Thursday, April 30, 2020

* ಆಶ್ರಮ *

ಹಾಲುಣಿಸಿ ಹಾರೈಸಿ ತಾ ಬೆಳಸಿ 
ಮೊದಲ ತೊದಲು ನುಡಿಯ ಕಲಿಸಿ,
ಶೈಶವ ಗೆಲ್ಲಿಸಿದಳು ಮಾಹಾ ತಾಯಿ
ಕಂಡೆ  ಮೂಲಶ್ರಮದ  ಗೆಲುವು //

ಬಾಗಿ ನಡೆಯುವ ಭಕ್ತಿ ಕಲಿಸಿ
ಭವದರಿವ ಬೆಳಕ ಬಾಲ್ಯದಲಿ ಹರಸಿ
ಬದುಕು ಕಟ್ಟುವ ಗುರು ನೀ ತಿಳಿಸಿ
ಕಂಡೆ ಬ್ರಹ್ಮಚರ್ಯದ  ಗೆಲುವು //

ಹಮ್ಮು ಬಿಮ್ಮು ಬದಿಗೆ ಸರಿಸಿ
ಹೊಂದಾಣಿಕೆ ಮನೆಯಲಿ ಕಲಿಸಿ
ಮುನ್ನೆಡೆಯುವ ಪತ್ನಿಯ ಎನ್ನರಸಿ
ಕಂಡೆ ಎರಡಾಶ್ರಮದ ಗೆಲುವು //

ಭವ ಬಂಧನದ ಬಾಳ ಬಳಸಿ
ತೆರಳಿದೆನು ವನದ ಶಾಂತಿ ಅರಸಿ
ಗುಣವರಿತ ವನ ಮನ ಅರಳಿಸಿ
ಕಂಡೆ ಮೂರಾಶ್ರಮದ ಗೆಲುವು //

ಸರ್ವ ಸಂಗ ತನ್ನ ಅಂಗದಿ ತೊರೆದು
ಭಂಗ ತಾರದೆ ಸಂಗದೇಳಿಗೆಗೆ ದುಡಿದು
ಶಾಂತಿ ಸನ್ಯಾಸದ ವೈರಾಗ್ಯ ವುಂಡು
ಕಂಡೆ ನಾಲ್ಕನೇ ಆಶ್ರಮ ಗೆಲುವು//
               
                     ಬಸನಗೌಡ ಗೌಡರ

ಚುಟುಕುಗಳು

1)
ದರಣಿ ನಿರತರೆಲ್ಲ ಬದುಕಿಗಾಗಿ
ಕೊಗುತ್ತಿದ್ದರು ದಿಕ್ಕಾರ, ದಿಕ್ಕಾರ,
ಯಾಕೆಂದರೆ ಇವರಿಗೆ ಅಧಿಕಾರವೆ ಕಾರ,
ಇದಕ್ಕೆಲ್ಲ ಕಾರಣ ರಾಜಕಾರಣ //

2)
ಸರಿಯಾಗಿ ಇರುವವನು ಮಾಡುವನು
ಯಾವಾಗಲು ನೇರ ಧರಣಿ
ಬದುಕಿಗಾಗಿ ಇವನದೆಲ್ಲ ಸರಣಿ
ಬಾಗಿ ಬೆಸೆದರೂ  ಆಗಲಿಲ್ಲ ಬೆರಣಿ

3)
ಹೆಂಡತಿ ಮಾಡಿದರೆ ಧರಣಿ
ನನಗೆ ಬೇಕು ಗುರಾನಿ
ಬದುಕು ಅಲ್ಲದು ಗುಮಾನಿ
ದಿನಾ ತರಬೇಕಿತ್ತು ನಾ ಕಿರಾಣಿ//

4)
ಬದುಕು ಕಟ್ಟಲು ನಾಮಾಡಬೇಕು
ಅಧಿಕಾರದ ವಿರುದ್ದ ಧರಣಿ
ಬದುಕೇಂಬುದು ದೇವರು ಕೊಟ್ಟ ವರ
ಧರಣಿ ಮೇಲಿದ್ದೆ ಜಯಿಸಬೇಕದನ್ನ

5)
ದಿನಾ ಬೆಳಗಾದರೆ ನೌಕರ
ಸಂಬಳವೇರಿಸಲು ಧರಣಿ
ಮಾಲಕ  ಹೇಳಿದ ತಾಳಿ ಕೊರೊನಾ
ಬದುಕನ್ನು ಮಾಡಿದೆ ಹೈರಾಣ

6)
ಬದುಕೆಂಬುದು ನಮಗಾಗಿದೆ
ಸಾಲದ ಸರಣಿ, ಸಾಕಬೇಕಾದರೆ
ಸಂಸಾರ,ಸಾಲದಾಗಿದ ಪಗಾರ
ಧರಣಿ ಒಂದೆ ನಮಗಿಗ ಆಧಾರ

           
7)
ವೇದನೆಗಾಗಿ ತಾಳದಾದೆ
ಬದುಕಬೇಕಲ್ಲ ನಾ ಈಜಿ ದಡ
ಧರಣಿಯೊಳ ಬದುಕಲು
ಧರಣಿಯೊಂದೆ ಪರಿಹಾರವಲ್ಲ

8)
ಧರಣಿ ಮಂಡಲ ಮಧ್ಯ ದೊಳು
ಮೆರೆಯುತಿರುವ ಧನಿಕರ
ಮಧವ ಮುರಿಯಲು ಧರಣಿ
ಒಂದೆ ಅಸ್ತ್ರ ಜನಗಳಿಗೆ

       
9)
ಬದಕೆಂಬುದು ಒಂದು ಸಾಗರ
ಅಲ್ಲಿ ಉಬ್ಬರ ವಿಳಿತ ನಿರಂತರ
ಧರಣಿ ಗಪ್ಪಳಿಸಿದಾಗ ಹಿಂದೆ
ಸರಿಯಲ್ಲವೆ ಎಷ್ಟೇ ಉಗ್ರನಿದ್ದರು//

10)

ಕಷ್ಟವೇನೆ ಇರಲಿ ಇಷ್ಟು ಪಟ್ಟು
ಬದುಕು, ದುಷ್ಟರು ತನ್ನಷ್ಟಕೆ ತಾನು
ಕರಗುವರು ಈ ಧರಣಿ ಯಲ್ಲಿ
ಕಷ್ಟವೆ ಹಿಮ ಕರಗಿದ ಹಾಗೆ

 11)
ತರುಣಿಯ  ಕಾಲ್ಗೆಜ್ಜಿಗೆ ನಾದ
ಹೊರಹೊಮ್ಮಲು ಧರಣಿ
ಗಪ್ಪಳಿಸೀತಾ ದೇಹಾ ಶರಣಾಗಿ
ಬದುಕ ಬಂಗಾರವಾಗಲು //
12)
ಬೆರನಿಯನು ತಟ್ಟು ವಾಗ
ಧರಣಿ ತಾ ನೊಯಿವಳೆ
ಶರನಾಗಿ ಬಂದು ಬದುಕು ಕಟ್ಟಲು
ನಿಂತೊಡೆ ಅಭಯವೆನ್ನಳೆ

13)
ಧರಣಿಯ  ಮೇಲಿನ ದಬ್ಬಾಳಿಕೆ
ತಡಿಯದಿರೆ ಬದುಕು
ಬರುಡಾಗುವುದು
ತಪ್ಪಿಸಲು
ಬ್ರಹ್ಮ ನಿಂದೂ ಸಾದ್ಯ ವಿಲ್ಲ //
14)
ಬರಗಾಲ ಭವನೆಗೆ ಜಡ ಮನುಜನೆ
ನಿಜ ಕಾರಣ, ಬದುಕು ಕಟ್ಟಲು ನಗರೀಕರಣ ಪರಿಹಾರವೆಂದರಿತ
ಬಡ ಬಡಿಕೆ ಧರಣಿಗೆ ದಬ್ಬಾಳಿಕೆ //

           
15)
ಒಲವಿನ ಮನೆಯೊಳಗೆ ಸಲುಹು
ತಾಯೇ,ಕುಲಾಯಿಯಲ್ಲು ತುತೂ
ಮೂಗು ಮುಖ ಮುಚ್ಚಿದವರಿಂದು
ಬದುಕು ಕಚ್ಚಿದರೀ ಧರನಣಿಯಲಿಂದು
16)
ಹುಟ್ಟುವುದು ಮಣ್ಣಿಂದ ಸುಟ್ಟ  ಬುದಿಯೂ ಕಟ್ಟಿ ಸುತ್ತಿಡುವುದು
ಮಣ್ಣ ಮಧ್ಯದಲ್ಲಿ, ಬದುಕು ಬರಿ
ಕ್ಷಣಿಕ ಹಂಚಿ ಬೆಳಕಾಗು ಧರಣಿಯಲಿ

17)
ಮನ ಉರಿದೊಡೆ ಈ ಕಾಯ
ಸಂಹಾರ /ಮನೆ ಉರಿದೆಡೆ
ಕುಟುಂಬ ಸಂಹಾರ/ಕುಲ ಉರಿದೊಡೆ ಸಮುದಾಯ  ಸಂವಾರ/ ಧರಣಿ ಉರಿದೆಡೆ  ಬದುಕೇ ಸಂಹಾರ//

18)
ಕಾಯಕ ಅರಿತವನೆ ಕರ್ಮ ಯೋಗಿ
ತಿಳಿದು ಬಾಗುವನು ಶಿವಯೊಗಿ
ತಿಳಿದು ಸೆರುವವನು ಸಮಭಾಗಿ
ಆಹಾರ ಅರಿತವನೆ ನಿರೋಗಿ //
                 
                 ಬಸನಗೌಡ

ಚುಟುಕುಗಳು

1)       
ಸ್ವಾತಂತ್ರ್ಯ ಸವಿಯರಿಯದೆ ಜನ
ಸ್ವೇಚ್ಚೆಗೆ ಮುತ್ತಿಕ್ಕುತಿರಲು ಶಿವ ನಕ್ಕ
ಸ್ವಾತಂತ್ರ್ಯ ವೆಂಬ ಹಕ್ಕುಕೊಡಾಕಾ
ಕಾರ್ಡ ಹಾಕಿ ಪಡೆದಂತಲ್ಲ ರೊಕ್ಕ //

2)
ಹದ ಮಳೆಗೆ ಅರಳುವುದು ಮಣ್ಣು
ಅದಕಿರಬೆಕು ಸೂರ್ಯನ ಕಣ್ಣು
ರೈತ ಶ್ರಮ ಹಾಕಿದರೆ ಹೊನ್ನು
ಇಲ್ಲದಿದ್ದರೆ ಏನು ಮಾಡಿತು ಪೆನ್ನು //

3)
ಪ್ರಕೃತಿ ಮಾಡಿದರೆ ವಿರೂಪ.
ತಾತ್ಕಾಲ ಸಿಗಬಹುದು ಪರಾಕ
ಕಾಲ ಮುಗಿದಾದ ಮೇಲೆ ಶಾಪ
ಕಳೆದು ಕೊಳ್ಳ ಬೇಕು ಸ್ವರೂಪ //

4)
ನಮಗೆ ಒಳ್ಳೆಯದು ಬರುವಾಗ
ನಾವು ಹೇಳುವುದೆಲ್ಲ ಏಕತೆ ಮಂತ್ರ
ಲಾಭ  ತಪ್ಪಿತೆಂದು ತಿಳಿಯಿತೊ
ನಾವು ಮಾಡುವುದೆಲ್ಲ ಕುತಂತ್ರ//

5)
ಅವರಪ್ಪನ ಆಸ್ತಿಗೆಲ್ಲ ಅವರೆ
ನೈಜ ಹಕ್ಕುದಾರರು ಅಪ್ಪನ
ಆದಾಯ ತಪ್ಪಿತೊ  ಅವರವರ
ಆ ಹಕ್ಕು ಹಂಚುವವರು ಅವರೆ//

6)
ಮಾತಿಗೆ ಒಂದೆ ಅರ್ಥ
ಹೇಳಿದವರಾರು ನಾನಾ ಅರ್ಥ? ಪೂರ್ವಾಗ್ರಹ,
ಗ್ರಹಿಕೆಗಳ ಎಡವಟ್ಟು  ಅಪಾರ್ಥ
ಹೇಳಿದವನದು ಒಂದೆ ಅರ್ಥ//

7)
ಸರಿಯಾಗಿ ಇರುವವನು
ಯಾವಾಗಲು ನೇರ
ಬಾಗಿ ಬೆಸೆದವನಿಗೆ ಬರೆ ಬಿತ್ತೊ
ಆಗ ಸರಿಯಾಗಿರುವವನೆ ಸುಮಾರ//

8)
ಸಾಧನೆಗೆ ಉಳಿದಿದ್ದೆ ಅವಶೇಷ
ಸಾವಿರ ವರುಷದ ಮೇಲೂ ಉಳಿದರೆ
ಅದು ನಮ್ಮೆಲ್ಲರ ಆದಿಶೇಷ,
ಅದಕ್ಕೆ ನಾವು ಮಾಡಬೇಕು  ನಾಮಾವಶೇಷ /
ಚುಟುಕು ಸ್ಪರ್ಧೆಗಾಗಿ:

9) ಕ್ರಮ ಸಂಖ್ಯೆ:  13

* ಕಲಿಕೆ  *

ಅಳುತ ಕಲಿತು, ಕಲಿತು ಮರೆತು.
ಅನುದಿನ,ಪರೀಕ್ಷೆಗೆ ಕಲಿಯುವ
ಕಲಿಯುಗದ,ಕಲಿಸುವಿಕೆಗೆ ಸಲಾಮ
ಕಲಿಕೆಯದು ಗ್ರಹಿಕೆಗಳ ವಿಕರಣ.


Wednesday, April 29, 2020

ನನ್ನ ಕವನದ ವಿಮರ್ಶೆ

ಬಸವನ ಗೌಡರ.

ಸರ್🙏🏼

ನಿಮ್ಮ ಬದುಕು ವಿಸ್ಮಯ

ಕವನ..
ಬದುಕು ವಿಶ್ಮಯ

ಬದುಕು ಒಂದು ಪ್ರಶ್ನೆಯ ಕಟ್ಟು
ಇಲ್ಲಿ ಬಂದವರೆಷ್ಟು ಹೋದವರೆಷ್ಟು
ಲೆಕ್ಕವಿಟ್ಟ ವರಾರು ಆ ಸಾಲುಪಟ್ಟಿ
ಜಗದ ಹುಟ್ಟನು ರಟ್ಟು ಮಾಡಲು ಹೊರಟು ಮಾಡಿ ಕೊಂಡರೆಡವಟ್ಟು //
👆🏻ಬದುಕು ವಿಸ್ಮಯವೇ ಸರಿ

ಯಾವ ನಿಮಿಷ ವೂ ನಮಗೆ ತಿಳಿಯದು...ಬರೀ‌ ಪ್ರಶ್ನೆ!!‌ಎಂಬುದನ್ನು..ಕಟ್ಟು ಎನ್ನುವ‌ ಪದದಲ್ಲಿ..
ಕಟ್ಟಿದ್ದಾರೆ ಕವಿ..ಅದು‌ತಿಳಿಯಲಾಗದ...ವಿಸ್ಮಯ...!!.ಅದು ಸೃಷ್ಟಿ ಕರ್ತನ..ಆಟ...ಏನೋ‌ಸಾಧಿಸುತ್ತೇವೆ ಅನ್ನುವ ಹಠ..
ಬೇಡ..
ತೊಂದರೆ..
ಕಟ್ಟೊಟ್ಟದ್ದು..


ಜಗದ ನಿಯಮಿ ಮೀರಿ ತಾನೆ
ಏನು ಮಾಡಲಾಗದು, ಆಡಿಸಿದಂತೆ
ಆಡಬೇಕು ಅಲುಗಾಡದೆ ಸುಮ್ಮನೆ ಜಾಣರಂತೆ ಬರೆದ ನಿಯಮವೆಲ್ಲ
ಬಾಗದೆ ತಾಳೆಯಾಗದು ಇಲ್ಲಿ //
👆🏻...ನಾವು ಏನನ್ನೂ ಬದಲು ಮಾಡಲಾಗದು.
ನಿಯಾಮಕನ ನಿಮಯವಕ್ಕೆ ಎಲ್ಲರೂ ಬದ್ದ ಅಷ್ಟೇ....ನಾವು ಬಾಗಿ.
ಒಪ್ಪಿ..ನಡೆಯ ಬೇಕು...

