ್ನ ಇನ್ನಷ್ಟು ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತಿದೆ ಎನ್ನುವ ಭಾವ ಉಂಟಾಗುತ್ತಿರುವುದು ಅಷ್ಟೆ ಸತ್ಯ. ಸಾಮಜಿಕ ಹಬ್ಬ ಹರಿದಿನಗಳು ಕಣ್ಮರೆಯಾಗುತ್ತಿವೆ ಅವುಗಳನ್ನು ಟಿ.ವ್ಹಿ. ದಾರಾವಾಹಿಗಳಲ್ಲೊ ಸಿನಿಮಾಗಳಲ್ಲಿ ನೋಡಬೇಕಾಗಿರುವುದು ನಮ್ಮ ದುರಂತವೆ ಸರಿ ಯುವಜನಾಂಗವು ಯಾಂತ್ರಿಕ ಮತ್ತು ತಾಂತ್ರಿಕ ಸಾಧನಗಳಲ್ಲಿ ಮುಳುಗಿ ಹೊಗುತ್ತಿರುವದು ಕಂಡು ಬರುತ್ತಿದೆ. ಮನುಷ್ಯನ ಪರಮ ಉದ್ದೇಶ ಜೀವನದಲ್ಲಿ ಶಹರದಲ್ಲಿ ಒಂದು ಮನೆಕಟ್ಟಬೇಕು,ಅದರಲ್ಲಿ ಐಷಾರಾಮಿ ಜೀವನ ನಡೆಸಬೇಕೆಂಬುದೆ ಆಗಿದೆ, ಆ ಮನೆ ಹೆಗಿರುತ್ತೆ ಅಂದರೆ ಆಧುನಿಕ ಎಲ್ಲಾ ಸೌಲಬ್ಯಗಳನ್ನು ಹೋಂದಿರುತ್ತದೆ, ಆದರೆ ಸಮಾಜ ಹಾಗೂ ಸಮುದಾಯದ ನಡುವೆ ಒಂಧು ಆಳವಾದ ಕಂದಕವನ್ನು ತೋಡಿರುತ್ತದೆ ಅದು ಸುತ್ತಲಿರುವ ಕೊಟೆಯಂತಿರುವ ಕಂಪೌಂಡಿನಿಂದ ಭದ್ರವಾಗಿರುತ್ತದೆ. ಪಕ್ಕದ ಮನೆಯಲ್ಲಿ ಒಂದು. ಶವ ಯಾತ್ರೆ ಇದ್ದರು ಅದನ್ನು ನಗರಸಭೆ ಜವಾಬ್ದಾರಿ ಅನ್ನುವ ಹಂತಕ್ಕೆ ಬಂದಿದ್ದೆವೆ.ಪ್ರತಿ ಮನೆಗೆ ಒಂದು ನಾಯಿ ಇರುತ್ತೆ ಅದು ಪ್ರಾಣಿ ಪ್ರಪಂಪಂಚವಾಗಿರುತ್ತದೆ. ಅಲ್ಲಿ ಒಂದು ಗಿಳಿ ಅಥವಾ ಲವ್ಬರ್ಡ ಇರುತ್ತೆ ಅದು ಅವರ ಪಕ್ಷಿ ಪ್ರಪಂಚವಾಗಿರುತ್ತದೆ. ಅವರ ಮನೆ ಗಾರ್ಡನನಲ್ಲಿ ಒಂದೆರಡು ಗಿಡಗಳಿರುತ್ತವೆ ಅದುವೆ ಅವರ ಕಾಡು ಅಥವಾ ವನ ಇದರಲ್ಲಿ ಅವರು ಸಂತೃಪ್ತಿ ಕಾಣಬೇಕು, ಹೊರ ಜಗತ್ತಿಗೆ ಅವರು ಕೊಡುವ ಸಂದೇಶವೆನೆಂದರೆ ನಾವೇ ಸುಖಿಗಳು ತುಂಬಾ ನಾಗರಿಕರು ಅಂತ. ಈ ಶಹರ ಜೀವನದ ಸೆಳುವಿಗೆ ಸಿಕ್ಕ ಇಂದಿನ ತರುಣರು ಹಳ್ಳಿಗಳಿಂದ ವಿಮುಖರಾಗಿ ಶಹರದ ಕಡೆ ಮುಖ ಮಾಡಿದ್ದಾರೆ ಅಲ್ಲಿ ಅವರಿಗೆ ಸಿಕ್ಕದ್ದಾದರೂ ಎನು ? ವಾಹನಗಳು ಉಗುಳುವ ಮಾಲಿನ್ಯ ಇಕ್ಕಟ್ಟಾದ ಮನೆಗಳಲ್ಲಿ ವಾಸ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚುವರಿ ದುಡಿತ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುವದು. ಇದನ್ನು ಯಾರು ಘಟ್ಟಿ ದ್ವನಿಯಲ್ಲಿ ಹೇಳುವ ಸ್ಥಿತಿಯಲ್ಲಿ ಇಲ್ಲ ಯಾಕೆಂದರೆ ಪ್ರಗತಿ ವಿರೋಧಿಯಾಗುವ ಭಯ. “ಒಂದು ಕತೆ ನೆನಪಾಗತ್ತದೆ ಒಂದೂರಿನಲ್ಲಿ ಬಸವಣ್ಣನ ಮೂರ್ತಿ ಅದರ ಮೂಗಿನಲ್ಲ ಬೆರಳಿಡುವ ಸ್ಪರ್ಧೆ ಮೊದಲನೆಯವನು ಬೆರಳು ಸೇರಿಸಿದ ಅದರಲ್ಲಿ ಇಗಾಗಲೆ ಇರುವ ಚೇಳಿನಿಂದ ಕಚ್ಚಿಸಿಕೊಳ್ಳತ್ತಾನೆ ಆದರೆ ಹೇಳುವದಿಲ್ಲ, ಬದಲಾಗಿ ತಂಪಾಗಿದೆ ಎಂದು ಹೇಳುತ್ತಾನೆ ನಂತರ ಒಬ್ಬಾರಾದ ಮೇಲೆ ಒಬ್ಬರಂತೆ ಮುಂದುವರೆಯುತ್ತದೆ ಸತ್ಯ ಯಾರು ಹೇಳದೆ ಕಚ್ಚಿಸಿಕೊಳ್ಳುವ ಪ್ರಕ್ರಿಯೆ ಹಾಗೆ ಮುಂದುವರೆಯುವುದು” ಇದು ಒಂದು ಕತೆಯಾದರೆ ಇದರಲ್ಲಿರವ ತಾತ್ಪರ್ಯ ನಮ್ಮ ನಗರಿಕರಣದ ಪ್ರಭಾವದಿಂದ ನಾಗರಿಕತೆ ನಾಗಾಲೋಟದಿಂದ ಓಡುತ್ತಿದ್ದು ಫಲಶ್ರುತಿಯಾಗಿ ತರುಣರು ಅಸಹಾಯಕರಾಗಿದ್ದಾರೆ.
ಹಳ್ಳಿ ಬದುಕಿನ ಹದವಾದ ಜೀವನ ಬಲ್ಲವನೆ ಬಲ್ಲ ಅದರ ರಸಗುಲ್ಲ ಆದರೆ ಆತ ಪ್ರಕೃತಿ ಆರಾಧಕನಾಗಿರಬೇಕು ಶಹರದ ಎರಡು ಮರಗಳೆ ಉದ್ಯಾನವನ ಎನ್ನುವದಾದರೆ ಸಾವಿರ ಮರಗಳ ಸೌಂದರ್ಯ್ ಸವಿಯುವ ತರುಣ ಇನ್ನೆಂತಹ ಸುಖಿ, ಪಂಜರದಲ್ಲಟ್ಟ ಹಕ್ಕಿಯೆ ಹಕ್ಕಿ ಪ್ರಪಂಚ ಎನ್ನುವದಾದರೆ ಸಾವಿರ ಹಕ್ಕಿಯ ನಿನಾದ ಕೇಳುವ, ಆಸ್ವಾದಿಸುವ ತರುಣ ಅದೆಷ್ಟು ಸುಖಿ, ನೂರು ರೂಪಾಯಿ ಹಣ ತೆತ್ತು ನೂರು ಲಿಟರ ನೀರಿನಲ್ಲಿ ನಿಮಿಷದ ಲೆಕ್ಕದಲ್ಲಿ ಈಜುವದೆ ಸೌಖ್ಯ ಎನ್ನುವದಾದರೆ ಹಣ ತೆತ್ತದೆ ತನಗಿಷ್ಟ ಬಂದಷ್ಟು ವಿವಹರಿಸುವದು ಅದೆಂತ ಮಹಾಸೌಖ್ಯ ಇದನ್ನು ತರುಣರಿಗೆ ಮಾರ್ಗದರ್ಶನ ಮಾಡುವವರು ಯಾರು ? ಅವರು ಹಳ್ಳಿಯಲ್ಲಿಯೆ ಉಳಿಯಲು ಮಾಡಿದ ಕ್ರಮಗಳೆನು ಈ ವಾದ ಮಂಡಿಸುವ ಜನರೆ ಪ್ರಗತಿ ವಿರೋಧಿಗಳು. ಹಳ್ಳಿ ಉದ್ದಾರವೆ ದೇಶದ ಉದ್ಧಾರ ವೆಂದ ಗಾಂದೀಜಿ ಮತ್ತೆ ಹುಟ್ಟಿ ಬರಬೇಕು ಇನ್ನೊಮ್ಮೆ ಸ್ವಾತಂತ್ರ್ಯ ತರಬೇಕು ನಗರದ ವ್ಯಾಮೋಹ ಕಡಿಮೆಯಾಗಬೇಕು ಹಳ್ಳಿಯಲ್ಲಿ ಬದುಕು ಕಟ್ಟುವ ಕ್ರಮಗಳು ತರುಣರಿಗಾಗಿ ಬರಬೇಕಾಗಿದೆ