ಜನರು ತಿಳಿದ ಹಾಗೆ ಜನನ
ಮರಣ ಸಹಜ ನಿತ್ಯಪ್ರಕರಣ
ಸಹಜವೆಂದ ಮೇಲೆ ಯಾಕೆ ರಣ
ಸತತ ಸವಿಯಬೇಕು ಜೀವನ
ಸಮನ್ವಯ ಸಾಧಿಸದಿರೆ ಹರಣ   //
😌👆🏻ಇಲ್ಲಿ ಬಹಳ ಅದ್ಭುತವಾದ..ಸಾಲುಗಳು‌ಹೃದಯದಲ್ಲಿ.
ನಿಲ್ಲುತ್ತದೆ.
ಹುಟ್ಟು ಸಾವಿನಲ್ಲಿ‌ನಮ್ಮ‌ಮನಸ್ಸು‌ಸಮನ್ವಯವನ್ನು ಸಾಧಿಸ ಬೇಕಷ್ಟೇ..!! ಎಲ್ಲವೂ ಸಹಜ...ಒಪ್ಪಬೇಕು.
.ತಿದ್ದಲಾಗದು...ಸಮನಾಗಿ... ಸ್ವೀಕರಿಸಿ..ನಡೆಯಬೇಕು.

ಬಹಳ ಅದ್ಭುತ..ಚಿಂತನಾರ್ಹ!!

ಲೋಕನಾಯಕ  ತಿರುಗಿಸಿದಂತೆ
ತಿರುಗುವ ಖಾಲಿ ಗೊಂಬೆಗಳು
ಕಾಲ ಮುಗಿದ ಮೇಲೆ ದಾರ
ಹರಿದು ಎಲ್ಲಾ ಹರ ಹರ,ಬದುಕು
ಸವಿಯಬೇಕು ಇಲ್ಲಿ ಪ್ರಶ್ನೆ ಮಾಡದೆ //
👆🏻ಸೂತ್ರಧಾರನ‌‌ನಿಯಮದಂತೆ ಮೌನವಾಗಿ ನಮ್ಮ‌‌ನಮ್ಮ‌ಕರ್ತವ್ಯವನ್ನು ಮಾಡ ಬೇಕು ಯಾವುದೇ ಪ್ರಶ್ನೆ ಮಾಡ ಬಾರದು..ಅದಕ್ಕೆ ಉತ್ತರ ಇಲ್ಲ..

ಬಹಳ ಚಿಂತನಾರ್ಹ...ಕವನ...ನನಗೆ ಬಹಳ..ಇಷ್ಟವಾಯ್ತು..ಸರ್🙏🏼
..
           🖋️ಬಸನಗೌಡ ಗೌಡರ
ಅವರಿಗೆ  ಧನ್ಯವಾದಗಳು.

ಎಸ್. ನಾಗಮ್ಮ🌹

Tuesday, April 28, 2020

ಬದುಕು ವಿಶ್ಮಯ

ಬದುಕು ಒಂದು ಪ್ರಶ್ನೆಯ ಕಟ್ಟು
ಇಲ್ಲಿ ಬಂದವರೆಷ್ಟು ಹೋದವರೆಷ್ಟು
ಲೆಕ್ಕವಿಟ್ಟ ವರಾರು ಆ ಸಾಲುಪಟ್ಟಿ
ಜಗದ ಹುಟ್ಟನು ರಟ್ಟು ಮಾಡಲು
ಹೊರಟು ಮಾಡಿ ಕೊಂಡರೆಡವಟ್ಟು //

ಜಗದ ನಿಯಮಿ ಮೀರಿ ತಾನೆ
ಏನು ಮಾಡಲಾಗದು, ಆಡಿಸಿದಂತೆ
ಆಡಬೇಕು ಅಲುಗಾಡದೆ ಸುಮ್ಮನೆ
ಜಾಣರಂತೆ ಬರೆದ ನಿಯಮವೆಲ್ಲ
ಬಾಗದೆ ತಾಳೆಯಾಗದು ಇಲ್ಲಿ //

ಜನರು ತಿಳಿದ ಹಾಗೆ ಜನನ
ಮರಣ ಸಹಜ ನಿತ್ಯಪ್ರಕರಣ
ಸಹಜವೆಂದ ಮೇಲೆ ಯಾಕೆ ರಣ
ಸತತ ಸವಿಯಬೇಕು ಜೀವನ
ಸಮನ್ವಯ ಸಾಧಿಸದಿರೆ ಹರಣ   //

ಲೋಕನಾಯಕ  ತಿರುಗಿಸಿದಂತೆ
ತಿರುಗುವ ಖಾಲಿ ಗೊಂಬೆಗಳು
ಕಾಲ ಮುಗಿದ ಮೇಲೆ ದಾರ
ಹರಿದು ಎಲ್ಲಾ ಹರ ಹರ,ಬದುಕು
ಸವಿಯಬೇಕು ಇಲ್ಲಿ ಪ್ರಶ್ನೆ ಮಾಡದೆ //

                       ಬಸನಗೌಡ ಗೌಡರ

Monday, April 27, 2020

ನೆಚ್ಚಿನ ಗುರು

ನನಗೂ ಒಬ್ಬ ಗುರು ಬೇಕು
ಅಕ್ಕ,ನನಗೂಬ್ಬ  ಗುರು ಬೇಕು //ಪ/

ತಾನೇಳುವ ವಿಷಯ ಪಂಡಿತನಿರಬೇಕು
ನಗುನಗುತ ಪಾಠ ಮಾಡಬೇಕು /

ವೇಳೆಯ ಮಹತ್ವ ತಿಳಿದಿರಬೇಕು
ತಾಳ್ಮೆ ಮಾತ್ರ ಬಾಳ ಇರಬೇಕು/

ನಿತ್ಯಸಂಶೋಧನೆ ಮಾಡತಿರಬೇಕು
ಸತ್ಯದಿಂದ ನಡೆಯುತಿರಬೇಕು /

ಶಿಸ್ತಿನ ಬಗ್ಗೆ ಹೇಳತರಬೇಕು
ಪೂರ್ಣ  ಅಳವಡಿಸಿಕೊಂಡಿರಬೇಕು /

ಪ್ರಚಲಿತ ಜ್ಞಾನ  ತಿಳಿದಿರಬೇಕು
ಬೋಧನೆಯಲ್ಲಿ ಅಳವಡಿಸಿರಬೇಕು /

ದುಷ್ಟ ಗುಣಗಳ ಸುಟ್ಟಿರಬೇಕು
ಶಿಷ್ಟಾಚಾರ ಮೊದಲ ಇರಬೇಕು/

ಮಕ್ಕಳ ಜೊತೆ ಇರತಿರಬೇಕು
ಚರ್ಚೆ ಅವರ ಪದ್ಧತಿಯಾಗಿರಬೇಕು /

ಹವ್ಯಾಸ ಮಾತ್ರ ಒಳ್ಳೆಯದಿರಬೇಕು
ಸಾಹಿತ್ಯ ಕಲೆ  ತಿಳಿದಿರಬೇಕು /

ಪ್ರಿತಿಯಿಂದ ಪಾಠ ಮಾಡತಿರಬೇಕು
ಸುಳ್ಳಿನಿಂದ ದೂರವಿರಬೇಕು/

ನನಗೂ ಒಬ್ಬ ಗುರು ಬೇಕು
ಅಕ್ಕ,ನನಗೂಬ್ಬ  ಗುರು ಬೇಕು... //

                ಬಸನಗೌಡ ಗೌಡರ

ನ್ಯಾನೋ ಕಥೆ

ಅದೊಂದು ಸ್ಪರ್ಧೆ, 'ನಾ ಹೆಚ್ಚು ನೀ ಹೆಚ್ಚು' ಹಾಲು ಹೇಳಿತು ನಾನೇ  ಹೆಚ್ಚು, ಹೇಗಪ್ಪ ಹೇಳು ,ಕೇಳದರು ಆಯೋಜಕರು ..ನಾನಿಲ್ಲದೆ ಮುಂಜಾವು ನೆನೆಸಿಕೊ ಚಹಾ ಇಲ್ಲ ,ಅನ್ನಕ್ಕೆ ಹಾಲು ಇಲ್ಲ ಮಕ್ಕಳಿಗೂ ಕುಡಿಲಿಕ್ಕಿಲ್ಲ, ಊಟ ಮಾಡುವುದು ಹೇಗೆ ? ಉಹೂ..ನೆನೆಸಿಕೊಳ್ಳುವದಕ್ಕೂ ಆಗುವದಿಲ್ಲ ಆ ಕಾರಣಕ್ಕೆ ನಾನೆ ಹೆಚ್ಚು.ಎಂದಿತು.
ಆಲ್ಕೋಹಾಲ್ ಬಂದಿತು ನಾನೆ ಹೆಚ್ಚು,ಅದು ಹೇಗೆ? ಕೇಳಿದ್ರು ಆಯೋಜಕರು . ಹಾಲಿನ ಸ್ನೇಹ ಮಾಡಿದವರ ಪರಿಸ್ಥಿತಿ ನೊಡಿದ್ದಿಯಾ? ಮನೆ ಮನೆ ತಿರುಗಬೇಕು. ಚೌಕಾಸಿಗಿಳಿತಾರ ...ಕಿರಿ ಕಿರಿ.
ನಾನಾದರೋ ಜಗಮಗಿಸುವ ಬೆಳಕಿನಲ್ಲಿ ವಾಸಿಸುವೆ ,ನಾನಿರುವ ಜಾಗದ ಕಡೆ  ಜನರೆ ಓಡಿ ಬರುತ್ತಾರೆ  ಚೌಕಾಸಿ ಮಾಡಿದ್ದು ಉಂಟಾ ! ಹಾಗಾಗಿ ನಾನೆ ಮೇಲು ಆಯೋಜಕರು ಸುಸ್ತೋ ಸುಸ್ತು.

        🖋️ ಬಸನಗೌಡ ಗೌಡರ

Sunday, April 26, 2020

* ಬದುಕು ಬವಣೆ *

ಸ್ಪರ್ಧೆ - ಚಿತ್ರ ಕವನ

ಬಯಲು ಛತ್ರವೆ ಬದುಕಿನಾಲಯ
ಇದುವೆ ನಾನು ನಂಬಿದ ಶಿವಾಲಯ
ನನಗಿಂತ ಮೇಲೆ ಯಾರದಿಲ್ಲ ಆಲಯ
ಅರಮನೆ ಕೊಡುವುದೆ ಇಲ್ಲದ ನೆರಳ//

 ಭರವಸೆಯ ಬೆಳಕನ್ನೆ ಒಡಲಲ್ಲಿ ತುಂಬಿ
ಬಾಗಿ ಕುಳಿತವನು, ಬದುಕು ನಂಬಿ
ಆ ಚಳಿ ಗಾಳಿಗೂ ಬಗ್ಗದೆ ಬತ್ತದೆ
ಭಾವಿ ಬದುಕಿಗೆ ಬರುವದೆಮ್ಮ ಕಾಲ //

ಒಪ್ಪತ್ತಿನ ಊಟಕ್ಕೂಈಗ ತತ್ವಾರ
ಪ್ರೀತಿ ಬಿಗಿದಪ್ಪುಗೆ ನಮಗಾಹರ
 ಪಾತ್ರೆಗಳೆ ನಮ್ಮಇಂದಿನ ಶತೃಗಳು,
 ನಾಳೆ ಕಾಣುವೆ ನಮಗೂಂದು ಕಾಲ//

ಕಾಣದ ಕೈಗಾಗಿ ಕಾತರಿಸುವೆ ಇಲ್ಲಿ
ಮಡದಿ ಮಕ್ಕಳ ಮಾನ ಮನದಲ್ಲಿ ಬಿತ್ತಿ ಹಿಮಾಲಯದೆತ್ತರಿಕ್ಕೆರಿಸುವೆ ಅಲ್ಲಿ
ನಿತ್ಯಕಾಯುತಿದೆ ನಮಗೊಂದುಕಾಲ//
                     
          ಬಸನಗೌಡ ಗೌಡರ 

* ತವರಿನ ಸಿರಿ *

ತಂಡ-ಕುವೆಂಪು
ಸ್ಪರ್ಧೆ-  ಜಾನಪದ ಗೀತೆ

 * ತವರಿನ ಸಿರಿ *

ತವರಿನ ಕನಸ ಮರಿಯೊದು ಹ್ಯಾಂಗ
ತಾವಾಡಿದ ಗುಬ್ಬಿಮನಿ ಕೆಡಿಸಿದಂಗ
ತರವಲ್ಲ ಪತಿರಾಯ ಹಟ ಹಿಂಗ //

ತಾಯಿಯ ಒಡಲಾಗ ತಿಂದರೂ ಬೇವು
ತವರಿನ ಭಾವ ,ತಿಂದಾಂಗ ಮಾವು
ತರವಲ್ಲ ಪತಿರಾಯ ತೆಗಳಿದ್ದು ನೀವು /

ಹಾಲುಂಡ ತವರಿಗೆ ಹಾರೈಕೆ ಹಾಕಿದರ
ಹಾಲುಕ್ಕಿದಾಂಗ ತವರಿನ ಕದರ
ಹಾದಿ ಬೀದ್ಯಾಗ ಬೆಳೆಯಲಿ ಹೆಸರ //

ಅಪ್ಪ ಕೊಟ್ಟ ಕೊಪ್ಪರಗಿ ಹೊನ್ನು
ಒಪ್ಪಾಗಿ ಜೋಡಿಸಿ ಇಟ್ಟೆನಿ ನನ್ನಣ್ಣ
ಆಪತ್ತಿಗೊಂದು ಸವಾಲು ಹಾಕೆನ //

ಪಂಚಮಿ ಹಬ್ಬಕ ಮುಂಚೆನ ಬರತಾನ
ಮುಚಗೊಂಡ  ಉಡಗೋರಿ ತರತಾನ
ತಂಗಿಯ ಸಿರಿಯ ನೊಡಿ ನಗತಾನ//

ಜೋಳದ ಹೊಲದಾಗ ಬಿಳಿ ಹಕ್ಕಿ
ಹೊಡೆದಾಗ ತಾ ಬಳಲಿದ್ದ ಕಂಡು
ಸೀತನಿ ತಿನಿಶ್ಯಾನ ತಾ ಅಣ್ಣ ಹೆಕ್ಕಿ //

             ಬಸನಗೌಡ ಗೌಡರ


Saturday, April 25, 2020

ವಿರಹವೇದನೆ

ಟ್ಯುನಿಗಾಗಿ ಸಾಹಿತ್ಯ
(ಹೆಣ್ಣು ದ್ವನಿ)

ನಾ ಬಂದು ಸೇರಲು ,ನೀ ದೂರ
ಹೊದೆ  ಓ ಇನಿಯಾ  /
ಬಿಗುಮಾನ ಯಾಕೆ ನಾ ತಿಳಿಯದಾದೆ
ನಾ ಕಟ್ಟಿದಾ ಕನಸು ಸುಟ್ಟಾಕಿದೆ
ಓ  ಗೆನೆಯಾ //ಪ //

ಸಾವಿರ ಮೈಲು, ಸರಿ ದಾರಿ ಎಂದು
ನೂರೊಂದು ಮುತ್ತು
ನೀ ನೀಡಿದೆ ಅಂದು /
ನವಿರಾದ ಅಪ್ಪುಗೆ ಮರೆತಿಲ್ಲವಿನ್ನು
ಮಾವಿನ ಚಿಪ್ಪು ಚೀಪಿದೆ
ಮೇಲೆ ದೊರಾಚೆ
ಎಸೆದಾಂಗ ಇಂದು //

ನಾ ಮಾಡಿದ್ದು ತಪ್ಪಾದರೇನು
ತಡ ಮಾಡಿ ಕೊಲ್ಲಬೇಡ
ನಾ ಕಂಡ ಕನಸು  /
ತಿಳಿ ಮಾಡು ಮುನಿಸು
ಕಾಲದಾ ಒತ್ತಡ ನೀ ಮನ್ನಿಸು
ಆಸೆ ಬರುಡಾಗಿದೆ, ಹಸು ಹಾಕಲಿ
ಅಲ್ಲೊಂದು ಕರು //
ನೀನಿಲ್ಲದಾ ಅರಮನೆ
ಅದು ಬಂದಿಖಾನೆ
ನಾನಿರುವದಾದರು ಹೇಗೆ ?
ಅದು ನರಕಯಾತನೆ //

ಮತ್ತೊಮ್ಮೆ ಕರುಣಿಸು
ಮುಂಗಾರು ಬಿದ್ದಾಗ ಬರಿ ಕಂಟಿ
ಚಿಗುರಿ ಚಿತ್ತಾರ ಹರಡಿಸು
ನೀ ಎನಗೆ ಬಾಳ ಹರಿಸು /
ನೀನಿಲ್ಲದ ಬಾಳು ಸುಡಗಾಡು
ನಾ ಮರೆಯುವದಾದರು ಹೇಗೆ
ನಾ ಕಾಣಬೇಕು ಕನಸು
ನನಗೆ ತರಿಸು ಹೊಂಗನಸು//

            ಬಸನಗೌಡ ಗೌಡರ

ಚುಟುಕು 25.04.2020

1)  ಗುಣ

ಕಾಲ ಉತ್ತರಿಸುವುದು ಗುಣ ನೊಡಿ
ಕಾಯಬೆಕು ಕವಡೆ  ಕಾಯಿ ಹಾಕಿ
ಮನ ಮಿಡಿಯುವುದು ಭಾವ ಉಕ್ಕಿ
ಹೃದಯಂತರಳಾದ  ತನು ಮಿಕ್ಕಿ.

2) ಮಡದಿ

ಕಾಲು ಕೆರೆದು ಜಗಳ ಮಾಡಿದಳು
ನನ್ನಾಕಿ,ಕಾಲ ಕಳೆಯುವರೆಂದು.
ಕಾಲವೆ  ಉತ್ತರಿಸಿತ್ತು ಕವನ ಬರೆದದ್ದು
ಮಡದಿಯ ಮನ ಮೆಚ್ಚಿಸಲೆಂದು

Friday, April 24, 2020

ಸೆಳೆತ

ಸೆಳೆತ

ಮಲ್ಲಿಗೆಯಂತ ಮನೆಯೊಡತಿ
ಮನೆತುಂಬಾ ಸುವಾಸನೆ  ಸೊಸುತಿರಲು
ನೆರೆಮನೆಯೆ ಸೂರಪನಕಿ ಸೇವಂತಿಗೆಯಂತೆ  ಸೆಳೆಯುತಿರುವುದೆ ವಿಶ್ಮಯ.

           🖋️ ಬಸನಗೌಡ ಗೌಡರ

ನೀಡಿದ ಶಬ್ದ * ಒಲವು, ಗೆಲುವು *


1) ಬಾಳು

ಉಸಿರೆಂಬ ಬಾಳು ಹಸಿರಾಗಿರಾಲು
ನೇಸರನ ಕಡೆಗಾಳು ಹಸೆ ಕಾರಣ
ಮನೆ ಮಂತ್ರಾಲಯವೆನಲು
ಪ್ರಿಯೆ ನಿನ್ನ ವಲವೆ ಕಾರಣ
ಬಾಳೆಂಬ ಬಂಡಿ ಬಹುದೂರ ಸಾಗಲು
ನಿನ್ನಂತರಾತ್ಮದ ಗೆಲುವೆ ಕಾರಣ

2)  ವಿಶ್ಮಯ

ನಾನಾರೆಂಬುದು ಅರಿವು ಮಾಡಿದೆ
ನನ್ನಂತರಾತ್ಮದ ಚಲುವೆ
ನನಗೀಗ ಬಂತು ಗೆಲುವು
ನಾನೊಡಿದ ದಾರಿ ಬಹು ದೊರ
ತಿಳಿಯದೆ ಬಂತು ಈ ಊರು
ತಿಳಿಯಿತಿಗ ನಿನ್ನ ಒಲುವೆ ವಿಶ್ಮಯ

 3)   * ಪೆದ್ದನಾದ ಶುದ್ದ *

ನಾನೊಬ್ಬ ಪೆದ್ದ ನನಗೊಬ್ಬ ಸ್ನೇಹಿತನಿದ್ದ
ದಿನವು ತರೆಹೆವಾರಿ
ಸಲಹೆ ತಲೆಯಲ್ಲಿ ತುರುಕುತಲಿದ್ದ
ನನ್ನಪ್ಪ ಅಮ್ಮ ಮಾಡಿದ್ದೆ ಒಂದು
ಸ್ನೇಹಿತ ತಲೆಯಲ್ಲಿ ಹಾಕಿದ್ದೆ ಇನ್ನೊಂದು
ಸಪ್ತಪದಿ ತುಳಿಸಿ ಆಗುವನು ಶುದ್ಧ
ಅಪ್ಪಅಮ್ಮ ಮಾಡಿದರು ಜೋಡಿ
ಹುಡುಗಿ ಮಾಡಿದಳು ಮೋಡಿ
ಈಗ ನಾನು ಆದೆ ಪರಿಶುದ್ಧ

               ಬಸನಗೌಡ ಗೌಡರ

Wednesday, April 22, 2020

ಕಾತರ

ನೀಡಿದ ಶಬ್ದ - ಮುಂಗಾರು * ಕಾತರ * ನೇಸರನ ಬಿಸಿ ಉಸುರಿಗೆ ಬಾಯ್ತೆರೆದ ಭೂತಾಯಿ ವದನಕ್ಕೆ ಮುತ್ತಿಕ್ಕುವಾ ಮುಂಗಾರಿನ ಹನಿಯಂತೆ ನಿನ್ನ ಬರುವೆನೆಗೆ ಬಾರದಿರೆ ನಿತ್ಯವೂ ಬರ..(.ವೆ)ನನಗೆ. ಬಸನಗೌಡ ಗೌಡರ

Tuesday, April 21, 2020

ಶಾಯಿರಿ

ಗುಂಪು -ಕುವೆಂಪು

ಶಾಯಿರಿ -01

ಜೊತೆಯಾಗಿ ತುಳಿಯುವ ಸಪ್ತಪದಿ
ಸಾವಿನ ಅಚೆಯು ದಾಟುತಿದೆ ವಿಶ್ಮಯ /
ಅರಿಯದೆ ದಾಟುವ ಒಂದು ಪಾದ
ತುಳಿಯುತಿದೆ ಶ್ಮಶಾನದ ಹಾದಿ
ನಿಸಂಶಯ /


ಶಾಯಿರಿ.  02

ನನ್ನೆದೆಯ ಬಾರತಾಳದೆ ಆ ಕಾರ್ಮೋಡ
ನಿನ್ನ ಹೃದಯದಲ್ಲಿಡಲೆ ಪ್ರಿಯೆ /
ಬಿಸಿಯುಸಿರ ಪ್ರೀತಿಗೆ ಆ ಮೋಡ
ಕರಗಿ ನದಿಯಾಗಿ ಹರಿಯಲಿ ಕಡಲಿಗೆ /

* ಸಾರ್ಥಕತೆ *


ನಾನು ನನ್ನದೆನ್ನುವ ಮಮಕಾರ
ಬಿಟ್ಟು ನಡೆ ಮುಂದೆ, ನುಗ್ಗಿ ನಡೆ ಮುಂದೆ,
ಹೆಡಮುರಿ ಕಟ್ಟುವರು
ನಿನ್ನ ಹಿಂದೆ ಹಿಂದೆ.  //

ಸಾವು ಗೆದ್ದವರಿಲ್ಲ ನೋವು ಕೊಟ್ಟವರು
ಉಳಿದಿಲ್ಲ ಬದುಕಿ ಬಾಳಿಲ್ಲ
ಕೊಂದವನು ನಿಂದಕನು
ನೊಂದುಕೊಳ್ಳುವರು ಇಂದೆ ಇಂದೆ //

ಶ್ಮಶಾನದ ದಾರಿಯಲಿ ಸಾವಿರ, ಸಾವಿರ
ಸತ್ತ ಮೇಲೂ ಉತ್ತರಿಸುವರು
ಸಾಧನೆಯ ಶಿಖರಕ್ಕೆರಿದ ಗುಟ್ಟು
ಸಾವೆ ಸನ್ಮಾನವಾಗಿತ್ತಂದು. //

ಬದುಕ ಕಟ್ಟಲು ಬಾಳಿದ ಮೂರು ದಿನ
ಬೆವರಾಗಿ ಹರಿದಿತ್ತು ಶ್ರಮದ ದಾನ
ಕಣ್ಣಿರು ಕಡಲಾಗಿ ಉಸಿರು ಬಿಸಿಯಾಗಿ
ಕಾರ್ಮೋಡ ಕರಗಿತ್ತಂದು. //

           ಬಸನಗೌಡ ಗೌಡರ


Monday, April 20, 2020

* ಸಮರಸವೆ ಜೀವನ *

ಭಾವಗೀತೆ

ಸಾಕು ಮಾಡು ಸಾಲು ಮಾತು
ಸಕಲವು ಇದರಲ್ಲಿ ಸಿಗುವುದೆನಿತು
ಸಪ್ತ ಸ್ವರದ ಹಾಡು ಕಲಿತು
ನಿತ್ಯ ರಮಿಸುವುದು ತಿಳಿಯಿತು// ಪ//

ಮಲ್ಲಿಗೆ ಸೇವಂತಿಗೆ  ಮಾರು ತಂದು
ಮೆಲ್ಲಗೆ ಗಲ್ಲಕೆ ನವಿರು ಬೆಲ್ಲವಿಂದು
ಬೇಸಿಗೆ ಸುಟ್ಟ ಭುವಿಯ ಮಣ್ಣಿಗೆ
ಮುಂಗಾರು ಮಳೆ ಸುರಿಯಿತಿಂದು //

ಕಾಲದಾ ಕಹಿ ಕಷ್ಟ ಏನೇ ಇರಲಿ
ಕಡಲುಬ್ಬರ ಸೊಕ್ಕಿ ಉಕ್ಕಿ ಬರಲಿ
ಕವಲು ದಾರಿಯ ತೆವಲು ನನ್ನದಲ್ಲ
ಸಿಡಿಲು ಬಂದಡರಿದರು ಕದಲಲ್ಲ//

ಸಕಲವು ಇದ್ದು ಸಹನೆ ಗೆಲ್ಲದ
ಸುಕುಮಾರಿ ಹಿಂದೆ ಬಿದ್ದವನು ನಿನಲ್ಲ
ಸರಿಯಾದ ದಾರಿಯ ನನ್ನ ನಲ್ಲ
ಸಂಸಾರಕೆ ನೀ ಹೆದರ ಬೇಕಿಲ್ಲ//

        ಬಸನಗೌಡ ಗೌಡರ 

Sunday, April 19, 2020

ನಾಗರಿಕತೆಯ……... ನಾಗಾಲೋಟ.


           ನಾಗರಿಕತೆಯ ನಾಗಾಲೋಟ ಅರಿಯುವದಕ್ಕಿಂತ ಮೊದಲು ನಾಗರಿಕತೆ ಎಂದರೇನು ? ಎಂಬುವದನ್ನು ತಿಳಿದುಕೊಳ್ಳೋಣ ಇವತ್ತು ಕೆಲವು ಜನ ನಾಗರಿಕತೆಯನ್ನು ಸಂಸ್ಕೃತಿಗೆ ಸಮಾನ ಅರ್ಥದಲ್ಲಿ ಬಳಸುತ್ತಿರುವುದು ಕಂಡುಬರುತ್ತಿದೆ ವಿಶಾಲ ಅರ್ಥದಲ್ಲಿ ಹೇಳುವುದಾದರೆ “ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸಿದ “ ಮಾನವ ಸಮಾಜವಾಗಿದೆ.ಇಂಗ್ಲಿಷಿನ ಸಿವಿಲೈಜೆಷನ್ ಎಂಬ ಪದವು
 ‘ ಸಿವ್ಹಿಲಸ್ ' ಎಂಬ ಲ್ಯಾಟಿನ ಪದದಿಂದ ಬಂದಿದೆ .ಇದರ ಅರ್ಥ 'ನಗರ, ಅಥವಾ "ನಗರ ರಾಜ್ಯ'ವೆಂದಾಗುತ್ತದೆ. ನಾಗರಿಕತೆ ಎಂಬುದು “ಹೆಚ್ಚು ಪರಿಪಕ್ವವಾದ ಮತ್ತು ಸಂಸ್ಕರಿಸಿದ ಜೀವನ” ಎಂಬರ್ಥ ಕೊಡುತ್ತದೆ .ನಾವೇನು ಹೊಂದಿದ್ದೆವೆ  ಎಂಬುದು ನಾಗರಿಕತೆಯಾದರೆ ನಾವೇನಾಗಿದ್ದೇವೆ ಎನ್ನುವುದು ಸಂಸ್ಕೃತಿ ಎನಿಸಿಕೊಳ್ಳುತ್ತದೆ. ನಾಗರಿಕತೆ ಮಾನವನ ಭೌತಿಕ ವಸ್ತುಗಳನ್ನು ಹೇಳಿದರೆ ಸಂಸ್ಕೃತಿಯು ಧರ್ಮ, ಭಾಷೆ, ಕಲೆ, ಸಾಹಿತ್ಯ ,ಆಚಾರ, ವಿಚಾರ, ಉಡುಗೆ, ತೊಡುಗೆ,ನಂಬಿಕೆ ಮುಂತಾದವುಗಳನ್ನು ತಿಳಿಸುತ್ತದೆ .
           ಮಾನವ ನಾಗರಿಕತೆ ಬೆಳೆಸಿಕೊಂಡಿರುವ ಮುಖ್ಯ ಉದ್ದೇಶವೆ ಮಾನವನ ಬದುಕನ್ನು ಸರಳಗೋಳಿಸಿಕೊಳ್ಳುವುದು. ಅದು ಒಂದು  ಹಂತದ ವರೆಗೆ
ಸರಿಯಾಗಿಯೆ ಇತ್ತು ಆದರೆ ಮಾನವನ ದುರಾಶೆಯಿಂದ
ಪ್ರಕೃತಿಯ  ಮೇಲೆ ಮಾಡುವ ಅತಿಯಾದ ದಬ್ಬಾಳಿಕೆಯಿಂದ  ಅಸಮತೋಲನವಾದಂತೆ ಕಂಡು ಬರುತ್ತಿರುವುದು ಅಷ್ಟೆ ಸತ್ಯ. ಪ್ರಮುಖ ಉದಾಹರಣೆಗಳನ್ನು ಹೇಳುವದಾದರೆ ಹರಿಯುವ ನದಿಗಳನ್ನು ತಡೆಯಲು ಬ್ರಹತ್ ಆಣೆಕಟ್ಟುಗಳನ್ನು ನಿರ್ಮಿಸಿದ್ದು,  ಎರಡನೆಯದಾಗಿ ಕಾಡುಗಳ ನಾಶ.ಅಣುಸ್ಪೋಟದಂತ ಪ್ರಕ್ರಿಯೆಗಳು.ಇಂಥಹ ಹಲವಾರು ಪ್ರಕ್ರಿಯೆಗಳು  ಅದರದೆ ಆದ ಒಂದು ದೊಡ್ಡ ಪಟ್ಟಿಯನ್ನೆ ಕೊಡಬಹುದು. ಅಂದು 18 ನೇ ಶತಮಾನದಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ನಗರಗಳು ಪ್ರವರ್ದಮಾನಕ್ಕೆ ಬಂದವು. ಅಂದರೆ ಹಿಂದೆ ಇದ್ದಿಲ್ಲ ಅಂತ ಅಲ್ಲ ಆದರೆ ಆ ನಗರಗಳ ಮಾತೆ ಬೇರೆ ,  ಇದು ವಸಾಹಾತುಷಾಹಿ ನಂತರ  ಸಾಮ್ರಾಜ್ಯಷಾಹಿ
ಬೆಳವಣಿಗೆ ಹೊಂದಿ ಅದು ಸರ್ವಾಧಿಕಾರಿಗಕಳ  ಬೆಳವಣಿಗೆಗೆ  ಕಾರಣವಾಯಿತು.ಮುಂದೆ ಇದು ಎರಡು ಮಹಾ ಯುದ್ದಗಳಿಗೆ ಕಾರಣವಾಯಿತು, ಅದರ ನೇರ ಹಾಗೂ ಪರೊಕ್ಷ  ಪರಿಣಾಮಗಳು ಜಗತ್ತಿನ ಮೇಲೆ ಉಂಟಾದವು.ನಾನು ಹೇಳಲು ಹೊರಟಿರುವ ಮುಖ್ಯ ಇನ್ನೊಂದು ವಿಷಯವೆಂದರೆ  ಜಗತ್ತಿನಲ್ಲಿ  ನಗರಗಳು ಅತಿಯಾಗಿ ಬೆಳೆಯಲು ಪ್ರಾರಂಭಿಸಿದವು,ಅದರ ಪ್ರಮುಖ ಬದಲಾವಣೆ  ಎಂದರೆ ಸಾಮಾಜಿಕ ಸ್ತರದಲ್ಲಾದದ್ದು ಅದೆನೆಂದರೆ ಮೈಕ್ರೊ ಕುಟುಂಬಗಳು ಅಂದರೆ ವಿಭಜಿತ ಕುಟುಂಬಗಳ ಸಂಖೆ ಹೆಚ್ಚಗುತ್ತಿರುವುದು. ಪ್ರಾಚೀನ ಕಾಲದಿಂದ ನಡೆದು ಬಂದ ಅವಿಭಜಿತ ಕುಟುಂಬಗಳ ಸಂಖೆ ಕಡಿಮೆಯಾಗುತ್ತಿರುವದು. ವಿಶೇಷವಾಗಿ ಕಂಡು ಬರುತ್ತಿರುವ ನಗರ ವಾಸದ ವ್ಯಾಮೋಹ, ಮಾನವನ ಬದುಕನ್ನ ಇನ್ನಷ್ಟು ಹಿಮ್ಮುಖವಾಗಿ  ಚಲಿಸುವಂತೆ ಮಾಡುತ್ತಿದೆ ಎನ್ನುವ ಭಾವ ಉಂಟಾಗುತ್ತಿರುವುದು ಅಷ್ಟೆ ಸತ್ಯ. ಸಾಮಜಿಕ ಹಬ್ಬ ಹರಿದಿನಗಳು ಕಣ್ಮರೆಯಾಗುತ್ತಿವೆ ಅವುಗಳನ್ನು ಟಿ.ವ್ಹಿ. ದಾರಾವಾಹಿಗಳಲ್ಲೊ ಸಿನಿಮಾಗಳಲ್ಲಿ ನೋಡಬೇಕಾಗಿರುವುದು ನಮ್ಮ ದುರಂತವೆ ಸರಿ  ಯುವಜನಾಂಗವು ಯಾಂತ್ರಿಕ ಮತ್ತು ತಾಂತ್ರಿಕ ಸಾಧನಗಳಲ್ಲಿ ಮುಳುಗಿ ಹೊಗುತ್ತಿರುವದು ಕಂಡು ಬರುತ್ತಿದೆ. ಮನುಷ್ಯನ ಪರಮ ಉದ್ದೇಶ ಜೀವನದಲ್ಲಿ  ಶಹರದಲ್ಲಿ ಒಂದು ಮನೆಕಟ್ಟಬೇಕು,ಅದರಲ್ಲಿ ಐಷಾರಾಮಿ ಜೀವನ ನಡೆಸಬೇಕೆಂಬುದೆ ಆಗಿದೆ, ಆ ಮನೆ ಹೆಗಿರುತ್ತೆ ಅಂದರೆ ಆಧುನಿಕ ಎಲ್ಲಾ ಸೌಲಬ್ಯಗಳನ್ನು ಹೋಂದಿರುತ್ತದೆ, ಆದರೆ ಸಮಾಜ ಹಾಗೂ ಸಮುದಾಯದ ನಡುವೆ ಒಂಧು ಆಳವಾದ ಕಂದಕವನ್ನು ತೋಡಿರುತ್ತದೆ ಅದು ಸುತ್ತಲಿರುವ ಕೊಟೆಯಂತಿರುವ ಕಂಪೌಂಡಿನಿಂದ ಭದ್ರವಾಗಿರುತ್ತದೆ. ಪಕ್ಕದ  ಮನೆಯಲ್ಲಿ  ಒಂದು. ಶವ ಯಾತ್ರೆ ಇದ್ದರು ಅದನ್ನು  ನಗರಸಭೆ ಜವಾಬ್ದಾರಿ ಅನ್ನುವ  ಹಂತಕ್ಕೆ ಬಂದಿದ್ದೆವೆ.ಪ್ರತಿ ಮನೆಗೆ ಒಂದು ನಾಯಿ ಇರುತ್ತೆ ಅದು ಪ್ರಾಣಿ ಪ್ರಪಂಪಂಚವಾಗಿರುತ್ತದೆ. ಅಲ್ಲಿ ಒಂದು ಗಿಳಿ ಅಥವಾ ಲವ್‍ಬರ್ಡ ಇರುತ್ತೆ ಅದು ಅವರ ಪಕ್ಷಿ ಪ್ರಪಂಚವಾಗಿರುತ್ತದೆ. ಅವರ ಮನೆ ಗಾರ್ಡನನಲ್ಲಿ ಒಂದೆರಡು ಗಿಡಗಳಿರುತ್ತವೆ ಅದುವೆ ಅವರ ಕಾಡು ಅಥವಾ ವನ ಇದರಲ್ಲಿ ಅವರು ಸಂತೃಪ್ತಿ ಕಾಣಬೇಕು, ಹೊರ ಜಗತ್ತಿಗೆ  ಅವರು ಕೊಡುವ ಸಂದೇಶವೆನೆಂದರೆ ನಾವೇ  ಸುಖಿಗಳು ತುಂಬಾ ನಾಗರಿಕರು ಅಂತ.  ಈ ಶಹರ ಜೀವನದ ಸೆಳುವಿಗೆ  ಸಿಕ್ಕ ಇಂದಿನ ತರುಣರು ಹಳ್ಳಿಗಳಿಂದ ವಿಮುಖರಾಗಿ ಶಹರದ ಕಡೆ ಮುಖ ಮಾಡಿದ್ದಾರೆ ಅಲ್ಲಿ ಅವರಿಗೆ ಸಿಕ್ಕದ್ದಾದರೂ ಎನು ? ವಾಹನಗಳು ಉಗುಳುವ ಮಾಲಿನ್ಯ ಇಕ್ಕಟ್ಟಾದ ಮನೆಗಳಲ್ಲಿ ವಾಸ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚುವರಿ ದುಡಿತ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುವದು. ಇದನ್ನು ಯಾರು ಘಟ್ಟಿ ದ್ವನಿಯಲ್ಲಿ ಹೇಳುವ ಸ್ಥಿತಿಯಲ್ಲಿ ಇಲ್ಲ ಯಾಕೆಂದರೆ ಪ್ರಗತಿ ವಿರೋಧಿಯಾಗುವ ಭಯ. “ಒಂದು ಕತೆ ನೆನಪಾಗತ್ತದೆ ಒಂದೂರಿನಲ್ಲಿ ಬಸವಣ್ಣನ ಮೂರ್ತಿ ಅದರ ಮೂಗಿನಲ್ಲ ಬೆರಳಿಡುವ ಸ್ಪರ್ಧೆ ಮೊದಲನೆಯವನು ಬೆರಳು ಸೇರಿಸಿದ ಅದರಲ್ಲಿ ಇಗಾಗಲೆ ಇರುವ ಚೇಳಿನಿಂದ ಕಚ್ಚಿಸಿಕೊಳ್ಳತ್ತಾನೆ ಆದರೆ ಹೇಳುವದಿಲ್ಲ, ಬದಲಾಗಿ ತಂಪಾಗಿದೆ ಎಂದು ಹೇಳುತ್ತಾನೆ ನಂತರ ಒಬ್ಬಾರಾದ ಮೇಲೆ ಒಬ್ಬರಂತೆ ಮುಂದುವರೆಯುತ್ತದೆ ಸತ್ಯ ಯಾರು ಹೇಳದೆ ಕಚ್ಚಿಸಿಕೊಳ್ಳುವ ಪ್ರಕ್ರಿಯೆ ಹಾಗೆ ಮುಂದುವರೆಯುವುದು” ಇದು ಒಂದು ಕತೆಯಾದರೆ ಇದರಲ್ಲಿರವ ತಾತ್ಪರ್ಯ ನಮ್ಮ ನಗರಿಕರಣದ ಪ್ರಭಾವದಿಂದ  ನಾಗರಿಕತೆ ನಾಗಾಲೋಟದಿಂದ  ಓಡುತ್ತಿದ್ದು ಫಲಶ್ರುತಿಯಾಗಿ ತರುಣರು ಅಸಹಾಯಕರಾಗಿದ್ದಾರೆ.
     ಹಳ್ಳಿ ಬದುಕಿನ ಹದವಾದ ಜೀವನ ಬಲ್ಲವನೆ ಬಲ್ಲ ಅದರ ರಸಗುಲ್ಲ ಆದರೆ ಆತ ಪ್ರಕೃತಿ ಆರಾಧಕನಾಗಿರಬೇಕು ಶಹರದ ಎರಡು ಮರಗಳೆ ಉದ್ಯಾನವನ ಎನ್ನುವದಾದರೆ ಸಾವಿರ ಮರಗಳ ಸೌಂದರ್ಯ್ ಸವಿಯುವ ತರುಣ ಇನ್ನೆಂತಹ ಸುಖಿ, ಪಂಜರದಲ್ಲಟ್ಟ ಹಕ್ಕಿಯೆ ಹಕ್ಕಿ ಪ್ರಪಂಚ ಎನ್ನುವದಾದರೆ ಸಾವಿರ ಹಕ್ಕಿಯ ನಿನಾದ ಕೇಳುವ, ಆಸ್ವಾದಿಸುವ ತರುಣ ಅದೆಷ್ಟು ಸುಖಿ, ನೂರು ರೂಪಾಯಿ ಹಣ ತೆತ್ತು ನೂರು ಲಿಟರ ನೀರಿನಲ್ಲಿ  ನಿಮಿಷದ ಲೆಕ್ಕದಲ್ಲಿ ಈಜುವದೆ ಸೌಖ್ಯ ಎನ್ನುವದಾದರೆ ಹಣ ತೆತ್ತದೆ ತನಗಿಷ್ಟ ಬಂದಷ್ಟು ವಿವಹರಿಸುವದು ಅದೆಂತ ಮಹಾಸೌಖ್ಯ ಇದನ್ನು ತರುಣರಿಗೆ ಮಾರ್ಗದರ್ಶನ ಮಾಡುವವರು ಯಾರು ? ಅವರು ಹಳ್ಳಿಯಲ್ಲಿಯೆ ಉಳಿಯಲು  ಮಾಡಿದ ಕ್ರಮಗಳೆನು  ಈ ವಾದ ಮಂಡಿಸುವ ಜನರೆ ಪ್ರಗತಿ ವಿರೋಧಿಗಳು.  ಹಳ್ಳಿ ಉದ್ದಾರವೆ ದೇಶದ ಉದ್ಧಾರ ವೆಂದ ಗಾಂದೀಜಿ ಮತ್ತೆ ಹುಟ್ಟಿ ಬರಬೇಕು ಇನ್ನೊಮ್ಮೆ ಸ್ವಾತಂತ್ರ್ಯ ತರಬೇಕು ನಗರದ ವ್ಯಾಮೋಹ ಕಡಿಮೆಯಾಗಬೇಕು ಹಳ್ಳಿಯಲ್ಲಿ ಬದುಕು ಕಟ್ಟುವ ಕ್ರಮಗಳು ತರುಣರಿಗಾಗಿ ಬರಬೇಕಾಗಿದೆ   

Saturday, April 18, 2020

ಎಚ್ಚರ

ನಾವಂದಷ್ಟು ಸರಳವಲ್ಲ ಜಗತ್ತು
ನಿಷ್ಕಾಳಜಿ ಮಾಡಿದರೆ ಅಪತ್ತು
ಅವರು ಬಿದ್ದದ್ದು ಎರಡು ಹೊತ್ತು
ಹೆಣ್ಣು ಹೊನ್ನು ಮಣ್ಣು ಬನ್ನು  //

ಬಳಗವೆಲ್ಲ ಬರುತ್ತೆ ,ಬಂದಾಗ ಆಪತ್ತು
ಅದು ನಂದಾ ಅವರದಾ ಅವರವರೆ
ಬೆಳೆಸಿದ ಅವರೆ ನಿರ್ಮಿಸಿದ ಜಗತ್ತು
ಅದು ಬಿಡಿಸಲು ಬೇಕು ತಾಕತ್ತು //

ಹಿಗೊಬ್ಬ ಪೆದ್ದ ಪ್ರೀತಿಯ ಗುಂಗಿನಲೆದ್ದ
ನಾನೇನು ಕಡಿಮೆ ತಾಜ್ ಮಹಲ್
ಕಟ್ಟುವೆನೆಂದ, ಬೆಳಗಾಗುವದರಲ್ಲಿ
ತಾನೆ ತೊಡಿದ ತನ್ನ ಗೋರಿಯಲ್ಲಿದ್ದ. //

ಮಗದೊಬ್ಬನಿದ್ದ ಹಾಕಿದ್ದು ದ್ವಿಗುಣ,
ಗಲ್ಲಿ ಗಲ್ಲಿ ಸಾರಿದ್ದ, ಸುದ್ದಿ ತಿಳಿದದ್ದೆ ತಡ
ಕೂಡಿಟ್ಟ ಹಣ,ತಂದಾಕಿ ಸಾಲು ಸಾಲು
ಬೆಳಗಾಗುತ್ತಲೆ ಅಸಾಮಿ ಜೈಲು ಪಾಲು //

ಸಣ್ಣ ವಿಷಯಕ್ಕೂ  ಸಾವಿರ ಭಾಷಣ
ಮಣ್ಣಿನ ವಿಷಯಕ್ಕೆ ವಿಭೂಷಣ
ಕುರಿ ಕೋಳಿ ಸಿಂದಿ ಸರಾಬು ಸೇವೆ
ಬೆಳಗಾಗುವದರಲ್ಲಿ ಜನನಾಯಕ //

            🖋️ಬಸನಗೌಡ ಗೌಡರ

ಕವನ ವಿಮರ್ಶೆ

*ಜೀವನ⭕ಚಕ್ರ*

ಕಾಲ ನಿಲ್ಲುವುದಿಲ್ಲ... ಚಕ್ರ ಉರುಳುತ್ತಿದೆ..
ಬದುಕ ಬಂಡಿಯ "ಹೂಡಿ"ದನು ಜಾದುಗಾರ!
ಕೊರಡುಗಳ ಬಂಧಿಸುತ..ಕನಸುಗಳ ವರವಿತ್ತ..
ತೂಗೋ ತೊಟ್ಟಿಲ ಒಡೆಯ ಓ ಮಾಯಾಗಾರ!

ಜನ ಸೇರಿದೆಡೆಯಲ್ಲಿ ಮಹಾಜಾತ್ರೆಗೈಯುವನು!
ಅಪಹರಣಗೈಯುವನು ದುಗುಡವೆಲ್ಲಾ!
ತನುಮನಕೆ ಸೋಲಿಲ್ಲ... ಕರಗಳಿಗೆ ಬಿಡುವಿಲ್ಲ..
ನಗುಮೊಗದ ಉತ್ಸಾಹಿ ಜಗದೇಕ ಮಲ್ಲ!

ಬಾಲ್ಯಮಯ ತೊಟ್ಟಿಲಿಗೆ ಸಾಧನೆಯ ಮೆಟ್ಟಿಲಿದು!
ಹತ್ತುವಾಗಿಹ ತೋಷ.. ಇಳಿವಾಗ ಇಲ್ಲ!
ಒಮ್ಮೊಮ್ಮೆ ಸೋಲುಗಳು; ಕೆಲವೊಮ್ಮೆ ಸಾಲ್ಗೆಲುವು..
ಏರಿದವರಿಗೇ ಮಾತ್ರ! ಹೆದರಿದವರಿಗಿಲ್ಲ...

"ಅವನು" ಆಡಿಸಿದಂತೆ ನಾವೂ ಆಡಲೇಬೇಕು!
ನೋವು ನಲಿವನು ಮರೆತೂ ಹಾಡಬೇಕು!
ಗುಂಪು ಗುಂಪುಗಳೇಕೆ? "ತಂಪು" ಸಿಹಿ ಸಿಗಬೇಕೆ?
ಬಯಸಿ, ಬಯಸದೇ "ಸರತಿ" ಕಾಯಬೇಕು!

ಏರುಪೇರಿನ ಬಂಡಿ 'ಒಳಗೆ' ಸೊಗಸಿನ ಪಯಣ!
ಎಷ್ಟು ತಲೆ "ಸುತ್ತಿದರೂ" ಇಳಿಸೋದು ಬಲ್ಲೆ!
ಹಮ್ಮಿರದ ನಗೆಯಿರಲಿ; ಎತ್ತರಕ್ಕೆ ಏರಿದೊಡೆ..
*ಸಮರಸದ* ಬಾಳ್ಗೀತೆ ಹಾಡುವೆನು "ಇಲ್ಲೇ"!

*🖊ಮೊಗೇರಿ ಶೇಖರ ದೇವಾಡಿಗ*




ಮೊಗೇರಿ ಶೇಖರ ದೇವಾಡಿಗರ
 "ಜೀವನಚಕ್ರ " ಕವನ ....ಜೀವನವೆಂಬ ದೋಣಿಗೆ ದಾರಿದೀಪ, ಕಾಲ ನಿಲ್ಲುವುದಿಲ್ಲ ಜೀವನ ಚಕ್ರ ಉರುಳುತ್ತದೆ ಎನ್ನುವ ಭಾವ ಮಾರ್ಮಿಕವಾಗಿದೆ ಸಮಯ ಇದ್ದಾಗ ದುಡಿದುಕೊಳ್ಳಬೇಕು  ಕಾಲಾವಧಿ ಮೀರಿದ ಮೇಲೆ ದುಡಿದುಕೊಳ್ಳಬೇಕಂದರೂ  ಅವಕಾಶ ಜಾರಿ ಹೋಗಿರುತ್ತದೆ ಚಿಂತಿಸಿ ಫಲವಿಲ್ಲ ಕಾರ್ಯ ಮಗ್ನನಾದ ಅವದಿಯಲ್ಲಿ ಎಡರು ತೊಡರು ಅನಿವಾರ್ಯ,ಜಾದೂಗಾರ ಆಡಿಸಿದಂತೆ ಆಡುವ ಗೊಂಬೆಗಳು  ನಾವು ಎಂಬ ಅರಿವು ನಮಾಗಿರಬೇಕು. ಇಂದಿನ ಯುವಕರಿಗೆ ಕಾಲದ ಪರಿವೆಯೇ ಇಲ್ಲ ಹೀಗಾಗಿ ಅವಕಾಶ ವಂಚಿತರಾಗಿ ಚಿಂತಿತರಾಗುತ್ತಿದ್ದಾರೆ ಕೆಲವೊಮ್ಮೆ ಅಡ್ಡ ದಾರಿ ಹಿಡಿದ ಉದಾಹರಣೆಗಳು ಉಂಟು. ದೇವನೆಂಬ ಜಾದೂಗಾರ ಕೆಲವೊಮ್ಮೆ ಒಳ್ಳೆಯದನ್ನು ದಯಪಾಲಿಸುತ್ತಾನೆ ಅದನ್ನು ಜಾಗುರಕನಾಗಿ ಆಯ್ಕೆ ಮಾಡಿಕೊಳ್ಳಬೇಕು. ಗುಂಪು ಸೇರುತ್ತೆ ಅಂದರೆ ಸ್ಪರ್ಧೆ ಅನಿವಾರ್ಯ ಅಡ್ಡ ದಾರಿ ಬೇಡ  ಕೆಲವೊಮ್ಮೆ ನೇರವಲ್ಲದ ಅಡ್ಡ ದಾರಿಗಳು ಕಾಣಬಹುದು ಆ ದಾರಿ ಹಿಡಿಯದೆ ಸರತಿಯ ಸಾಲಿನಲ್ಲಿ ನಿಲ್ಲಬೇಕೆನ್ನುವುದು ಕವಿಯ "ಕಾನೂನು ಪಾಲನೆ ಚಿಂತನೆ" ತೋರಿಸುತ್ತದೆ  ಸೋಲಾದರು ವಿಷವುಂಡ ವಿಷಕಂಠನಾಗಬೇಕು ಅಮೃತ ಹೊರ ಹಾಕಬೇಕು ನಾವು (ಬಂಡಿ )ಬದುಕುವ ದಾರಿ ಕ್ಲಿಷ್ಟತೆ ತೆಯಿಂದಿರಬಹುದು,ಸಾಗುವ ಮಾರ್ಗದಲ್ಲಿ ಸಂತೋಷ ಕಾಣಬೇ ಕೆನ್ನುವುದು ಕವಿ ಆಶಯ .ದಡ  ಸೇರಿದಾಗ ಹಮ್ಮು ಇಲ್ಲದ,  ಬಿಮ್ಮು ಇಲ್ಲದ ಜೀವನ,ಅಂದರೆ ಸಮರಸದ  ಜೀವನ ಸಾಗಿಸಬೆಕೇನ್ನುವುದು ಕವಿಯ ಆಶಯ ಅದುವೆ ಬದುಕಿನ ಬಂಡಿ ನೆಡೆಸುವ ಪರಿ.

🖋️ ಬಸನಗೌಡ ಗೌಡರ

ಕಾಲಮಹಿಮೆ

ಉದ್ಯೋಗದ ಮಧ್ಯ ವೃದ್ದಾಪ್ಯ
ಬಂದದ್ದು ಗೊತ್ತೆ ಆಗಲಿಲ್ಲ.
ಓದಿದ್ದು ಹಳ್ಳಿ ,ಶಾಲೆ ಸರ್ಕಾರಿ
ನಮ್ಮಪ್ಪ ಕೃಷಿಕ, ನಾನೀಗ ಶಿಕ್ಷಕ
ನಮ್ಮತ್ತೆ ನಿರಕ್ಷರಿ ಅಪ್ಪನಿಗೆ
ಕೊಡುತ್ತಿದ್ದಳು ಸಲೆಹೆ ತರೆಹೆವಾರಿ
ಶಾಲೆ ಕಲಿತವರೆಲ್ಲ ಸಾಲಗಾರರೆ
ನಿನ್ನ ಮಗನೂ ಸಾಕಲಿ ಕುರಿ
ಎನಿಸಬಹುದು ನೋಟು ಗರಿ ಗರಿ
ನಮ್ಮಪ್ಪ ಕಲಿತಿದ್ದ ನಾಲ್ಕಕ್ಷರ
ಸಾಲ ತರುವಾಗ ಹೇಳುತ್ತಿದ್ದ ಸರಿ ಸರಿ
ಸಿಕ್ಕಮೇಲೆ ಆರ್ದ ಕೃಷಿಗೆ
ಬಾಕಿ ಸರಾಯಿಗೆ ,ಮಳೆ ಮೂರು ದಿನ
ಆಸೆ ಚಿಗುರುತ್ತಿತ್ತು ಎಂಬತ್ತು ದಿನ
ಆ ಕಾಲ ಬಂದೆ ಬಿಡುತ್ತಿತ್ತು ಬರ ಬರ
ಒಪ್ಪತ್ತು ಊಟಕ್ಕೊ ತತ್ವಾರ
ಮತ್ತೆ ನಮ್ಮತ್ತೆಯೆ ಮಂತ್ರಿ.ಮತ್ತೆ
ಪುಂಖಾನು ಪುಂಖ ಸಲಹೆ
ನನ್ನ ಸಲಹೆ ಕೇಳದಿದ್ದರೆ ಕರ್ಮ
ನಿಮ್ಮದು ಮುಗಿಯದ ಗೋಳು,
ನಮ್ಮಪ್ಪ ಗಟ್ಟಿ ಕಿವುಡಾಗಿ ಬಿಟ್ಟ
ಓದಲು ಕೊಟ್ಟು ಬಿಟ್ಟ ರಹದಾರಿ
ಏನು ಮಾಡುವುದು ಕಲ್ಲು, ಮುಳ್ಳು
ಕಮರಿ ಒಟ್ಟಾಗಿ ಆಡರಿದವು
ನಾನೊಡುವ ದಾರಿಯಲ್ಲಿ.
ಸಾಗಿದ ದಾರಿಯ ಸಂಕಷ್ಟಕೆ ಲೆಕ್ಕವಿಲ್ಲ
ನಾನೊದಿದ್ದು ಒಂದು ಕಾಲು
ಅದು ತರೆಹೆವಾರಿ ಪರೀಕ್ಷೆಗಾಗಿ
ದಾರಿಯಲ್ಲಿ ಪಡೆದ ಅನುಭವವೇ
ಮುಕ್ಕಾಲು, ಅದುವೆ ಬದುಕಿಗೆ ದಾರಿ
ನಮ್ಮಪ್ಪನ ವಯಸ್ಸು ಬಂದೆ ಬಿಟ್ಟಿತು
ಮಕ್ಕಳಿಗೆ ಹೇಳಿದರೆ ಇದು ಬಿಟ್ಟಿ ಸಲಹೆ
ಎನ್ನಬೇಕೆ ! ಕಾಲು ಬಾಚಿ ಕುಳಿತು
ಕೊಳ್ಳುವದೊಂದೆ ಬಾಕಿ.

             ಬಸನಗೌಡ ಗೌಡರ

Friday, April 17, 2020

ಲವ್ ಸುತ್ತ

ಶಬ್ದ ಬಂದದ್ದೆ ತಡ
ಕವಿಗಳೆಲ್ಲ ಗಡ ಬಡಾಯಿಸಿ
ಲವಲವಕೆಯಿಂದ ಬರದದ್ದೆ
ಲವ್ ಸುತ್ತ
ಆದರೆ ನನಗಿಲ್ಲ ಪುರಸೊತ್ತು
ಏಕೆಂದರೆ ಮದುವೆ ಆಗಿತ್ತು.
ಈಗ ಕೆಲಸ ಮಾಡಿ ತಲೆಸುತ್ತು

        🖋️.   ಬಸನಗೌಡ ಗೌಡರ

ಜಾಗ್ರತಿ

ನಾವಂದಷ್ಟು  ಕ್ರೂರಿಯಲ್ಲ ಕೊರೊನಾ
ಏಕೆಂದರೆ ನಾವು ಮನೆ ಬಿಟ್ಟು ಬರದೆ
ಹಾಕುವುದಿಲ್ಲ ಹೆಜ್ಜೆ ನಾವಿರುವಲ್ಲಿಯತಕ

ಪ್ಲೆಗು ಕಾಲರಾ ದೊಡ್ಡದಲ್ಲ ಈತನಕ
ಏಕೆಂದರೆ ಅವುಗಳನ್ನು ಹಿಡಿದು
ಹಾಕ್ಯಾರ ನಾವು ಎಚ್ಚರಿರುವ ತನಕ

ಸೋಂಕಿದ್ದವರ ಲೆಕ್ಕ ಹಾಕು ಈತನಕ
ಲೋಕ ಬಿಟ್ಟವರ ಸಂಖೆ ಸನ್ನದೈತಿ ಪಕ್ಕಾ
ನಮಸ್ಕಾರ ಹಾಕಬೇಕು ನಾ ಸರಕಾರಕ್ಕ

ಸ್ವಚ್ಚತೆ ಪಾಠ ತಿಳಿದರೆ ಇದಾವ ಲೆಕ್ಕ
ಎಚ್ಚರ ಗೊಳ್ಳದಿದ್ದರ ಮುರಿತೈತಿ ಸೊಕ್ಕ
ಹಾಡಿ ಹೊಗಳಬೇಕು ಕೊರೊನಕ್ಕ

                   ಬಸನಗೌಡ ಗೌಡರ

Thursday, April 16, 2020

ಜೀವಜಲ


ಕೆರೆ ಕಾಲುವೆ ಕಲ್ಯಾಣಿ, ಮನುಜ
ಕುಲದ ಜಿವಾಮೃತ ಗಣಿ
ಮನುಜನ ದುರಾಸೆಗಾತು ಬಲಿ
ಮರೆತರೆ ಬಸ್ಮಾಸುರನಂತೆ ಬಲಿ //

ನೀರು ತರಲು ಮಾರು ದೂರ
ಬೊರವೆಲ್ ಆದವು  ಮಾನವಾಧಾರ
ನಾವು ನೆಚ್ಚಿದೆವು ಗಲ್ಲಿ  ಶುದ್ದನೀರು
ಪೈಸೆ ಹಾಕಿ ಚೌಕಾಸಿ ಕುಡಿದೆವು ನೀರು/

ರೈತನ ಹಾಲಿಗೆ ಹತ್ತು, ಇಪ್ಪತ್ತು
ಕೊಡದೆ ಕಾಡಿಸುವರು ಒಪ್ಪತ್ತು
ಸೋಷಿದ ನೀರಿಗೆ ತಕರಾರಿಲ್ಲದಿಪ್ಪತ್ತು
ಅರಿಯದೆ ಕಾಲ ದೂಡಿದರಾಪತ್ತು //

ಸತ್ಯ ಅರಿಯಬೇಕು ನಿತ್ಯಸತ್ಪ್ರಜೆ
ಸಾವಿರ ವರುಷದ ಇತಿಹಾಸ ಗಣಿ
ಮೌರ್ಯ ರಿಂದ ಹರ್ಷನವರಗೆ
ಮಯೂರನಿಂದ ಮೈಸೂರುವರೆಗೆ //

ಜಲವೆ ಪ್ರಾಣಿ,ಪಕ್ಷಿಗಳಿಗಾಧಾರ
ಹುಲು ಮಾನವನುದರಕೂ ಆಧಾರ
ಜಲ ಸಂರಕ್ಷಣೆ  ಶ್ರೇಷ್ಟ ಪರಂಪರೆ
ನಿರ್ಲಕ್ಷ  ಸಲ್ಲದು ಕೃಷಿ ಪರಂಪರೆ //

                  ಬಸನಗೌಡ ಗೌಡರ 

Wednesday, April 15, 2020

ಹಸಿವು

ಹಸಿವು

ಹಸಿವು ಕಲಿಸಿದ  ಪಾಠ
ಭಾವ ಕಲಿಸಿದ  ನೋಟ
ಭವದಲ್ಲಿದರ ಸಮಾನರುಂಟೆ
ಭಾವದ ಮೂಲ ಇದರಲ್ಲಿಂಟು   //

ಹಸಿವಲ್ಲವೆ ಹರದಾರಿ ನೆಡೆಸಿದ್ದು.
ಹರಸಾಹಸ ಮಾಡಿಸಿದ್ದು
ಹಮ್ಮು ಬಿಮ್ಮು ಜಾರಿಸಿದ್ದು
ಒಮ್ಮೊಮ್ಮೆ ದೈನೆಸಿಯಾಗಿಸಿದ್ದು  //

ಹಸಿವಿನಲಿ ಹಲವು ವಿಧ
ಒಬ್ಬರಿಗೆ ಅನ್ನದ ಹಸಿವು
ಇನ್ನೊಬ್ಬನಿಗೆ ಜ್ಞಾನದ ಹಸಿವು
ಮಗದೊಬ್ಬಗೆ ಬೋಗದ ಹಸಿವು//

ಹಸಿವಲ್ಲವೆ ಹೊಸ ಸಂಶೋಧನೆ
ಹೊಸ ಆವಿಷ್ಕಾರದ ದಾರಿ
ಹಸಿವೆ ಕಾಣದ ಮನುಷ್ಯನುಂಟೆ
ಹಸಿವೆ ಸಕಲ ಜಂಗಮ ಪ್ರಾಣಿಗೆ //

ಬಡವನಿಗೆ ಹೊಟ್ಟೆ ಹೊರೆಯುವ
ತನ್ನವರ ತಣಿಸುವ ಹಸಿವು
ಬಲ್ಲಿದವನಿಗೆ ಹೊಟ್ಟೆ ಬಾರ
ಇಳಿಸುವ ತನ್ನವರ ಮೆರೆಸುವ ಹಸಿವು //


                ಬಸನಗೌಡ ಗೌಡರ

Tuesday, April 14, 2020

ಚುಟುಕುಗಳು. ( ಸ್ಪರ್ಧೆ 15.04.2020)

ಸ್ಪರ್ಧೆಗೆ ನೀಡಿದ  ಶಬ್ದ "ಸಹನೆ"

1) ಕ್ಷಾತ್ರ ಭಾವ.

ಗುರುವಾಗಲು ಬೇಕು ಮಕ್ಕಳಾಡುವ
ಗಲಾಟಿ ಸಹಿಸುವಾ ಸಹನಾ ಭಾವ
ಸೈನಿಕನಿಗಿರಬೇಕು ಕ್ಷಾತ್ರಭಾವ
ಶತೃಗಳಿಗೆ ತೋರಿಸಿದರೆ ಶ್ಮಶಾನದ ಶವ

2) ಹೆಣ್ಣು

ಹೆಣ್ಣೆ0ದರೆ ಮನೆಯ ಕಣ್ಣು
ಸಂಸಾರಕ್ಕೆ ಹೊರ್ತಾರೆ ಮಣ್ಣು
ಪ್ರೀತಿ ಕೊಡತಾರೆ ಹಣ್ಣು ಹಣ್ಣು
ಸಹನೆಗೆಟ್ಟರೆ ತವರು ಕಡೆ ಇವರ ಕಣ್ಣು

3) ಮಾಲಂಗಿ

ಮಾತುಗಾತಿ ಮರಳ ಮಾಡಿ
ಹೇಳಿದಳು ನೀ ನನ್ನ  ಹೃದಯದ ಕುಡಿ
ಹೂವಾಗಿ ಸಾಕು ಸಹಿಸು ಕಾಪಾಡಿ
ಮದುವೆಯಾದ ಮೇಲೆ ಬರಿ ಕಿಡಿ ಕಿಡಿ.

4) ಲಾಕಡೌನ

ಲಾಕಡೌನ ಅಂದರ ನಾ ತಿಳಿದಿದ್ದೆ
ಅಂಗಡಿ ಮುಂಗಟ್ತು ಯಾತ್ರೆ ಮಾತ್ರ
ಆದರ ಈಗ ತಿಳಿತು ನನ್ನಾಕಿ ಸಹನೆ
ತಪ್ಪಿದರ ಮನೆತುಂಬಾ  ಕೌಂಟಡೌನ.

5) ಸರಸ

ಸರಸ  ಸಲ್ಲಾಪದಲಿ ನನ್ನಾಕಿ
ಸಹನಾ ಮೂರ್ತಿ, ಸಾಗ ಹಾಕಿ
ಆಮೇಲೆ ಮತ್ತೆ ಮತ್ತೆ ಕೇಳತಾಳ
ಆಫಿಸಿಂದ ಯಾವಾಗ ಬರತಿ.

6)  ಸಂತೃಪ್ತಿ

ಬಡತನವೆಂಬುದು ದೇವರ ವರ
ಸಾಗ ಹಾಕಬೇಕು ಸಹನೆಯಿಂದ
ಸಾಗರದಾಚೆ ದೂರ ದೂರ
ಸಂತೃಪ್ತಿ ಸಿಗುತ್ತೆ ಸಾವಿರ ಸಾವಿರ.

7) ಕಲಿಕೆ

ಸಂಬಳದ  ದಿನ ಕಲಿಯಬೇಕು
ನನ್ನಾಕಿಯಿಂದ ಸಹನೆ ಎಂದರೇನು ?
ರೌದ್ರಾವತಾರ ಎಂದರೇನು ?
ಕಲಿಯಬೇಕು ಸಂಬಳದ ಕೊನೆ ದಿನ.

8) ಮನೆ

ಮೌನವಾಗಿರುವ ಮನೆಯಲ್ಲಿ
ಸಹನೆಯೆ ಯಜಮಾನ
ಮಾತು ಮಾತುಗೆ ವಾದ ಮಾಡುವ
ಮನೆಯಲ್ಲಿ ನಿತ್ಯ ಕದನ.

9) ಶಾಂತಿ

ಸಿರಿವಂತ ಹಣದ ರಾಯಭಾರಿ,
ಆದರೆ ಸಹನೆ ದುಬಾರಿ
ಬರಿ ವರಿ,ವರಿ,ಬಡವ ಗುಣದ
ರಾಯಭಾರಿ ಶಾಂತಿಯ ರುವಾರಿ.

10)   ಅದೇಶ

ನೀನಿಟ್ಟ ಆದೇಶ ಪಾಲಿಸಬೇಕು
ಯಾಕೆಂದರೆ ಮಕ್ಕಳು ನಾಲ್ಕು
ಅದಕಿಲ್ಲ ನನಗೆ ದಿಮಾಕು
ಇಷ್ಟೆ ಸಹನೆಗೆ ಸಾಕ್ಷಿ ಸಾಕು.

                 ಬಸನಗೌಡ ಗೌಡರ


ಡಾ// ಬಿ ಅರ್ ಅಂಬೇಡ್ಕರರಿಗೆ ಸಮರ್ಪಣೆ

ಡಾ// ಅಂಬೇಡ್ಕರರಿಗೆ ಅರ್ಪಣೆ

ಹನುಮ, ಭೀಮನುದಿಯಿಸಿ
ಶ್ರೀರಾಮ, ಧರ್ಮರಿಗೆ ಬಿಡಿಸಿದರು
ಗ್ರಹಣ ಅಂದು,
ಜಾತೀಯ ಭೀತಿಯಲಿ ಬಸವಳಿದ 
ಭಾರತಕೆ ನೀ ಬಂದೆ ಬಡವ,
ದಮನಿತರ ತಂದೆ,//

ಉಂಡುಟ್ತು ಮಲಗಿದವರ
ಮೊಂಡು ವಾದವ ಮೀರಿ
ಬೆಂಡೆತ್ತಿದೆ  ಅಂದು,
ಸಮಾನತೆಯ ಬೀಜ ಬಿತ್ತಿದೆ
ನಿನ್ನರಿತ ಹದವಾದ ಮನದ
ಅಂಗಳದಲ್ಲಿ ಇಂದು //

ನೀ ನಮ್ಮೆಲ್ಲರ ದೈವ ಬಾಬಾ
ನೀ ನಮ್ಮೆಲ್ಲರ ಬದುಕಿನ
ಗ್ರಹಣ ಬಿಡಿಸಿದೆ ಇಂದು
ಪಶ್ಚಿಮ ಪೂರ್ವದ ಕಾನೂನುಂಡು
ಪೂರ್ವಾಗ್ರಹ ಪಂಡಿತರ
ಎದುರುಗೊಂಡೆ ತಂದೆ //

ಜಗತ್ತೇ ಬೆರಗಾಗುವ ಕಾನೂನ
ಕಟ್ಟಿ ,ಕೋಟಿ ಕೋಟಿ ಜನ
ದಾಟದಂತೆ ಮೇಟಿಯಾದೆ ಇಂದು
ಕಟ್ಟಿಗೆ ,ಕಲ್ಲು ಮನೆ ಕಟ್ಟುವವ
ಇಟ್ಟಿಗೆಯಿಂದ ಮನೆ ಕಟ್ಟಿದಂತೆ
ದೇಶ ಕಟ್ಟಬಹುದೆಂದೆ ತಂದೆ //

                  ಬಸನಗೌಡ ಗೌಡರ

Monday, April 13, 2020

ಹನಿಗವನ

ಚೀಲ

ಚಲುವಿಗೆ ಚಿತ್ತಾರ ಬೇಕೆ
ಒಲುವೆ ಅದಕೆ ಮೂಲ
ಹಾಗಾಗಿ ನನ್ನಾಕಿ
ದಿನಾಲೂ ಕೈಯಾಗ ಇಡತಾಳ
ದಿನಸಿ ಕಾಯಿಪಲ್ಲೆ ಚೀಲ

            🖋️ಬಸನಗೌಡ ಗೌಡರ

ಪಾಠ

ಶಿಕ್ಷಕ ರಕ್ಷಿತನಿಗೆ ನಡೆದಿತ್ತು ಪಾಠ
ನಗೆ ಪ್ರಕಾರಗಳು ಎಷ್ಟು ?
ಹುಡುಗ ಹೇಳಿದ, ಇರಬಹುದು
ಒಂದು ಏಳೆಂಟು
ಶಿಕ್ಷಕ ಕೇಳಿದರು, ನಸುನಗು ಎಂದರೇನು ?
ನಸುಕಿನಲ್ಲಿ ನಗುವುದೆ ನಸುನಗು..  ಹೇಳಿದ ಹುಡುಗ .
ಶಿಕ್ಷಕ ಸುಸ್ತೊ ಸುಸ್ತು
 
         🖋️ ಬಸನಗೌಡ ಗೌಡರ

ಅತ್ತೆಭಯ

ಮಲ್ಲಿಗೆಯ ಮೊಗದವಳು
ಹಲ್ಲು ಗಿಂಜುವಳು ಒಮ್ಮೊಮ್ಮೆ
ಮುತ್ತು ಪೋಣಿಸಿದಂತೆ,
ನತ್ತು ತಿರುಗಿಸುವಳು ಇನ್ನೊಮ್ಮೆ
ಮುಂಗುರುಳು ಹೆಡೆಯೆತ್ತಿದಾಗ
ನಾ ನೋಡಲು ಹೆದರಿದೆ ಕಣ್ಣೆತ್ತಿ
ಯಾಕೆಂದರೆ ದುರುಗುಟ್ಟಿತ್ತು
ಮುಂದಾಗುವ ಅತ್ತೆ.....  ನಾ ಕಾಲ್ಕಿತ್ತೆ .

            ಬಸನಗೌಡ ಗೌಡರ


 * ಸಾಲಿನ ಮಹಿಮೆ *

ನಿದ್ದೆಯಲೆದ್ದ ಬುದ್ದ ನಾದ
ಬುದ್ದನ ಕಥೆ ಓದಿಯೂ
ಸಂಸಾರದಲ್ಲಿ ಬಿದ್ದು
ಒದ್ದಾಡುತ್ತಿರುವೆನು ನಾ ಪೆದ್ದ/
ಕಲಾಮ ಸಾಹೇಬರಿಗೆ  ಸಲಾಮ
ಹಾಕಿಯೂ ಕೆಲಸ ಕುಲಗೆಡಿಸಿ
ನಾ ಗರೀಬನಾಗಿದ್ದೆ /
ಏಕೆಂದರೆ ನಾನಿರುವದು
ಕಥೆ ಕೇಳಿಯೂ ವ್ಯತೆ ಪಡುವವರ ಸಾಲಿನಲ್ಲಿ ನಾನೊಬ್ಬನಾಗಿದ್ದೆ //

            ಬಸನಗೌಡ ಗೌಡರ

ಹನಿಗವನ ಸ್ಪರ್ಧೆಗಾಗಿ

ಕ್ರಮ ಸಂ : 13

* ಕರ್ತವ್ಯ *

ಪ್ರಿಯೆ ಎದೆಯ ಬಾರದ ಮೋಡಕೆ
ಮುತ್ತುಗಳ ಮಳೆ ಸುರಿವ ಬಯಕೆ
ಹುಲುಸಾಗಿ ಬೆಳೆವೆ ಹೊಂಬಾಳೆ ಅಡಿಕೆ

ಕರ್ತಾರನ ಕಮ್ಮಟ ಕರ್ತವ್ಯ ಮರೆಯೆ
ಹೆತ್ತು ತುತ್ತ ನೀಡಿದ ಕರಗಳಿಗೆ ತರುವೆ
ಹೊತ್ತು ಸಾಗರದಿ ಮುತ್ತಿಗೇನು ಬರವೆ.

 * ಅಂದ ಚಂದ *

ವಿರಹ ವೇದನೆಯಲ್ಲಿ ಪ್ರಿಯಕರನ
ಕನಸು ಕಾಣುವುದೆ ಚಂದ
ವರನ  ಮುಂದೆ ಮಾಡುವ ವಧುವಿನ
ವನಪು ವಯ್ಯಾರವೆ  ಅಂದ
ವಧುವರರು ಸಮರಸದಿ ಕೂಡಿ
ಬಾಳಿದಾಗ ಆಗುವುದು ಕಂದ

        🖋️    ಬಸನಗೌಡ ಗೌಡರ

* ಕರ್ಮ *

ನಾವು ಮಾಡಿದ ಪಾಪ ಪುಣ್ಯಗಳು
ನಮ್ಮ ನೆರಳಿನಂತೆ ಹಿಂದೆ ಮುಂದೆ.
ತಿರುಗುವು ಚಪ್ಪಡಿಗೆ ಬಡಿದು ಬರುವ
ಪ್ರತಿದ್ವನಿಯಂತೆ ಬೆನ್ನ ಹಿಂದೆ. 
ಕಾರ್ಯ ಮಾಡುವಾಗ ಕ್ರಮವಿರಲಿ
ಧರ್ಮದೂಳಗೂ ಕರ್ಮವಿರಲಿ.

               ಬಸನಗೌಡ ಗೌಡರ 
* ಕಂಪನ *

ಕಗ್ಗತ್ತಲು ಕವಿಯಲಿ 
ಕಾರ್ಮೋಡ ಮುಸುಕಲಿ 
ಕಡಲ ಒಡಲಾಳದಲ್ಲಿರಲಿ
ಕೈ ತುತ್ತು ತಿನಿಸಿದ ಕರುಳೆ ಕಣ್ಣಾಗಿ
ತನ್ನ ಕಂದನ ಗುರುತು ಕಂಪಣವಾಗಿ
ಅಂತಕರಣ ಹುಡುಕುವುದು ಹಸಿವಾಗಿ

                    ಬಸನಗೌಡ ಗೌಡರ 

* ಹರಾಮ ಶಾಮ *

ನಾಮ, ನೇಮ್ ಬೇಕಂದ್ರ ಮಾಡ ಹೋಮ
ಅಡ್ಡ ಇರಲಿ,ಉದ್ದ ಇರಿಲಿ ದೇಹಕ್ಕಿರಲಿ  
ಅದು ನಿನ್ನ ದೇಹದಲ್ಲೆ ಇರಲೊ ಶಾಮ!
ಹಾಕಬೇಡ ಇನ್ನೊಬ್ಬರಿಗೆ ಪಂಗನಾಮ
ನೇಮ್ ಬೇಕೆಂದ್ರ ತಿನಬ್ಯಾಡ ಹರಾಮ
ತಿಂದರ ಬೆಂಡೆತ್ತತಾರ ಪೋಲಿ ಮಾಮಾ

*
* ನಾಕ ನರಕ *

ಉಕ್ಕಿ ಹರಿದರೆ ಸದಾಕಾಲ ನಗೆ ಬುಗ್ಗೆ 
ನೆರೆಹೊರೆ ಮೊಗವರಳತೈತಿ ಮೊಗ್ಗು !
ಸೊಕ್ಕು ಬೆಳೆದರೆ ಮುದಡತೈತ ನಾಕ  
ಸಾಗ  ಹಾಕತಾರು ತಿಳಿ ಬದುಕು ನರಕ!
ಕಟ್ಟಿಕೊಂಡವರು ಬಿಟ್ಟು ಹೊದಾರು
ಸುಟ್ಟು ಬಿಡು ಅರಿಷಡ್ವರ್ಗ ಬೇರು.


                       ಬಸನಗೌಡ ಗೌಡರ 
* ನವರಂಗಿ *

ಕೆಂದುಟಿಯ ಮೇಲೊಂದು 
ಕವನ ಬರೆಯಲೆ ಅರ್ಧಾಂಗಿ,
ಕೇಳಿದೆ ನಾ ವಿನಮ್ರವಾಗಿ !
ಹನಿ ಹನಿ ಬಳಗಕ್ಕೆ ಬರೆದು ಹಾಕು 
ಊದಬೇಡ ಪುಂಗಿ  
ನತ್ತಿಗೊಂದು ಮುತ್ತು ಕಾಣದು    
ಸಾಕು ಕವಿತನದ ನವರಂಗಿ.
ಕಾಲಹರಣ ಸಾಕೆಂದು
ಜಾಡಿಸಿದಾಗ ನಾನು ಏಕಾಂಗಿ !

        🖋️.ಬಸನಗೌಡ ಗೌಡರ








ಮಾನವ ಅಭಿವೃದ್ಧಿ ದಾರಿ


ನಾನೂ ಬದುಕಬೇಕು ಎಂಬಲ್ಲಿಂದ ನಾನೇ ಬದುಕಬೇಕು ಎಂಬಲ್ಲಿಗೆ ಬಂದು ನಿಂತಿದ್ದೆವೆ .ಇದು ಅಭಿವೃದ್ದಿಯೇ ಅಥವಾ ಪ್ರಗತಿಯೆ ? ಗಿಡ ಮರ ಪ್ರಾಣಿ ಪಕ್ಷಿ ಸಕಲ ಜೀವರಾಶಿಗಳು ಬದುಕಬೇಕಲ್ಲವೆ ಇದಕ್ಕೆ ಹೊರತಾದ ಪ್ರಗತಿ ಅಥವಾ ಅಭಿವೃದ್ಧಿ  ಅಭಿವೃದ್ಧಿ ಅಲ್ಲ .ಅತಿ ಬುದ್ಧಿವಂತನಾದ ಮಾನವ ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾನೆ . ಇದು ವಿಷಾದಕರ ಸಂಗತಿ.ಇದನ್ನೆ ನಾವು ಅತಿಬುದ್ಧಿವಂತಿಕೆ ಎಂದು ಕರೆಯುತ್ತಿರುವದು.ಇದು ಮಾನವ ಸಮಾಜಕ್ಕೆ ಮಾರಕ ಅತಿ ಬುದ್ಧಿವಂತಿಕೆ ಎಂದರೇನು ? ಇಲ್ಲದ್ದನ್ನು ಇದ್ದಂತೆ ಬಿಂಬಿಸುವುದು ಇದ್ದದ್ದನ್ನು ಇಲ್ಲದಂತೆ ಬಿಂಬಿಸುವದು.ವಿಜ್ಞಾನಿಗಳು ,ತಂತ್ರಜ್ಞಾನಿಗಳು ಇದಕ್ಕೆ  ಹೊರತಾದವರು ತಮ್ಮ ಅನ್ವೇಷಣೆ ಮತ್ತು ಸಂಶೋಧನೆಯಿಂದ ಸಮಾಜಕ್ಕೆ ಫಲ ನಿಡುವವರು.ಆದರೆ ಅತಿ ಬುದ್ಧಿವಂತರು  ಇವರ ಫಲವವನ್ನು ಗರಿಷ್ಠವಾಗಿ ಬಳಸಿಕೊಳ್ಳುತ್ತಾರೆ.ಅತಿ ಬುದ್ಧಿವಂತರು ಬ್ರಮಾಲೋಕ ಸೃಷ್ಠಸಬಲ್ಲರು ಇವರಿಗೆ ಎರಡು ಮುಖಗಳು ಒಂದು ಅಂತರ್ಮುಖ ಇನ್ನೊಂದು ಬಹಿರ್ಮುಖ ಜನಸಾಮಾನ್ಯರಿಗೆ ಇದನ್ನು ಅರಿಯಲು ಶಿಕ್ಷಣ ಬಹು ದೊಡ್ಡ ಅಸ್ತ್ರ ಇದು ಇಲ್ಲದಿದ್ದರೆ ಕಾನೂನು ಮರಿದು ಸಾಮ್ರಾಜ್ಯ ಕಟ್ಟಿದ ಕೂಳರನ್ನು ಗೌರವಿಸಿ ಕರ್ಮ ಶಪಿಸುವಂತಾಗುತ್ತದೆ.

     ಅತಿ ಬುದ್ಧಿವಂತರಿಗೆ ಅತಿ ಸುಲಬವಾಗಿ ಸಿಗುವ ಅಸ್ತ್ರಗಳೆಂದರೆ ಒಂದು ಜಾತಿ ಇನ್ನೊಂದು ಧರ್ಮ. ಜಾತಿ ಬಂದದ್ದಾದರು ಹೇಗೆ ?  ಪೂರ್ವ ವೇದ ಕಾಲದಲ್ಲಿ ಸರ್ವರ ಸಮೃದ್ದ ಬದುಕಿಗೆ ಅನುಕೂಲ ಕಲ್ಪಿಸಲು ಉದ್ಯೋಗ ವಿಭಜನೆ ಮಾಡಿದರು ಅವುಗಳೆ ವರ್ಣಗಳು ಇವುಗಳಲ್ಲಿ ಚಲನಶೀಲತೆ ಇತ್ತು ಆದರೆ  ಮುಂದೆ ಉತ್ತರವೇದ ಕಾಲದಲ್ಲಿ ಇವು ಜಾತಿಗಳಾಗಿ ಮಾರ್ಪಟ್ಟವು ಮತ್ತು ವಂಶಪಾರಂಪರ್ಯವಾದವು ಮತ್ತು  ಬದಲಿಸಲಸಾಧ್ಯವಾದವು. ಇಂದು ಈ ವ್ಯವಸ್ಥೆ  ಇನ್ನಷ್ಟು ಗಟ್ಟಿಗೊಳ್ಳುತ್ತಿರುವದು ಚಿಂತನಾರ್ಹ

      ಧರ್ಮ ಬಂದದ್ದಾದರೂ ಹೇಗೆ  ನಿಸರ್ಗದ ನೀಗೂಢ ಅರಿಯಲು ಪ್ರಾಚೀನ ಮಾನವ ಕಂಡುಕೊಂಡ ಸಾಧನವೆ ಧರ್ಮ ಅದು ಬಂದು ನಿಂತದ್ದಾದರು ಎಲ್ಲಿಗೆ ? ಒಂದು ಧರ್ಮ ಇನ್ನೊಂದು ಧರ್ಮವನ್ನು ಸಂಶಯಪಡುವವರೆಗೆ ,ಕೃಷ್ಣ ,ಕ್ರೈಸ್ತ ಪೈಗಂಬರರು ಹೇಳಿದ್ದೇನು ಧರ್ಮದ ಹೆಸರಿನಲ್ಲಿ ನಾವು ಮಾಡುತ್ತಿರುವುದೇನು..

       ಧರ್ಮದ ಪರಿಭಾಷೆ ತನ್ನ ಅರ್ಥ ಕಳೆದುಕೊಳ್ಳು ತ್ತಿರುವುದು ವಿಷಾದಕರ.ಧರ್ಮ& ಅದರಲ್ಲಿರುವ ಸಂಸ್ಕಾರಗಳು ಬಂದದ್ದೆ ಮನುಷ್ಯನಿಗೆ ಮೊಕ್ಷದ ಕಡೆಗೆ ಹೋಗಲು ದಾರಿ ಹಾಗಾದರೆ ಮೋಕ್ಷವೆಂದರೇನು ? ಮನುಷ್ಯನಿಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡುವ ಕೊನೇಯ ಬಿಂದು.ಅದಕ್ಕಾಗಿ ಧರ್ಮವು ಸಂಸ್ಕಾರಗಳನ್ನು ನಿರ್ದೇಶಿಸಿದೆ. ಸಂಸ್ಕಾರಗಳೆಂದರೇನು ? ಇನ್ನೂ ಸರಳವಾಗಿ ಹೇಳುವದಾದರೆ ಮಾನವ ತನ್ನ ಜೀವನವನ್ನು  ಶಿಸ್ತಿಗೆ ಒಳಪಡಿಸುವುದು &ಇನ್ನೋಬ್ಬರ ಬದುಕಿಗೆ ಭಂಗ ಬರದಂತೆ ಸಂಯಮ ತೋರುವುದು ಸಮುದಾಯವನ್ನು ಸನ್ಮಾರ್ಗದಲ್ಲಿ ನಡೆಸುವುದೆ ಧರ್ಮದ ತಿರುಳು.ಆದರೆ ಆದದ್ದೆನು  ನಾವು ಮಾಡುತ್ತಿರುವುದೇನು ಚೀನಾದ ಶ್ರೇಷ್ಟ ತತ್ವಜ್ಞಾನಿ ಕನ್ ಪ್ಯೂಸಿಯಸ್ ಹೀಗೆ ಹೇಳುತ್ತಾನೆ  “ನೀವು ಇನ್ನೂಬ್ಬರು ನಿಮಗೇನು ಮಾಡಬಾರದೆಂದು ಬಯಸುತ್ತಿರೊ ಅದನ್ನು ಇನ್ನೂಬ್ಬರಿಗೆ ಮಾಡಬೇಡ “ ಪ್ರತಿಯೊಬ್ಬರು ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಮದುರ ಸಮಾಜ ನಿರ್ಮಿಸಲು ಸಾದ್ಯ.

    ಕಾಡು ಕಡಿದು ನಾಡು ಕಟ್ಟುವ ಬರದಲ್ಲಿ ನಾವಿದ್ದೆವೆ ಅದನ್ನೆ ನಾವು ಪ್ತಗತಿ ಅಥವಾ  ಅಭಿವೃದ್ಧಿ ಎಂದು ಬಾವಿಸಿದ್ದೇವೆ ನಿಸರ್ಗದ ವಿರುದ್ದವಾಗಿ ಹೋದ ಯಾವ ನಾಗರಿಕತೆ ಈ ಜಗತ್ತಿನಲ್ಲಿ ಉಳಿದಿಲ್ಲ ಅದು ವಿನಾಶಕ್ಕೆ ದಾರಿ ಆ ಕಾರಣಕ್ಕಾಗಿ ಪ್ರಾನ್ಸ ದೇಶದ ತತ್ವಜ್ಞಾನಿ ದೇಶದ ರೂಸೋ  ನಿಸರ್ಗಕ್ಕೆ ಮರಳಿ “ ಎಂದು ಹೇಳಿದ್ದು ಹಾಗಾಗಿ ನಾವು ನಿಸರ್ಗದೋಂದಿಗೆ ಪ್ರಗತಿ ಹೊಂದೋಣ.

ಬಸನಗೌಡ ಯ ಗೌಡರ
     ಉಪನ್ಯಾಸಕರು
ಬಾ.ಸ.ಪ.ಪೂ.ಕಾಲೇಜು ಗುಳೀದಗುಡ್ಡ
                                                                

                                                          



Sunday, April 12, 2020

ಕಾಲ ಚಕ್ರ


ವನ್ಯ ಮೃಗಗಳನ್ಯಜಿವಿಗಳಲ್ಲ
ತನ್ನೊಡನೆ ಬೆಳೆದುಬಂದವುಗಳು
ಜೀವ ವಿಕಾಸದ ಹಾದಿಯಲ್ಲಿ,
ನಾವು ಮುಂದೆ ಅವು ಹಿಂದೆ ಹಿಂದೆ. //

ನಮ್ಮದೆ ಸಾಮ್ರಾಜ್ಯ ಆಳುವ
ಧನಿಕನ ದರ್ಪಕ್ಕೆ ನಲುಗಿದವು
ಒಂದು ಮತ್ತೊಂದು ಇನ್ನೊಂದು
ಅಂಕುಶ ಇರಲಿಲ್ಲ ಇಲ್ಲೊಂದು . //

ಚಿರತೆ, ಆನೆ ,ಹುಲಿ ,ಸಿಂಹಗಳೆ
ಅಳಿವಿನಂಚಿಗೆ ಬಂದು ನಿಂತವು
ಮ್ಯಾಮತ್ ,ಡೂ ಡೊ,  ದೈನೊಸಾರ
ಕಾಣದಂತೆ ಕಣ್ಮರೆಯಾದವು. //

ದೊಡ್ಡ ಪ್ರಾಣಿಯ ಸದ್ದಡಗಿಸಿ
ಗೆದ್ದೆನೆಂದು ಬಿದ್ದ ಮಾನವ ಪ್ರಾಣಿ
ಗೆದ್ದವರಾರು ಬಿದ್ದವರಾರು
ಕ್ಷುದ್ರ ಜಿವಿಗೆ ಹೆದರಿ ಬಿದ್ದವರಿವರು./

ನಮ್ಮಪ್ಪತಾತ ಎತ್ತಿಗೆಹಾಕತಿದ್ದರುಚಿಕ್ಕಾ
ಸುತ್ತೆಲ್ಲ ಮೂಸದಿರಲೆಂದು ಹಾಕಿ ಲೆಕ್ಕ
ಏದುಸಿರು ಬಿಡುತ್ತಾ ಏಗಿತ್ತು  ಎತ್ತು
ಕಾಲಚಕ್ರ ಮೆರೆದವಗು ಮಾಸ್ಕ ಬಿತ್ತು //

                       ಬಸನಗೌಡ ಗೌಡರ
                            ಉಪನ್ಯಾಸಕರು

Saturday, April 11, 2020

ಶಾಂತಿಗೆ ಮಂತ್ರ

ಮಂದಿರ ಮಸೀದಿಗಳನ್ನಿಂದೀಕರಿಸಿ
ಓ ಮಾನವರೆ
ಅವುಗಳನ್ನಿಂದೀಕರಿಸಿ
ಓ ಮಾನವರೆ.      //ಪ//

ಧರ್ಮವೆಂದರೆ ಸತ್ಯದ ಕಾಯಕ
ಸಂಸ್ಕಾರವೆಂದರೆ ಶಿಸ್ತಿನ ಕಾಯಕ
ಮರ್ಮ ಅರಿಯೋಣ
ಬದುಕ ಕಟ್ಟುವ ಕೇಂದ್ರಗಳಲ್ಲ
ಪಂತ ಪಂಗಡ ಬೆಳೆಸಲು
ಹೇಳಿಯೇ ಇಲ್ಲ //

ಸಂತ ಮಹಾಂತರ ತಂತ್ರ ಒಂದೆ
ಸನ್ಮಾರ್ಗ ಸನ್ನಡತೆ
ಮಂತ್ರತಾನೊಂದೆ.
ಸಾವು ಬದುಕು ಸಹಜ ಕ್ರಿಯೆ
ಹುಟ್ಟು ಸಾವಿಗೆ
ಕ್ರಿಯಾವಿಧಿ ಬೇಕೆ //

ರಾಮ, ರಹೀಮ್, ಅಬ್ರಹಾಂ, ಸಿಂಗ್,
ರಾಗಿ ಬೆಳೆಯಲು
ಭೂಮಿಗೆ ಬರಬೇಕು
ಗಣಕ ಯಂತ್ರ  ಭಯಂಕರ ತಂತ್ರ
ಭಾರ ಇಳಿಸಲು
ಅಳವಡಿಸಿದ ತಂತ್ರ //

ಮುಲ್ಲಾ ಸ್ವಾಮಿ ಎಲ್ಲರೂ ಕೂಡಿ
ಮಾನವತೆ ಬೆಳೆಸಲು
ಬಯಲಿಗೆ ಬರೋಣ//
ರಾಷ್ಟ್ರ ಕಟ್ಟಿದ ನಾಯಕರೆಲ್ಲ
ದೇಶ ಸ್ವತಂತ್ರ ಗೊಳಿಸಲು
ಧರ್ಮ ಎಣಿಸಿಯೆ ಇಲ್ಲ

              ಬಸನಗೌಡ ಗೌಡರ







Friday, April 10, 2020

ಗೌರವಿಸಿ

ಗೌರವಿಸಿ

ದುಡಿಯದೆ ಸಂಬಳ ಕೊಡುವ
ಸರಕಾರ ಇರುವಾಗ ಮನಿಯಾಗ
ಇರಾಕ ಏನ್ರೊ  ನಿಮಗ ದಾಡಿ.(2)/ಪ/

ಹೊರಗ ಬರತಿರಿ ಹೊರಿಯಂಗ
ಕುರಿ ದೊಡ್ದಿ ಬಿಟ್ಟ ಬಂದಾಂಗ   
ಪೋಲಿ ಹಡುಗರು ಪಟಿಂಗರಂಗ
ತಿರಗತಿರ ಪಿರಿ ಪಿರಿಯಾಂಗ.   //

ಪೊಲೀಸರು ಕೊಡಾ ಮನುಷ್ಯರಪ್ಪ
ತಾಳ್ಮೆ ಪರೀಕ್ಷೆ ಮಾಡ ಬ್ಯಾಡರಪ್ಪ 
ಪಟಾರ ಅಂತಾ ಬಾರಸ್ತಾರ ಬಪ್ಪ
ತಿಳಿದಿದ್ದರ ಜೈಲಿಗೆ ಕಳಸ್ಟಾರ ತಿಪ್ಪ//

ಜಗತ್ತ ತಿಪ್ಪರಲಾಗ ಹಾಕಿ ತಿಣಕಾಡಿದರ
ತಿಳಿಯವಲ್ಲದು  ರೋಗ ತಳತನಕ
ವೈದ್ಯ ನರ್ಸ ದುಡಿತಾರ ನಮಗಾಗಿ ಬೆಳತನಕ
ಮನುಷ್ಯರಾಗಿ ದಂಡಿಸಿಕೊಳ್ಳದೆ ನಾವೆಲ್ಲ ಅರಿಯಬೇಕ //

ತಪ್ಪಿನಡೆದರ ತಿಪ್ಯಾಗ ಬಿದ್ದು ಸಾಯಿತಿರಪ್ಪ
ಒಪ್ಪಿ ನಡೆದರಿನ್ನಷ್ಟ ದಿನ ಬಾಳತಿರಪ್ಪ
ತಿಳಿದವರು ಹೇಳಿದಂಗ ಕೆಳದಿದ್ದರ
ಮುನಸಿಪಾಲ್ ಹೆಣ ಅಗತಿವಪ್ಪ//

               ಬಸನಗೌಡ ಗೌಡರ

ಯುದ್ಧ

ಯುದ್ಧ

ಕಾಣದೆ ಬಂತು ಬಿರು ಗಾಳಿ ತಂತು
ಕೌರವನ ಕೊರೊನಾ ದಾಳಿ ಬಂತು
ಮಾಡುವದೆನು ಹಾಡುವುದೆನು
ಮನೆಯಲ್ಲಿದ್ದೆ ಗೆಲ್ಲಬೇಕು ಅದನು /ಪ/

ಕೊರೊನ ಕಂಪನ ನೆಡೆಯಾಕಿಲ್ಲ
ಕೃಷ್ಣನ ಕೈವಾಡ ಕಾಣದೆ ಬಂತಲ್ಲ
ಇಡಿ ಭರತಖಂಡವೆ ಕುರುಕ್ಷೇತ್ರ
ಪಾಂಡವರೆಮಗೆ ತಿಳದಿಲ್ಲೇನು?

ಪೊಲೀಸ್, ನರ್ಸ್, ಆಶಾ ಅಕ್ಕ
ದೇಶ ಕ್ಕಾಗಿ ದುಡಿತಾರ ಪಕ್ಕಾ
ವೈದ್ಯರ ದಂತು ಹೇಳುವ ಹಾಗಿಲ್ಲ
ಕೃಷ್ಣನವತಾರ ದುಡಿತಾರಲ್ಲ  //

ನೀರೆ ಅಸ್ತ್ರ ನಾರಿಯರೆ ಮುಂದೆ
ನರಕಕ್ಕೆ ಕಳಸದೆ ಬಿಡತೆವೆನು ನಿನ್ನ
ನೈರ್ಮಲ್ಯ ಕರವಸ್ತ್ರ, ಮಾಸ್ಕ ಮುಂದೆ
ಬರಕಾಸ್ತು ಮಾಡದೆ ಬಿಡತೇವನ ನಿನ್ನ 

ಕಾಕಿ ಅಣ್ಣನ ಲಾಟಿ ನೋಡಿ
ಕಲ್ಯಾ ಮಲ್ಯಾ ಕರಗ್ಯಾರ್ ನೋಡು
ಮಲ್ಯಾ ಭೀಮ್ಯಾಗ ಮನೆ ಬಿಡಾರ
ಸಮೂಹವೆಲ್ಲ ಅಂತರ ಬೀಡು. //

🖋️ ಬಸನಗೌಡ ಗೌಡರ

Thursday, April 9, 2020

ಗಟ್ಟಿ ತನ.

ಗಟ್ಟಿ ತನ

ಪ್ರಿತಿ ಗುಂಗಿನ ರಂಗಿನಾಟಕೆ ಸೋತೆ
ಖಾತೆ ತೆಗೆಯುವವರಿಗಿಲ್ಲ ಖ್ಯಾತೆ
ಪುಂಖಾನು ಪುಂಖ ಹರಿಯಿತು ಗೀತೆ
ರವಿ ಜಾರಿ ಮರೆ ಯಾದ ಮರುಕ್ಷಣವೆ
ಭರತನಾಟ್ಯ ಕಥಕ್ಕಳಿ ಮೊಹಿನಿ ಅಟ್ಟ0
ಭಾಸ್ಕರನುದಯವೆ ಶೋಕ ಗೀತೆ.//

ನಕಲು ಪ್ರತಿಗಳ ಪಕಳೆಯುದುರಿ
ಸಕಲರು ಥಕ ತೈ ತುತ್ತೂರಿ
ನಕುಲ ಸಹದೇವ ನಾಮಕರಣ
ಸಖಿ ಸಂಭ್ರಮ ಸಾವಿರ ಗಣ
ಸಿದ್ದಿ ಪುರಷನ ಗುಣಗಾನ
ಸಂಡೆ ಮಂಡೆ  ಜಪ ಧ್ಯಾನ. //

ಸಾಗಿದವು ಸರಸ ಸಲ್ಲಾಪದ ದಿನ
ಬಾಗಿದವು ವಿರಸ ನೀರಸ ದಿನ
ಸಂಸಾರ ಮೆಟ್ಟಲು ಬೇಕು ಗಟ್ಟಿತನ
ಅಟ್ಟನಗಿ ಹುಟ್ಟು ತಲೆ ಕುಟ್ಟಿ
ಗಟ್ಟಿ ಮಾಡಿದಳು ಮನ ತಟ್ಟಿ
ಅರಿತೆ ಸಮರಸವೆ ಈಗ ಗಟ್ಟಿತನ //



🖋️ ಬಸನಗೌಡ ಗೌಡರ

ದೂರ ಸುಖ

ದೂರ ಸುಖ

ವಿರಹ ವೇದನಿಗಿಂತ ಮಿಗಿಲೇನು
ಮಿಗಿಲೆನಗೆ ನೆನೆವುದೆ ಸುಖ
ಸನಿಹವೆನಗೆ ಕ್ಷಣಿಕ ಸುಖ
ಇನಿಯಾ ನಿನ್ನ ನೆನಪೆ ಸ್ವರ್ಗ ಸುಖ//

ಹಕ್ಕಿ ಗೊರವಂಕ ಉಕ್ಕಿ ಹರಿವ
ನದಿ ಕೊಳ್ಳಗಲೆ ಬಕ್ಷಿಸು ಎನಗೆ
ದಕ್ಕದಿರುವೆಯಾ ಗೆನಿಯಾ
ಮಿಕ್ಕಿದ್ದೆಲ್ಲವು ಬರಿ ಕ್ಷಣಿಕ //

ಬಾನ  ಬುತ್ತಿಯನಿಕ್ಕಿ ಚುಕ್ಕಿ
ಚಂದ್ರಾಮನಿಕ್ಕಿ ಬಾರದಲೆ ಹೊದೆ
ಬರುವಿಗಾಗಿ ಕಾಯದಿರನೆ ಮಿಕ್ಕಿ
ಬನದ ಹೂವುಗಳೆ ಗೆಳೆಯರೆನ್ನ//

ಮುಂಗಾರು ತಂಗಾಳಿ ಮೈಗೆ ತಂಪು
ಅಸೆಗಳ ಬೆನ್ನೆರಿ ಬಂತು ಕಂಪು
ಕಾಗೆ ಕೋಗಿಲೆ ಭೇದವ ನಾನರಿಯೆ
ಸದಾ ಕೋಗಿಲೆಗಳ ಗಾನದ ಇಂಪು//

ಬೇವು ಬೆಲ್ಲದ ಬೆಸುಗೆ ಹೊಸ
ವರ್ಷದಾ ಗುಡುಗು ಮಳೆ
ಬಲ್ಲವರೆ ಬಲ್ಲರು ಹೂವು ತಾ
ಬೆವಿನದಾದರು ಮಲ್ಲಿಗೆಯ  ಕಳೆ //

           🖋️ ಬಸನಗೌಡ ಗೌಡರ

ಎಚ್ಚರಿಕೆ

ಎಚ್ಚರಿಕೆ

ನನ್ನ  ನಿನ್ನ ನಡುವೆ ಏನಿ ಅಂತರ
ಕಣ್ಣಿಗೆ ಕಾಣುವ ಕಾಣದಂತರ//

ಜಗದ ಜೀವ ತಿಂದು
ಸಾಗಿಸಿದೆ  ಕಾಲ ಕಾಲಾಂತರ ಹೆದರಿಸುವ ಕಾಲ ಬಂತು
ನುಸುಳಿತು  ಗಂಡಾಂತರ.//

ಹೆಸರು ಇಟ್ಟೆ ಕರೆ ಕೊಟ್ಟೆ
ಸಾಕು ಹೋಗು  ಮುರಾಬಟ್ಟಿ
ನಮ್ಮ ನಡುವೇ ಅಂತರ
ನಡುವೇ ಕುಣಿದಾಡಿ ಬಿಟ್ಟೆ//

ಮಾನವ ಬದಕು ಗಟ್ಟಿ
ಗೊತ್ತು ಕಣೊ ಮಸಾಲಿ ಕುಟ್ಟಿ
ನೀನಲ್ಲ ನೂರು ಬರಲಿ
ತೋಡುವೆವು ಗೊರಿ ಅಲ್ಲಿ

ತಿಳಿಯ ಬೇಕಿತ್ತು ಒಗ್ಗಟ್ಟ
ಅದಕ್ಕೆ ಹಾಕಿದೆ ಚೌಕಟ್ಟು
ಮುರಿದರೆ ಅದೆ ಬಿಕ್ಕಟ್ಟು
ಮರೆಯದೆ ಬರಬೇಡಿ ಮನೆ ಬಿಟ್ಟು//

ನಿಮ್ಮನ್ನ ನೀವು ಕೊಲ್ಲುದಕ
ನಿಸ್ಸೀಮರೆಂದು  ತೋರಿಸಿದ್ದಕ್ಕ
ಬರಬೇಕಾತು  ಮಣಿಸೋದಕ್ಕ
ಮರೆತರೆ ಬರುತ್ತೆನೇ   ಎಚ್ಚರಿಸೊದಕ್ಕ//

             
        🖋️    ಬಸನಗೌಡ ಗೌಡರ


 


       

Monday, April 6, 2020

ಗುಳಿ ಕೆನ್ನೆ

ಕಟ್ಟಿ ಹಾಕಿದರೆನ್ನ ಕರವ ದಿಟ್ಟಿಸಿ
ನೊಡದಂತೆ ಸುತ್ತಿ ಮುಖಕ್ಕೆ  ಬಟ್ಟೆ
ಗುಳಿ ಕೆನ್ನೆಯೇ ? ಹಾಲು ಗೆನ್ನೆಯೆ ?
ನಿರ್ದರಿಸುವುದು ಹೇಗೆ ?
ನನ್ನ ಕಂಪೌಂಡಿ ನಲ್ಲಿ  ನಾನೆ ಕೊರೆದ
ಕಿಂಡಿಯಲಿ ಕಾಣುತಿದೆ ಅಸ್ಪಷ್ಟ .
ಕನ್ನ ಸನ್ನೆಗೆ ಬಲಿಯಾದೆನೊಮ್ಮೆ
ಬಲಿತ ಬಯಕೆಗೆ ಇನ್ನೊಮ್ಮೆ
ನನ್ನ ಮನೆಗೆ ನಿನ್ನ ಮನೆ
ಮೊವತ್ತೆಳು ಮಳ
ನಾ ತಾಳಲಾರ ಈ ತಳಮಳ
ಒತ್ತಿ ಹೇಳಲೇ ,ನನ್ನಂತರಾತ್ಮದ
ಬೇಗುದಿ, ಕೇಳದಷ್ಟು ನೀ ಕ್ರೂರಿಯೆ?
ಆಸೆಯಾ ಬೂದಿಯ ತೊರಿ
ಸಾಧಿಸಿದೆ ಹೃದಯ ಗೀರಿ
ಚಡ ಪದಿಸುವಂತೆ ಮಾದಡಿದೆನ್ನ
ಹೇಗೆ ಹೇಳಲಿ?
ನೀ ಗುಳಿ ಕೆನ್ನೆಯೆ ಹಾಲುಗೆನ್ನೆಯೆ ?

Sunday, April 5, 2020

ಸತ್ಯದ ಅನ್ವೇಷಣೆ

ಸಂಬಂಧಗಳೆಂದರೆ ಬರಿ ಕೂಡಿ 
ಕಳೆಯುವ ಲೆಕ್ಕ ವಲ್ಲ ಕೋಡಿ
ಹಣ ಗಳಿಸುವ ಮಾರ್ಗ ಹಲವಾರು 
ಪ್ರೀತಿ ಕೊಡುವವರು ಬಲು ದುಬಾರಿ
ನಿನ್ನ ನಿರ್ಮಲ ಮನಸ್ಸೆ ಅದಕ್ಕೆ ದಾರಿ//

ದೀಪವೆಂದರೆ ಬರಿ ಬತ್ತಿ ಎಣ್ಣೆ
ಹತ್ತಿಯುರುವಾ ಬೆಂಕಿಯಲ್ಲ ಕೋಡಿ
ಸತ್ತ ಮೇಲೂ ಬೆಳಕು ನಿಡುವ
ಸನ್ಮಾ ರ್ಗ ತೋರಿಸುವ ದಾರಿ
ನೀನರಿಯದಿದ್ದರೆ ಅದು ದುಬಾರಿ//

ಜ್ಞಾನವೆಂದರೆ ಬರಿ  ಓದಿ
ಸಂಗ್ರಹಿಸುವ ವಿಷಯವಲ್ಲ ಕೋಡಿ 
 ಸಂಗ್ರಹಿಸುವ ಮಾರ್ಗ ಹಲವಾರು
ಅರಿವು ನಿನ್ನ ಮೋಕ್ಷಕ್ಕೆ ದಾರಿ
ನೀನರಿಯದಿದ್ದರೆ ಅದು ದುಬಾರಿ//

           🖋️.   ಬಸನಗೌಡ ಗೌಡರ 
ಬದಲಾವಣೆ

ರಂಗಣ್ಣ ಬಹಳ ಶ್ರೀಮಂತ ಹಣಕ್ಕೇನೂ ಕೊರತೆ ಇರಲಿಲ್ಲ ಆದರೆನು ಎಲ್ಲರೂ ನನಗೆ ತುಂಬಾ ಗೌರವ ಕೊಡಬೇಕು ಎಂದು ಬಯಸುತ್ತಿದ್ದ.ತುಂಬಾ ಗೌರವ ಕೊಡಬೇಕು ಎಂದು  ಅ ವರ್ಷದ ಅತ್ಯುತ್ತಮವಾದ  ಕಾರು ಖರೀದಿಸಿದ ಮನೆ ವಾಸ್ತು ಸರಿಯಾಗಿ ಇರಬೇಕು ಅಂತಾ ಲಕ್ಷಾಂತರ ಖರ್ಚು ಮಾಡಿ ಮನೆ ದಿಕ್ಕನ್ನೆ ಬದಲು ಮಾಡಿದ ಅದರೆ  ಏನು ಮಾಡುವುದು ? ತನ್ನ ವ್ಯಕ್ತಿತ್ವ ವನ್ನೆ ಬದಲು ಮಾಡಲಿಲ್ಲ.ಈಗ ರಂಗಣ್ಣನ ಚಿತ್ತ ಬಾರಿ ನತ್ತ ......
           
       🖋️    ಬಸನಗೌಡ ಗೌಡರ
ದೀಪದಿಂದ ನಿಜ ದೀಪಾವಳಿ
______________________

ದೀಪದಿಂದ ಕೊರೊನಾ ದಿವಾಳಿ
ದಿಪದಿಂದ ಶಾಪ ದಿವಾಳಿ
ಲೋಕದ ತಮಂದ ದಿವಾಳಿ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ಆರಿಸಿ ಆಚರಣೆ ನಮ್ಮದಲ್ಲ ಕೇಳಿ
ಎಚ್ಚರದಿಂದ ಹಚ್ಚಿ ದೀಪ,ತಾಳಿ
ಹುಚ್ಚರಾಗಿವಿ ಕೊರೊನಾ ಕೇಳಿ ಕೇಳಿ
ಅಚ್ಚರಿಯ ಫಲಿತಾಂಶ ಕೇಳಿ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ದೀಪ ಒಂದು ಕ್ಷಣಿಕ
ಭಾವ ಬಿತ್ತ ಬೇಕು ಜನಕ
ಭವ್ಯ ಭಾರತ ಕಟ್ಟಬೇಕು
ಕಾಶ್ಮೀರ, ಕನ್ಯಾಕುಮಾರಿ ತನಕ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ಭವ್ಯ ಪರಂಪರೆ ಪುತ್ರರು
ಭುವನ ಮಾನವ ಮಿತ್ರರು
ಭೇಧ ಭಾವ ಅಳಿಯಲು
ರೋಗ ರುಜಿನ  ತುಳಿಯಲು
ಆಚರಿಸುವೆವು ನಿಜ ದೀಪಾವಳಿ//

ದಾದಿ ವೈದ್ಯ ಸ್ಮ ರಣೆ ಗಾಗಿ
ಮೋದಿಪ್ರಧಾನಿಯ ಕರೆಗಾಗಿ
ನೂರಾ ಮೂವತ್ತೆಳು  ಕೋಟಿ
ಜನರಿಗಾಗಿ ದೀಪದಿಂದ
ಆಚರಿಸುವೆವು ನಿಜ ದೀಪಾವಳಿ//


             ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...